Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಅಡುಗೆ ಹದಗೆಡದಿರಲು ಉಪಯುಕ್ತ ಸಲಹೆಗಳು

* ಭಾರತಿ ಎಚ್.ಎಸ್., ಬೆಂಗಳೂರು
1. ಇಡ್ಲಿ ಮೆತ್ತಗೆ ಹೂವಿನ ಹಾಗೆ ಆಗಲು;
* ಅಕ್ಕಿ ನೆನೆ ಹಾಕುವಾಗ ತಣ್ಣೀರಿನ ಬದಲಿಗೆ ಬಿಸಿನೀರನ್ನು ಹಾಕಿ.
* ಅಕ್ಕಿ ನೆನೆ ಹಾಕುವಾಗ ಎರಡು ಹಿಡಿ ಅವಲ್ಲಕ್ಕಿಯನ್ನು ಹಾಕಿ.
* ಇಡ್ಲಿ ಅಕ್ಕಿಯನ್ನೇ ಉಪಯೋಗಿಸಿದರೆ ಮೃದುವಾಗಿ ಬರುವುದು.
2. ದೋಸೆ ಗರಿ ಗರಿಯಾಗಿ ಬರಲು;
* ದೋಸೆ ಅಕ್ಕಿಯನ್ನೇ ತಂದು ನೆನೆಹಾಕಿ ಮಾಡಿದರೆ ದೋಸೆ ಚೆನ್ನಾಗಿ ಬರುವುದು.
* ಅಕ್ಕಿ, ಉದ್ದಿನ ಬೇಳೆ ನಾನೆ ಹಾಕುವಾಗ ಅದರ ಜೊತೆ 1 ಹಿಡಿ ಅವಲಕ್ಕಿ ಹಾಕಿದರೆ ಕಾವಲಿಯಿಂದ ಸುಲಭವಾಗಿ ಮೇಲೆ ಏಳುತ್ತದೆ.
* ಅಕ್ಕಿಯ ಜೊತೆ 2 ಚಮಚ ಮೆಂತ್ಯೆ ನೆನೆ ಹಾಕಿದರೆ ಚೆನ್ನಾಗಿ ಉದುಗು ಬರುವುದಲ್ಲದೆ ಒಳ್ಳೆಯ ವಾಸನೆ ಇರುತ್ತದೆ.
* ಅಕ್ಕಿಯ ಜೊತೆ 2 ಚಮಚ ಕಡಲೆ ಬೇಳೆ ಹಾಕ್ಕಿದಲ್ಲಿ ದೋಸೆಗೆ ಒಳ್ಳೆಯ ಹೊಂಬಣ್ಣ ಬರುವುದು.
* ರುಬ್ಬಿದ ಹಿಟ್ಟಿಗೆ 1 ಚಮಚ ಸಕ್ಕರೆ ಹಾಕಿದರೆ ಒಳ್ಳೆಯ ಬಣ್ಣ ಬರುತ್ತದೆ.
* ಕಾವಲಿಗೆ 1 ಚಮಚ ಎಣ್ಣೆ ಹಾಕಿ ಸ್ವಲ್ಪ ಉಪ್ಪು, ಸಾಸಿವೆ ಹಾಕಿ ಸಿಡಿಸಿ ಚೆನ್ನಾಗಿ ಒರೆಸಿ ದೋಸೆ ಹಾಕಿದಾಗ, ಕಚ್ಚದೆ ದೋಸೆ ಚೆನ್ನಾಗಿ ಬರುವುದು.
* ಮಿಕ್ಕಿದ ದೋಸೆ ಹಿಟ್ಟಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಕಾಯಿತುರಿ ಎಲ್ಲ ಹಾಕಿ ಪಡ್ಡು ಕಾವಲಿಗೆ ಹಾಕಿದರೆ ಪಡ್ಡು ಅಥವಾ ಗುಂಡುಪಂಗಳ ರೆಡಿ.
3 ಚಪಾತಿ ಮೃದುವಾಗಿ ಬರಲು;
* ಚಪಾತಿ ಕಲೆಸುವಾಗ 3 ಬಟ್ಟಲು ಅಳತೆಗೆ ಸರಿಯಾಗಿ 1 ಬಟ್ಟಲು ನೀರನ್ನು ಹಾಕಿ ಕಲೆಸಬೇಕು.
* 2 ಚಮಚ ಎಣ್ಣೆ ಹಾಕಿ ಕಲೆಸಿ ಚೆನ್ನಾಗಿ ನಾದಿದಲ್ಲಿ ಮೃದುವಾಗುವುದು.
4. ಪಲಾವ್ ಅಥವಾ ಬಾತ್ ಗಳನ್ನು ಮಾಡುವಾಗ ನಿಂಬೆ ರಸ ಹಿಂಡಿದರೆ ಉದುರಾಗುತ್ತದೆ.
5. ಕರಿಬೇವು ಸೊಪ್ಪನ್ನು ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ಪುಡಿಮಾಡಿ ಇಟ್ಟುಕೊಂಡ್ಡಿದ್ದರೆ ಅಡುಗೆಗಳಿಗೆ ಬೇಕಾದಾಗ ಉಪಯೋಗಿಸಬಹುದು.
6. ಮೊಟ್ಟೆಯನ್ನು ಬೇಯಿಸುವಾಗ ಉಪ್ಪನ್ನು ಹಾಕಿದಲ್ಲಿ ಹೊರಬಾಗ ಒಡೆಯದೆ ಸಿಪ್ಪೆ ಸಲಿಸಾಗಿ ಬರುವುದು.
7. ಹುರುಳಿಕಾಯಿ, ಗೋರಿಕಾಯಿ ಪಲ್ಯಗಳನ್ನು ಬೇಯಿಸುವಾಗ 1/2 ಚಮಚ ಸಕ್ಕರೆ ಹಾಕಿದರೆ ರುಚಿ ಬರುವುದಲ್ಲದೆ, ಬೆಂದ ಮೇಲೆ ತರಕಾರಿಯ ಹಸಿರು ಬಣ್ಣ ಹಾಗೆ ಇರುವುದು.
8. ಏಲ್ಲಕ್ಕಿ ಡಬ್ಬಿಯಲ್ಲಿ ಮೆಣಸು ಕಾಳು ಹಾಕಿಟ್ಟರೆ ವಾಸನೆ ಹಾಗೆ ಇದ್ದು ಬೇಗ ಕೆಡುವುದಿಲ್ಲ.
9. ಸಾರಿಗೆ ಬೇಳೆ ಬೇಯಲು ಇಡುವಾಗ ಅರಿಸಿನ, 1/2 ಚಮಚ ಎಣ್ಣೆ ಹಾಕಿದರೆ ಬೇಗ ಬೆಂದು ಕಟ್ಟು ಚೆನ್ನಾಗಿ ಬಿಡುವುದು.
10. ಬಜ್ಜಿ, ಬೋಂಡ, ವಡೆಗಳನ್ನು ಮಾಡುವಾಗ 4 ಸ್ಪೂನ್ ಅಕ್ಕಿ ಹಿಟ್ಟನ್ನು ಹಾಕಿಕೊಂಡರೆ ಗರಿ ಗರಿಯಾಗಿ ಚೆನ್ನಾಗಿ ಬರುವುದು.



Click it and Unblock the Notifications