Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಮಾನವೀಯತೆ ಇಲ್ಲದ ಮೃಗಗಳ ನಡುವೆ ಇಷ್ಟು ಮುಗ್ದತೆಯೂ ಸಲ್ಲದು!
ಟ್ವಿಟರ್ನಲ್ಲಿ ಮಹಿಳೆಯೊಬ್ಬರು ಚಿಕ್ಕ ಪಾಪುವನ್ನು ಹಿಡಿದು ಮೆಟ್ರೋದಲ್ಲಿ ನೆಲದಲ್ಲಿ ಕುಳಿತಿರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಆ ವೀಡಿಯೋದಲ್ಲಿ ಆ ತಾಯಿ ಮೆಟ್ರೋದಲ್ಲಿ ಕೆಳಗಡೆ (ಫ್ಲೋರ್ನಲ್ಲಿ) ಮಗುವನ್ನು ಹಿಡಿದು ಕುಳಿತಿದ್ದನ್ನು ನೋಡಿದರೂ ಬೇರೆಯವರು ಆರಾಮವಾಗಿ ಸೀಟ್ನಲ್ಲಿ ಕುಳಿತಿರುವುದನ್ನೂ ಕಾಣುತ್ತೇವೆ.
ಇದೀಗ ಈ ವೀಡಿಯೋ ಟ್ವಿಟರ್ನಲ್ಲಿ IAS ಆಫೀಸರ್ ಅವಿನಾಶ್ ಶರಣ್ ಶೇರ್ ಮಾಡಿದ್ದು ಈ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವೀಡಿಯೋ ನೋಡಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಎಂಥ ಮನುಷ್ಯರೋ ಆ ತಾಯಿ ಹಾಗೇ ಕೂತಿರುವುದನ್ನು ನೋಡಿ ಸುಮ್ಮನೆ ಇದ್ದಾರಲ್ಲಾ ಒಂದು ಸೀಟ್ ಬಿಟ್ಟುಕೊಡುವಷ್ಟು ಮಾನವೀಯತೆ ಜನರಲ್ಲಿ ಇಲ್ಲದಾಯಿತೇ ಎಂದೆಲ್ಲಾ ಕೇಳುತ್ತಿದ್ದಾರೆ.
ಆದರೆ ಎರಡು ಮುಖ್ಯ ವಿಷಯ ಹೇಳಬೇಕು ಅನಿಸುತ್ತಿದೆ. ಒಂದು ಹೆಚ್ಚೇನು ಹೇಳಬೇಕಾಗಿಲ್ಲ, ಇಲ್ಲಿ ಜನರು ಮಾನವೀಯತೆ ಮರೆತು ಕುಳಿತಿರುವುದರಿಂದ ಅಂಥವರ ಬಗ್ಗೆ ಹೇಳದಿರುವುದೇ ಒಳ್ಳೆಯದು, ಮಾನವೀಯತೆ ಮರೆತ ಮೇಲೆ ಅವರು ಮನುಷ್ಯರು ಅಂತ ಅನಿಸಿಕೊಳ್ಳಲು ಸಾಧ್ಯವೇ?
ಆದರೆ ಎರಡನೇ ವಿಷಯ ತುಂಬಾ ಮುಖ್ಯವಾದದ್ದು
ಎಲ್ಲರೂ ಆ ತಾಯಿ ದೆಹಲಿಯ ಮೆಟ್ರೋದಲ್ಲಿ ಫ್ಲೋರ್ನಲ್ಲಿ ಕೂತಿದ್ದಕ್ಕೆ ಅಯ್ಯೋ ಪಾಪ ಅನ್ನುತ್ತಿದ್ದಾರೆ, ಆದರೆ ಆ ತಾಯಿಯಲ್ಲಿ ಅಷ್ಟು ಮುಗ್ಧತೆ ಇರಬಾರದಿತ್ತು, ಹೌದು ಮಟ್ರೋದಲ್ಲಿ ರಿಸರ್ವ್ ಸೀಟ್ಗಳಿರುತ್ತೆ, ಅಲ್ಲಿ ಬೇರೆಯವರು ಆರಾಮವಾಗಿ ಕೂತಿರುತ್ತಾರೆ. ಗರ್ಭಿಣಿಯರು, ಮಗುವನ್ನು ಎತ್ತಿಕೊಂಡು ಬರುವವರು, ಅಂಗವಿಕಲರು ಆ ಸೀಟ್ಗಳಲ್ಲಿ ಕೂರುವ ಹಕ್ಕನ್ನು ಹೊಂದಿರುತ್ತಾರೆ, ಅಳದ ಮಗುವಿಗೆ ತಾಯಿ ಎದೆಹಾಲು ಕೊಡಲ್ಲ ಎಂಬ ಗಾದೆ ಮಾತೇ ಇದೆ, ಇನ್ನು ನಮ್ಮ ಹಕ್ಕುಗಳನ್ನು ನಾವು ಬಾಯಿ ಬಿಟ್ಟು ಕೇಳದೇ ಹೋದರೆ ಈ ಪ್ರಪಂಚದಲ್ಲಿ ಏನೂ ಸಿಗುವುದಿಲ್ಲ, ಜನ ನಮ್ಮನ್ನು ತುಳಿಯುತ್ತಲೇ ಇರುತ್ತಾರೆ.
ಮೊದಲು ನಾವು ಹುಷಾರಾಗಬೇಕು, ವಿದ್ಯಾಭ್ಯಾಸ ಇರಲಿ, ಇಲ್ಲದಿರಲಿಎಲ್ಲಿಗಾದರೂ ಹೋಗುವಾಗ, ಏನಾದರೂ ಮಾಡುವಾಗ ನಮ್ಮ ಹಕ್ಕುಗಳ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ ಹೀಗೆ ಜನ.... ಏನಂತೀರಿ?



Click it and Unblock the Notifications
