Just In
- 59 min ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 1 hr ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 3 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 4 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
Don't Miss
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುದ್ದು ಮಕ್ಕಳನ್ನು ಕಾಡುವ ನಿದ್ರಾಹೀನತೆ ಸಮಸ್ಯೆ....
ಮಕ್ಕಳು ಮುಗ್ಧರೇನೋ ನಿಜ. ಆದರೆ, ಆತಂಕದಿಂದ ಮುಕ್ತರಾಗಿರಬೇಕಿಲ್ಲ! ಮಕ್ಕಳೂ ಸಹ ನಿದ್ರಾಹೀನತೆಯಿಂದ ಬಳಲುತ್ತಿರಬಹುದು.ಕೆಲವರಿಗೆ ನಿದ್ರೆಗೆ ಜಾರುವ ತೊಂದರೆಯಾದರೆ, ಮತ್ತೆ ಕೆಲವರದು ನರಳಾಟದ ನಿದ್ರೆ! ನಿದ್ರಾಹೀನತೆಯಿಂದ ಬಳಲುವ ಮಕ್ಕಳು ಮರುದಿವಸ ಬಹಳ ಮಂಕಾಗಿರುತ್ತಾರೆ. ಕಲಿಕೆಯಲ್ಲಿ ಹಿಂದುಳಿಯಲು ಇದೂ ಒಂದು ಕಾರಣವಿರಬಹುದು.
ಮಕ್ಕಳು ನೆಮ್ಮದಿಯಿಂದ ನಿದ್ರಿಸದೇ ಗೊರಕೆ ಹೊಡೆಯುವುದು, ನರಳುವುದು, ಹೊರಳುವುದು ಮಾಡಿದರೆ, ಅವರಲ್ಲಿ ಯಾವುದೋ ಭಯ ಆವರಿಸಿದೆ ಎಂದರ್ಥ. ಅದು ಶಾಲೆಯ ಶಿಕ್ಷಕರ ಕೋಲಿನ ಭಯವೋ, ಅವರು ಹಗಲಿನಲ್ಲಿ ನೋಡಿರಬಹುದಾದ ಭೂತದ ಚಲನಚಿತ್ರದ ಪರಿಣಾಮವೋ ಆಗಿರಬಹುದು. ಇಲ್ಲವೇ ದುಷ್ಟ ಸಹಪಾಠಿಯ ಭಯ ಕಾಡುತ್ತಿರಲೂ ಬಹುದು. ಮಕ್ಕಳ ಮನಸ್ಸು ಹೂವಿನಂತೆ, ನೋವು ಮಾಡಬೇಡಿ...
ಇಂತಹ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ ಅವರ ಮನಸ್ಸಿನಲ್ಲಿ ಕಾಡುತ್ತಿರುವ ಚಿಂತೆಯ ಎಳೆಯನ್ನು ಬಿಡಿಸಿಕೊಳ್ಳಬೇಕು. ಕೆಲವುಮಕ್ಕಳು ಮನಸ್ಸಿನಲ್ಲಿ ಇರುವುದನ್ನು ಸುಲಭವಾಗಿ ಹೊರಗೆಡಹುವುದಿಲ್ಲ. ಅಂತಹವರನ್ನು ತಾಳ್ಮೆಯಿಂದ ನಿಧಾನವಾಗಿ ಪುಸಲಾಯಿಸಿ, ವಿಚಾರಿಸಬೇಕಾಗುತ್ತದೆ. ಅನಂತರ ಅವರ ಸಮಸ್ಯೆಗೆ ಪರಿಹಾರ ನೀಡಿ, ಧೈರ್ಯ ತುಂಬಬೇಕಾಗುತ್ತದೆ.
ಕೆಲವು ಮಕ್ಕಳಿಗೆ ತಮ್ಮ ಸಮಸ್ಯೆ ತಮಗೇ ತಿಳಿದಿರುವುದಿಲ್ಲ. ಅಂತಹ ಮಕ್ಕಳ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಎಲ್ಲ ವಿಷಯಗಳ ಕುರಿತೂ ಎಳೆ ಎಳೆಯಾಗಿ ಪ್ರಶ್ನೆ ಮಾಡಿ "ನೋವು" ಎಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಇಂದಿನ ಮಕ್ಕಳು ಪುಸ್ತಕಕ್ಕಿಂತ ಹೆಚ್ಚಾಗಿ ಗಣಕಯಂತ್ರ, ಮೊಬೈಲ್, ಐ ಪ್ಯಾಡ್, ಟ್ಯಾಬ್ ಗಳ ಸಹವಾಸದಲ್ಲಿ ಮೈ ಮರೆಯುತ್ತಾರೆ. ಅಂತಹ ಉಪಕರಣಗಳಿಂದ ಹೊರ ಹೊಮ್ಮುವ ಅಯಸ್ಕಾಂತೀಯ ಕಿರಣಗಳಿಂದ ಆಗಬಹುದಾದ ದುಷ್ಪರಿಣಾಮಗಳ ಪಟ್ಟಿ ಒತ್ತಟ್ಟಿಗಿರಲಿ; ಇದರಿಂದ ಮಕ್ಕಳ ಶರೀರಕ್ಕೆ ಯಾವುದೇ ವ್ಯಾಯಾಮ ಲಭಿಸದಿರುವುದರಿಂದಲೂ ನಿದ್ರೆ ಬಾರದಿರಬಹುದು.
ಇಂತಹ ಮಕ್ಕಳ ದೈನಂದಿನ ವೇಳಾ ಪಟ್ಟಿಯಲ್ಲಿ ಸಾಕಷ್ಟು ಆಟ, ವ್ಯಾಯಮಗಳು ಒಳಗೊಳ್ಳುವಂತೆ ನಿಗಾ ವಹಿಸಬೇಕಾಗುತ್ತದೆ. ಆಯಾಸವಾದರೆ, ನೆಮ್ಮದಿಯ ನಿದ್ರೆಯೂ ಬಂದೀತು!