Just In
Don't Miss
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಚ್ಛೇದನವೇನೋ ಆಯಿತು? ಮುಂದಿನ ಜೀವನ ಹೇಗೆ?
ಮುಂದೆ? ಎಂಬ ಪ್ರಶ್ನೆಗೆ ಆತ ಕಕ್ಕಾಬಿಕ್ಕಿಯೂ ಆಗಲಿಲ್ಲ, ಆತನ ಬಳಿ ಅದಕ್ಕೆ ಉತ್ತರವೂ ಇರಲಿಲ್ಲ. ಪುರುಷರಿಗೆ ಆ ಪ್ರಶ್ನೆ ಹೆಚ್ಚಾಗಿ ಕಾಡುವುದೂ ಇಲ್ಲ. ಕಾಡಿದರೂ ತೋರ್ಪಡಿಸಿಕೊಳ್ಳುವುದಿಲ್ಲ. ಆದರೆ, ವಿಚ್ಛೇದಿತ ಮಹಿಳೆಯರ ನಂತರದ ಜೀವನ ತೀರಾ ಭಿನ್ನ. ಸಮಾಜ ನಾನಾ ಪ್ರಶ್ನೆಗಳನ್ನು ಎಸೆಯುತ್ತದೆ.
ಆ ಪ್ರಶ್ನೆಗಳನ್ನು ನಿರ್ಭೀತರಾಗಿ ಎದುರಿಸುವ ಛಾತಿ ಕೆಲವರಲ್ಲಿರುತ್ತದೆ, ಅನೇಕರು ನಮ್ಮ ಹಣೆಬರಹವೇ ಇಷ್ಟು ಅಂತ ಚಿಪ್ಪಿನೊಳಗೆ ಹುದುಗಿಕೊಂಡೇ ಕಾಲ ದೂಡುತ್ತಾರೆ. ವಿಚ್ಛೇದನದ ನಂತರದ ದಿನಗಳನ್ನು ಎದುರಿಸುವುದು ಪುರುಷರಿಗೇ ಆಗಲಿ, ಸ್ತ್ರೀಯರಿಗೇ ಆಗಲಿ ನಿಜಕ್ಕೂ ಸವಾಲಿನ ಕೆಲಸ. ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇರುತ್ತದೆ.
1) ಮನದಲ್ಲಿ ಶಾಂತಿ ಇರಲಿ : ಆಘಾತಕಾರಿ ಘಟನೆಗಳನ್ನೆಲ್ಲ ಮರೆತು ಧ್ಯಾನ, ಯೋಗ, ಓದಿನ ಮುಖಾಂತರ ಮನಸ್ಸನ್ನು ಸಾಧ್ಯವಾದಮಟ್ಟಿಗೆ ತಹಬದಿಗೆ ತರಲು ಪ್ರಯತ್ನಿಸಬೇಕು. ಎಂಥದೇ ಪ್ರರಿಸ್ಥಿತಿ ಬಂದರೂ ಧೈರ್ಯವಾಗಿ ಎದುರಿಸಲು ಮನಸ್ಸನ್ನು ಹುರಿಗೊಳಿಸಬೇಕು. ಮಹಾತ್ಮಾ ಗಾಂಧೀಜಿ ಬೋಧಿಸಿದ ಮೂರು ಮಂಗಗಳ ತತ್ವವನ್ನು ಪರಿಪಾಲಿಸಬೇಕು.
2)
ಕೆಲಸದಲ್ಲಿ
ತೊಡಗಿಸಿಕೊಳ್ಳಿ
:
ವೃತ್ತಿ
ಅಥವಾ
ಅಧ್ಯಯನದಲ್ಲಿ
ತೊಡಗಿಕೊಳ್ಳುವ
ಮುಖಾಂತರ
ಕಹಿ
ನೆನಪುಗಳು
ಹತ್ತಿರವೂ
ಸುಳಿಯದಂತೆ
ನೋಡಿಕೊಳ್ಳಿ.
