Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸಂಗಾತಿಯಿಂದ ದೂರವಾಗುವ ಮೊದಲು ಒಮ್ಮೆ ಯೋಚಿಸಿ....
ಹೋದೆಯಾ ದೂರ ಓ ಜೊತೆಗಾರ.... ಎನ್ನುವ ಹಾಡನ್ನು ನೀವು ಕೇಳಿರಬಹುದು. ಸಿನಿಮಾಗಳಲ್ಲಿ ಪ್ರೀತಿಸುವುದು, ಮದುವೆಯಾಗುವುದು ಮತ್ತು ಡೈವೋರ್ಸ್ ಆಗುವುದು ಮಾಮಾಲಿ. ಆದರೆ ನಿಜ ಜೀವನದಲ್ಲಿ ಹೀಗೆ ಆದರೆ ಅದರಿಂದ ತುಂಬಾ ಪರಿತಪಿಸಬೇಕಾಗುತ್ತದೆ. ಪ್ರೀತಿಸಿ ಅಥವಾ ಮನೆಯವರು ನೋಡಿದ ಸಂಬಂಧವನ್ನು ಒಪ್ಪಿಕೊಂಡು ಮದುವೆಯಾಗಿರುತ್ತಾರೆ.
ಮದುವೆಯಾಗಿ ಕೆಲವು ಸಮಯ ಸಂಸಾರವು ಒಳ್ಳೆಯ ರೀತಿಯಲ್ಲಿ ಸಾಗುತ್ತಾ ಇರುತ್ತದೆ. ಪರಸ್ಪರರಲ್ಲಿ ಹೊಂದಾಣಿಕೆಯು ಇರುತ್ತದೆ. ಎರಡು ವರ್ಷ ಕಳೆಯುತ್ತಿರುವಂತೆ ಯಾವುದೋ ವಿಷಯಕ್ಕೆ ಪರಸ್ಪರರಲ್ಲಿ ಜಗಳವಾಗುತ್ತದೆ. ಯಾವುದೇ ಸಂಸಾರವಾಗಿರಲಿ ಜಗಳಗಳು ಇದ್ದೇ ಇರುತ್ತದೆ. ಆದರೆ ಇದು ದಿನನಿತ್ಯವೂ ಆಗುತ್ತಲಿದ್ದರೆ ಅಲ್ಲಿ ಏನೋ ಸರಿಯಿಲ್ಲವೆನ್ನಬಹುದು. ಗಂಡನಿಗೆ 'ಅನುರೂಪದ ಹೆಂಡತಿ' ಹೇಗಿರಬೇಕು?
ಇಂತಹ ಸಮಯದಲ್ಲಿ ಪರಸ್ಪರರು ಬೇರೆ ಆಗುವುದು ಒಳ್ಳೆಯದು ಎನ್ನುವ ಭಾವನೆ ಮೂಡುತ್ತದೆ. ಆದರೆ ಬೇರ್ಪಡುವಾಗ ಭಾವನೆಗಳನ್ನು ದೂರ ಮಾಡುವುದು ತುಂಬಾ ಕಷ್ಟ. ತುಂಬಾ ಸಮಯದಿಂದ ನೀವು ಪ್ರೀತಿಸುವ ವ್ಯಕ್ತಿಯಿಂದ ದೂರವಾಗಬೇಕೆಂದರೆ ಅದು ತುಂಬಾ ಕಠಿಣ ಕೆಲಸ. ಸಂಬಂಧದಿಂದ ದೂರವಾಗುವ ಮೊದಲು ಕೆಲವೊಂದು ಅಂಶಗಳನ್ನು ನೀವು ತಿಳಿದುಕೊಂಡರೆ ಅದರಿಂದ ದೂರವಾಗಬೇಕೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದನ್ನು ತಿಳಿಯಲು ಮುಂದಕ್ಕೆ ಓದಿಕೊಳ್ಳಿ....

ದೂರವಾಗುವುದು ಸರಿಯಾ?
ಒಂದು ಕಾಲದಲ್ಲಿ ನೀವು ಅತಿಯಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯಿಂದ ದೂರವಾಗುವುದು ಎಂದರೆ ಅದು ತುಂಬಾ ಕಠಿಣ ನಿರ್ಧಾರ. ಸಂಬಂಧದಲ್ಲಿ ಜಗಳವಾಗುವುದು ಸರಿಯಾ? ಅಥವಾ ಸರಿಯಲ್ಲವೇ ಎಂದು ತಿಳಿಯಿರಿ.

