Just In
- 16 min ago
ಚರ್ಮದ ಕ್ಯಾನ್ಸರ್ ಯೌವನ ಪ್ರಾಯದವರಲ್ಲಿ ಹೆಚ್ಚು ಯಾಕೆ . .? ತಡೆಗಟ್ಟುವುದು ಹೇಗೆ?
- 56 min ago
30 ದಿನ ಸಕ್ಕರೆ ಸೇವಿಸದಿದ್ದರೆ ಇಷ್ಟೆಲ್ಲಾ ಲಾಭವಾಗುತ್ತಾ..? ವೈಟ್ಲಾಸ್ಗೆ ಇದೇ ಬೆಸ್ಟ್..!
- 8 hrs ago
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- 13 hrs ago
ವಾರ ಭವಿಷ್ಯ (ಫೆ.4-11): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
Don't Miss
- Sports
SA 20: ಫಾಫ್ ಡುಪ್ಲೆಸಿಸ್ ನಾಯಕನ ಆಟ: ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಭರ್ಜರಿ ಜಯ
- Movies
ತಮಿಳು ನಿರ್ಮಾಪಕರ ನಿದ್ದೆ ಕೆಡಿಸಿದ ದಿಗ್ಗಜರು: ಅಜಿತ್ ₹100 ಕೋಟಿ.. ವಿಜಯ್ ಕೇಳಿದ್ದೆಷ್ಟು?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೆ. 17ಕ್ಕೆ ವಿಶ್ವಕರ್ಮ ಪೂಜೆ: ಈ ದಿನ ಪೂಜೆಗೆ 3 ಮುಹೂರ್ತ ಇದೆ
ಪ್ರತಿ ವರ್ಷ ಬ್ರಹ್ಮಾಂಡದ ವಾಸ್ತುಶಿಲ್ಪಿ ಭಗವಂತ ವಿಶ್ವಕರ್ಮರ ಜನ್ಮದಿನವನ್ನು ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ಈ ಭೂಮಿಯಲ್ಲಿ ಇರುವುದೆಲ್ಲವೂ ಭಗವಂತ ವಿಶ್ವಕರ್ಮನಿಂದ ಸೃಷ್ಟಿಯಾಗಿದೆ ಎಂಬುದು ಒಂದು ನಂಬಿಕೆ. ಶಾಸ್ತ್ರಗಳ ಪ್ರಕಾರ, ಬ್ರಹ್ಮ ದೇವರು ಈ ಸಂಪೂರ್ಣ ಭೂ ಮಂಡಲವನ್ನು ಸೃಷ್ಟಿಸಿದನು ಎಂದು ನಂಬಲಾಗಿದೆ.
ಭಗವಂತ ವಿಶ್ವಕರ್ಮನನ್ನು ವಾಸ್ತು ಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗಿದೆ. ಅದರಲ್ಲೂ ವಿಶ್ವಕರ್ಮ ಜಯಂತಿಯಂದು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಬಳಸುವ ಸಾಮಾನು, ಉಪಕರಣಗಳಿಗೆ ಪೂಜೆ ಸಲ್ಲಿಸಿ, ಈ ದಿನ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಮಾಡುವುದಿಲ್ಲ.

ವಿಶ್ವಕರ್ಮ ಜಯಂತಿ ಪೂಜೆ 2022 ಶುಭ ಮುಹೂರ್ತ
ಹಿಂದೂ ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಪೂಜೆಗೆ ಮೂರು ಮಂಗಳಕರ ಸಮಯಗಳಿವೆ.
ಮೊದಲ ಶುಭ ಮುಹೂರ್ತ - ಬೆಳಗ್ಗೆ 07:39 ರಿಂದ ಬೆಳಗ್ಗೆ 09:11 ರವರೆಗೆ
ಎರಡನೇ ಶುಭ ಮುಹೂರ್ತ-ಮಧ್ಯಾಹ್ನ 01:48 ರಿಂದ 03:20 ರವರೆಗೆ
ಮೂರನೇ ಶುಭ ಮುಹೂರ್ತ - ಮಧ್ಯಾಹ್ನ 03:20 ರಿಂದ ಸಂಜೆ 04:52

ವಿಶ್ವಕರ್ಮ ಜಯಂತಿ ಪೂಜಾ ವಿಧಾನ
* ಮೊದಲನೆಯದಾಗಿ ವಿಶ್ವಕರ್ಮ ಜಯಂತಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ಧರಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.
* ನಂತರ ಸಂಕಲ್ಪ ತೆಗೆದುಕೊಂಡು ವಿಶ್ವಕರ್ಮ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಪ್ರಾರಂಭಿಸಿ.
* ವಿಶ್ವಕರ್ಮ ದೇವರ ವಿಗ್ರಹಕ್ಕೆ ಸಂಬಂಧಿಸಿದ ಸಾಧನಗಳನ್ನು ಪೂಜಿಸಿ.
*ಭಗವಂತ ವಿಶ್ವಕರ್ಮನಿಗೆ ವೀಳ್ಯದೆಲೆ, ಅರಿಶಿನ, ಅಕ್ಷತೆ, ಹೂವುಗಳು, ಲವಂಗ, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
* ನಂತರ ಧೂಪ ಮತ್ತು ದೀಪಗಳನ್ನು ಬೆಳಗಿಸಿ, ಭಗವಂತ ವಿಶ್ವಕರ್ಮನನ್ನು ಪೂಜಿಸಿ ಮತ್ತು ರಕ್ಷಾಸೂತ್ರವನ್ನು ಅರ್ಪಿಸಿ.

ಪ್ರಗತಿಗಾಗಿ ಪ್ರಾರ್ಥಿಸಿ
ವಿಶ್ವಕರ್ಮ ದೇವರ ಪೂಜೆಯ ನಂತರ ಕಚೇರಿಯ ಯಂತ್ರಗಳು ಮತ್ತು ಉಪಕರಣಗಳನ್ನು ಪೂಜಿಸಿ.
ಕೊನೆಯಲ್ಲಿ, ಪೂಜೆಯಲ್ಲಿ ಯಾವುದೇ ತಪ್ಪಾಗಿದ್ದರೆ ವಿಶ್ವಕರ್ಮ ದೇವರಲ್ಲಿ ಕ್ಷಮೆಯಾಚಿಸಿ, ವ್ಯಾಪಾರದಲ್ಲಿ ಪ್ರಗತಿಗಾಗಿ ಪ್ರಾರ್ಥಿಸಿ ಮತ್ತು ಪ್ರಸಾದವನ್ನು ವಿತರಿಸಿ.