Latest Updates
-
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು!
Vrishchika Sankranti 2022: ವೃಶ್ಚಿಕ ಸಂಕ್ರಾಂತಿ 2022 ದಿನಾಂಕ, ಪೂಜಾ ಸಮಯ, ಏನಿದರ ಮಹತ್ವ?
ಪ್ರತಿ ತಿಂಗಳು ಗ್ರಹಗಳ ರಾಜ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಆ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಪಂಚಾಂಗದ ಪ್ರಕಾರ ಒಂದು ವರ್ಷದಲ್ಲಿ 12 ಸಂಕ್ರಾಂತಿಗಳನ್ನು ಆಚರಿಸಲಾಗುತ್ತದೆ. ಈಗ ಮಂಗಳ ಮಾಸ ನಡೆಯುತ್ತಿದೆ. 2022ರಲ್ಲಿ ನವೆಂಬರ್ 16ರಂದು, ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ, ಇದನ್ನು ವೃಶ್ಚಿಕ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
ಏನಿದು ವೃಶ್ಚಿಕ ಸಂಕ್ರಾಂತಿ, ಏನಿದರ ಮಹತ್ವ, ಪೂಜಾ ಸಮಯದ ಬಗ್ಗೆ ಮುಂದೆ ತಿಳಿಯೋಣ:

1. ವೃಶ್ಚಿಕ ಸಂಕ್ರಾಂತಿ ದಿನಾಂಕ, ಪೂಜಾ ಮುಹೂರ್ತ
ಸೂರ್ಯನು 2022ರ ನವೆಂಬರ್ 16ರಿಂದ 15 ಡಿಸೆಂಬರ್ 2022 ರವರೆಗೆ ವೃಶ್ಚಿಕ ರಾಶಿಯಲ್ಲಿ ಇರುತ್ತಾನೆ. ಸೂರ್ಯನನ್ನು ಆರಾಧಿಸಲು ನವೆಂಬರ್ 16ನೇ ದಿನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಬಾರಿಯ ವೃಶ್ಚಿಕ ಸಂಕ್ರಾಂತಿಯಂದು ಅತ್ಯಂತ ಶುಭ ಕಾಕತಾಳೀಯ ಸಂಭವಿಸುತ್ತಿದೆ. ಈ ದಿನದಂದು ಕಾಲ ಭೈರವ ಜಯಂತಿಯನ್ನು ಸಹ ಆಚರಿಸಲಾಗುತ್ತದೆ. ವೃಶ್ಚಿಕ ಸಂಕ್ರಾಂತಿಯ ಶುಭ ಸಮಯ ತಿಳಿಯೋಣ.

2. ವೃಶ್ಚಿಕ ಸಂಕ್ರಾಂತಿ 2022 ಮುಹೂರ್ತ
ಸೂರ್ಯ ರಾಶಿ ಬದಲಾವಣೆ - ರಾತ್ರಿ 07.29 (ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶದ ಸಮಯ)
ವೃಶ್ಚಿಕ ಸಂಕ್ರಾಂತಿ ಶುಭ ಮುಹೂರ್ತ - ಮಧ್ಯಾಹ್ನ 12 ರಿಂದ ರಾತ್ರಿ 11 ರವರೆಗೆ
ಒಟ್ಟು ಪೂಜಾ ಅವಧಿ - 05 ಗಂಟೆ 24 ನಿಮಿಷ
ವೃಶ್ಚಿಕ ಸಂಕ್ರಾಂತಿ ಮಹಾ ಪುಣ್ಯ ಕಾಲ - ಮಧ್ಯಾಹ್ನ 03:48 - ಸಂಜೆ 05:36
ಪೂಜಾ ಅವಧಿ - 01 ಗಂಟೆ 48 ನಿಮಿಷಗಳು

