Latest Updates
-
ಬೆಂಗಳೂರಿನ ನೀರಿನ ಅಭಾವ: ರೂಮ್ಮೇಟ್ಗಳ ಜಗಳ ತಪ್ಪಿಸಲು ಈ 'ಮೈಕ್ರೋ-ಸ್ಕ್ರಿಪ್ಟ್' ಟ್ರಿಕ್ ಬಳಸಿ! -
ಚೆನ್ನೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಕೇವಲ 15 ನಿಮಿಷದ ಈ ಟಿಪ್ಸ್ ಸಾಕು! -
ಅಮರನಾಥ ಯಾತ್ರೆ 2026: ಹಿಮಾಲಯದ ಕಡಿದಾದ ಹಾದಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಕ್ರಮಗಳನ್ನು ಮರೆಯದಿರಿ! -
ಮೊಹರಂ ಮೆರವಣಿಗೆ: ಇಂದು ನಿಮ್ಮ ನಗರದಲ್ಲಿ ಟ್ರಾಫಿಕ್ ಸಮಸ್ಯೆ? ಹೊರಡುವ ಮುನ್ನ ಈ ಅಪ್ಡೇಟ್ ನೋಡಿ -
ಮುಂಬೈ ನೀರಿನ ಕಡಿತ: ನೀರು ಉಳಿಸಿ ಫಿಟ್ ಆಗಿರಲು 12 ನಿಮಿಷದ ವ್ಯಾಯಾಮ ಮತ್ತು ಸ್ನಾನದ ಟಿಪ್ಸ್! -
ಬೆಂಗಳೂರು ಮೆಟ್ರೋ ವ್ಯತ್ಯಯ: ಆಫೀಸ್ ತಲುಪಲು ತಡವಾಗುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದ ತೇವಾಂಶದಿಂದ ನಿಮ್ಮ ಮನೆ ಮತ್ತು ವಸ್ತುಗಳನ್ನು ರಕ್ಷಿಸಲು ಇಲ್ಲಿವೆ ಸರಳ ಟಿಪ್ಸ್! -
ಮುಂಬೈ ಮಳೆಗಾಲದಲ್ಲಿ ಆರೋಗ್ಯವಾಗಿರಬೇಕೆ? ರಸ್ತೆ ಬದಿಯ ತಿಂಡಿ ತಿನ್ನುವ ಮುನ್ನ ಈ ಎಚ್ಚರಿಕೆ ವಹಿಸಿ! -
ಭಾರತ-ಐರ್ಲೆಂಡ್ ಮೊದಲ ಟಿ20: ಬೆಲ್ಫಾಸ್ಟ್ನಲ್ಲಿ ಮಳೆ ಕಾಟ, ಪಂದ್ಯ ನಡೆಯುತ್ತಾ? ಇಲ್ಲಿದೆ ಪಿಚ್ ಮತ್ತು ಹವಾಮಾನ ವರದಿ -
ವಿಶ್ವ ವಿಟಲಿಗೋ ದಿನ 2026: ಚರ್ಮದ ಆರೋಗ್ಯಕ್ಕಾಗಿ ನೀವು ಪಾಲಿಸಬೇಕಾದ 'ಯುವಿ-ಸೇಫ್' ದಿನಚರಿ ಇಲ್ಲಿದೆ!
ಮಾನವೀಯತೆ ಇಲ್ಲದ ಮೃಗಗಳ ನಡುವೆ ಇಷ್ಟು ಮುಗ್ದತೆಯೂ ಸಲ್ಲದು!
ಟ್ವಿಟರ್ನಲ್ಲಿ ಮಹಿಳೆಯೊಬ್ಬರು ಚಿಕ್ಕ ಪಾಪುವನ್ನು ಹಿಡಿದು ಮೆಟ್ರೋದಲ್ಲಿ ನೆಲದಲ್ಲಿ ಕುಳಿತಿರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಆ ವೀಡಿಯೋದಲ್ಲಿ ಆ ತಾಯಿ ಮೆಟ್ರೋದಲ್ಲಿ ಕೆಳಗಡೆ (ಫ್ಲೋರ್ನಲ್ಲಿ) ಮಗುವನ್ನು ಹಿಡಿದು ಕುಳಿತಿದ್ದನ್ನು ನೋಡಿದರೂ ಬೇರೆಯವರು ಆರಾಮವಾಗಿ ಸೀಟ್ನಲ್ಲಿ ಕುಳಿತಿರುವುದನ್ನೂ ಕಾಣುತ್ತೇವೆ.
