Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
Vrishchika Sankranti 2022: ವೃಶ್ಚಿಕ ಸಂಕ್ರಾಂತಿ 2022 ದಿನಾಂಕ, ಪೂಜಾ ಸಮಯ, ಏನಿದರ ಮಹತ್ವ?
ಪ್ರತಿ ತಿಂಗಳು ಗ್ರಹಗಳ ರಾಜ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಆ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಪಂಚಾಂಗದ ಪ್ರಕಾರ ಒಂದು ವರ್ಷದಲ್ಲಿ 12 ಸಂಕ್ರಾಂತಿಗಳನ್ನು ಆಚರಿಸಲಾಗುತ್ತದೆ. ಈಗ ಮಂಗಳ ಮಾಸ ನಡೆಯುತ್ತಿದೆ. 2022ರಲ್ಲಿ ನವೆಂಬರ್ 16ರಂದು, ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ, ಇದನ್ನು ವೃಶ್ಚಿಕ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
ಏನಿದು ವೃಶ್ಚಿಕ ಸಂಕ್ರಾಂತಿ, ಏನಿದರ ಮಹತ್ವ, ಪೂಜಾ ಸಮಯದ ಬಗ್ಗೆ ಮುಂದೆ ತಿಳಿಯೋಣ:

1. ವೃಶ್ಚಿಕ ಸಂಕ್ರಾಂತಿ ದಿನಾಂಕ, ಪೂಜಾ ಮುಹೂರ್ತ
ಸೂರ್ಯನು 2022ರ ನವೆಂಬರ್ 16ರಿಂದ 15 ಡಿಸೆಂಬರ್ 2022 ರವರೆಗೆ ವೃಶ್ಚಿಕ ರಾಶಿಯಲ್ಲಿ ಇರುತ್ತಾನೆ. ಸೂರ್ಯನನ್ನು ಆರಾಧಿಸಲು ನವೆಂಬರ್ 16ನೇ ದಿನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಬಾರಿಯ ವೃಶ್ಚಿಕ ಸಂಕ್ರಾಂತಿಯಂದು ಅತ್ಯಂತ ಶುಭ ಕಾಕತಾಳೀಯ ಸಂಭವಿಸುತ್ತಿದೆ. ಈ ದಿನದಂದು ಕಾಲ ಭೈರವ ಜಯಂತಿಯನ್ನು ಸಹ ಆಚರಿಸಲಾಗುತ್ತದೆ. ವೃಶ್ಚಿಕ ಸಂಕ್ರಾಂತಿಯ ಶುಭ ಸಮಯ ತಿಳಿಯೋಣ.

2. ವೃಶ್ಚಿಕ ಸಂಕ್ರಾಂತಿ 2022 ಮುಹೂರ್ತ
ಸೂರ್ಯ ರಾಶಿ ಬದಲಾವಣೆ - ರಾತ್ರಿ 07.29 (ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶದ ಸಮಯ)
ವೃಶ್ಚಿಕ ಸಂಕ್ರಾಂತಿ ಶುಭ ಮುಹೂರ್ತ - ಮಧ್ಯಾಹ್ನ 12 ರಿಂದ ರಾತ್ರಿ 11 ರವರೆಗೆ
ಒಟ್ಟು ಪೂಜಾ ಅವಧಿ - 05 ಗಂಟೆ 24 ನಿಮಿಷ
ವೃಶ್ಚಿಕ ಸಂಕ್ರಾಂತಿ ಮಹಾ ಪುಣ್ಯ ಕಾಲ - ಮಧ್ಯಾಹ್ನ 03:48 - ಸಂಜೆ 05:36
ಪೂಜಾ ಅವಧಿ - 01 ಗಂಟೆ 48 ನಿಮಿಷಗಳು