3. ವೃಶ್ಚಿಕ ಸಂಕ್ರಾಂತಿ ಮಹತ್ವ
* ವೃಶ್ಚಿಕ ಸಂಕ್ರಾಂತಿಯಂದು ಸೂರ್ಯನಿಗೆ ನೀರನ್ನು ಅರ್ಪಿಸುವುದರ ಜೊತೆಗೆ, ಶ್ರಾದ್ಧ ಮತ್ತು ಪಿತೃ ತರ್ಪಣವನ್ನು ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ.
* ದೇವಿ ಪುರಾಣದ ಪ್ರಕಾರ, ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ನಂತರ ಯಾರು ದಾನ ಮಾಡುತ್ತಾರೆ, ಅವರ ಎಲ್ಲಾ ಪಾಪಗಳು ಮುಗಿದು ಗಂಭೀರ ಕಾಯಿಲೆಗಳಿಂದ ದೂರವಾಗುತ್ತಾರೆ.
* ಸೂರ್ಯನ ಆರಾಧನೆಯಿಂದ, ನೀವು ಶಕ್ತಿ, ತೇಜಸ್ಸು, ಕೀರ್ತಿ, ಖ್ಯಾತಿಯನ್ನು ಪಡೆಯುತ್ತೀರಿ.
* ಈ ದಿನ ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ನೀರು, ಕೆಂಪು ಚಂದನ, ಕೆಂಪು ಹೂವುಗಳು, ಕುಂಕುಮವನ್ನು ಅರ್ಪಿಸಿದರೆ ಶುಭ ಎಂದು ಹೇಳಲಾಗುತ್ತದೆ.
* ಸೂರ್ಯ ಚಾಲೀಸವನ್ನೂ ಪಠಿಸಿ, ಇದರಿಂದ ಎಲ್ಲಾ ದೋಷಗಳನ್ನು ನಿವಾರಣೆಯಾಗುತ್ತದೆ.

4. ವೃಶ್ಚಿಕ ಸಂಕ್ರಾಂತಿ ಪೂಜಾ ವಿಧಾನ
* ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿಕೊಳ್ಳಿ.
* ತಾಮ್ರದ ಪಾತ್ರೆಯ ನೀರಿನಲ್ಲಿ ಚಂದನದ ಪೇಸ್ಟ್ ಅನ್ನು ಬೆರೆಸಿ ಅರ್ಘ್ಯವನ್ನು ಸೂರ್ಯ ದೇವರಿಗೆ ಅರ್ಪಿಸಿ.
* ಇದಕ್ಕೆ ಅರಿಶಿನವನ್ನು ಸೇರಿಸಿ ಭಗವಾನ್ ಸೂರ್ಯನಿಗೆ ಪ್ರಾರ್ಥನೆ ಮತ್ತು ಮಂತ್ರಗಳೊಂದಿಗೆ ಅರ್ಪಿಸಿ.
* ಸ್ವಲ್ಪ ಕೆಂಪು ಚಂದನದ ಪೇಸ್ಟ್ ಅನ್ನು ತುಪ್ಪದಲ್ಲಿ ಬೆರೆಸಿ ದೇವರಿಗೆ ಕೆಂಪು ದೀಪವನ್ನು ಹಚ್ಚಿ.

5. ಸೂರ್ಯ ಅರ್ಘ್ಯ ಮಂತ್ರ
* ''ಹ್ರೀಂ ಹ್ರೀಂ ಸೂರ್ಯಾಯ ಸಹಸ್ತ್ರಕಿರಣರಾಯ ಮನೋವಾಂಚಿತ ಕಲಂ ದೇಹಿ ದೇಹಿ ಸ್ವಾಹಾ''
- ಓಂ ಸೂರ್ಯಾಯ ನಮಃ
- ಓಂ ಮಿತ್ರಾಯ ನಮಃ
- ಓಂ ರವಿಯೇ ನಮಃ
- ಓಂ ಭಾನವೇ ನಮಃ
- ಓಂ ಖಗಾಯ ನಮಃ
- ಓಂ ಪುಷ್ನೇ ನಮಃ
- ಓಂ ಹಿರಣ್ಯಗರ್ಭಾಯ ನಮಃ
- ಓಂ ಮಾರಿಚಾಯೇ ನಮಃ
- ಓಂ ಆದಿತ್ಯಾಯ ನಮಃ
- ಓಂ ಸಾವಿತ್ರೇ ನಮಃ
- ಓಂ ಅರ್ಕಾಯ ನಮಃ
- ಭಾಸ್ಕರಾಯ ನಮಃ
* ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್
* ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ ದಶದಿಕ್ಪಾಲ ಲಕ್ಷ್ಮಿ ದೇವತಾಯ ಧರ್ಮಕರ್ಮ ಸಹಿತಾಯ ಅಮುಕ ನಾಥಾಯ ನಾಥಾಯ ನಾಮ ಮೋಹಾಯ ಮೋಹಾಯ ಆಕರ್ಶಯ ಆಕರ್ಶಯ ದಾಸಾನುದಾಸಂ ಕುರು ಕುರು ವಶಂ ಕುರು ಕುರು ಸ್ವಾಹಾ
* ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ



Click it and Unblock the Notifications