Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಶನಿ ಜಯಂತಿಯಂದು ಸೂರ್ಯಗ್ರಹಣ: ಈ ದಿನ ಏನು ಮಾಡಬಾರದು, ಏನು ಮಾಡಬೇಕು?
2021ರ ಜೂನ್ 10 ಹಲವಾರು ಕಾರಣಗಳಿಂದ ಬಹು ವಿಶೇಷವಾದ ದಿನವಾಗಿದೆ. ಈ ದಿನ ಎರಡು ಪ್ರಮುಖ ಆಚರಣೆಗಳಿವೆ ಹಾಗೂ ಒಂದು ಪ್ರಮುಖ ಘಟನೆ ಸಂಭವಿಸಲಿದೆ. ಜೂನ್ 10ರಂದು ವಟ ಸಾವತ್ರಿ ವ್ರತ, ಶನಿ ಜಯಂತಿ ಆಚರಿಸಲಾಗುವುದು, ಇದರ ಜೊತೆಗೆ ಈ ದಿನ ವಾರ್ಷಿಕ ಸೂರ್ಯಗ್ರಹಣ ಸಂಭವಿಸಲಿದೆ.

ಶನಿ ಜಯಂತಿ ಹಾಗೂ ಸೂರ್ಯಗ್ರಹಣ ಜೊತೆಗೆ ಬಂದಿರುವುದು ವೈದಿಕ ದೃಷ್ಟಿಯಿಂದ ಬಹು ವಿಶೇಷವಾದ ದಿನವಾಗಿದೆ. ಶನಿ ಜಯಂತಿಯನ್ನು ವೈಶಾಖ ಮಾಸದ ಜ್ಯೇಷ್ಠ ಅಮವಾಸ್ಯೆಯಂದು ಆಚರಿಸಲಾಗುವುದು, ಸೂರ್ಯಗ್ರಹಣವು ಅಮವಾಸ್ಯೆಯೆಂದೇ ಘಟಿಸುವುದು, ಈ ಬಾರಿ ಅದು ಶನಿ ಜಯಂತಿ ಇದ್ದ ದಿನವೇ ಬಂದಿದೆ.
ಶನಿಯನ್ನು ನ್ಯಾಯದ ದೇವರೆಂದು ಪರಿಗಣಿಸಲಾಗಿದೆ. ಶನಿಯು ಸೂರ್ಯನ ಪುತ್ರ. ಆದ್ದರಿಂದ ಸೂರ್ಯಗ್ರಹಣದ ಪ್ರಭಾವ ಹೆಚ್ಚೇನು ಶನಿ ಜಯಂತಿ ಮೇಲೆ ಬೀರಲ್ಲ.

ಶನಿ ಜಯಂತಿಯ ಮುಹೂರ್ತ ಹಾಗೂ ಸೂರ್ಯಗ್ರಹಣ ಸೂತಕ ಸಮಯ
ಶನಿ ಜಯಂತಿಯ ಮುಹೂರ್ತ
ಜೂನ್ 9 ರಾತ್ರಿ 2:25ರಿಂದ ಜೂನ್ 10 4:24ರವರೆಗೆ
ಸೂರ್ಯಗ್ರಹಣ ಸೂತಕ ಸಮಯ
ಮಧ್ಯಾಹ್ನ 1.42 ರಿಂದ ಸಂಜೆ 6.41 ರವರೆಗೆ

ಶನಿ ಜಯಂತಿ ಆಚರಣೆ
ಶನಿ ಜಯಂತಿಯಂದು ಮಾಡುವ ದಾನಕ್ಕೆ ತುಂಬಾನೇ ಪ್ರಾಶಸ್ತ್ಯ ಇದೆ. ಈ ದಿನ ಅಗ್ಯತವಿರುವ ಬಡವರಿಗೆ ಅಗ್ಯತ ವಸ್ತುಗಳನ್ನು ದಾನ ಮಡಿ. ಈ ದಿನ ಶನಿ ದೇವನ ಜಿತೆಗೆ , ಶ್ರೀ ಹನುಮಾನ್ ಚಾಲಿಸಾ ಪಠಿಸಿ ಅಲ್ಲದೆ ಸೂರ್ಯನನ್ನು ಕೂಡ ಆರಾಧಿಸಬೇಕು.

ಶನಿ ಜಯಂತಿಯಂದು ಏನು ಮಾಡಬಾರದು?
* ಈ ದಿನ ಸುಳ್ಳು ಹೇಳಬಾರದು, ಮೋಸ ಮಾಡಬಾರದು
* ಯಾರಿಗೂ ನೋವುಂಟು ಮಾಡಬಾರದು
* ಮದ್ಯಪಾನ, ಜೂಜು ಇವುಗಳನ್ನು ಮಾಡಬರದು
* ಸುಳ್ಳು ಸಾಕ್ಷ್ಯ ನೀಡಬಾರದು
* ಬಡ್ಡಿ ಹಣ ಪಡೆಯಬಾರದು
* ಹಿರಿಯರಿಗೆ ಅಗೌರವ ತೋರಬಾಋದು
* ಮಹಿಳೆಯರಿಗೆ ಅವಮಾನ ಮಾಡಬಾರದು

ಶನಿ ದೇವ ಜಯಂತಿಯಂದು ಹೀಗೆ ಮಾಡಿ
ಭೈರವನಿಗೆ ಕಚ್ಚಾ ಹಾಲನ್ನು ಅರ್ಪಿಸಿ
ಕಾಗೆಗೆ ಆಹಾರ ಅರ್ಪಿಸಿ
ಬಡವರಿಗೆ ದಾನ ಮಾಡಿ
ಶ್ರೀ ಹನುಮಾನ್ ಚಾಲಿಸಾ ಓದಿ
ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಬೂಟುಗಳನ್ನು ದಾನ ಮಾಡಿ



Click it and Unblock the Notifications