Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ತಾಮ್ರದ ಪಾತ್ರೆಯಲ್ಲಿ ನೀರು ಕುಡಿದರೆ- ಮಧುಮೇಹ ನಿಯಂತ್ರಣಕ್ಕೆ!

ಮಧುಮೇಹ ಅಥವಾ ಡಯಾಬಿಟೀಸ್ ಮೆಲ್ಲಿಟಸ್ ಎಂಬುದು ಒಂದು ರೋಗಗಳ ಸಮೂಹವಾಗಿದ್ದು ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಇರುವಂತೆ ಹಾಗೂ ಮೂತ್ರದಲ್ಲಿ ಈ ಸಕ್ಕರೆ ಬಳಕೆಯಾಗದೇ ವ್ಯರ್ಥವಾಗಿ ಹೊರಹೋಗುವಂತೆ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1980ರಲ್ಲಿ ಹದಿನೆಂಟು ವರ್ಷ ದಾಟಿದ ವ್ಯಕ್ತಿಗಳಲ್ಲಿ ಮಧುಮೇಹ 4.7% ಇದ್ದಿದ್ದು 2014ರಲ್ಲಿ 8.5%ಕ್ಕೇರಿದೆ. ಅಲ್ಲದೇ ಅಂಕಿ ಅಂಶಗಳನ್ನು ಆಧರಿಸಿ ವಿಶ್ವದಲ್ಲಿ 2030ರಲ್ಲಿ ಎದುರಾಗುವ ಒಟ್ಟಾರೆ ಸಾವುಗಳಿಗೆ ಮಧುಮೇಹ ಏಳನೆಯ ಸ್ಥಾನ ಪಡೆಯಲಿದೆ ಎಂದು ವರದಿ ಮಾಡಿದೆ.
ಮಧುಮೇಹ ಇರುವುದನ್ನು ತಡವಾಗಿ ಪತ್ತೆಹಚ್ಚುವುದು, ಈ ಬಗ್ಗೆ ಅರಿವಿನ ಕೊರತೆ ಮೊದಲಾದವು ಮಧುಮೇಹದ ಪ್ರಕರಣಗಳು ಹೆಚ್ಚುವಂತೆ ಮಾಡಿವೆ. ಇವುಗಳ ಬಗ್ಗೆ ವ್ಯಾಪಕವಾಗಿರುವ ಮಿಥ್ಯೆಗಳು ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಿವೆ.

ತಾಮ್ರದ ಪಾತ್ರೆಯಲ್ಲಿ ನೀರನ್ನಿರಿಸಿ ಕುಡಿಯುವುದು ಭಾರತದ ಪುರಾತನ ಸಂಪ್ರದಾಯವಾಗಿದೆ. ವಾಸ್ತವವಾಗಿ ನೀರನ್ನು ಶುದ್ಧೀಕರಿಸುವ ಪುರಾತನ ವಿಧಾನಗಳಲ್ಲಿ ಈ ವಿಧಾನವೂ ಒಂದಾಗಿದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸುವುದರಿಂದ ನೀರಿನಲ್ಲಿ ಕಲ್ಮಶಗಳು ಇಲ್ಲವಾಗಿ ನೈಸರ್ಗಿಕವಾಗಿ ನೀರು ಶುದ್ದೀಕರಣಗೊಳ್ಳುತ್ತದೆ.
ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವ ಮೂಲಕ ಆರೋಗ್ಯಕ್ಕೆ ಕೆಲವಾರು ಪ್ರಯೋಜನಗಳಿವೆ. ವಿಶೇಷವಾಗಿ ಈ ನೀರಿನಲ್ಲಿ ಕರಗಿರುವ ಕಣಗಳು ಸೂಕ್ಷ್ಮ ಜೀವಿಗಳು, ಶಿಲೀಂಧ್ರ, ಪಾಚಿ ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಪಡೆದಿವೆ. ಅಷ್ಟೇ ಅಲ್ಲ, ನೀರನ್ನು ತಾಮ್ರದ ಪಾತ್ರೆಯಲ್ಲಿ ಇಡಿಯ ರಾತ್ರಿ ಅಥವಾ ಕನಿಷ್ಟಪಕ್ಷ ನಾಲ್ಕು ಗಂಟೆಗಳ ಕಾಲ ಸಂಗ್ರಹಿಸಿಡುವುದರಿಂದ ನೀರನ್ನು ಶುದ್ಧೀಕರಿಸುವ ಗುಣವನ್ನು ಪಡೆದುಕೊಳ್ಳುತ್ತದೆ.
