Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಹಬ್ಬದ ಅಡುಗೆಯ ರುಚಿ ಹೆಚ್ಚಿಸುತ್ತೆ ನವರತ್ನ ಕೂರ್ಮ

ಬೇಕಾಗುವ ಸಾಮಾಗ್ರಿಗಳು:
* ಪನ್ನೀರ್ 100 ಗ್ರಾಂ
* ಕ್ಯಾರೆಟ್, ಹೂಕೋಸು, ಆಲೂಗೆಡ್ಡೆ, ಬೀನ್ಸ್ 3 ಕಪ್ (ಬೇಯಿಸಿದ್ದು)
* ಟೊಮೆಟೊ 2
* ಹಸಿಮೆಣಸಿನ ಕಾಯಿ 3-4
* ಮೊಸರು 3 ಚಮಚ
* ಹಾಲು ಒಂದು ಕಪ್
* ನಿಂಬೆಹಣ್ಣು 1
* ಶುಂಠಿ ಒಂದು ಚಿಕ್ಕ ತುಂಡು
* ಬೆಳ್ಳುಳ್ಳಿ 6 ಎಸಳು
* ಅರಿಶಿಣ ಪುಡಿ 1/4 ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
* ಕೊತ್ತಂಬರಿ ಪುಡಿ 1/2 ಚಮಚ
* ತುಪ್ಪ 3 ಚಮಚ
* ರುಚಿಗೆ ತಕ್ಕ ಉಪ್ಪು
* ಗೋಡಂಬಿ 10 (ಎಣ್ಣೆಯಲ್ಲಿ ಸ್ವಲ್ಪ ಹುರಿದಿರಬೇಕು)
* ಬಾದಾಮಿ 10
* ಸ್ವಲ್ಪಕೊತ್ತಂಬರಿ ಸೊಪ್ಪು
* ಚಿಟಿಕೆಯಷ್ಟು ಕೇಸರಿಯನ್ನು ಒಂದು ಬಿಸಿ ಹಾಲು ಅಥವಾ ನೀರಿನಲ್ಲಿ ಹಾಕಿದ್ದು
ತಯಾರಿಸುವ ವಿಧಾನ:
1. ಪನ್ನೀರ್ ಅನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ಎಣ್ಣೆಯಲ್ಲಿ ಹುರಿದು ಪಕ್ಕಕ್ಕಿಡಬೇಕು.
2. ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಗೆ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಪೇಸ್ಟ್ ರೀತಿ ಅರೆಯಬೇಕು.
3. ಟೊಮೆಟೊವನ್ನು ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ಹಾಕಿ, ನಂತರ ಸಿಪ್ಪೆ ಸುಲಿಯಬೇಕು, ನಂತರ ಟೊಮೆಟೊವನ್ನು ಸೌಟಿನಿಂದ ಹಿಸುಕಿ ಪೇಸ್ಟ್ ರೀತಿ ಮಾಡಬೇಕು.
4. ಈಗ ಬಾಣಲೆಯನ್ನು ಇಟ್ಟು ತುಪ್ಪವನ್ನು ಬಿಸಿ ಮಾಡಬೇಕು. ತುಪ್ಪ ಬಿಸಿಯಾದಾಗ ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ ಹಾಕಿ ತಯಾರಿಸಿದ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಬಿಸಿ ಮಾಡಬೇಕು. ಮಿಶ್ರಣ ತುಂಬಾ ಗಟ್ಟಿಯಾಗದಂತೆ ಹಾಲನ್ನು ಆಗಾಗ ಚಿಮುಕಿಸುತ್ತಾ ಇರಬೇಕು.
5. ಈಗ ಪೇಸ್ಟ್ ರೀತಿ ಮಾಡಿದ ಟೊಮೆಟೊ, ಅರಿಶಿಣ ಪುಡಿ, ಜೀರಿಗೆ ಪುಡಿ, ಕೆಂಪು ಮೆಣಸಿನ ಕಾಯಿ ಪುಡಿ, ಕೊತ್ತಂಬರಿ ಪುಡಿ ಗರಂ ಮಸಾಲ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಬೇಕು.
6. ಈಗ ಬೇಯಿಸಿದ ತರಕಾರಿಯನ್ನು ಸೇರಿಸಬೇಕು, ಅದಕ್ಕೆ ಮೊಸರು ಸೇರಿಸಿ ಸ್ವಲ್ಪ ಹೊತ್ತು ಬಿಸಿಮಾಡಬೇಕು.
7. ಗ್ರೇವಿ ಗಟ್ಟಿಯಾದಾಗ ಹಾಲನ್ನು ಸೇರಿಸಿ ಕುದಿಸಬೇಕು.
8. ಈಗ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ ಪನ್ನೀರ್, ಬಾದಾಮಿ, ಗೋಡಂಬಿಯನ್ನು ಸೇರಿಸಬೇಕು. ಮಿಶ್ರಣವನ್ನು ಆಗಾಗ ತಿರುಗಿಸುತ್ತಾ ಇರಬೇಕು. ಕೊನೆಗೆ ಕೇಸರಿಯನ್ನು ಹಾಕಿ, ನಿಂಬೆರಸ ಸ್ವಲ್ಪ ಹಾಕಿದರೆ ರುಚಿಕರವಾದ ನವರತ್ನ ಕೂರ್ಮ ರೆಡಿ.



Click it and Unblock the Notifications