Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಹೆರಿಗೆಯ ಬಳಿಕ ಇಂತಹ ಪಾನೀಯಗಳನ್ನು ಕುಡಿದರೆ ಬಹಳ ಒಳ್ಳೆಯದು....
ಮಹಿಳೆಯ ದೇಹವು ಮತ್ತೊಂದು ಜೀವಕ್ಕೆ ಜೀವ ನೀಡುವ ವೇಳೆ ಹಲವಾರು ಬದಲಾವಣೆ ಹಾಗೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಪ್ರಸವದ ಬಳಿಕ ಮಹಿಳೆಯ ದೇಹವು ಚೇತರಿಕೆಯಾಗಲು ತುಂಬಾ ಸಮಯ ಬೇಕಾಗುತ್ತದೆ. ಅದರಲ್ಲೂ ಭಾರತದಂತಹ ಸಂಪ್ರದಾಯಬದ್ಧ ದೇಶದಲ್ಲಿ ಬಾಣಂತಿ ಮಹಿಳೆಯು ಸುಮಾರು 40 ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವುದು ಅತೀ ಅಗತ್ಯವಾಗಿದೆ. ಈ ವೇಳೆ ಮಹಿಳೆಯ ದೇಹವು ಚೇತರಿಕೆ ಕಾಣುತ್ತಿರುವುದರಿಂದ ಇದಕ್ಕೆ ವಿಶ್ರಾಂತಿ ಅತೀ ಅಗತ್ಯ.
ಗರ್ಭಧಾರಣೆ ಸಮಯದಿಂದ ಪ್ರಸವದ ತನಕ ಮಹಿಳೆಯ ದೇಹವು ತುಂಬಾ ಬಳಲಿರುವ ಕಾರಣ ಆಕೆಯ ದೇಹಕ್ಕೆ ವಿಶ್ರಾಂತಿ ಮತ್ತು ಆರೈಕೆ ಅತೀ ಅಗತ್ಯ. ವಿಶ್ರಾಂತಿ ಪಡೆಯದೆ ಇದ್ರೆ ಅದು ಮಗು ಹಾಗೂ ತಾಯಿ ಮೇಲೆ ವಿಭಿನ್ನ ಪರಿಣಾಮ ಬೀರಬಹುದು. ಬಾಣಂತಿ ಮಹಿಳೆಯರಿಗೆ ವಿಶೇಷವಾದ ಕೆಲವೊಂದು ಆಹಾರ ನೀಡಲಾಗುತ್ತದೆ. ಇದರಿಂದ ಹಾಲಿನ ಉತ್ಪಾದನೆ ಹೆಚ್ಚಾಗಿ ದೇಹಕ್ಕೂ ಶಮನ ನೀಡುವುದು. ಮನೆಯಲ್ಲೇ ಕೆಲವೊಂದು ಆಹಾರಗಳನ್ನು ತಯಾರಿಸಿ ಬಾಣಂತಿಗೆ ನೀಡಲಾಗುತ್ತದೆ.
ಇಂತಹ ಆಹಾರವು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ ಎದೆಹಾಲು ಸೇವಿಸುವ ಮಗುವಿನ ಆರೋಗ್ಯ ಕಾಪಾಡುವುದು. ಮನೆಯಲ್ಲೇ ತಯಾರಿಸ ಬಹುದಾದ ಮೂರು ಪರಿಣಾಮಕಾರಿ ಗಿಡಿಮೂಲಿಕೆ ಪಾನೀಯ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ನಿಯಮಿತವಾಗಿ ಈ ಪಾನೀಯ ಸೇವನೆ ಮಾಡಿದರೆ ದೇಹವು ಬೇಗನೆ ಚೇತರಿಕೆ ಕಂಡುಕೊಂಡು ಬಾಣಂತಿ ಮಹಿಳೆಯಲ್ಲಿ ಹಾಲಿನ ಉತ್ಪತ್ತಿ ಹೆಚ್ಚಿಸುವುದು. ಇದರ ಬಗ್ಗೆ ಮತ್ತಷ್ಟು ತಿಳಿಯಲು ಮುಂದಕ್ಕೆ ಓದಿಕೊಳ್ಳಿ.....

