Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಕಲ್ಲಂಗಡಿಯೇ ಹೇಳಿಕೊಟ್ಟ ಸಿಪ್ಪೆಯ ಪಲ್ಯ

ಪಲ್ಯ ಮಾಡುವ ಒಳಗುಟ್ಟನ್ನು ಕಲ್ಲಂಗಡಿ ಹಣ್ಣೇ ಹೇಳಿಕೊಳ್ಳುತ್ತಿದೆ. ಕೇಳಿಸಿಕೊಳ್ಳಿ, ಅಡುಗೆಮನೆಗೆ ನುಗ್ಗಿ . ಬೇಸಿಗೆಯಲ್ಲಿ ಕಲ್ಲಂಗಡಿ ಸೀಸನ್ ಮುಗಿಯುವ ಮುನ್ನ ಈ ಬರಹ ಓದಿ ನಿಮಗಿಷ್ಟವೆನಿಸಿದರೆ ಪಲ್ಯ ಮಾಡಿ ಸವಿಯಿಸಿ. ಇಲ್ಲದಿದ್ದರೆ ನೀವುಂಟು ತಿಪ್ಪೆಯುಂಟು.
ಕಲ್ಲಂಗಡಿ ಹಣ್ಣಿನ ಮಾತು ಕೇಳಿಸಿಕೊಳ್ಳಿ...
ಹಸನಾಗಿ ಬಲಿತ ನನ್ನನ್ನು ಅಂಗಡಿಯಿಂದಲೋ, ಸಂತೆಯಿಂದಲೋ ಚೌಕಾಶಿ ಮಾಡಿ ತಂದಿರ್ತೀರಿ. ನನ್ನ ಹೊಟ್ಟೆಗೊಂದು ಚಾಕು ಹಾಕಿ ಬಗೆದು, ಸುತ್ತಲೂ ಕುಳಿತು ಆಹಾ! ಎಷ್ಟು ಕೆಂಪಾಗಿದೆ.. ಎಂದು ಎಲ್ಲರೂ ಸವಿಯುತ್ತೀರಿ. ನಂತರ ನನ್ನ ಸಿಪ್ಪೆಯನ್ನು ತಿಪ್ಪೆಗೋ, ತೆಂಗಿನ ಮರದ ಬುಡಕ್ಕೋ ದಯವಿಟ್ಟು ಹಾಕದಿರಿ. ಬದಲಾಗಿ ನನ್ನನ್ನು ಕೊಂದ ನಂತರ ತುಂಡು ತುಂಡಾಗಿ ಮಾಡಿ ಕೆಂಪಾದ ನನ್ನ ಮಾಂಸವನ್ನು ಮೂಳೆಯಿಂದ(ಸಿಪ್ಪೆ) ಬೇರ್ಪಡಿಸಿ. ಮೂಳೆಯ ಕಾಲು ಇಂಚು ಭಾಗವನ್ನು ಅದರ ದಟ್ಟ ಹಸಿರು ಭಾಗದಿಂದ ಪ್ರತ್ಯೇಕಿಸಿ. ಈಗ ಕಾಲಿಂಚು ದಪ್ಪದ ತುಂಡುಗಳನ್ನು ಅತೀ ಚಿಕ್ಕ ತುಂಡುಗಳನ್ನಾಗಿ ಮಾಡಿ.
ನನ್ನ ಜೊತೆಗೆ ಇವರೆಲ್ಲಾ ಬೇಕು
ಅಡುಗೆ ಎಣ್ಣೆ -4 ಚಮಚ
ಸಾಸಿವೆ -1 ಚಮಚ
ಉದ್ದಿನಬೇಳೆ -2 ಚಮಚ
ಕರಿ ಬೇವು -2 ಕದಿರು
ಉಪ್ಪು - ಬೇಕಾದಷ್ಟು
ಮೆಣಸಿನಪುಡಿ -1 ಚಮಚ ಅಥವಾ ಅಗತ್ಯಕ್ಕೆ ತಕ್ಕಷ್ಟು
ತೆಂಗಿನ ತುರಿ - ಅರ್ಧ ಕಪ್
ಬಾಣಲೆಯಲ್ಲಿ ನನ್ನ ಸ್ನೇಹಿತರಾದ ಎಣ್ಣೆಯನ್ನು ಹಾಕಿ, ಬಿಸಿಯಾದಾಗ ಸಾಸಿವೆ ಹಾಕಿ. ಅದು ಬೊಬ್ಬೆ ಹೊಡೆದಾಗ ಉದ್ದಿನ ಬೇಳೆಯನ್ನು ಸೇರಿಸಿ. ಅದು ನಾಚಿ ಕೆಂಪಾದಾಗ ಕರಿಬೇವನ್ನು ಜೊತೆಗೆ ಕಳಿಸಿ. ಚಿಕ್ಕ ಚಿಕ್ಕ ಮೂಳೆಗಳನ್ನು ಸೇರಿಸಿ ಕಾಲು ಗ್ಲಾಸು ನೀರು ಸುರಿದು ಮುಚ್ಚಳ ಮುಚ್ಚಿ. ಸ್ವಲ್ಪ ಮೆತ್ತಗಾದಾಗ ಉಪ್ಪು ಮತ್ತು ಮೆಣಸಿನಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ನಂತರ ತೆಂಗಿನ ತುರಿ ಉದುರಿಸಿ. ಅನ್ನ, ತುಪ್ಪದೊಂದಿಗೆ ನನ್ನ ಪಲ್ಯ ಕಲಸಿ ನಿಮ್ಮ ಉದರಕ್ಕಿಳಿಸಿ.
ಇಂತಿ ನಿಮ್ಮ ಪ್ರೀತಿಯ,
ಕಲ್ಲಂಗಡಿ



Click it and Unblock the Notifications
