Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಕಲ್ಲಂಗಡಿಯೇ ಹೇಳಿಕೊಟ್ಟ ಸಿಪ್ಪೆಯ ಪಲ್ಯ

ಪಲ್ಯ ಮಾಡುವ ಒಳಗುಟ್ಟನ್ನು ಕಲ್ಲಂಗಡಿ ಹಣ್ಣೇ ಹೇಳಿಕೊಳ್ಳುತ್ತಿದೆ. ಕೇಳಿಸಿಕೊಳ್ಳಿ, ಅಡುಗೆಮನೆಗೆ ನುಗ್ಗಿ . ಬೇಸಿಗೆಯಲ್ಲಿ ಕಲ್ಲಂಗಡಿ ಸೀಸನ್ ಮುಗಿಯುವ ಮುನ್ನ ಈ ಬರಹ ಓದಿ ನಿಮಗಿಷ್ಟವೆನಿಸಿದರೆ ಪಲ್ಯ ಮಾಡಿ ಸವಿಯಿಸಿ. ಇಲ್ಲದಿದ್ದರೆ ನೀವುಂಟು ತಿಪ್ಪೆಯುಂಟು.
ಕಲ್ಲಂಗಡಿ ಹಣ್ಣಿನ ಮಾತು ಕೇಳಿಸಿಕೊಳ್ಳಿ...
ಹಸನಾಗಿ ಬಲಿತ ನನ್ನನ್ನು ಅಂಗಡಿಯಿಂದಲೋ, ಸಂತೆಯಿಂದಲೋ ಚೌಕಾಶಿ ಮಾಡಿ ತಂದಿರ್ತೀರಿ. ನನ್ನ ಹೊಟ್ಟೆಗೊಂದು ಚಾಕು ಹಾಕಿ ಬಗೆದು, ಸುತ್ತಲೂ ಕುಳಿತು ಆಹಾ! ಎಷ್ಟು ಕೆಂಪಾಗಿದೆ.. ಎಂದು ಎಲ್ಲರೂ ಸವಿಯುತ್ತೀರಿ. ನಂತರ ನನ್ನ ಸಿಪ್ಪೆಯನ್ನು ತಿಪ್ಪೆಗೋ, ತೆಂಗಿನ ಮರದ ಬುಡಕ್ಕೋ ದಯವಿಟ್ಟು ಹಾಕದಿರಿ. ಬದಲಾಗಿ ನನ್ನನ್ನು ಕೊಂದ ನಂತರ ತುಂಡು ತುಂಡಾಗಿ ಮಾಡಿ ಕೆಂಪಾದ ನನ್ನ ಮಾಂಸವನ್ನು ಮೂಳೆಯಿಂದ(ಸಿಪ್ಪೆ) ಬೇರ್ಪಡಿಸಿ. ಮೂಳೆಯ ಕಾಲು ಇಂಚು ಭಾಗವನ್ನು ಅದರ ದಟ್ಟ ಹಸಿರು ಭಾಗದಿಂದ ಪ್ರತ್ಯೇಕಿಸಿ. ಈಗ ಕಾಲಿಂಚು ದಪ್ಪದ ತುಂಡುಗಳನ್ನು ಅತೀ ಚಿಕ್ಕ ತುಂಡುಗಳನ್ನಾಗಿ ಮಾಡಿ.
ನನ್ನ ಜೊತೆಗೆ ಇವರೆಲ್ಲಾ ಬೇಕು
ಅಡುಗೆ ಎಣ್ಣೆ -4 ಚಮಚ
ಸಾಸಿವೆ -1 ಚಮಚ
ಉದ್ದಿನಬೇಳೆ -2 ಚಮಚ
ಕರಿ ಬೇವು -2 ಕದಿರು
ಉಪ್ಪು - ಬೇಕಾದಷ್ಟು
ಮೆಣಸಿನಪುಡಿ -1 ಚಮಚ ಅಥವಾ ಅಗತ್ಯಕ್ಕೆ ತಕ್ಕಷ್ಟು
ತೆಂಗಿನ ತುರಿ - ಅರ್ಧ ಕಪ್
ಬಾಣಲೆಯಲ್ಲಿ ನನ್ನ ಸ್ನೇಹಿತರಾದ ಎಣ್ಣೆಯನ್ನು ಹಾಕಿ, ಬಿಸಿಯಾದಾಗ ಸಾಸಿವೆ ಹಾಕಿ. ಅದು ಬೊಬ್ಬೆ ಹೊಡೆದಾಗ ಉದ್ದಿನ ಬೇಳೆಯನ್ನು ಸೇರಿಸಿ. ಅದು ನಾಚಿ ಕೆಂಪಾದಾಗ ಕರಿಬೇವನ್ನು ಜೊತೆಗೆ ಕಳಿಸಿ. ಚಿಕ್ಕ ಚಿಕ್ಕ ಮೂಳೆಗಳನ್ನು ಸೇರಿಸಿ ಕಾಲು ಗ್ಲಾಸು ನೀರು ಸುರಿದು ಮುಚ್ಚಳ ಮುಚ್ಚಿ. ಸ್ವಲ್ಪ ಮೆತ್ತಗಾದಾಗ ಉಪ್ಪು ಮತ್ತು ಮೆಣಸಿನಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ನಂತರ ತೆಂಗಿನ ತುರಿ ಉದುರಿಸಿ. ಅನ್ನ, ತುಪ್ಪದೊಂದಿಗೆ ನನ್ನ ಪಲ್ಯ ಕಲಸಿ ನಿಮ್ಮ ಉದರಕ್ಕಿಳಿಸಿ.
ಇಂತಿ ನಿಮ್ಮ ಪ್ರೀತಿಯ,
ಕಲ್ಲಂಗಡಿ



Click it and Unblock the Notifications