ಮೂರನೆಯವರ ಪ್ರವೇಶ ಬೇಡ
ಯಾವುದೇ ನಿರ್ಧಾರ ಸ್ವತಃ ತೆಗೆದುಕೊಳ್ಳಿ. ಬೇರೆಯವರು ನಿಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಿಮ್ಮ ಮನಸ್ಸಿನಲ್ಲಿ ಏನಿದೆ ಮತ್ತು ನಿಮಗಿಬ್ಬರಿಗೂ ಯಾವುದು ಒಳ್ಳೆಯದು ಎಂದು ಅವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕಾಂಗಿಯಾಗಿರಿ ಮತ್ತು ಮನದ ಮಾತನ್ನು ಕೇಳಿ ನಿರ್ಧಾರ ಮಾಡಿ. ಇತರರು ಏನು ಹೇಳುತ್ತಾರೆ ಎಂದು ಎರಡನೇ ನಿರ್ಧಾರ ಮಾಡಲು ಹೋಗಬೇಡಿ.

ಯಾವುದು ಶಾಶ್ವತವಲ್ಲ
ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ತಿಳಿದುಕೊಳ್ಳಿ. ಸಂಬಂಧಗಳು ಒಡೆದು ಹೋಗುತ್ತದೆ, ಡೈವೋರ್ಸ್ ಆಗುತ್ತದೆ. ಯಾವುದೂ ಕೊನೆಯ ತನಕ ಉಳಿಯಲ್ಲ. ಸಂಬಂಧ ಒಳ್ಳೆಯದಿದೆಯೆಂದು ನಿಮಗನಿಸುತ್ತಿದ್ದರೆ ಅದು ಹಾಗೆ ಮುಂದುವರಿಯಲು ಬಿಡಿ.

ಸಂತೋಷದ ಬಗ್ಗೆ ಚಿಂತಿಸಿ
ನೀವು ಸಂಬಂಧಕ್ಕಿಂತ ಹೊರಗಡೆ ಬೇರೆ ಯಾರನ್ನಾದರೂ ಪ್ರೀತಿಸುತ್ತಾ ಇದ್ದರೆ, ಅದರಿಂದ ನಿಮಗೆ ಹೆಚ್ಚಿನ ಸಂತೋಷ ಸಿಗುತ್ತಿದೆ ಎಂದಾದರೆ ಆಗ ಮಾತುಕತೆ ನಡೆಸಿ ಸಂಬಂಧವನ್ನು ಕೊನೆಗೊಳಿಸಿ ಮುಂದೆ ಸಾಗಿ.

ಸಮಾಜ ಬದಲಾಗುತ್ತದೆ ಎಂದುಕೊಳ್ಳಬೇಡಿ
ಸಮಾಜ ಯಾವತ್ತೂ ನಿಮ್ಮೊಂದಿಗೆ ಇರಲ್ಲ ಮತ್ತು ನಿಮ್ಮ ವಿರುದ್ಧವಾಗಿಯೂ ಇರಲ್ಲ. ಇದರಿಂದ ಕುಸಿದುಹೋಗಬೇಡಿ ಮತ್ತು ಖಿನ್ನತೆಗೆ ಒಳಗಾಗಬೇಡಿ. ಸಂಬಂಧದಿಂದ ಬೇರಾದ ಬಳಿಕ ಇತರ ಕೆಲವು ಕೆಲಸಗಳನ್ನು ನೀವು ಮಾಡಬೇಕಾಗಿದೆ.

ಬೇಗ ನಿರ್ಧಾರ ತೆಗೆದುಕೊಳ್ಳಿ
ಸಂಬಂಧ ಮುರಿಯದಂತೆ ಇರಲು ಅಥವಾ ಒಂದು ನಿರ್ಧಾರ ತೆಗೆದುಕೊಳ್ಳುವ ಹಕ್ಕು ನಿಮ್ಮಲ್ಲಿ ಇರುತ್ತದೆ. ಸಂಬಂಧ ಮುರಿಯುವುದು ತುಂಬಾ ವಿಳಂಬವಾದಾಗ ಅದು ನಿಮಗೆ ಹೆಚ್ಚಿನ ನೋವು ಉಂಟು ಮಾಡುವುದು.



Click it and Unblock the Notifications