Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ಚಳಿಗಾಲದಲ್ಲಿ ಚರ್ಮದ ರಕ್ಷಣೆಗಾಗಿ ಈ ಹಣ್ಣುಗಳನ್ನು ಸೇವಿಸಿ
ಚುಮುಚುಮು ಚಳಿಯಲ್ಲಿ ಬೆಚ್ಚನೆಯ ಬಟ್ಟೆಗಳನ್ನು ಧರಿಸಿ ಬಿಸಿಬಿಸಿ ಟೀ, ಗರಿಗರಿ ಬಜ್ಜಿ, ಮೆಣಸಿನ ಬೋಂಡಾ ಸವಿದರೆ ಸ್ವರ್ಗವೇ ಧರೆಗಿಳಿದಂತೆ. ಆದರೆ ಒಣಹವೆ ಚರ್ಮವನ್ನು ಒಣದಾಗಿಸಿ ಬಿರಿಯಲು ಕಾರಣವಾಗುತ್ತದೆ. ಇದಕ್ಕೆ ಗಾಳಿಯಲ್ಲಿ ಆರ್ದ್ರತೆ ಕಡಿಮೆಯಾಗಿರುವುದೇ ಕಾರಣ. ಈ ಕೊರತೆಯನ್ನು ಕೆಲವು ಫಲಗಳು ಸಮರ್ಥವಾಗಿ ಪೂರೈಸುತ್ತವೆ. ನೈಸರ್ಗಿಕ ಹಣ್ಣುಗಳ ಫೇಸ್ ಪ್ಯಾಕ್- ಕಡಿಮೆ ವೆಚ್ಚ ಅಧಿಕ ಲಾಭ!
ಉದಾಹರಣೆಗೆ ನೆಲ್ಲಿಕಾಯಿ, ಪಪ್ಪಾಯಿ, ಅನಾನಸ್ ಹಣ್ಣು ಮತ್ತು ದಾಳಿಂಬೆ. ಬನ್ನಿ, ಈ ಫಲಗಳು ಚಳಿಗಾಲದಲ್ಲಿ ಹೇಗೆ ಚರ್ಮದ ರಕ್ಷಣೆ ಮಾಡುತ್ತವೆ ಎಂಬುದನ್ನು ನೋಡೋಣ......

ನೆಲ್ಲಿಕಾಯಿ
ಕೇಶ ಮತ್ತು ಸೌಂದರ್ಯವೃದ್ಧಿ ಪ್ರಸಾಧನಗಳಲ್ಲಿ ಪ್ರಮುಖವಾಗಿ ಉಪಯೋಗಿಸಲ್ಪಡುವ
ನೆಲ್ಲಿಕಾಯಿಯಲ್ಲಿ ಹಲವಾರು ಪೋಷಕಾಂಶಗಳಿದ್ದು ಇವು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಮತ್ತು ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮ ಒಣಗುವುದರಿಂದ ತಪ್ಪಿದಂತಾಗಿ ಕಾಂತಿಯುಕ್ತ ಮತ್ತು ಕಲೆಯಿಲ್ಲದಂತಾಗಿರಲು ನೆರವಾಗುತ್ತದೆ. ಎಲೆಲೆ ಬೆಟ್ಟದ ನೆಲ್ಲಿಕಾಯಿಯೇ, ನಿನಗೆ ಸರಿ ಸಾಟಿ ಯಾರಿಲ್ಲಿ?

ಪಪ್ಪಾಯಿ
ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸುವ ಕಿಣ್ವಾಗಳಿವೆ. ಈ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಚರ್ಮದ ರಕ್ಷಣೆ ಮಾಡುವ ಜೊತೆಗೇ ಕಾಂತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಪಪ್ಪಾಯಿ (ಪರಂಗಿ ಹಣ್ಣು)ಯಲ್ಲಿರುವ ಪಪಾಯಿನ್ ಎಂಬ ಕಿಣ್ವ ಬಳಕೆಯಾಗದ ಪ್ರೋಟೀನುಗಳನ್ನು ಒಡೆದು ಹೆಚ್ಚಿನ ಪೋಷಣೆ ಒದಗಿಸುವ ಜೊತೆಗೇ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲೂ ನೆರವಾಗುತ್ತವೆ. ಅಲ್ಲದೇ ಸಡಿಲಗೊಂಡ ಚರ್ಮದ ಸೆಳೆತವನ್ನು ಹೆಚ್ಚಿಸಿ ನೆರಿಗೆಗಳಾಗದಂತೆ ನೆರವಾಗುತ್ತದೆ.ಸೌಂದರ್ಯದ ಮಾಂತ್ರಿಕ ಶಕ್ತಿ ಪರಂಗಿಯಲ್ಲಿದೆ

