Just In
- 6 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 6 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 7 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 8 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಲನೆಲ್ಲಿ ಸೊಪ್ಪಿನ ತಂಪು ತಂಬುಳಿ
ಇಂಥ ಸೊಪ್ಪುಗಳನ್ನು ಹುಡುಕಿ, ಅಡುಗೆಮಾಡಿ ಸವಿಯುವ ಆಸೆಗೆ 1/4 ಚಮಚ ಶ್ರದ್ಧೆ ಇರಬೇಕು
*ತೇಜಸ್ವಿನಿ ಹೆಗಡೆ, ಬೆಂಗಳೂರು
ನೆಲನೆಲ್ಲಿ ಮಳೆಗಾಲದಲ್ಲಿ ಬೆಳೆಯುವ ಪುಟ್ಟಗಿಡ. ನೆಲನೆಲ್ಲಿಗೆ ಸಂಸ್ಕೃತದಲ್ಲಿ ಭೂಮ್ಯಾಮಲಕಿ, ಹಿಂದಿಯಲ್ಲಿ ಪಾತಾಲ ಆಂವಲಾ ಹಾಗೂ ಇಂಗ್ಲೀಷಿನಲ್ಲಿ"Phyllanthus Amarus" ಎಂದು ಕರೆಯಲಾಗುತ್ತದೆ. ತರಕಾರಿಗಿಡಗಳೊಡನೆ ಕಳೆಯಾಗಿ ಬೆಳೆಯುತ್ತದೆ. ಇದರೆಲೆಗಳು ಬೆಟ್ಟದ ನೆಲ್ಲಿಯಂತಿದ್ದರೂ ಆಕಾರದಲ್ಲಿ ಬಲು ಚಿಕ್ಕದಾಗಿರುತ್ತವೆ. ಹಳದಿ ಬಣ್ಣದ ಹೂವುಗಳನ್ನು ಹೊಂದಿರುವ ಈ ಗಿಡದಲ್ಲಿ ಅಗಸ್ಟ್ ಸಪ್ಟೆಂಬರ್ ತಿಂಗಳಿನಲ್ಲಿ ಸಣ್ಣ ಸಣ್ಣ ಹಸಿರು ಬಣ್ಣದ ಗುಂಡಾಕಾರದ ಕಾಯಿಗಳನ್ನು ಕಾಣಬಹುದಾಗಿದೆ.
ನೆಲನೆಲ್ಲಿಯ ಸೊಪ್ಪು ಹಲವು ವಿಧದಲ್ಲಿ ಉಪಯುಕ್ತ. ಕಾಮಾಲೆಗೆ, ಉದರಶೂಲೆಗೆ ಶ್ಲೇಷ್ಮಾತೀಸಾರಕ್ಕೆ ಹಾಗೂ ಕಣ್ಣು ನೋವಿಗೆ ಇದರ ಸೊಪ್ಪು ದಿವ್ಯೌಷಧಿ. ಅಲ್ಲದೇ, ಪಿತ್ತಜನಕಾಂಗದ ಸಮಸ್ಯೆಗಳಿಗೂ ಇದನ್ನು ಔಷಧವನ್ನಾಗಿ ಉಪಯೋಗಿಸುತ್ತಾರೆ. ಇದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವೈದ್ಯ ಎ.ಅರ್.ಎಂ.ಸಾಹೇಬ್ ಅವರ "ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು" ಎಂಬ ಪುಸ್ತಕವನ್ನು ಓದಬಹುದು.
ನೆಲನೆಲ್ಲಿ ತಂಬುಳಿಗೆ ಬೇಕಾಗುವ ಸಾಮಗ್ರಿಗಳು.
