Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಮಕ್ಕಳ ಆರೋಗ್ಯಕ್ಕೆ 'ಪಪ್ಪಾಯಿ ಹಣ್ಣು' ಬಹಳ ಒಳ್ಳೆಯದು...
ಮಗು ಒಂದರಿಂದ ಒಂದುವರೆ ವರ್ಷ ದಾಟಿದ ಬಳಿಕ ಅದಕ್ಕೆ ಸರಿಯಾಗಿ ಹಣ್ಣಾಗಿರುವ ಪಪ್ಪಾಯಿ ತುಂಡುಗಳನ್ನು ಸೇವಿಸಲು ನೀಡಬೇಕು, ಆದರೂ ಮಗುವಿಗೆ ಪಪ್ಪಾಯಿ ನೀಡುವ ಮೊದಲು ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು. ...
ಮಕ್ಕಳಿಗೆ ತಾಯಿಯ ಹಾಲು ಅತೀ ಅಗತ್ಯವಾಗಿ ಬೇಕೇಬೇಕು. ಆರು ತಿಂಗಳ ನಂತರ ಮಕ್ಕಳಿಗೆ ತಾಯಿ ಹಾಲಿನೊಂದಿಗೆ ಸ್ವಲ್ಪ ಘನ ಆಹಾರವನ್ನು ನೀಡುತ್ತಾ ಬರಬೇಕು. ಅದರಲ್ಲೂ ಮುಖ್ಯವಾಗಿ ತರಕಾರಿ ಹಾಗೂ ಹಣ್ಣುಗಳನ್ನು ನೀಡಿದರೆ ಮಕ್ಕಳ ಬೆಳವಣಿಗೆಗೆ ಇದು ಪೂರಕ. ಮಗು ಒಂದರಿಂದ ಒಂದುವರೆ ವರ್ಷ ದಾಟಿದ ಬಳಿಕ ಅದಕ್ಕೆ ಸರಿಯಾಗಿ ಹಣ್ಣಾಗಿರುವ ಪಪ್ಪಾಯಿ ತುಂಡುಗಳನ್ನು (ಪರಂಗಿ ಹಣ್ಣು) ನೀಡಬೇಕು. ಸರ್ವಗುಣ ಸಂಪನ್ನ ಪಪ್ಪಾಯಿ ಹಣ್ಣಿನ ಮೂಲ ಅರಿಯಿರಿ
ಮಗು ಪಪ್ಪಾಯಿಯನ್ನು ಸರಿಯಾಗಿ ತಿನ್ನುತ್ತಾ ಇದೆಯಾ ಎಂದು ತಿಳಿದುಕೊಂಡು ಮುಂದೆ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ತಿನ್ನಿಸಬೇಕು. ಮೊದಲು ಮಗು ಪಪ್ಪಾಯಿ ಹಣ್ಣನ್ನು ಸರಿಯಾಗಿ ತಿನ್ನುತ್ತಿದಿಯಾ ಎಂಬುದನ್ನು ತಿಳಿಯಿರಿ. ಮಗುವಿನಿಂದ ಭಿನ್ನ ಪ್ರತಿಕ್ರಿಯೆ ಬರುತ್ತಾ ಇದ್ದರೆ ತಕ್ಷಣ ಇದನ್ನು ನಿಲ್ಲಿಸಿ. ಮಗುವಿಗೆ ಪಪ್ಪಾಯಿ ನೀಡುವ ಮೊದಲು ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು. ಹಣ್ಣಾದ ಪಪ್ಪಾಯಿ ನೀಡುವುದರಿಂದ ಯಾವೆಲ್ಲಾ ಲಾಭಗಳು ಆಗಲಿದೆ ಎಂದು ತಿಳಿಯಿರಿ.....

ಜೀರ್ಣಕ್ರಿಯೆ
ಸಣ್ಣ ಮಟ್ಟದ ಪಪ್ಪಾಯಿಯನ್ನು ಮಕ್ಕಳಿಗೆ ನೀಡುವುದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು.

ಪ್ರತಿರೋಧಕ ಶಕ್ತಿ
ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಮಗುವಿನ ದೇಹದ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಸೋಂಕನ್ನು ನಿವಾರಿಸಬಹುದು.

ಮೈಮೇಲೆ ಬೀಳುವ ಗುಳ್ಳೆಗಳಿಗೆ.....
ಮಗುವಿನ ಮೈಮೇಲೆ ಬೀಳುವ ಗುಳ್ಳೆ, ಕಜ್ಜಿಗಳ ನಿವಾರಣೆಗೆ ಪಪ್ಪಾಯಿಯನ್ನು ನೇರವಾಗಿ ಚರ್ಮಕ್ಕೆ ಹಚ್ಚಬಹುದು. ಚರ್ಮದಲ್ಲಿ ಆಗಿಗುವ ಕಚ್ಚಿಯಿಂದ ಮಗುವಿಗೆ ಉರಿ ಅಥವಾ ಕೆರೆತ ಕಾಣಿಸಿಕೊಳ್ಳುತ್ತಾ ಇದ್ದರೆ ಪಪ್ಪಾಯಿ ಪೇಸ್ಟ್ ಹಚ್ಚಿಕೊಳ್ಳಿ.

ಮಲಬದ್ಧತೆ
ಮಗು ಸರಿಯಾಗಿ ಮಲ ವಿಸರ್ಜನೆ ಮಾಡುತ್ತಿಲ್ಲವೆಂದಾದರೆ ಆಗ ಮಗುವಿಗೆ ದಿನದಲ್ಲಿ ಎರಡು ಸಲ ಪಪ್ಪಾಯಿ ಪೇಸ್ಟ್ ತಿನ್ನಿಸಿ. ಇದು ಮಲಬದ್ಧತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆಗೆ ಒಂದಿಷ್ಟು ಸರಳ ಪರಿಹಾರ

ಕರುಳಿನ ಹುಳಗಳು
ಒಂದು ವರ್ಷಕ್ಕಿಂತ ದೊಡ್ಡ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕರುಳಿನ ಹುಳು ಸಮಸ್ಯೆ ನಿವಾರಣೆಗೆ ಪಪ್ಪಾಯಿಯನ್ನು ಬಳಸಬಹುದು. ಪಪ್ಪಾಯಿ ಬೀಜದ ಹುಡಿಯನ್ನು ಜೇನುತುಪ್ಪದೊಂದಿಗೆ ಕೆಲವು ದಿನಗಳ ಕಾಲ ಸೇವಿಸಿದರೆ ಇದರಿಂದ ಕರುಳಿನ ಹುಳುಗಳು ಕಡಿಮೆಯಾಗುವುದು.



Click it and Unblock the Notifications