Just In
Don't Miss
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಾವ ಮಕ್ಕಳು ಅನಾಥರಾಗಲು ಇಷ್ಟ ಪಡಲ್ಲ' ಎಂದು ಮಕ್ಕಳು ರಸ್ತೆ ಗುಂಡಿ ಮುಚ್ಚುತ್ತಿರುವ ವೀಡಿಯೋ ವೈರಲ್
ನಮ್ಮ ಬೆಂಗಳೂರು ರಸ್ತೆಯಲ್ಲಿ ಮರಣ ಗುಂಡಿಗಳಿಗೇನು ಕಡಿಮೆಯಿಲ್ಲ. ಅದರಲ್ಲೂ ಟೂ ವೀಲರ್ನಲ್ಲಿ ಹೋಗುವಾಗ ಮತ್ತಷ್ಟು ಜಾಗ್ರತೆವಹಿಸಬೇಕಾಗುತ್ತದೆ. ಆಗಾಗ ಅಲ್ಲಲ್ಲಿ ತೇಪೆ ಹಾಕುವ ಕಾರ್ಯ ನಡೆಯುತ್ತಿದ್ದರೂ ಸಾವಿರಾರು ಗುಂಡಿಗಳು ಯಮ ಸ್ವರೂಪದಲ್ಲಿ ಬಾಯಿ ತೆರೆದುಕೊಂಡಿವೆ. ಜನರು ಕೂಡ ಅಷ್ಟೇ ಬಿಬಿಎಂಪಿಗೆ ಹಿಡಿ ಶಾಪ ಹಾಕುತ್ತಾ ಸುಮ್ಮನಾಗುತ್ತೇವೆ, ಆದರೆ ಪುಟಾಣಿ ಮಕ್ಕಳು ಮಾಡಿರುವ ಕಾರ್ಯ ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನಮ್ಮಂಥ ನಾಗರಿಕರ ಹಾಗೂ ಬಿಬಿಎಂಪಿಯ ಕಣ್ಣು ತೆರೆಸುವಂತಿದೆ.
ಒಂದು ಶಾಲಾ ಮಕ್ಕಳ ಗುಂಪು ಮುಂದೆ ಬಂದು ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.' NO CHILD WANTS TO BE AN ORPHAN' ಅಂದ್ರೆ ಯಾವ ಮಗುವೂ ಅನಾಥವಾಗಲು ಬಯಸಲ್ಲ ಎಂಬ ಕ್ಯಾಪ್ಷನ್ ನೀಡಿ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು ನಾಗರಿಕ ಸಮಾಜಕ್ಕೆ ಸಾಕಷ್ಟು ಸಂದೇಶ ನೀಡುವಂತಿದೆ ಈ ಕಾರ್ಯ.
ಈ ವೀಡಿಯೋ ನೋಡಿದ ನೆಟ್ಟಿಗರು ಸಂತಸ, ಬಿಬಿಎಂಪಿ ವಿರುದ್ಧ ತಮ್ಮ ಆಕ್ರೋಶ ಎಲ್ಲವನ್ನೂ ವ್ಯಕ್ತ ಪಡಿಸುತ್ತಿದ್ದಾರೆ. ಇದರ ಜೊತೆಗೆ ಈ ಮಕ್ಕಳ ಕಾರ್ಯ ನಮ್ಮ ಜವಾಬ್ದಾರಿ ಕೂಡ ನೆನಪಿಸುತ್ತೆ. ನಾವು ವೋಟ್ ಹಾಕಿ ಯ್ಕೆ ಮಾಡುವಾ ಎಂಥವರನ್ನು ಆಯ್ಕೆ ಮಾಡಬೇಕು, ನಮ್ಮ ಸಮಾಜ ಕಟ್ಟಿ ಕೊಡುವಲ್ಲಿ ನಮ್ಮ ಪಾತ್ರವೇನು ಎಂಬುವುದನ್ನು ನೆನಪಿಸುವಂತಿದೆ ಮಕ್ಕಳ ಈ ಕಾರ್ಯ.....
ಈ ಪುಟಾಣಿ ಮಕ್ಕಳು ಆಲೋಚಿಸಿದ ರೀತಿಗೆ, ಅವರ ಕಾರ್ಯಕ್ಕೆ ನಮ್ಮದೊಂದು ಮೆಚ್ಚುಗೆ.....
A heart warming video of kids filling potholes. They are filling, so they don't loose their parents to one such #Pothole
— Kamran (@CitizenKamran) November 20, 2022
Trust me, NO CHILD WANTS TO BE AN ORPHAN
A message to the leaders of #Bengaluru including CM @BSBommai
Please don't spoil their future with your corruption. pic.twitter.com/S1G69mvy8i