Latest Updates
-
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಮಾನವೀಯತೆ ಇಲ್ಲದ ಮೃಗಗಳ ನಡುವೆ ಇಷ್ಟು ಮುಗ್ದತೆಯೂ ಸಲ್ಲದು!
ಟ್ವಿಟರ್ನಲ್ಲಿ ಮಹಿಳೆಯೊಬ್ಬರು ಚಿಕ್ಕ ಪಾಪುವನ್ನು ಹಿಡಿದು ಮೆಟ್ರೋದಲ್ಲಿ ನೆಲದಲ್ಲಿ ಕುಳಿತಿರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಆ ವೀಡಿಯೋದಲ್ಲಿ ಆ ತಾಯಿ ಮೆಟ್ರೋದಲ್ಲಿ ಕೆಳಗಡೆ (ಫ್ಲೋರ್ನಲ್ಲಿ) ಮಗುವನ್ನು ಹಿಡಿದು ಕುಳಿತಿದ್ದನ್ನು ನೋಡಿದರೂ ಬೇರೆಯವರು ಆರಾಮವಾಗಿ ಸೀಟ್ನಲ್ಲಿ ಕುಳಿತಿರುವುದನ್ನೂ ಕಾಣುತ್ತೇವೆ.
ಇದೀಗ ಈ ವೀಡಿಯೋ ಟ್ವಿಟರ್ನಲ್ಲಿ IAS ಆಫೀಸರ್ ಅವಿನಾಶ್ ಶರಣ್ ಶೇರ್ ಮಾಡಿದ್ದು ಈ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವೀಡಿಯೋ ನೋಡಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಎಂಥ ಮನುಷ್ಯರೋ ಆ ತಾಯಿ ಹಾಗೇ ಕೂತಿರುವುದನ್ನು ನೋಡಿ ಸುಮ್ಮನೆ ಇದ್ದಾರಲ್ಲಾ ಒಂದು ಸೀಟ್ ಬಿಟ್ಟುಕೊಡುವಷ್ಟು ಮಾನವೀಯತೆ ಜನರಲ್ಲಿ ಇಲ್ಲದಾಯಿತೇ ಎಂದೆಲ್ಲಾ ಕೇಳುತ್ತಿದ್ದಾರೆ.
ಆದರೆ ಎರಡು ಮುಖ್ಯ ವಿಷಯ ಹೇಳಬೇಕು ಅನಿಸುತ್ತಿದೆ. ಒಂದು ಹೆಚ್ಚೇನು ಹೇಳಬೇಕಾಗಿಲ್ಲ, ಇಲ್ಲಿ ಜನರು ಮಾನವೀಯತೆ ಮರೆತು ಕುಳಿತಿರುವುದರಿಂದ ಅಂಥವರ ಬಗ್ಗೆ ಹೇಳದಿರುವುದೇ ಒಳ್ಳೆಯದು, ಮಾನವೀಯತೆ ಮರೆತ ಮೇಲೆ ಅವರು ಮನುಷ್ಯರು ಅಂತ ಅನಿಸಿಕೊಳ್ಳಲು ಸಾಧ್ಯವೇ?
ಆದರೆ ಎರಡನೇ ವಿಷಯ ತುಂಬಾ ಮುಖ್ಯವಾದದ್ದು
ಎಲ್ಲರೂ ಆ ತಾಯಿ ದೆಹಲಿಯ ಮೆಟ್ರೋದಲ್ಲಿ ಫ್ಲೋರ್ನಲ್ಲಿ ಕೂತಿದ್ದಕ್ಕೆ ಅಯ್ಯೋ ಪಾಪ ಅನ್ನುತ್ತಿದ್ದಾರೆ, ಆದರೆ ಆ ತಾಯಿಯಲ್ಲಿ ಅಷ್ಟು ಮುಗ್ಧತೆ ಇರಬಾರದಿತ್ತು, ಹೌದು ಮಟ್ರೋದಲ್ಲಿ ರಿಸರ್ವ್ ಸೀಟ್ಗಳಿರುತ್ತೆ, ಅಲ್ಲಿ ಬೇರೆಯವರು ಆರಾಮವಾಗಿ ಕೂತಿರುತ್ತಾರೆ. ಗರ್ಭಿಣಿಯರು, ಮಗುವನ್ನು ಎತ್ತಿಕೊಂಡು ಬರುವವರು, ಅಂಗವಿಕಲರು ಆ ಸೀಟ್ಗಳಲ್ಲಿ ಕೂರುವ ಹಕ್ಕನ್ನು ಹೊಂದಿರುತ್ತಾರೆ, ಅಳದ ಮಗುವಿಗೆ ತಾಯಿ ಎದೆಹಾಲು ಕೊಡಲ್ಲ ಎಂಬ ಗಾದೆ ಮಾತೇ ಇದೆ, ಇನ್ನು ನಮ್ಮ ಹಕ್ಕುಗಳನ್ನು ನಾವು ಬಾಯಿ ಬಿಟ್ಟು ಕೇಳದೇ ಹೋದರೆ ಈ ಪ್ರಪಂಚದಲ್ಲಿ ಏನೂ ಸಿಗುವುದಿಲ್ಲ, ಜನ ನಮ್ಮನ್ನು ತುಳಿಯುತ್ತಲೇ ಇರುತ್ತಾರೆ.
ಮೊದಲು ನಾವು ಹುಷಾರಾಗಬೇಕು, ವಿದ್ಯಾಭ್ಯಾಸ ಇರಲಿ, ಇಲ್ಲದಿರಲಿಎಲ್ಲಿಗಾದರೂ ಹೋಗುವಾಗ, ಏನಾದರೂ ಮಾಡುವಾಗ ನಮ್ಮ ಹಕ್ಕುಗಳ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ ಹೀಗೆ ಜನ.... ಏನಂತೀರಿ?



Click it and Unblock the Notifications
