Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಶನಿ ಜಯಂತಿಯಂದು ಸೂರ್ಯಗ್ರಹಣ: ಈ ದಿನ ಏನು ಮಾಡಬಾರದು, ಏನು ಮಾಡಬೇಕು?
2021ರ ಜೂನ್ 10 ಹಲವಾರು ಕಾರಣಗಳಿಂದ ಬಹು ವಿಶೇಷವಾದ ದಿನವಾಗಿದೆ. ಈ ದಿನ ಎರಡು ಪ್ರಮುಖ ಆಚರಣೆಗಳಿವೆ ಹಾಗೂ ಒಂದು ಪ್ರಮುಖ ಘಟನೆ ಸಂಭವಿಸಲಿದೆ. ಜೂನ್ 10ರಂದು ವಟ ಸಾವತ್ರಿ ವ್ರತ, ಶನಿ ಜಯಂತಿ ಆಚರಿಸಲಾಗುವುದು, ಇದರ ಜೊತೆಗೆ ಈ ದಿನ ವಾರ್ಷಿಕ ಸೂರ್ಯಗ್ರಹಣ ಸಂಭವಿಸಲಿದೆ.

ಶನಿ ಜಯಂತಿ ಹಾಗೂ ಸೂರ್ಯಗ್ರಹಣ ಜೊತೆಗೆ ಬಂದಿರುವುದು ವೈದಿಕ ದೃಷ್ಟಿಯಿಂದ ಬಹು ವಿಶೇಷವಾದ ದಿನವಾಗಿದೆ. ಶನಿ ಜಯಂತಿಯನ್ನು ವೈಶಾಖ ಮಾಸದ ಜ್ಯೇಷ್ಠ ಅಮವಾಸ್ಯೆಯಂದು ಆಚರಿಸಲಾಗುವುದು, ಸೂರ್ಯಗ್ರಹಣವು ಅಮವಾಸ್ಯೆಯೆಂದೇ ಘಟಿಸುವುದು, ಈ ಬಾರಿ ಅದು ಶನಿ ಜಯಂತಿ ಇದ್ದ ದಿನವೇ ಬಂದಿದೆ.
ಶನಿಯನ್ನು ನ್ಯಾಯದ ದೇವರೆಂದು ಪರಿಗಣಿಸಲಾಗಿದೆ. ಶನಿಯು ಸೂರ್ಯನ ಪುತ್ರ. ಆದ್ದರಿಂದ ಸೂರ್ಯಗ್ರಹಣದ ಪ್ರಭಾವ ಹೆಚ್ಚೇನು ಶನಿ ಜಯಂತಿ ಮೇಲೆ ಬೀರಲ್ಲ.

ಶನಿ ಜಯಂತಿಯ ಮುಹೂರ್ತ ಹಾಗೂ ಸೂರ್ಯಗ್ರಹಣ ಸೂತಕ ಸಮಯ
ಶನಿ ಜಯಂತಿಯ ಮುಹೂರ್ತ
ಜೂನ್ 9 ರಾತ್ರಿ 2:25ರಿಂದ ಜೂನ್ 10 4:24ರವರೆಗೆ
ಸೂರ್ಯಗ್ರಹಣ ಸೂತಕ ಸಮಯ
ಮಧ್ಯಾಹ್ನ 1.42 ರಿಂದ ಸಂಜೆ 6.41 ರವರೆಗೆ

ಶನಿ ಜಯಂತಿ ಆಚರಣೆ
ಶನಿ ಜಯಂತಿಯಂದು ಮಾಡುವ ದಾನಕ್ಕೆ ತುಂಬಾನೇ ಪ್ರಾಶಸ್ತ್ಯ ಇದೆ. ಈ ದಿನ ಅಗ್ಯತವಿರುವ ಬಡವರಿಗೆ ಅಗ್ಯತ ವಸ್ತುಗಳನ್ನು ದಾನ ಮಡಿ. ಈ ದಿನ ಶನಿ ದೇವನ ಜಿತೆಗೆ , ಶ್ರೀ ಹನುಮಾನ್ ಚಾಲಿಸಾ ಪಠಿಸಿ ಅಲ್ಲದೆ ಸೂರ್ಯನನ್ನು ಕೂಡ ಆರಾಧಿಸಬೇಕು.

ಶನಿ ಜಯಂತಿಯಂದು ಏನು ಮಾಡಬಾರದು?
* ಈ ದಿನ ಸುಳ್ಳು ಹೇಳಬಾರದು, ಮೋಸ ಮಾಡಬಾರದು
* ಯಾರಿಗೂ ನೋವುಂಟು ಮಾಡಬಾರದು
* ಮದ್ಯಪಾನ, ಜೂಜು ಇವುಗಳನ್ನು ಮಾಡಬರದು
* ಸುಳ್ಳು ಸಾಕ್ಷ್ಯ ನೀಡಬಾರದು
* ಬಡ್ಡಿ ಹಣ ಪಡೆಯಬಾರದು
* ಹಿರಿಯರಿಗೆ ಅಗೌರವ ತೋರಬಾಋದು
* ಮಹಿಳೆಯರಿಗೆ ಅವಮಾನ ಮಾಡಬಾರದು

ಶನಿ ದೇವ ಜಯಂತಿಯಂದು ಹೀಗೆ ಮಾಡಿ
ಭೈರವನಿಗೆ ಕಚ್ಚಾ ಹಾಲನ್ನು ಅರ್ಪಿಸಿ
ಕಾಗೆಗೆ ಆಹಾರ ಅರ್ಪಿಸಿ
ಬಡವರಿಗೆ ದಾನ ಮಾಡಿ
ಶ್ರೀ ಹನುಮಾನ್ ಚಾಲಿಸಾ ಓದಿ
ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಬೂಟುಗಳನ್ನು ದಾನ ಮಾಡಿ



Click it and Unblock the Notifications