ಮಕ್ಕಳಿದ್ದರಂತೂ
ಅವರನ್ನು
ಸಾಕುವ
ಜವಾಬ್ದಾರಿಯೂ
ನಿಮ್ಮ
ಮೇಲೆ
ಇರುತ್ತದೆ.
ಆದಿದ್ದಾಯಿತು
ಅಂತ
ಸೋಲನ್ನೊಪ್ಪಿಕೊಳ್ಳುವುದು
ಸುಲಭ,
ಆದರೆ
ದುಡಿಮೆಯ
ಮುಖಾಂತರ
ಹೊಸ
ಜೀವನವನ್ನು
ಮತ್ತೆ
ರೂಪಿಸಿಕೊಳ್ಳುವದು
ಬಲು
ಕಷ್ಟ.
3)
ಸಂತೋಷವಗಿರಿ
:
ಜೀವನವನ್ನು
ಬೇರೊಂದು
ದೃಷ್ಟಿಕೋನದಿಂದ
ನೋಡಲು
ಪ್ರಾಂಭಿಸಿ.
ಹೊಸ
ಸ್ನೇಹಿತರನ್ನು
ಸಂಪಾದಿಸಿ.
ಸಂತೋಷ
ಮತ್ತು
ದುಃಖಗಳನ್ನು
ಮುಕ್ತವಾಗಿ
ಹಂಚಿಕೊಳ್ಳಿ.
ಕೆಲವರು
ನಿಮ್ಮ
ದುಃಖಗಳಿಗೆ
ಹೆಗಲು
ಕೊಡಬಹುದು.
ಆದರೆ,
ಹೆಗಲು
ಕೊಡಬೇಕೆಂದು
ನಿರೀಕ್ಷಿಸಬೇಡಿ.
ಸಣ್ಣಪುಟ್ಟ
ಸಂಗತಿಗಳಿಗೂ
ಸಂತೋಷಪಡುವುದನ್ನು
ರೂಢಿಸಿಕೊಳ್ಳಿ.
ಆಗ,
ಆನಂದವೇ
ನಿಮ್ಮನ್ನು
ಆವರಿಸಿಕೊಳ್ಳಲು
ಆರಂಭಿಸುತ್ತದೆ.
4) ಹೊಸ ಸಂಬಂಧಗಳಿಗೆ ಮುಕ್ತವಾಗಿರಿ : ವಿಚ್ಛೇದನವಾದರೆ ಜೀವನವೇನೂ ಮುಗಿದು ಹೋಗುವುದಿಲ್ಲ. ಅಸಲಿಗೆ ಅಲ್ಲಿಂದಲೇ ಹೊಸ ಲೋಕಕ್ಕೆ ಬಾಗಿಲು ತೆರೆಯಬೇಕು. ಇಂದಿನ ಆಧುನಿಕ ಸಮಾಜದಲ್ಲಿ ಹಳೆಯ ಕಾಲದವರಂತೆ ಬದುಕಿರಲು ಸಾಧ್ಯವಿಲ್ಲ. ಹೀಗಾಗಿ ಹೊಸ ಸಂಬಂಧಗಳಿಗೆ ಯಾವತ್ತೂ ಮುಕ್ತವಾಗಿರಿ. ಆದಿದ್ದಾಗಲಿ ಅಂತ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಬೇಡಿ.
5) ಹಳೆ ತಪ್ಪುಗಳ ಪುನರಾವರ್ತನೆ ಬೇಡ : ಹೊಸ ಸಂಗಾತಿ ಸಿಕ್ಕಾಗ ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಜಾಗೃತವಾಗಿರಿ ಮತ್ತು ಯಾವುದನ್ನೂ ಮುಚ್ಚಿಡಬೇಡಿ. ಹಿಂದೆ ನಿಮ್ಮಿಂದಲೇ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ಮತ್ತೆ ದೊರೆಯುವುದಿಲ್ಲ. ಜೀವನಶೈಲಿ ಬದಲಿಸಿಕೊಳ್ಳಿ, ಜೀವನ ಸರಳವಾಗಿರಲಿ, ಸಂತಸದಿಂದ ಕೂಡಿರಲಿ.