ಇದೀಗ ಈ ವೀಡಿಯೋ ಟ್ವಿಟರ್ನಲ್ಲಿ IAS ಆಫೀಸರ್ ಅವಿನಾಶ್ ಶರಣ್ ಶೇರ್ ಮಾಡಿದ್ದು ಈ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವೀಡಿಯೋ ನೋಡಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಎಂಥ ಮನುಷ್ಯರೋ ಆ ತಾಯಿ ಹಾಗೇ ಕೂತಿರುವುದನ್ನು ನೋಡಿ ಸುಮ್ಮನೆ ಇದ್ದಾರಲ್ಲಾ ಒಂದು ಸೀಟ್ ಬಿಟ್ಟುಕೊಡುವಷ್ಟು ಮಾನವೀಯತೆ ಜನರಲ್ಲಿ ಇಲ್ಲದಾಯಿತೇ ಎಂದೆಲ್ಲಾ ಕೇಳುತ್ತಿದ್ದಾರೆ.
ಆದರೆ ಎರಡು ಮುಖ್ಯ ವಿಷಯ ಹೇಳಬೇಕು ಅನಿಸುತ್ತಿದೆ. ಒಂದು ಹೆಚ್ಚೇನು ಹೇಳಬೇಕಾಗಿಲ್ಲ, ಇಲ್ಲಿ ಜನರು ಮಾನವೀಯತೆ ಮರೆತು ಕುಳಿತಿರುವುದರಿಂದ ಅಂಥವರ ಬಗ್ಗೆ ಹೇಳದಿರುವುದೇ ಒಳ್ಳೆಯದು, ಮಾನವೀಯತೆ ಮರೆತ ಮೇಲೆ ಅವರು ಮನುಷ್ಯರು ಅಂತ ಅನಿಸಿಕೊಳ್ಳಲು ಸಾಧ್ಯವೇ?
ಆದರೆ ಎರಡನೇ ವಿಷಯ ತುಂಬಾ ಮುಖ್ಯವಾದದ್ದು
ಎಲ್ಲರೂ ಆ ತಾಯಿ ದೆಹಲಿಯ ಮೆಟ್ರೋದಲ್ಲಿ ಫ್ಲೋರ್ನಲ್ಲಿ ಕೂತಿದ್ದಕ್ಕೆ ಅಯ್ಯೋ ಪಾಪ ಅನ್ನುತ್ತಿದ್ದಾರೆ, ಆದರೆ ಆ ತಾಯಿಯಲ್ಲಿ ಅಷ್ಟು ಮುಗ್ಧತೆ ಇರಬಾರದಿತ್ತು, ಹೌದು ಮಟ್ರೋದಲ್ಲಿ ರಿಸರ್ವ್ ಸೀಟ್ಗಳಿರುತ್ತೆ, ಅಲ್ಲಿ ಬೇರೆಯವರು ಆರಾಮವಾಗಿ ಕೂತಿರುತ್ತಾರೆ. ಗರ್ಭಿಣಿಯರು, ಮಗುವನ್ನು ಎತ್ತಿಕೊಂಡು ಬರುವವರು, ಅಂಗವಿಕಲರು ಆ ಸೀಟ್ಗಳಲ್ಲಿ ಕೂರುವ ಹಕ್ಕನ್ನು ಹೊಂದಿರುತ್ತಾರೆ, ಅಳದ ಮಗುವಿಗೆ ತಾಯಿ ಎದೆಹಾಲು ಕೊಡಲ್ಲ ಎಂಬ ಗಾದೆ ಮಾತೇ ಇದೆ, ಇನ್ನು ನಮ್ಮ ಹಕ್ಕುಗಳನ್ನು ನಾವು ಬಾಯಿ ಬಿಟ್ಟು ಕೇಳದೇ ಹೋದರೆ ಈ ಪ್ರಪಂಚದಲ್ಲಿ ಏನೂ ಸಿಗುವುದಿಲ್ಲ, ಜನ ನಮ್ಮನ್ನು ತುಳಿಯುತ್ತಲೇ ಇರುತ್ತಾರೆ.
ಮೊದಲು ನಾವು ಹುಷಾರಾಗಬೇಕು, ವಿದ್ಯಾಭ್ಯಾಸ ಇರಲಿ, ಇಲ್ಲದಿರಲಿಎಲ್ಲಿಗಾದರೂ ಹೋಗುವಾಗ, ಏನಾದರೂ ಮಾಡುವಾಗ ನಮ್ಮ ಹಕ್ಕುಗಳ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ ಹೀಗೆ ಜನ.... ಏನಂತೀರಿ?



Click it and Unblock the Notifications
