Just In
Don't Miss
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಯಾಬಿಟಿಸ್ ಗೂ ಬಿಪಿಗೂ ಸಂಬಂಧವಿದೆಯೇ?
ವಯಸ್ಕರಲ್ಲಿ ಕಾಣಿಸುವ ಮಧುಮೇಹ (ಟೈಪ್ 2)ಕ್ಕೂ ರಕ್ತದೊತ್ತಡಕ್ಕೂ ಖಂಡಿತಾ ನಂಟಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಸಕ್ಕರೆ ಕಾಯಿಲೆಯುಳ್ಳವರು ರಕ್ತದೊತ್ತಡವನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳುವುದು ಒಳ್ಳೆಯದು ಎಂದು ಸೂಚಿಸಲಾಗಿದೆ. 130/80 mm og Hg ಗುರಿ ಮುಟ್ಟಿದರೂ, ಅಗತ್ಯಬಿದ್ದರೆ ಕಾಲಕಾಲಕ್ಕೆ ಗುಳಿಗೆಗಳನ್ನು ಸೇವಿಸತಕ್ಕದ್ದು. ಒಟ್ಟಿನಲ್ಲಿ ಮಧುಮೇಹಿಗಳು ಸಕ್ಕರೆ ಅಂಶ ನಿಯಂತ್ರಣದ ಜೊತೆಗೆ ರಕ್ತದೊತ್ತಡವನ್ನು ಕಾಯ್ದುಕೊಳ್ಳುವುದು ತುಂಬಾ ಅವಶ್ಯ.
ಕೊಲೆಸ್ಟ್ರಾಲ್ ನಿಯಂತ್ರಣ ಹೇಗೆ ಸಾಧ್ಯ?
ನಿಮಗೆ ಸಕ್ಕರೆ ಕಾಯಿಲೆ ಇದ್ದರೆ ರಕ್ತದಲ್ಲಿನ ಕೊಬ್ಬಿನ ಅಂಶವಾದ ಕೊಲೆಸ್ಟ್ರಾಲ್ ಹೆಚ್ಚಿರುವ ಸಾಧ್ಯತೆ ಶೇ.50ರಷ್ಟು ಅಧಿಕ ಎಂದು ತಿಳಿದುಬಂದಿದೆ. ಕೊಲೆಸ್ಟ್ರಾಲ್ ನಿಯಂತ್ರಿಸಲು ಸಮತೋಲನ ಆಹಾರ ಹಾಗೂ ದೈಹಿಕ ಕಸರತ್ತು ಅಗತ್ಯ. ನೀವು ಸ್ಥೂಲಕಾಯರಾಗಿದ್ದರೆ, ಆದಷ್ಟು ಬೇಗ ದೇಹ ತೂಕ ಇಳಿಸಿಕೊಳ್ಳಿ. ಆಗ ನಿಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ತಾನೇ ತಾನಾಗಿ ಕಮ್ಮಿಯಾಗತೊಡಗುತ್ತದೆ.
ಒಂದೆರಡು ದಿನ ಕಸರತ್ತು ಮಾಡಿ ಕೊಬ್ಬು ಇಳಿಸಿಬಿಡಬಹುದು ಎನ್ನಲಾಗುವುದಿಲ್ಲ. ಅವಿರತವಾಗಿ ನಿಯಮಿತ ಅವಧಿಯ ದೈಹಿಕ ಕಸರತ್ತು ಅತ್ಯಗತ್ಯ. ಆದರೆ, ದೈಹಿಕ ಕಸರತ್ತಿನ ಹೊರತಾಗಿಯೂ ಕೊಲೆಸ್ಟ್ರಾಲ್ ಪ್ರಮಾಣ ತಗ್ಗದಿದ್ದರೆ, ವೈದ್ಯರ ಸಲಹೆಯಂತೆ ಗುಳಿಗೆ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣ ನಮ್ಮ ಕೈಲಿದ್ದರೂ. ವೈದ್ಯರ ಸೂಚನೆ ಮೇರೆಗೆ ನಡೆಯುವುದು ಉತ್ತಮ ಹಾಗೂ ಸುರಕ್ಷಿತ.