Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವಜಾತ ಶಿಶುವಿನ ಉದರ ಶೂಲೆಗೆ ಕೆಲವು ನೈಸರ್ಗಿಕ ಪರಿಹಾರಗಳು
ನವಜಾತ ಶಿಶುಗಳು ಅಳುವುದು ಸಾಮಾನ್ಯ ವಿಚಾರ. ಮಗು ಏನಾದರೂ ಸಮಸ್ಯೆಯಾದರೆ ಅಥವಾ ಹಸಿವಾದರೆ ಅದು ಅಳುತ್ತದೆ. ಅದಕ್ಕೆ ಅಳುವುದನ್ನು ಬಿಟ್ಟು ಬೇರೆ ಯಾವುದೇ ಭಾಷೆ ಬರುವುದಿಲ್ಲ. ಹೀಗಾಗಿ ತನ್ನೆಲ್ಲಾ ಬೇಕುಬೇಡಗಳನ್ನು ಅದು ಅಳುವಿನ ಮೂಲಕವೇ ಸೂಚಿಸುತ್ತದೆ. ಇದರಿಂದ ಮಗುವಿನ ತಾಯಿ ಕೂಡ ಮಗು ಅಳುವುದು ಯಾಕೆ ಎನ್ನುವುದನ್ನು ಸರಿಯಾಗಿ ತಿಳಿದುಕೊಂಡು ಅದಕ್ಕೆ ಬೇಕಾದಂತೆ ಕೆಲಸ ಮಾಡಬೇಕು. ಅದರಲ್ಲೂ ಸಣ್ಣ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಉದರಶೂಲೆ ಸಮಸ್ಯೆಯು ಮಗು ಅಳುತ್ತಿರುವುದಕ್ಕೆ ಪ್ರಮುಖ ಕಾರಣವಾಗಿರಬಹುದು. ಮಗು ದಿನದಲ್ಲಿ ಮೂರು ಗಂಟೆಗಿಂತಲೂ ಹೆಚ್ಚಿನ ಸಮಯ ಅಳುತ್ತಲಿದ್ದರೆ ಆಗ ಇದನ್ನು ಮಗುವಿನ ಉದರಶೂಲೆ ಎಂದು ಕರೆಯಲಾಗುತ್ತದೆ. ಉದರಶೂಲೆಯಿಂದಾಗಿ ಮಗು ಅಳುತ್ತಲಿದ್ದರೆ ಆಗ ನೀವು ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಂಡು ಮಗು ಅಳುವುದನ್ನು ನಿಲ್ಲಿಸಬಹುದು.

ಶಾಮಕ ಬಳಸಿಕೊಳ್ಳಿ
ಇದು ಸಣ್ಣ ಮಗುವನ್ನು ಶಾಂತಗೊಳಿಸಲು ಇದು ತುಂಬಾ ನೆರವಾಗುವುದು. ಇದರಿಂದಾಗಿ ಮಗು ಶಾಂತವಾಗುವುದು. ಶಾಮಕವು ಮಗುವನ್ನು ಶಮನಗೊಳಿಸುವುದು ಮತ್ತು ತುಂಬಾ ಬಿಸಿಯಾಗಿ ಇಡುತ್ತದೆ. ಇದರಿಂದ ಮಗುವಿಗೆ ಯಾವುದೇ ಕೀಟಗಳು ಕಚ್ಚದಂತೆ ಸುರಕ್ಷೆ ಕೂಡ ಸಿಗುವುದು. ಉದರಶೂಲೆಯಿಂದ ಬಳಲುತ್ತಿರುವಂತಹ ಮಗುವಿಗೆ ಶಾಮಕವನ್ನು ಬಳಸಿಕೊಂಡು ಶಮನ ನೀಡಬಹುದು ಮತ್ತು ರಕ್ಷಣೆ ನೀಡಬಹುದು. ಇದರಿಂದಾಗಿ ನವಜಾತ ಮಗು ಅಳುವುದು ಕಡಿಮೆ ಆಗುವುದು.
ಮಗುವನ್ನು ಸರಿಯಾಗಿ ಹಿಡಿದುಕೊಳ್ಳಿ
ಮಗುವನ್ನು ಸರಿಯಾಗಿ ಹಿಡಿದುಕೊಳ್ಳುವುದು ಕೂಡ ಅತೀ ಅಗತ್ಯವಾಗಿರುವುದು. ನೀವು ಮಗುವನ್ನು ಹಿಡಿದುಕೊಳ್ಳುವ ಭಂಗಿಯು ಅಳುತ್ತಿರುವ ಮಗುವನ್ನು ಶಾಂತಗೊಳಿಸಲು ತುಂಬಾ ನೆರವಾಗುವುದು. ಹಲವಾರು ರೀತಿಯ ಅಧ್ಯಯನಗಳು ಹೇಳಿರುವ ಪ್ರಕಾರ ನವಜಾತ ಶಿಶುವನ್ನು ಸರಿಯಾಗಿ ಹಿಡಿದಿಕೊಂಡರೆ ಆಗ ಅದು ಸರಿಯಾಗಿ ನಿದ್ರೆ ಮಾಡುವುದು. ಮಗುವನ್ನು ಸರಿಯಾದ ಕ್ರಮದಲ್ಲಿ ಹಿಡಿದರೆ ಆಗ ಮಗು ಅಳುವುದು ತಪ್ಪುವುದು. ಮಗುವನ್ನು ಅದರ ಬೆನ್ನಿನಲ್ಲಿ ಹಿಡಿಯಬೇಡಿ. ಮಗು ಹಾಲು ಕುಡಿದ ತಕ್ಷಣವೇ ಅದನ್ನು ಎತ್ತಿ ಹಿಡಿಯಬೇಡಿ. ಇದರಿಂದ ಮಗುವಿನ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಹಾಲುಣಿಸಿದ ಬಳಿಕ ಮಗುವಿಗೆ ತೇಗು ಬರುವಂತೆ ಮಾಡಬೇಕು. ಇದರಿಂದ ಮಗು ಅಳುವುದನ್ನು ನಿಲ್ಲಿಸುತ್ತದೆ.
