Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಶನಿ ಜಯಂತಿಯಂದು ಸೂರ್ಯಗ್ರಹಣ: ಈ ದಿನ ಏನು ಮಾಡಬಾರದು, ಏನು ಮಾಡಬೇಕು?
2021ರ ಜೂನ್ 10 ಹಲವಾರು ಕಾರಣಗಳಿಂದ ಬಹು ವಿಶೇಷವಾದ ದಿನವಾಗಿದೆ. ಈ ದಿನ ಎರಡು ಪ್ರಮುಖ ಆಚರಣೆಗಳಿವೆ ಹಾಗೂ ಒಂದು ಪ್ರಮುಖ ಘಟನೆ ಸಂಭವಿಸಲಿದೆ. ಜೂನ್ 10ರಂದು ವಟ ಸಾವತ್ರಿ ವ್ರತ, ಶನಿ ಜಯಂತಿ ಆಚರಿಸಲಾಗುವುದು, ಇದರ ಜೊತೆಗೆ ಈ ದಿನ ವಾರ್ಷಿಕ ಸೂರ್ಯಗ್ರಹಣ ಸಂಭವಿಸಲಿದೆ.

ಶನಿ ಜಯಂತಿ ಹಾಗೂ ಸೂರ್ಯಗ್ರಹಣ ಜೊತೆಗೆ ಬಂದಿರುವುದು ವೈದಿಕ ದೃಷ್ಟಿಯಿಂದ ಬಹು ವಿಶೇಷವಾದ ದಿನವಾಗಿದೆ. ಶನಿ ಜಯಂತಿಯನ್ನು ವೈಶಾಖ ಮಾಸದ ಜ್ಯೇಷ್ಠ ಅಮವಾಸ್ಯೆಯಂದು ಆಚರಿಸಲಾಗುವುದು, ಸೂರ್ಯಗ್ರಹಣವು ಅಮವಾಸ್ಯೆಯೆಂದೇ ಘಟಿಸುವುದು, ಈ ಬಾರಿ ಅದು ಶನಿ ಜಯಂತಿ ಇದ್ದ ದಿನವೇ ಬಂದಿದೆ.
ಶನಿಯನ್ನು ನ್ಯಾಯದ ದೇವರೆಂದು ಪರಿಗಣಿಸಲಾಗಿದೆ. ಶನಿಯು ಸೂರ್ಯನ ಪುತ್ರ. ಆದ್ದರಿಂದ ಸೂರ್ಯಗ್ರಹಣದ ಪ್ರಭಾವ ಹೆಚ್ಚೇನು ಶನಿ ಜಯಂತಿ ಮೇಲೆ ಬೀರಲ್ಲ.

ಶನಿ ಜಯಂತಿಯ ಮುಹೂರ್ತ ಹಾಗೂ ಸೂರ್ಯಗ್ರಹಣ ಸೂತಕ ಸಮಯ
ಶನಿ ಜಯಂತಿಯ ಮುಹೂರ್ತ
ಜೂನ್ 9 ರಾತ್ರಿ 2:25ರಿಂದ ಜೂನ್ 10 4:24ರವರೆಗೆ
ಸೂರ್ಯಗ್ರಹಣ ಸೂತಕ ಸಮಯ
ಮಧ್ಯಾಹ್ನ 1.42 ರಿಂದ ಸಂಜೆ 6.41 ರವರೆಗೆ

ಶನಿ ಜಯಂತಿ ಆಚರಣೆ
ಶನಿ ಜಯಂತಿಯಂದು ಮಾಡುವ ದಾನಕ್ಕೆ ತುಂಬಾನೇ ಪ್ರಾಶಸ್ತ್ಯ ಇದೆ. ಈ ದಿನ ಅಗ್ಯತವಿರುವ ಬಡವರಿಗೆ ಅಗ್ಯತ ವಸ್ತುಗಳನ್ನು ದಾನ ಮಡಿ. ಈ ದಿನ ಶನಿ ದೇವನ ಜಿತೆಗೆ , ಶ್ರೀ ಹನುಮಾನ್ ಚಾಲಿಸಾ ಪಠಿಸಿ ಅಲ್ಲದೆ ಸೂರ್ಯನನ್ನು ಕೂಡ ಆರಾಧಿಸಬೇಕು.

ಶನಿ ಜಯಂತಿಯಂದು ಏನು ಮಾಡಬಾರದು?
* ಈ ದಿನ ಸುಳ್ಳು ಹೇಳಬಾರದು, ಮೋಸ ಮಾಡಬಾರದು
* ಯಾರಿಗೂ ನೋವುಂಟು ಮಾಡಬಾರದು
* ಮದ್ಯಪಾನ, ಜೂಜು ಇವುಗಳನ್ನು ಮಾಡಬರದು
* ಸುಳ್ಳು ಸಾಕ್ಷ್ಯ ನೀಡಬಾರದು
* ಬಡ್ಡಿ ಹಣ ಪಡೆಯಬಾರದು
* ಹಿರಿಯರಿಗೆ ಅಗೌರವ ತೋರಬಾಋದು
* ಮಹಿಳೆಯರಿಗೆ ಅವಮಾನ ಮಾಡಬಾರದು

ಶನಿ ದೇವ ಜಯಂತಿಯಂದು ಹೀಗೆ ಮಾಡಿ
ಭೈರವನಿಗೆ ಕಚ್ಚಾ ಹಾಲನ್ನು ಅರ್ಪಿಸಿ
ಕಾಗೆಗೆ ಆಹಾರ ಅರ್ಪಿಸಿ
ಬಡವರಿಗೆ ದಾನ ಮಾಡಿ
ಶ್ರೀ ಹನುಮಾನ್ ಚಾಲಿಸಾ ಓದಿ
ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಬೂಟುಗಳನ್ನು ದಾನ ಮಾಡಿ



Click it and Unblock the Notifications