Just In
Don't Miss
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಕ್ಕಳ ಆರೋಗ್ಯಕ್ಕೆ 'ಪಪ್ಪಾಯಿ ಹಣ್ಣು' ಬಹಳ ಒಳ್ಳೆಯದು...
ಮಗು ಒಂದರಿಂದ ಒಂದುವರೆ ವರ್ಷ ದಾಟಿದ ಬಳಿಕ ಅದಕ್ಕೆ ಸರಿಯಾಗಿ ಹಣ್ಣಾಗಿರುವ ಪಪ್ಪಾಯಿ ತುಂಡುಗಳನ್ನು ಸೇವಿಸಲು ನೀಡಬೇಕು, ಆದರೂ ಮಗುವಿಗೆ ಪಪ್ಪಾಯಿ ನೀಡುವ ಮೊದಲು ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು. ...
ಮಕ್ಕಳಿಗೆ ತಾಯಿಯ ಹಾಲು ಅತೀ ಅಗತ್ಯವಾಗಿ ಬೇಕೇಬೇಕು. ಆರು ತಿಂಗಳ ನಂತರ ಮಕ್ಕಳಿಗೆ ತಾಯಿ ಹಾಲಿನೊಂದಿಗೆ ಸ್ವಲ್ಪ ಘನ ಆಹಾರವನ್ನು ನೀಡುತ್ತಾ ಬರಬೇಕು. ಅದರಲ್ಲೂ ಮುಖ್ಯವಾಗಿ ತರಕಾರಿ ಹಾಗೂ ಹಣ್ಣುಗಳನ್ನು ನೀಡಿದರೆ ಮಕ್ಕಳ ಬೆಳವಣಿಗೆಗೆ ಇದು ಪೂರಕ. ಮಗು ಒಂದರಿಂದ ಒಂದುವರೆ ವರ್ಷ ದಾಟಿದ ಬಳಿಕ ಅದಕ್ಕೆ ಸರಿಯಾಗಿ ಹಣ್ಣಾಗಿರುವ ಪಪ್ಪಾಯಿ ತುಂಡುಗಳನ್ನು (ಪರಂಗಿ ಹಣ್ಣು) ನೀಡಬೇಕು. ಸರ್ವಗುಣ ಸಂಪನ್ನ ಪಪ್ಪಾಯಿ ಹಣ್ಣಿನ ಮೂಲ ಅರಿಯಿರಿ
ಮಗು ಪಪ್ಪಾಯಿಯನ್ನು ಸರಿಯಾಗಿ ತಿನ್ನುತ್ತಾ ಇದೆಯಾ ಎಂದು ತಿಳಿದುಕೊಂಡು ಮುಂದೆ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ತಿನ್ನಿಸಬೇಕು. ಮೊದಲು ಮಗು ಪಪ್ಪಾಯಿ ಹಣ್ಣನ್ನು ಸರಿಯಾಗಿ ತಿನ್ನುತ್ತಿದಿಯಾ ಎಂಬುದನ್ನು ತಿಳಿಯಿರಿ. ಮಗುವಿನಿಂದ ಭಿನ್ನ ಪ್ರತಿಕ್ರಿಯೆ ಬರುತ್ತಾ ಇದ್ದರೆ ತಕ್ಷಣ ಇದನ್ನು ನಿಲ್ಲಿಸಿ. ಮಗುವಿಗೆ ಪಪ್ಪಾಯಿ ನೀಡುವ ಮೊದಲು ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು. ಹಣ್ಣಾದ ಪಪ್ಪಾಯಿ ನೀಡುವುದರಿಂದ ಯಾವೆಲ್ಲಾ ಲಾಭಗಳು ಆಗಲಿದೆ ಎಂದು ತಿಳಿಯಿರಿ.....
ಜೀರ್ಣಕ್ರಿಯೆ
ಸಣ್ಣ ಮಟ್ಟದ ಪಪ್ಪಾಯಿಯನ್ನು ಮಕ್ಕಳಿಗೆ ನೀಡುವುದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು.
ಪ್ರತಿರೋಧಕ ಶಕ್ತಿ
ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಮಗುವಿನ ದೇಹದ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಸೋಂಕನ್ನು ನಿವಾರಿಸಬಹುದು.
ಮೈಮೇಲೆ ಬೀಳುವ ಗುಳ್ಳೆಗಳಿಗೆ.....
ಮಗುವಿನ ಮೈಮೇಲೆ ಬೀಳುವ ಗುಳ್ಳೆ, ಕಜ್ಜಿಗಳ ನಿವಾರಣೆಗೆ ಪಪ್ಪಾಯಿಯನ್ನು ನೇರವಾಗಿ ಚರ್ಮಕ್ಕೆ ಹಚ್ಚಬಹುದು. ಚರ್ಮದಲ್ಲಿ ಆಗಿಗುವ ಕಚ್ಚಿಯಿಂದ ಮಗುವಿಗೆ ಉರಿ ಅಥವಾ ಕೆರೆತ ಕಾಣಿಸಿಕೊಳ್ಳುತ್ತಾ ಇದ್ದರೆ ಪಪ್ಪಾಯಿ ಪೇಸ್ಟ್ ಹಚ್ಚಿಕೊಳ್ಳಿ.
ಮಲಬದ್ಧತೆ
ಮಗು ಸರಿಯಾಗಿ ಮಲ ವಿಸರ್ಜನೆ ಮಾಡುತ್ತಿಲ್ಲವೆಂದಾದರೆ ಆಗ ಮಗುವಿಗೆ ದಿನದಲ್ಲಿ ಎರಡು ಸಲ ಪಪ್ಪಾಯಿ ಪೇಸ್ಟ್ ತಿನ್ನಿಸಿ. ಇದು ಮಲಬದ್ಧತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆಗೆ ಒಂದಿಷ್ಟು ಸರಳ ಪರಿಹಾರ
ಕರುಳಿನ ಹುಳಗಳು
ಒಂದು ವರ್ಷಕ್ಕಿಂತ ದೊಡ್ಡ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕರುಳಿನ ಹುಳು ಸಮಸ್ಯೆ ನಿವಾರಣೆಗೆ ಪಪ್ಪಾಯಿಯನ್ನು ಬಳಸಬಹುದು. ಪಪ್ಪಾಯಿ ಬೀಜದ ಹುಡಿಯನ್ನು ಜೇನುತುಪ್ಪದೊಂದಿಗೆ ಕೆಲವು ದಿನಗಳ ಕಾಲ ಸೇವಿಸಿದರೆ ಇದರಿಂದ ಕರುಳಿನ ಹುಳುಗಳು ಕಡಿಮೆಯಾಗುವುದು.