Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಗರ್ಭಿಣಿಯರು ಮಲಗುವ ಕೋಣೆಯಲ್ಲಿ ಇವುಗಳನ್ನೆಲ್ಲಾ ಇಡಬೇಕಂತೆ!
ಗರ್ಭದಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ತಾಯಿ ಹೆಚ್ಚು ಕಾಳಜಿ ವಹಿಸುವುದು ಸಹಜ. ಅದಕ್ಕಾಗಿಯೇ ಮಗುವಿನ ಬೆಳವಣಿಗೆಗೆ ಬೇಕಾದ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುವುದು ಮತ್ತು ಯೋಗ್ಯ ತಪಾಸಣೆ ಮಾಡಿಸುತ್ತಾಳೆ. ಇವೆಲ್ಲಕ್ಕೂ ಹೆಚ್ಚಾಗಿ ಕೆಲವು ಸಕಾರಾತ್ಮಕ ಶಕ್ತಿ ಮಗುವನ್ನು ರಕ್ಷಿಸುತ್ತದೆ. ಜೊತೆಗೆ ಅದರ ಅದೃಷ್ಟವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಮರೆಯಬಾರದು.
ಹೌದು, ನಮ್ಮ ಕಣ್ಣಿಗೆ ಹಾಗೂ ಅಂದಾಜಿಗೂ ನಿಲುಕದ ಅದ್ಭುತ ಶಕ್ತಿಗಳು ಗರ್ಭಿಣಿ ಹಾಗೂ ಹೊಟ್ಟೆಯಲ್ಲಿರುವ ಮಗುವನ್ನು ರಕ್ಷಿಸುತ್ತವೆ. ಈ ಸಕಾರಾತ್ಮಕ ಶಕ್ತಿಯನ್ನು ಸ್ವಾಗತಿಸಲು ಕೆಲವು ಕ್ರಮಗಳನ್ನು ನಾವು ಕೈಗೊಳ್ಳಬೇಕು. ಅದು ಯಾವುದೆಂಬುದನ್ನು ತಿಳಿಯಲು ಮುಂದೆ ಓದಿ...

ಹಳದಿ ಅಕ್ಕಿ
ಹಿಂದೂ ಧರ್ಮದಲ್ಲಿ ಅಕ್ಕಿ ಆಧ್ಯಾತ್ಮಿಕವಾಗಿ ಗಮನಾರ್ಹ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಇದನ್ನು ಗರ್ಭಿಣಿಯ ಕೋಣೆ(ರೂಮ್)ನಲ್ಲಿ ಇರುವುದರಿಂದ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಇದನ್ನು ಮಂಗಳಕರ ಎಂದು ಭಾವಿಸಲಾಗುವುದು.

ಗುಲಾಬಿ ಬಣ್ಣ
ಗುಲಾಬಿ ಬಣ್ಣವು ಹೆಚ್ಚು ಸುಖ ಮತ್ತು ಸಂತೋಷವನ್ನು ನೀಡುತ್ತದೆ. ಗರ್ಭಿಣಿಯ ಕೋಣೆಯಲ್ಲಿ ಗುಲಾಬಿ ಬಣ್ಣದ ಶೋ ಪೀಸ್ ಇಡುವುದರಿಂದ ಗರ್ಭಿಣಿ ಹಾಗೂ ಗರ್ಭದಲ್ಲಿರುವ ಮಗುವಿಗೆ ಸುಖದ ಅನುಭವ ನೀಡುವುದು.

ಯಶೋಧಾ ಮತ್ತು ಕೃಷ್ಣನ ಚಿತ್ರ
ಕೋಣೆಯಲ್ಲಿ ಯಶೋಧಾ ಮತ್ತು ಕೃಷ್ಣನ ಚಿತ್ರವನ್ನು ಗೋಡೆಯ ಮೇಲೆ ಅಂಟಿಸಿ. ಮುಂಜಾನೆ ಎದ್ದಾಗ ಮೊದಲು ಆ ಚಿತ್ರವೇ ಕಾಣುವಂತೆ ಇರಬೇಕು. ಓಡಾಡುವಾಗ ದೃಷ್ಟಿ ಆ ಚಿತ್ರದ ಮೇಲೆ ಬೀಳುತ್ತಿರಬೇಕು.

ವಾಸ್ತು ದೇವರ ಚಿತ್ರ
ವಾಸ್ತುವು ಗರ್ಭಿಣಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಕೋಣೆಯಲ್ಲಿ ವಾಸ್ತು ದೇವರ ಚಿತ್ರ ಅಂಟಿಸುವುದರಿಂದ ವಾಸ್ತು ದೇವರು ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸುತ್ತದೆ.

ಹಿತ್ತಾಳೆ ವಸ್ತು
ಹಿತ್ತಾಳೆಯ ಪಾತ್ರೆ ಅಥವಾ ಹಿತ್ತಾಳೆಯ ವಸ್ತುವು ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಗರ್ಭಿಣಿ ತನ್ನ ರೂಮ್ನಲ್ಲಿ ಇಟ್ಟುಕೊಂಡರೆ ಉತ್ತಮ ಪರಿಣಾಮ ಪಡೆಯಬಹುದು.

ನವಿಲು ಗರಿ
ನವಿಲು ಗರಿ ಶ್ರೀಕೃಷ್ಣನ ಸಹಾಯಕ ಎಂದು ಕರೆಯಲಾಗುತ್ತದೆ. ಇದನ್ನು ಪೂಜಾ ಮಂದಿರದಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಹೆಚ್ಚುತ್ತದೆ ಎನ್ನಲಾಗುತ್ತದೆ.

ಬಿಳಿಯ ಪ್ರದರ್ಶನ ಗೊಂಬೆ
ಬಿಳಿ ಬಣ್ಣ ಶಾಂತಿ ಮತ್ತು ಉತ್ತಮ ಆರೋಗ್ಯದ ಸಂಕೇತ. ಹಾಗಾಗಿ ಬಿಳಿಯ ಬಣ್ಣದ ಪ್ರದರ್ಶನ ಗೊಂಬೆ ಅಥವಾ ಚಿತ್ರಗಳನ್ನು ಕೋಣೆಯಲ್ಲಿಟ್ಟುಕೊಂಡರೆ ಶುಭವಾಗುವುದು.

ಹೂವು ಮತ್ತು ಗಿಡ
ತಾಜಾ ಹೂವು ಅಥವಾ ಹಸಿರು ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಇವು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕೊಳೆತ ಹೂವು ಮತ್ತು ಗಿಡವನ್ನು ಇಡಬಾರದು.



Click it and Unblock the Notifications