*
ನೆಲನೆಲ್ಲಿ
ಸೊಪ್ಪು
-
ಒಂದು
ಹಿಡಿ
ಅಥವಾ
ಮುಷ್ಟಿಯಷ್ಟು
*
ಜೀರಿಗೆ
-
1/4
ಚಮಚ
*
ಬಿಳೇ
ಎಳ್ಳು
-
1/4
ಚಮಚ
*
ಕರಿಮೆಣಸಿನ
ಕಾಳು(ಪೆಪ್ಪರ್)
2-3
*
ಇಂಗು
-
ಚಿಟಿಗೆಯಷ್ಟು
*
ಕಾಯಿತುರಿ
-
1/4
ಭಾಗ
*
ಕಡೆದ
ಮಜ್ಜಿಗೆ
-
ಒಂದು
ಲೋಟ
*
ಬೆಲ್ಲ
-
ರುಚಿಗೆ
ತಕ್ಕಷ್ಟು
(ಸಿಹಿ
ಆಗದವರು
ಬೆಲ್ಲವನ್ನು
ಹಾಕದೆಯೂ
ಮಾಡಬಹುದು)
*
ಉಪ್ಪು
-
ರುಚಿಗೆ
ತಕ್ಕಷ್ಟು
*
ತುಪ್ಪ
-
1-2
ಚಮಚ
ಮಾಡುವ ವಿಧಾನ:
*
ಮೊದಲಿಗೆ
ನೆಲನೆಲ್ಲಿ
ಸೊಪ್ಪನ್ನು
ಚೆನ್ನಾಗಿ
ತೊಳೆದು
ಹೆಚ್ಚಿಟ್ಟುಕೊಳ್ಳಬೇಕು.
*
ಬಾಣಲೆಯಲ್ಲಿ
ತುಪ್ಪವನ್ನು
ಹಾಕಿ
ಜೀರಿಗೆ,
ಎಳ್ಳು,
ಕರಿಮೆಣಸಿನ
ಕಾಳು
ಹಾಗೂ
ಇಂಗನ್ನು
ಹಾಕಿ
ಹುರಿಯಬೇಕು.
*
ಹಾಕಿದ
ಪದಾರ್ಥ
ಚಟಗುಡುತ್ತಲೇ,
ಇದಕ್ಕೆ
ಹೆಚ್ಚಿಟ್ಟ
ನೆಲನೆಲ್ಲಿ
ಸೊಪ್ಪನ್ನೂ
ಹಾಕಿ
ಚೆನ್ನಾಗಿ
ಹುರಿದು
ತಣಿಸಬೇಕು.
*
ಚೆನ್ನಾಗಿ
ತಣಿದ
ನಂತರ
ಕಾಯಿತುರಿಯೊಂದಿಗೆ
ಬೀಸಿ,
ಸೋಸಿ
ರಸವನ್ನು
ಹಿಂಡಬೇಕು.
ಜಿಗುಟನ್ನು
ತೆಗೆಯಬೇಕು.
*
ಸೋಸಿದ
ರಸಕ್ಕೆ
ಕಡೆದ
ಮಜ್ಜಿಗೆ,
ಉಪ್ಪು
ಹಾಗೂ
ಬೆಲ್ಲವನ್ನು
ಹಾಕಿದರೆ
ರುಚಿಕರ
ಹಾಗೂ
ಆರೋಗ್ಯಕರ
ತಂಬುಳಿ
ತಯಾರೆನ್ನಬಹುದು.
ನೆಲನೆಲ್ಲಿ ಸೊಪ್ಪಿನಿಂದ ಚಟ್ನಿಯನ್ನೂ ತಯಾರಿಸಬಹುದು. ಬಹೋಪಯೋಗಿಯಾಗಿರುವ ಇದು ಸುಲಭದಲ್ಲಿ ಬೆಳೆಯುವಂತಹದ್ದೂ ಆಗಿದೆ. ಇಂಥದ್ದನೆಲ್ಲ ಹುಡುಕಿ, ತಯಾರಿಸಿ, ಸವಿಯುವ ಆಸೆಗೆ 1/4 ಚಮಚ ಶ್ರದ್ಧೆ ಇರಬೇಕು.