ಆಲಿವ್ ತೈಲದ ಮಸಾಜ್
ಆಲಿವ್ ತೈಲವು ಎಲ್ಲಾ ರೀತಿಯ ಜನರಿಗೆ ತುಂಬಾ ನೆರವಾಗುವುದು. ಅದರಲ್ಲೂ ಮಗುವಿಗೆ ಇದರಿಂದ ಮಸಾಜ್ ಮಾಡಿದರೆ ಅದು ಅದ್ಭುತವಾಗಿ ಕೆಲಸ ಮಾಡುವುದು. ಇದರಿಂದಾಗಿ ಮಗುವಿನ ಮೂಳೆಗಳು ಸರಿಯಾದ ಕ್ರಮದಲ್ಲಿ ಇರುತ್ತದೆ ಮತ್ತು ಮಗುವಿಗೆ ಕೂಡ ದೊಡ್ಡ ಮಟ್ಟದಲ್ಲಿ ಆರಾಮ ಸಿಗುವುದು. ಎಣ್ಣೆ ಮಸಾಜ್ ನಿಂದಾಗಿ ಮಗು ತುಂಬಾ ಬಿಸಿ ಹಾಗೂ ಸುರಕ್ಷಿತವಾಗಿ ಇರುವುದು. ಮಗುವಿನ ಜೀರ್ಣಕ್ರಿಯೆ ಉತ್ತಮವಾಗುವುದು ಮತ್ತು ಗ್ಯಾಸ್ ನಿಲ್ಲುವುದಿಲ್ಲ.
*ಸ್ವಲ್ಪ ಬಿಸಿಯಾಗಿರು ಆಲಿವ್ ಎಣ್ಣೆ ತೆಎದುಕೊಳ್ಳಿ ಮತ್ತು ಇದಕ್ಕೆ ಕೆಲವು ಹನಿ ಲ್ಯಾವೆಂಡರ್ ತೈಲ ಹಾಕಿಕೊಳ್ಳಿ.
*ಮಗುವಿನ ಹೊಟ್ಟೆಗೆ ಈ ತೈಲದಿಂದ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.
*ಇದೇ ಮಗುವಿನ ಕಿಬ್ಬೊಟ್ಟೆ, ಪಕ್ಕೆಲುಬು, ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡಿ.
*ದಿನದಲ್ಲಿ ಹಲವು ಸಲ ಹೀಗೆ ಮಾಡಿ ಮಗುವಿಗೆ ಆರಾಮ ನೀಡಬಹುದು.
*ತಾಯಂದಿರು ಮೆಂತ್ಯೆ ಕಾಳು ಮತ್ತು ಪುದೀನಾವನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.
*ಮೆಂತೆ ಕಾಳುಗಳು ತುಂಬಾ ಅದ್ಭುತವಾಗಿ ಮಗುವಿನ ಉದರಶೂಲೆ ನಿವಾರಣೆ ಮಾಡುವುದು. ಇದು ಮಗು ಹಾಗೂ ಹಾಲುಣಿಸುವ ತಾಯಿಗೆ ತುಂಬಾ ಲಾಭಕಾರಿ ಆಗಿದೆ. ಇದು ಗ್ಯಾಸ್ ನಿವಾರಣೆ ಮಾಡುವುದು. ಅದ್ಭುತ ಲಾಭ ನೀಡಬೇಕಾದರೆ ಆಗ ಒಂದು ಚಮಚ ಮೆಂತ್ಯೆ ಕಾಳುಗಳನ್ನು ನೀರಿಗೆ ಹಾಕಿ 10-15 ನಿಮಿಷ ಕಾಲ ನೆನೆಸಿಡಿ. ಇದರ ನೀರನ್ನು ಸೋಸಿಕೊಂಡು ತೆಗೆಯಿರಿ ಮತ್ತು ಅದನ್ನು ಚಾ ರೀತಿ ದಿನಕ್ಕೆ 2-3 ಮೂರು ಸಲ ಕುಡಿಯಿರಿ. ಪುದೀನಾವು ಮತ್ತೊಂದು ರೀತಿಯಲ್ಲಿ ಮಗುವಿನ ಉದರಶೂಲೆ ನಿವಾರಣೆ ಮಾಡುವುದು. ಪುದೀನಾ ಮದುವಿಗೆ ಶಾಂತ ನೀಡುವುದು ಮತ್ತು ಇದರಲ್ಲಿ ಉರಿಯೂತ ನಿವಾರಣೆ ಮಾಡುವ ಗುಣ ಇದೆ ಮತ್ತು ಜೀರ್ಣಕ್ರಿಯೆ ಕೂಡ ಸರಾಗವಾಗಿಸುವುದು.



Click it and Unblock the Notifications