ದಾಳಿಂಬೆ
ದಾಳಿಂಬೆಯಲ್ಲಿರುವ ಪೋಷಕಾಂಶಗಳು ಚರ್ಮದ ಆಳಕ್ಕೆ ಇಳಿಯಲು ಸಮರ್ಥವಾಗಿದ್ದು ಚರ್ಮದ ಅಡಿಯಿಂದ ಪೋಷಣೆ ನೀಡಲು ಸಮರ್ಥವಾಗಿದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಚರ್ಮದ ಸೆಳೆತ ಹೆಚ್ಚಿಸಿ ನೆರಿಗೆ ರಹಿತ ತ್ವಚೆಯನ್ನು
ಹೊಂದಲು ನೆರವಾಗುತ್ತದೆ. ಚರ್ಮ ಚಳಿಗಾಲದಲ್ಲಿ ಹೆಚ್ಚು ಸಡಿಲವಾಗುವ ಕಾರಣ ನೆರಿಗೆಗಳು ಮೂಡುವ ಸಾಧ್ಯತೆ ಹೆಚ್ಚು.

ದಾಳಿಂಬೆ ಹಣ್ಣು
ದಾಳಿಂಬೆಯ ಸೇವನೆಯಿಂದ ಚರ್ಮದ ಸೂಕ್ಷ್ಮರಂಧ್ರಗಳು ಕಿರಿದಾಗಿ ಕಲ್ಮಶ ತುಂಬಿಕೊಳ್ಳುವ ಸಾಧ್ಯತೆಯೂ ಕಡಿಮೆಯಾಗುತ್ತದೆ ಹಾಗೂ ಬಿರುಕು ಮೂಡುವುದರಿಂದ ರಕ್ಷಣೆ ನೀಡುತ್ತದೆ.ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

ಅನಾನಸ್ ಹಣ್ಣು
ಈ ಹಣ್ಣಿನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಚಳಿಗಾಲದಲ್ಲಿ ಚರ್ಮಕ್ಕೆ ಎದುರಾಗುವ ಇನ್ನೊಂದು ತೊಂದರೆ ಎಂದರೆ ಮೊಡವೆಗಳು. ಇದಕ್ಕೆ ಚಳಿಗಾಲದಲ್ಲಿ ಚರ್ಮದ ಸೂಕ್ಷ್ಮರಂಧ್ರಗಳ ಗೋಡೆಗಳು ಬಿರುಕು ಬಿಡುವುದೇ ಕಾರಣ. ಈ ಬಿರುಕು ರಂಧ್ರಗಳನ್ನು ಇನ್ನಷ್ಟು ಆಳಗೊಳಿಸಿ ಸೋಂಕು ಹರಡಿಸಿ ಮೊಡವೆಗಳಾಗಲು ಕಾರಣವಾಗುತ್ತದೆ. ಮುಖದ ಸೌಂದರ್ಯಕ್ಕೆ ಅನಾನಸ್ ಹಣ್ಣಿನ ಫೇಸ್ ಪ್ಯಾಕ್!

ಮೊಡವೆಗಳಿಗೆ ರಾಮಬಾಣ...
ಅನಾನಸಿನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಮೊಡವೆಗಳು, ಕೀವುಭರಿತ ಗುಳ್ಳೆ, ಕಪ್ಪು ಕಲೆಗಳು, ಮೊದಲಾದವುಗಳನ್ನು ತೊಡೆಯಲು ನೆರವಾಗುತ್ತವೆ ಹಾಗೂ ಸೂಕ್ಷ್ಮರಂಧ್ರಗಳ ಆಳದಿಂದ ಪೋಷಣೆ ನೀಡಿ ಸೋಂಕಿನಿಂದ ಮುಕ್ತಿ ಪಡೆಯಲು ನೆರವಾಗುತ್ತವೆ.



Click it and Unblock the Notifications