Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಮುದ್ದು ಮಕ್ಕಳನ್ನು ಕಾಡುವ ನಿದ್ರಾಹೀನತೆ ಸಮಸ್ಯೆ....
ಮಕ್ಕಳು ಮುಗ್ಧರೇನೋ ನಿಜ. ಆದರೆ, ಆತಂಕದಿಂದ ಮುಕ್ತರಾಗಿರಬೇಕಿಲ್ಲ! ಮಕ್ಕಳೂ ಸಹ ನಿದ್ರಾಹೀನತೆಯಿಂದ ಬಳಲುತ್ತಿರಬಹುದು.ಕೆಲವರಿಗೆ ನಿದ್ರೆಗೆ ಜಾರುವ ತೊಂದರೆಯಾದರೆ, ಮತ್ತೆ ಕೆಲವರದು ನರಳಾಟದ ನಿದ್ರೆ! ನಿದ್ರಾಹೀನತೆಯಿಂದ ಬಳಲುವ ಮಕ್ಕಳು ಮರುದಿವಸ ಬಹಳ ಮಂಕಾಗಿರುತ್ತಾರೆ. ಕಲಿಕೆಯಲ್ಲಿ ಹಿಂದುಳಿಯಲು ಇದೂ ಒಂದು ಕಾರಣವಿರಬಹುದು.
ಮಕ್ಕಳು ನೆಮ್ಮದಿಯಿಂದ ನಿದ್ರಿಸದೇ ಗೊರಕೆ ಹೊಡೆಯುವುದು, ನರಳುವುದು, ಹೊರಳುವುದು ಮಾಡಿದರೆ, ಅವರಲ್ಲಿ ಯಾವುದೋ ಭಯ ಆವರಿಸಿದೆ ಎಂದರ್ಥ. ಅದು ಶಾಲೆಯ ಶಿಕ್ಷಕರ ಕೋಲಿನ ಭಯವೋ, ಅವರು ಹಗಲಿನಲ್ಲಿ ನೋಡಿರಬಹುದಾದ ಭೂತದ ಚಲನಚಿತ್ರದ ಪರಿಣಾಮವೋ ಆಗಿರಬಹುದು. ಇಲ್ಲವೇ ದುಷ್ಟ ಸಹಪಾಠಿಯ ಭಯ ಕಾಡುತ್ತಿರಲೂ ಬಹುದು. ಮಕ್ಕಳ ಮನಸ್ಸು ಹೂವಿನಂತೆ, ನೋವು ಮಾಡಬೇಡಿ...

ಇಂತಹ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ ಅವರ ಮನಸ್ಸಿನಲ್ಲಿ ಕಾಡುತ್ತಿರುವ ಚಿಂತೆಯ ಎಳೆಯನ್ನು ಬಿಡಿಸಿಕೊಳ್ಳಬೇಕು. ಕೆಲವುಮಕ್ಕಳು ಮನಸ್ಸಿನಲ್ಲಿ ಇರುವುದನ್ನು ಸುಲಭವಾಗಿ ಹೊರಗೆಡಹುವುದಿಲ್ಲ. ಅಂತಹವರನ್ನು ತಾಳ್ಮೆಯಿಂದ ನಿಧಾನವಾಗಿ ಪುಸಲಾಯಿಸಿ, ವಿಚಾರಿಸಬೇಕಾಗುತ್ತದೆ. ಅನಂತರ ಅವರ ಸಮಸ್ಯೆಗೆ ಪರಿಹಾರ ನೀಡಿ, ಧೈರ್ಯ ತುಂಬಬೇಕಾಗುತ್ತದೆ.
ಕೆಲವು ಮಕ್ಕಳಿಗೆ ತಮ್ಮ ಸಮಸ್ಯೆ ತಮಗೇ ತಿಳಿದಿರುವುದಿಲ್ಲ. ಅಂತಹ ಮಕ್ಕಳ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಎಲ್ಲ ವಿಷಯಗಳ ಕುರಿತೂ ಎಳೆ ಎಳೆಯಾಗಿ ಪ್ರಶ್ನೆ ಮಾಡಿ "ನೋವು" ಎಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಇಂದಿನ ಮಕ್ಕಳು ಪುಸ್ತಕಕ್ಕಿಂತ ಹೆಚ್ಚಾಗಿ ಗಣಕಯಂತ್ರ, ಮೊಬೈಲ್, ಐ ಪ್ಯಾಡ್, ಟ್ಯಾಬ್ ಗಳ ಸಹವಾಸದಲ್ಲಿ ಮೈ ಮರೆಯುತ್ತಾರೆ. ಅಂತಹ ಉಪಕರಣಗಳಿಂದ ಹೊರ ಹೊಮ್ಮುವ ಅಯಸ್ಕಾಂತೀಯ ಕಿರಣಗಳಿಂದ ಆಗಬಹುದಾದ ದುಷ್ಪರಿಣಾಮಗಳ ಪಟ್ಟಿ ಒತ್ತಟ್ಟಿಗಿರಲಿ; ಇದರಿಂದ ಮಕ್ಕಳ ಶರೀರಕ್ಕೆ ಯಾವುದೇ ವ್ಯಾಯಾಮ ಲಭಿಸದಿರುವುದರಿಂದಲೂ ನಿದ್ರೆ ಬಾರದಿರಬಹುದು.
ಇಂತಹ ಮಕ್ಕಳ ದೈನಂದಿನ ವೇಳಾ ಪಟ್ಟಿಯಲ್ಲಿ ಸಾಕಷ್ಟು ಆಟ, ವ್ಯಾಯಮಗಳು ಒಳಗೊಳ್ಳುವಂತೆ ನಿಗಾ ವಹಿಸಬೇಕಾಗುತ್ತದೆ. ಆಯಾಸವಾದರೆ, ನೆಮ್ಮದಿಯ ನಿದ್ರೆಯೂ ಬಂದೀತು!



Click it and Unblock the Notifications


