Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಮಕ್ಕಳ ಆರೋಗ್ಯಕ್ಕೆ 'ಪಪ್ಪಾಯಿ ಹಣ್ಣು' ಬಹಳ ಒಳ್ಳೆಯದು...
ಮಗು ಒಂದರಿಂದ ಒಂದುವರೆ ವರ್ಷ ದಾಟಿದ ಬಳಿಕ ಅದಕ್ಕೆ ಸರಿಯಾಗಿ ಹಣ್ಣಾಗಿರುವ ಪಪ್ಪಾಯಿ ತುಂಡುಗಳನ್ನು ಸೇವಿಸಲು ನೀಡಬೇಕು, ಆದರೂ ಮಗುವಿಗೆ ಪಪ್ಪಾಯಿ ನೀಡುವ ಮೊದಲು ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು. ...
ಮಕ್ಕಳಿಗೆ ತಾಯಿಯ ಹಾಲು ಅತೀ ಅಗತ್ಯವಾಗಿ ಬೇಕೇಬೇಕು. ಆರು ತಿಂಗಳ ನಂತರ ಮಕ್ಕಳಿಗೆ ತಾಯಿ ಹಾಲಿನೊಂದಿಗೆ ಸ್ವಲ್ಪ ಘನ ಆಹಾರವನ್ನು ನೀಡುತ್ತಾ ಬರಬೇಕು. ಅದರಲ್ಲೂ ಮುಖ್ಯವಾಗಿ ತರಕಾರಿ ಹಾಗೂ ಹಣ್ಣುಗಳನ್ನು ನೀಡಿದರೆ ಮಕ್ಕಳ ಬೆಳವಣಿಗೆಗೆ ಇದು ಪೂರಕ. ಮಗು ಒಂದರಿಂದ ಒಂದುವರೆ ವರ್ಷ ದಾಟಿದ ಬಳಿಕ ಅದಕ್ಕೆ ಸರಿಯಾಗಿ ಹಣ್ಣಾಗಿರುವ ಪಪ್ಪಾಯಿ ತುಂಡುಗಳನ್ನು (ಪರಂಗಿ ಹಣ್ಣು) ನೀಡಬೇಕು. ಸರ್ವಗುಣ ಸಂಪನ್ನ ಪಪ್ಪಾಯಿ ಹಣ್ಣಿನ ಮೂಲ ಅರಿಯಿರಿ
ಮಗು ಪಪ್ಪಾಯಿಯನ್ನು ಸರಿಯಾಗಿ ತಿನ್ನುತ್ತಾ ಇದೆಯಾ ಎಂದು ತಿಳಿದುಕೊಂಡು ಮುಂದೆ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ತಿನ್ನಿಸಬೇಕು. ಮೊದಲು ಮಗು ಪಪ್ಪಾಯಿ ಹಣ್ಣನ್ನು ಸರಿಯಾಗಿ ತಿನ್ನುತ್ತಿದಿಯಾ ಎಂಬುದನ್ನು ತಿಳಿಯಿರಿ. ಮಗುವಿನಿಂದ ಭಿನ್ನ ಪ್ರತಿಕ್ರಿಯೆ ಬರುತ್ತಾ ಇದ್ದರೆ ತಕ್ಷಣ ಇದನ್ನು ನಿಲ್ಲಿಸಿ. ಮಗುವಿಗೆ ಪಪ್ಪಾಯಿ ನೀಡುವ ಮೊದಲು ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು. ಹಣ್ಣಾದ ಪಪ್ಪಾಯಿ ನೀಡುವುದರಿಂದ ಯಾವೆಲ್ಲಾ ಲಾಭಗಳು ಆಗಲಿದೆ ಎಂದು ತಿಳಿಯಿರಿ.....

ಜೀರ್ಣಕ್ರಿಯೆ
ಸಣ್ಣ ಮಟ್ಟದ ಪಪ್ಪಾಯಿಯನ್ನು ಮಕ್ಕಳಿಗೆ ನೀಡುವುದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು.

ಪ್ರತಿರೋಧಕ ಶಕ್ತಿ
ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಮಗುವಿನ ದೇಹದ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಸೋಂಕನ್ನು ನಿವಾರಿಸಬಹುದು.

ಮೈಮೇಲೆ ಬೀಳುವ ಗುಳ್ಳೆಗಳಿಗೆ.....
ಮಗುವಿನ ಮೈಮೇಲೆ ಬೀಳುವ ಗುಳ್ಳೆ, ಕಜ್ಜಿಗಳ ನಿವಾರಣೆಗೆ ಪಪ್ಪಾಯಿಯನ್ನು ನೇರವಾಗಿ ಚರ್ಮಕ್ಕೆ ಹಚ್ಚಬಹುದು. ಚರ್ಮದಲ್ಲಿ ಆಗಿಗುವ ಕಚ್ಚಿಯಿಂದ ಮಗುವಿಗೆ ಉರಿ ಅಥವಾ ಕೆರೆತ ಕಾಣಿಸಿಕೊಳ್ಳುತ್ತಾ ಇದ್ದರೆ ಪಪ್ಪಾಯಿ ಪೇಸ್ಟ್ ಹಚ್ಚಿಕೊಳ್ಳಿ.

ಮಲಬದ್ಧತೆ
ಮಗು ಸರಿಯಾಗಿ ಮಲ ವಿಸರ್ಜನೆ ಮಾಡುತ್ತಿಲ್ಲವೆಂದಾದರೆ ಆಗ ಮಗುವಿಗೆ ದಿನದಲ್ಲಿ ಎರಡು ಸಲ ಪಪ್ಪಾಯಿ ಪೇಸ್ಟ್ ತಿನ್ನಿಸಿ. ಇದು ಮಲಬದ್ಧತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆಗೆ ಒಂದಿಷ್ಟು ಸರಳ ಪರಿಹಾರ

ಕರುಳಿನ ಹುಳಗಳು
ಒಂದು ವರ್ಷಕ್ಕಿಂತ ದೊಡ್ಡ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕರುಳಿನ ಹುಳು ಸಮಸ್ಯೆ ನಿವಾರಣೆಗೆ ಪಪ್ಪಾಯಿಯನ್ನು ಬಳಸಬಹುದು. ಪಪ್ಪಾಯಿ ಬೀಜದ ಹುಡಿಯನ್ನು ಜೇನುತುಪ್ಪದೊಂದಿಗೆ ಕೆಲವು ದಿನಗಳ ಕಾಲ ಸೇವಿಸಿದರೆ ಇದರಿಂದ ಕರುಳಿನ ಹುಳುಗಳು ಕಡಿಮೆಯಾಗುವುದು.



Click it and Unblock the Notifications