ಬೆಳ್ಳುಳ್ಳಿ ಹಾಲು
ಬೆಳ್ಳುಳ್ಳಿಯು ಒಳ್ಳೆಯ ಕ್ಷೀರಚೋದಕವಾಗಿರುವ ಕಾರಣದಿಂದ ಇದು ಬಾಣಂತಿ ಮಹಿಳೆಯರಿಗೆ ತುಂಬಾ ಪ್ರಯೋಜಕಾರಿಯಾಗಿ ಕೆಲಸ ಮಾಡಲಿದೆ.
ಬೇಕಾಗುವ ಸಾಮಗ್ರಿಗಳು
*ಬೆಳ್ಳುಳ್ಳಿ- 3 ಎಸಲು
*ನೀರು 1 ಕಪ್
*ಹಾಲು 1 ಲೋಟ
*ಸಕ್ಕರೆ, ಜೇನುತುಪ್ಪ ಮತ್ತು ಬೆಲ್ಲ-1/2 ಚಮಚ

ವಿಧಾನ
ಬೆಳ್ಳುಳ್ಳಿ ಎಸಲುಗಳನ್ನು ಒಳ್ಳೆಯ ಫೇಸ್ಟ್ ಮಾಡಿಕೊಳ್ಳಿ. ಒಂದು ತವಾಗೆ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಅದಕ್ಕೆ ನೀರು ಹಾಕಿ ಅದು ಹಾಕಿದ ಪ್ರಮಾಣದ ¼ ಭಾಗವಾಗುವ ತನಕ ಕುದಿಸಿ. ಈಗ ಹಾಲು ಹಾಕಿ ಮತ್ತು ಸರಿಯಾಗಿ ಕುದಿಸಿ.
ಗ್ಯಾಸ್ ಅನ್ನು ಹಾರಿಸಿ ಹಾಲು ತಣ್ಣಗಾಗಲು ಬಿಡಿ. ಒಂದು ಲೋಟಕ್ಕೆ ಹಾಕಿ ಅದಕ್ಕೆ ಜೇನುತುಪ್ಪ, ಬೆಲ್ಲ ಅಥವಾ ಸಕ್ಕರೆ ಹಾಕಿ. ಈ ಪಾನೀಯವನ್ನು ಬೆಳಿಗ್ಗೆ ಅಥವಾ ಬೆಳಿಗ್ಗೆ 10 ಗಂಟೆ ಸಮಯಕ್ಕೆ ಸೇವಿಸಿ.

ಜೀರಿಗೆ ನೀರು
ಜೀರಿಗೆಯು ಹಾಲಿನ ಉತ್ಪತ್ತಿ ಹೆಚ್ಚಿಸುವುದು. ಮಗುವಿನ ಹೊಟ್ಟೆನೋವು ಶಮನ ಮಾಡುವುದು. ಮಗು ಹಾಗೂ ತಾಯಿಯಲ್ಲಿ ಜೀರ್ಣಕ್ರಿಯೆಯನ್ನು ಇದು ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿಗಳು
*ಜೀರಿಗೆ-2 ಚಮಚ
*ನೀರು- 1 ಲೀಟರ್
*ಸಕ್ಕರೆ ಅಥವಾ ಜೇನುತುಪ್ಪ-1/2 ಚಮಚ

ವಿಧಾನ
*ಒಂದು ತವಾ ತೆಗೆದುಕೊಂಡು ಅದಕ್ಕೆ ನೀರು ಹಾಕಿ ಮತ್ತು ಅದಕ್ಕೆ ಜೀರಿಗೆ ಸೇರಿಸಿಕೊಂಡು ಕುದಿಸಿ. ಇದು ಕುದಿಯುತ್ತಿರುವಾಗ ಐದು ನಿಮಿಷ ಸರಿಯಾಗಿ ತಳಮಳವಾಗಲಿ.
*ಗ್ಯಾಸ್ ನಿಂದ ತೆಗೆದು ಅದನ್ನು ಸೋಸಿಕೊಂಡು ಒಂದು ಪಾತ್ರೆಗೆ ಹಾಕಿ. ಬಿಸಿಯಾಗಿರುವ ನೀರನ್ನು ಒಂದು ಥರ್ಮಸ್ ಫ್ಲಾಸ್ಕ್ ಗೆ ಹಾಕಿಬಿಡಿ.
*ನಿಮಗೆ ಬಾಯಾರಿಕೆ ಆದಾಗ ಈ ನೀರನ್ನು ಕುಡಿಯಬಹುದು. ರುಚಿಗೆ ಬೇಕಾದರೆ ಜೇನುತುಪ್ಪ ಅಥವಾ ಸಕ್ಕರೆ ಹಾಕಿಕೊಂಡು ಕುಡಿಯಬಹುದು.
*ಪ್ರತೀ ದಿನ ತಾಜಾ ಜೀರಿಗೆ ನೀರು ಮಾಡಿ ಕುಡಿದರೆ ಒಳ್ಳೆಯದು. ಜೀರಿಗೆ ನೀರು ಕುಡಿಯಲು ಇಷ್ಟವಿಲ್ಲದೆ ಇದ್ದರೆ ಜೀರಿಗೆಯನ್ನು ಹುರಿದು ತಿನ್ನಬಹುದು.

