Latest Updates
-
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು!
ಮಾನವೀಯತೆ ಇಲ್ಲದ ಮೃಗಗಳ ನಡುವೆ ಇಷ್ಟು ಮುಗ್ದತೆಯೂ ಸಲ್ಲದು!
ಟ್ವಿಟರ್ನಲ್ಲಿ ಮಹಿಳೆಯೊಬ್ಬರು ಚಿಕ್ಕ ಪಾಪುವನ್ನು ಹಿಡಿದು ಮೆಟ್ರೋದಲ್ಲಿ ನೆಲದಲ್ಲಿ ಕುಳಿತಿರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಆ ವೀಡಿಯೋದಲ್ಲಿ ಆ ತಾಯಿ ಮೆಟ್ರೋದಲ್ಲಿ ಕೆಳಗಡೆ (ಫ್ಲೋರ್ನಲ್ಲಿ) ಮಗುವನ್ನು ಹಿಡಿದು ಕುಳಿತಿದ್ದನ್ನು ನೋಡಿದರೂ ಬೇರೆಯವರು ಆರಾಮವಾಗಿ ಸೀಟ್ನಲ್ಲಿ ಕುಳಿತಿರುವುದನ್ನೂ ಕಾಣುತ್ತೇವೆ.
ಇದೀಗ ಈ ವೀಡಿಯೋ ಟ್ವಿಟರ್ನಲ್ಲಿ IAS ಆಫೀಸರ್ ಅವಿನಾಶ್ ಶರಣ್ ಶೇರ್ ಮಾಡಿದ್ದು ಈ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವೀಡಿಯೋ ನೋಡಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಎಂಥ ಮನುಷ್ಯರೋ ಆ ತಾಯಿ ಹಾಗೇ ಕೂತಿರುವುದನ್ನು ನೋಡಿ ಸುಮ್ಮನೆ ಇದ್ದಾರಲ್ಲಾ ಒಂದು ಸೀಟ್ ಬಿಟ್ಟುಕೊಡುವಷ್ಟು ಮಾನವೀಯತೆ ಜನರಲ್ಲಿ ಇಲ್ಲದಾಯಿತೇ ಎಂದೆಲ್ಲಾ ಕೇಳುತ್ತಿದ್ದಾರೆ.
ಆದರೆ ಎರಡು ಮುಖ್ಯ ವಿಷಯ ಹೇಳಬೇಕು ಅನಿಸುತ್ತಿದೆ. ಒಂದು ಹೆಚ್ಚೇನು ಹೇಳಬೇಕಾಗಿಲ್ಲ, ಇಲ್ಲಿ ಜನರು ಮಾನವೀಯತೆ ಮರೆತು ಕುಳಿತಿರುವುದರಿಂದ ಅಂಥವರ ಬಗ್ಗೆ ಹೇಳದಿರುವುದೇ ಒಳ್ಳೆಯದು, ಮಾನವೀಯತೆ ಮರೆತ ಮೇಲೆ ಅವರು ಮನುಷ್ಯರು ಅಂತ ಅನಿಸಿಕೊಳ್ಳಲು ಸಾಧ್ಯವೇ?
ಆದರೆ ಎರಡನೇ ವಿಷಯ ತುಂಬಾ ಮುಖ್ಯವಾದದ್ದು
ಎಲ್ಲರೂ ಆ ತಾಯಿ ದೆಹಲಿಯ ಮೆಟ್ರೋದಲ್ಲಿ ಫ್ಲೋರ್ನಲ್ಲಿ ಕೂತಿದ್ದಕ್ಕೆ ಅಯ್ಯೋ ಪಾಪ ಅನ್ನುತ್ತಿದ್ದಾರೆ, ಆದರೆ ಆ ತಾಯಿಯಲ್ಲಿ ಅಷ್ಟು ಮುಗ್ಧತೆ ಇರಬಾರದಿತ್ತು, ಹೌದು ಮಟ್ರೋದಲ್ಲಿ ರಿಸರ್ವ್ ಸೀಟ್ಗಳಿರುತ್ತೆ, ಅಲ್ಲಿ ಬೇರೆಯವರು ಆರಾಮವಾಗಿ ಕೂತಿರುತ್ತಾರೆ. ಗರ್ಭಿಣಿಯರು, ಮಗುವನ್ನು ಎತ್ತಿಕೊಂಡು ಬರುವವರು, ಅಂಗವಿಕಲರು ಆ ಸೀಟ್ಗಳಲ್ಲಿ ಕೂರುವ ಹಕ್ಕನ್ನು ಹೊಂದಿರುತ್ತಾರೆ, ಅಳದ ಮಗುವಿಗೆ ತಾಯಿ ಎದೆಹಾಲು ಕೊಡಲ್ಲ ಎಂಬ ಗಾದೆ ಮಾತೇ ಇದೆ, ಇನ್ನು ನಮ್ಮ ಹಕ್ಕುಗಳನ್ನು ನಾವು ಬಾಯಿ ಬಿಟ್ಟು ಕೇಳದೇ ಹೋದರೆ ಈ ಪ್ರಪಂಚದಲ್ಲಿ ಏನೂ ಸಿಗುವುದಿಲ್ಲ, ಜನ ನಮ್ಮನ್ನು ತುಳಿಯುತ್ತಲೇ ಇರುತ್ತಾರೆ.
ಮೊದಲು ನಾವು ಹುಷಾರಾಗಬೇಕು, ವಿದ್ಯಾಭ್ಯಾಸ ಇರಲಿ, ಇಲ್ಲದಿರಲಿಎಲ್ಲಿಗಾದರೂ ಹೋಗುವಾಗ, ಏನಾದರೂ ಮಾಡುವಾಗ ನಮ್ಮ ಹಕ್ಕುಗಳ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ ಹೀಗೆ ಜನ.... ಏನಂತೀರಿ?



Click it and Unblock the Notifications