ನಮ್ಮ ಆರೋಗ್ಯಕ್ಕೆ ಅಗತ್ಯವಿರುವ ಹಲವಾರು ಖನಿಜಗಳ ಪೈಕಿ ತಾಮ್ರವೂ ಒಂದು. ಆದರೆ ನಮ್ಮ ದೇಹ ತಾಮ್ರ, ಕಬ್ಬಿಣ ಮೊದಲಾದ ಹೆಚ್ಚಿನ ಭಾರದ ಲೋಹಗಳನ್ನು ಅಪ್ಪಟರೂಪದಲ್ಲಿ ಹೀರಿಕೊಳ್ಳಲಾರವು, ಹಾಗಾಗಿ ನಾವು ಈ ಅಂಶಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕಾಗುತ್ತದೆ. ತಾಮ್ರದ ಅಂಶವಿರುವ ಆಹಾರದಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಹಾಗೂ ಉರಿಯೂತ ನಿವಾರಕ ಗುಣಗಳು ಪ್ರಬಲವಾಗಿದ್ದು ಗಾಯಗಳನ್ನು ಶೀಘ್ರವಾಗಿ ಮಾಗಿಸಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರಕ್ತದಲ್ಲಿ ಕೆಂಪುರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಲು, ತ್ವಚೆಯ ಜೀವಕೋಶಗಳನ್ನು ಹೆಚ್ಚಿಸಲು ನೆರವಾಗುತ್ತವೆ. ತಾಮ್ರದೊಂದಿಗೆ ಮೆಗ್ನೀಶಿಯಂ ಹಾಗೂ ಮ್ಯಾಂಗನೀಸ್ ಸಹಾ ಹೆಚ್ಚಿರುವಂತೆ ನೋಡಿಕೊಳ್ಳುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚದಂತೆ ತಡೆಗಟ್ಟಬಹುದು.
ಆಯುರ್ವೇದದ ಪ್ರಕಾರ, ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಅಥವಾ "ತಾಮ್ರಜಲ"ವನ್ನು ಸೇವಿಸುವುದರಿಂದ ಕೆಲವಾರು ಪ್ರಯೋಜನಗಳಿವೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು, ತ್ವಚೆಯ ಆರೋಗ್ಯ ವೃದ್ದಿಸುವುದು, ಬ್ಯಾಕ್ಟೀರಿಯಾಗಳ ವಿರುದ್ಧ ರಕ್ಷಣೆ ಹಾಗೂ ಉರಿಯೂತವಾಗುವುದರಿಂದ ರಕ್ಷಣೆ ಪಡೆಯಬಹುದು. ಈ ನೀರಿನ ಇನ್ನೊಂದು ಗುಣವೆಂದರೆ ಮಧುಮೇಹವನ್ನು ನಿಯಂತ್ರಿಸುವುದು. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರಿನ ಸೇವನೆಯಿಂದ ದೇಹದಲ್ಲಿ ಕಫ ಎಂಬ ಅಂಶವನ್ನು ನಿಯಂತ್ರಿಸಲು ಹಾಗೂ ಜಠರದಲ್ಲಿ ಉರಿ ಎಂಬ ಅಗ್ನಿಯನ್ನು ಶಮನಗೊಳಿಸಲು ನೆರವಾಗುತ್ತದೆ, ತನ್ಮೂಲಕ ರಕ್ತದಲ್ಲಿ ಅಧಿಕ ಸಕ್ಕರೆ ಲಭಿಸದಂತೆ ತಡೆಯುತ್ತದೆ. ಈ ನೀರನ್ನು ಕುಡಿಯುವ ವಿಧಾನವನ್ನು ವಿವರಿಸುತ್ತಾ ಡಾ. ಲಾಡ್ "ಒಂದು ತಾಮ್ರದ ಪಾತ್ರೆಯಲ್ಲಿ ಒಂದು ಲೋಟ ನೀರನ್ನು ರಾತ್ರಿ ಹಾಕಿಡಿ ಹಾಗೂ ಮರುದಿನ ಬೆಳಿಗ್ಗೆ ಕುಡಿಯಿರಿ" ಎಂದು ತಿಳಿಸುತ್ತಾರೆ.
