Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!
ಸುಂದರವಾಗಿ ಕಾಣಲು ನಮ್ಮಿಂದ ಹೆಚ್ಚಿನ ಶ್ರಮ, ಬದ್ಧತೆ ಇದ್ದರೆ ಮಾತ್ರ ಸಾಧ್ಯವಾಗುವುದು. ದೇವರು ನೀಡಿರುವಂತಹ ಸೌಂದರ್ಯವನ್ನು ಇಂದಿನ ಕಲುಷಿತವಾಗಿರುವಂತಹ ವಾತಾವರಣದಲ್ಲಿ ಕಾಪಾಡಿಕೊಳ್ಳುವುದು ತುಂಬಾ ಕಠಿಣ ಕೆಲಸ. ಪ್ರತೀ ದಿನ ಹೊರಗಡೆ ಹೋಗುವಾಗ ವಾತಾವರಣದಲ್ಲಿರುವ ಧೂಳು ಹಾಗೂ ಇನ್ನಿತರ ಪದಾರ್ಥಗಳು ನಮ್ಮ ಕೂದಲು ಹಾಗೂ ದೇಹವನ್ನು ಸೇರಿಕೊಳ್ಳುವುದು. ಉದ್ದ, ದಪ್ಪ ಹಾಗೂ ಕಪ್ಪಗಿನ ಕೂದಲು ಪ್ರತಿಯೊಬ್ಬರಿಗೂ ಇಷ್ಟವಾಗಿರುವಂತದ್ದಾಗಿದೆ. ಅದೇ ಕೂದಲನ್ನು ಆರೈಕೆ ಮಾಡಲು ತುಂಬಾ ಕಷ್ಟಪಡಬೇಕಾಗುತ್ತದೆ.
ಯಾಕೆಂದರೆ ಸಮಯದ ಅಭಾವ. ಕೂದಲಿನ ಆರೈಕೆಗೆ ಸಮಯವಿಲ್ಲದೆ ಇರುವ ಕಾರಣ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವು ದುಬಾರಿ ಉತ್ಪನ್ನಗಳನ್ನು ತಂದು ಕೂದಲಿನ ಆರೈಕೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಇಂತಹ ಉತ್ಪನ್ನಗಳ ಬದಲಿಗೆ ನೈಸರ್ಗಿಕವಾಗಿ ಲಭ್ಯವಾಗುವಂತಹ ಕೂದಲಿನ ಆರೈಕೆಯ ಸಾಮಗ್ರಿ ಬಳಸಿಕೊಂಡರೆ ಅದರಿಂದ ಕೂದಲು ಉದ್ದ, ದಪ್ಪ ಹಾಗೂ ಕಪ್ಪಾಗಿ ಬೆಳೆಯುವುದು.
ಇನ್ನು ಕೆಲವರು ಸ್ಪಾ ಗಳಿಗೆ ಹೋಗಿ ಕೂದಲಿಗೆ ತೈಲ ಹಾಗೂ ಬೇರೆ ರೀತಿಯ ಮಸಾಜ್ ಮಾಡಿಸಿಕೊಳ್ಳುವರು. ಇದು ದುಡ್ಡು ವೆಚ್ಚ ಮಾಡುವುದೇ ಹೊರತು ಇದರಿಂದ ಬೇರೆ ಯಾವುದೇ ಪ್ರಯೋಜನವಿಲ್ಲ. ಕೂದಲು ತೊಳೆದ ಬಳಿಕ ಅದರ ಅರೈಕೆ ಯಾವ ರೀತಿ ಮಾಡಬಹುದು ಎಂದು ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದೆ....

ಶಾಂಪೂ, ಕಂಡೀಷನಿಂಗ್
ನಿಮ್ಮ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಕೂದಲು ಉದುರದಂತೆ, ತುಂಡಾಗದಂತೆ ಆರೈಕೆ ಮಾಡಲು ಬೇಕಾಗುವಂತಹ ನಾಲ್ಕು ಪ್ರಮುಖ ಕ್ರಮಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಕೂದಲಿನ ರಕ್ಷಣೆಯೊಂದಿಗೆ ಸಮಯ ಹಾಗೂ ಹಣ ಉಳಿಸಲಿದೆ. ಕೂದಲು ತೊಳೆದ ಬಳಿಕ ಪ್ರತೀ ಸಲ ಈ ನಾಲ್ಕು ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಕೂದಲು ಮತ್ತೆ ಕಾಂತಿ ಪಡೆಯುವುದು.

ಮೊದಲ ಕ್ರಮ
ಒಣಗಿಸುವುದು
ಕೂದಲಿಗೆ ಸ್ನಾನ ಮಾಡಿಕೊಂಡು ಬಂದ ಬಳಿಕ ಟವೆಲ್ನ್ನು ಕೂದಲಿಗೆ ಸುತ್ತಿಕೊಂಡು ಹೆಚ್ಚುವರಿ ಇರುವ ನೀರನ್ನು ತೆಗೆಯಿರಿ. ಕೂದಲಿನಿಂದ ನೀರು ಬರುವುದು ನಿಲ್ಲುವ ತನಕ ಇದನ್ನು ಮುಂದುವರಿಸಿ. ಕೂದಲಿನ ದಪ್ಪ ಹಾಗೂ ಉದ್ದದ ಮೇಲೆ ಸಮಯ ನಿರ್ಧಾರಿತವಾಗಿರುವುದು.