3. ವೃಶ್ಚಿಕ ಸಂಕ್ರಾಂತಿ ಮಹತ್ವ
* ವೃಶ್ಚಿಕ ಸಂಕ್ರಾಂತಿಯಂದು ಸೂರ್ಯನಿಗೆ ನೀರನ್ನು ಅರ್ಪಿಸುವುದರ ಜೊತೆಗೆ, ಶ್ರಾದ್ಧ ಮತ್ತು ಪಿತೃ ತರ್ಪಣವನ್ನು ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ.
* ದೇವಿ ಪುರಾಣದ ಪ್ರಕಾರ, ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ನಂತರ ಯಾರು ದಾನ ಮಾಡುತ್ತಾರೆ, ಅವರ ಎಲ್ಲಾ ಪಾಪಗಳು ಮುಗಿದು ಗಂಭೀರ ಕಾಯಿಲೆಗಳಿಂದ ದೂರವಾಗುತ್ತಾರೆ.
* ಸೂರ್ಯನ ಆರಾಧನೆಯಿಂದ, ನೀವು ಶಕ್ತಿ, ತೇಜಸ್ಸು, ಕೀರ್ತಿ, ಖ್ಯಾತಿಯನ್ನು ಪಡೆಯುತ್ತೀರಿ.
* ಈ ದಿನ ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ನೀರು, ಕೆಂಪು ಚಂದನ, ಕೆಂಪು ಹೂವುಗಳು, ಕುಂಕುಮವನ್ನು ಅರ್ಪಿಸಿದರೆ ಶುಭ ಎಂದು ಹೇಳಲಾಗುತ್ತದೆ.
* ಸೂರ್ಯ ಚಾಲೀಸವನ್ನೂ ಪಠಿಸಿ, ಇದರಿಂದ ಎಲ್ಲಾ ದೋಷಗಳನ್ನು ನಿವಾರಣೆಯಾಗುತ್ತದೆ.

4. ವೃಶ್ಚಿಕ ಸಂಕ್ರಾಂತಿ ಪೂಜಾ ವಿಧಾನ
* ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿಕೊಳ್ಳಿ.
* ತಾಮ್ರದ ಪಾತ್ರೆಯ ನೀರಿನಲ್ಲಿ ಚಂದನದ ಪೇಸ್ಟ್ ಅನ್ನು ಬೆರೆಸಿ ಅರ್ಘ್ಯವನ್ನು ಸೂರ್ಯ ದೇವರಿಗೆ ಅರ್ಪಿಸಿ.
* ಇದಕ್ಕೆ ಅರಿಶಿನವನ್ನು ಸೇರಿಸಿ ಭಗವಾನ್ ಸೂರ್ಯನಿಗೆ ಪ್ರಾರ್ಥನೆ ಮತ್ತು ಮಂತ್ರಗಳೊಂದಿಗೆ ಅರ್ಪಿಸಿ.
* ಸ್ವಲ್ಪ ಕೆಂಪು ಚಂದನದ ಪೇಸ್ಟ್ ಅನ್ನು ತುಪ್ಪದಲ್ಲಿ ಬೆರೆಸಿ ದೇವರಿಗೆ ಕೆಂಪು ದೀಪವನ್ನು ಹಚ್ಚಿ.

5. ಸೂರ್ಯ ಅರ್ಘ್ಯ ಮಂತ್ರ
* ''ಹ್ರೀಂ ಹ್ರೀಂ ಸೂರ್ಯಾಯ ಸಹಸ್ತ್ರಕಿರಣರಾಯ ಮನೋವಾಂಚಿತ ಕಲಂ ದೇಹಿ ದೇಹಿ ಸ್ವಾಹಾ''
- ಓಂ ಸೂರ್ಯಾಯ ನಮಃ
- ಓಂ ಮಿತ್ರಾಯ ನಮಃ
- ಓಂ ರವಿಯೇ ನಮಃ
- ಓಂ ಭಾನವೇ ನಮಃ
- ಓಂ ಖಗಾಯ ನಮಃ
- ಓಂ ಪುಷ್ನೇ ನಮಃ
- ಓಂ ಹಿರಣ್ಯಗರ್ಭಾಯ ನಮಃ
- ಓಂ ಮಾರಿಚಾಯೇ ನಮಃ
- ಓಂ ಆದಿತ್ಯಾಯ ನಮಃ
- ಓಂ ಸಾವಿತ್ರೇ ನಮಃ
- ಓಂ ಅರ್ಕಾಯ ನಮಃ
- ಭಾಸ್ಕರಾಯ ನಮಃ
* ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್
* ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ ದಶದಿಕ್ಪಾಲ ಲಕ್ಷ್ಮಿ ದೇವತಾಯ ಧರ್ಮಕರ್ಮ ಸಹಿತಾಯ ಅಮುಕ ನಾಥಾಯ ನಾಥಾಯ ನಾಮ ಮೋಹಾಯ ಮೋಹಾಯ ಆಕರ್ಶಯ ಆಕರ್ಶಯ ದಾಸಾನುದಾಸಂ ಕುರು ಕುರು ವಶಂ ಕುರು ಕುರು ಸ್ವಾಹಾ
* ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ



Click it and Unblock the Notifications