ಮಧುಮೇಹ ತಜ್ಞೆಯಾಗಿರುವ್, ಗಾಡೆ ಡಯಬಿಟೀಸ್ ಸೆಂಟರ್ ನ ವೈದ್ಯೆ ಡಾ. ರೋಶನಿ ಗಾಡ್ಗೆಯವರು ಈ ಬಗ್ಗೆ ಹೀಗೆ ತಿಳಿಸುತ್ತಾರೆ: 'ತಾಮ್ರದ ಪ್ರಮಾಣಕ್ಕೂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣಕ್ಕೂ ನೇರವಾದ ಯಾವುದೇ ಸಂಬಂಧವಿಲ್ಲ, ಆದರೆ ತಾಮ್ರದ ಕೊರತೆ ಇದ್ದರೆ ಮಧುಮೇಹದ ಲಕ್ಷಣಗಳಾದ ಸಕ್ಕರೆಯ ಮಟ್ಟದಲ್ಲಿ ಏರಿಕೆ, ಉರಿಯೂತ, ಸುಸ್ತು ಹಾಗೂ ನಿಧಾನವಾಗಿ ಗಾಯಗಳು ಮಾಗುವುದು ಮೊದಲಾದವು ಎದುರಾಗುತ್ತವೆ. ಆದ್ದರಿಂದ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ಆದರೆ ತಾಮ್ರಕ್ಕೂ ಹಾಗೂ ಸಕ್ಕರೆಯ ಜೀವರಾಸಾಯನಿಕ ಕ್ರಿಯೆಗೂ ಯಾವ ಬಗೆ ನಂಟು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇನ್ನೂ ಹಲವಾರು ಅಧ್ಯಯನಗಳು ನಡೆಯಬೇಕಾಗುತ್ತದೆ. ಹಾಗೂ, ಈ ನೀರನ್ನು ಹೆಚ್ಚುವರಿ ಆಹಾರದ ರೂಪದಲ್ಲಿ ಸೇವಿಸಬೇಕೇ ಹೊರತು ವೈದ್ಯರ ಅನುಮತಿಯ ಹೊರತು ನಿಮ್ಮ ಈಗಿನ ಆಹಾರಕ್ರಮದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಳ್ಳಬಾರದು ಎಂದು ಅವರು ವಿವರಿಸುತ್ತಾರೆ.
ಮಧುಮೇಹವನ್ನು ನಿಯಂತ್ರಿಸುವುದು ಅಷ್ಟು ಸುಲಭವಾದ ಕೆಲಸವಲ್ಲ, ಆದರೆ ಅಸಾಧ್ಯವೂ ಅಲ್ಲ. ಆರೋಗ್ಯಕರ ಹಾಗೂ ಸರಿಯಾದ ಕ್ರಮದ ಆಹಾರ ಸೇವನೆ ಮತ್ತು ಸಾಕಷ್ಟು ದೈಹಿಕ ವ್ಯಾಯಾಮ ಇರುವ ಜೀವನಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ನೆನಪಿರಲಿ, ನಿಮ್ಮ ಆಹಾರದಲ್ಲಿ ಸಾಕಷ್ಟು ಸಂಯುಕ್ತ ಕಾರ್ಬೋಹೈಡ್ರೇಟುಗಳು, ಕರಗದ ನಾರು ಹಾಗೂ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುವ ಆಹಾರಗಳನ್ನೇ ಸೇವಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