ಎರಡನೇ ಕ್ರಮ
ಎಣ್ಣೆ ಹಚ್ಚಿಕೊಳ್ಳುವುದು
ಹೆಚ್ಚಿನವರು ತಲೆಗೆ ಸ್ನಾನ ಮಾಡಿಕೊಳ್ಳುವ ಮೊದಲು ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವರು. ಆದರೆ ಸ್ನಾನ ಮಾಡಿದ ಬಳಿಕವೂ ತಲೆಗೆ ಎಣ್ಣೆ ಹಚ್ಚಬೇಕು. ಇದರಿಂದ ತಲೆ ಜಿಡ್ಡಾಗಿರುವುದು ಎಂದು ನಿಮಗನಿಸಬಹುದು. ಆದರೆ ಇದಕ್ಕೂ ಪರಿಹಾರವಿದೆ. ಆಲಿವ್ ತೈಲವು ತುಂಬಾ ದುಬಾರಿ. ಆದರೆ ಕೆಲವು ಹನಿ ಹಚ್ಚಿಕೊಂಡರೆ ಅದ್ಭುತವಾಗಿ ಕೆಲಸ ಮಾಡುವುದು. ಕೂದಲಿನ ಅಂತ್ಯಕ್ಕೆ ಹಚ್ಚಿಕೊಳ್ಳಿ. ಆಲಿವ್ ತೈಲ ಅತಿಯಾಗಿ ಹಚ್ಚಬೇಡಿ. ಕೂದಲನ್ನು ಒಣಗಿಸಿದ ಬಳಿಕ ಇದು ಮಾಡಬೇಕಾದ ಮೊದಲ ಕೆಲಸ.

ಮೂರನೇ ಕ್ರಮ
ನೇರವಾಗಿಸುವುದು
ಕೂದಲಿಗೆ ಸ್ನಾನ ಮಾಡಿದ ಬಳಿಕ ಕೂದಲು ಸುರುಳಿಯಾಗಿರುವುದು. ಇದನ್ನು ನೇರವಾಗಿಸಬೇಕು. ಆದರೆ ಒಣ ಕೂದಲು ತುಂಡಾಗುವುದು ಎಂದು ನಿಮಗೆ ಅನಿಸಿರಬಹುದು. ಆದರೆ ಚಿಂತೆ ಮಾಡಬೇಡಿ. ಯಾಕೆಂದರೆ ಈಗಾಗಲೇ ಕೂದಲು ಒಣಗಿಸಿ ತೈಲ ಹಚ್ಚಿದ್ದೀರಿ. ಇದರಿಂದ ಕೂದಲು ನೇರವಾಗಿಸಲು ಭೀತಿ ಪಡಬೇಡಿ. ದೊಡ್ಡ ಹಲ್ಲುಗಳು ಇರುವ ಬಾಚಣಿಗೆಯಿಂದ ಕೂದಲನ್ನು ನೇರವಾಗಿಸಿ. ಅಂತ್ಯದಿಂದ ಆರಂಭಿಸಿ. ಬಳಿಕ ಮೇಲಿನ ಭಾಗಕ್ಕೆ ಹೋಗಿ.

ನಾಲ್ಕನೇ ಕ್ರಮ
ಗಂಟು ಕಟ್ಟುವಿಕೆ ತೆಗೆಯುವುದು
ಕೂದಲಿನಲ್ಲಿ ಗಂಟು ಕಟ್ಟುವಿಕೆ ತೆಗೆಯಲು ಒಂದು ಪ್ರಮುಖ ಸಾಮಗ್ರಿಯ ಬಗ್ಗೆ ನಿಮಗೆ ಹೇಳಲಿದ್ದೇವೆ. ಇದು ಚರ್ಮದ ಆರೈಕೆಯಲ್ಲಿ ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ಆದರೆ ಕೂದಲಿನ ಆರೈಕೆಗೆ ಬಳಕೆಯಾಗುವುದು ಕಡಿಮೆ. ಇಲ್ಲಿ ಹೇಳುತ್ತಿರುವುದು ಅಲೋವೆರಾದ ಬಗ್ಗೆ. ಕೂದಲನ್ನು ಒಣಗಿಸಿದ ಬಳಿಕ ಕೆಲವೊಂದು ಸಲ ಸಣ್ಣ ಗಂಟು ಕೂದಲಿನಲ್ಲಿ ಕಾಣಿಸುವುದು. ಸ್ವಲ್ಪ ಅಲೋವೆರಾ ತೆಗೆದುಕೊಂಡು ಅದನ್ನು ಕೂದಲಿಗೆ ಉಜ್ಜಿಕೊಳ್ಳಿ. ಇದರಿಂದ ಸಣ್ಣ ಗಂಟುಗಳು ಮಾಯವಾಗುವುದು.



Click it and Unblock the Notifications