ಓಂ ಕಾಳು(ಅಜ್ವೈನ್) ನೀರು
ಅಜ್ವೈನ್ ನೀರು ಜೀರ್ಣಕ್ರಿಯೆ ಹಾಗೂ ಹೊಟ್ಟೆ ಸ್ವಚ್ಛಗೊಳಿಸಲು ತುಂಬಾ ಪರಿಣಾಮಕಾರಿ ಎಂದು ನಂಬಲಾಗಿದೆ. ಬಾಣಂತಿ ಮಹಿಳೆಯರು ಬೇಗನೆ ಚೇತರಿಕೆ ಕಾಣಲು ಅಜ್ವೈನ್ ನೀರು ತುಂಬಾ ನೆರವಾಗಲಿದೆ.

ಬೇಕಾಗುವ ಸಾಮಗ್ರಿಗಳು
*ಅಜ್ವೈನ್ ಹುಡಿ ½ ಚಮಚ
*ನೀರು ಒಂದು ಕಪ್
*ಬೆಣ್ಣೆ-1/2 ಚಮಚ
*ಬೆಲ್ಲ-2 ಚಮಚ
ವಿಧಾನ
*ಒಂದು ತವಾ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಬಿಸಿ ಮಾಡಿ. ಬೆಣ್ಣೆ ಬಿಸಿಯಾಗಿರುವಾಗಲೇ ಅದಕ್ಕೆ ಅಜ್ವೈನ್ ಹುಡಿ ಮತ್ತು ನೀರು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಈ ಮಿಶ್ರಣವು ಕುದಿಯಲು ಆರಂಭವಾದಾಗ ಅದಕ್ಕೆ ಬೆಲ್ಲ ಹಾಕಿ. ಬೆಂಕಿ ಕಡಿಮೆ ಮಾಡಿ ಮಿಶ್ರಣವು ತಳಮಳವಾಗಲು ಬಿಡಿ. ಬೆಲ್ಲ ಸರಿಯಾಗಿ ಕರಗಿ ಹೋಗಲಿ.
*ಗ್ಯಾಸ್ ನಿಂದು ತವಾ ತೆಗೆದು ಅದು ತಣ್ಣಗಾಗಲು ಬಿಡಿ. ಮಿಶ್ರಣವನ್ನು ಸೋಸಿಕೊಳ್ಳಿ ಮತ್ತು ಸ್ವಲ್ಪ ಬಿಸಿಯಾಗಿರುವಾಗಲೇ ಕುಡಿಯಿರಿ.
*ಹೆಚ್ಚು ಕ್ಯಾಲರಿ ಬೇಡವೆಂದಿದ್ದರೆ ಬೆಣ್ಣೆ ಹಾಕಬೇಡಿ. ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಅದಕ್ಕೆ ಅಜ್ವೈನ್ ಹುಡಿ ಮತ್ತು ನೀರು ಹಾಕಿ.
*ಇದಕ್ಕೆ ಬೆಲ್ಲ ಹಾಕಿದರೆ ನೀರು ಹೆಚ್ಚು ರುಚಿಯಾಗಿರುವುದು. ನೀರನ್ನು ಸೋಸಿಕೊಂಡು ಕುಡಿಯಿರಿ.



Click it and Unblock the Notifications











