Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ನಾಗಪಂಚಮಿ 2021: ರಾಶಿಚಕ್ರದ ಪ್ರಕಾರ ನಾಗಪಂಚಮಿಯಂದು ಹೇಗೆ ಪೂಜಿಸಬೇಕು
ಭಾರತದಾದ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುವ ನಾಗ ಪಂಚಮಿ 2021ನೇ ಸಾಲಿನಲ್ಲಿ ಆಗಸ್ಟ್ 13ರಂದು ಆಚರಿಸಲಾಗುತ್ತಿದೆ. ಸಂತೋಷ, ಸಮೃದ್ಧಿ, ಉತ್ತಮ ಆರೋಗ್ಯ, ಸಂತಾನ ಪ್ರಾಪ್ತಿ ಸೇರಿದಂತೆ ಸಮೃದ್ಧ ಜೀವನ, ಕುಟುಂಬದ ಒಳಿತಿಗಾಗಿ ಶ್ರಾವಣ ಶುಕ್ಲ ಪಕ್ಷದಲ್ಲಿ ಬರುವ ನಾಗಪಂಚಮಿಯಂದು ನಾಗದೇವರನ್ನು ಪೂಜಿಸುವುದು ಸಂಪ್ರದಾಯ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣಮಾಸ ಶುಕ್ಲ ಪಕ್ಷದ ಪಂಚಮಿಯಂದು ನಾಗದೇವರನ್ನು ಪೂಜಿಸಿದರೆ ಕಾಳಸರ್ಪ ದೋಷ, ವಿಷ ದೋಷ, ಕೇತು ದೋಷ, ಪಿತೃ ದೋಷ, ಮದುವೆಯ ಸಮಸ್ಯೆಯ ಪರಿಹರಕ್ಕಾಗಿ, ರಾಹುಗಳಿಂದ ಉಂಟಾಗುವ ಸಮಸ್ಯೆಗಳ ಪರಿಹಾರವನ್ನು ಪಡೆಯಬಹುದು. ಆದ್ದರಿಂದ ಈ ವಿಶೇಷ ದಿನ ಎಲ್ಲರೂ ನಾಗ ದೇವರನ್ನು ಆರಾಧಿಸುತ್ತಾರೆ.
ನಮ್ಮ ಜಾತಕದಲ್ಲಿ ಅಥವಾ ನಮಗೆ ಸರ್ಪದೋಷವಿದ್ದರೆ ನಾಗ ಪಂಚಮಿಯಂದು ಇದನ್ನು ಸುಲಭವಾಗಿ ತೊಡೆದುಹಾಕಲು ಸಾಧ್ಯವಿದೆ. ನಿಮ್ಮ ರಾಶಿಚಕ್ರದ ಪ್ರಕಾರ ನಾಗಂಚಮಿಯಂದು ನಾಗದೇವತೆಯನ್ನು ಹೇಗೆ ಆರಾಧಿಸಬೇಕು, ಏನನ್ನು ಅರ್ಪಿಸಬೇಕು ಎಂಬ ಮಾಹಿತಿಯನ್ನು ನೀಡಲಿದ್ದೇವೆ:
ರಾಶಿಚಕ್ರ ಚಿಹ್ನೆಗಳ ಪ್ರಕಾರ ನಾಗದೇವರನ್ನು ಪೂಜಿಸಲು ಕೆಲವು ಪ್ರಮುಖ ಸಲಹೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಪೂಜೆಯನ್ನು ಮನಃಪೂರ್ವಕವಾಗಿ ಮಾಡಿದರೆ ನಿಸ್ಸಂದೇಹವಾಗಿ ಯಶಸ್ಸು ನಿಮ್ಮದಾಗುತ್ತದೆ.

ಮೇಷ ಮತ್ತು ವೃಶ್ಚಿಕ ರಾಶಿ
ಮೇಷ ಮತ್ತು ವೃಶ್ಚಿಕ ರಾಶಿಚಕ್ರದ ಅಧಿಪತಿ ಮಂಗಳ ಗ್ರಹ. ಈ ರಾಶಿಚಕ್ರದವರು ನಾಗ ದೇವತೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟು ಕೆಂಪು ಹೂವುಗಳು ಹಾಗೂ ದೇವರಿಗೆ ಇಷ್ಟವಾದ ಫಲ, ತಿಂಡಿಗಳ ಮೂಲಕ ಪೂಜಿಸಿದರೆ ಅವರಿಗೆ ಹೆಚ್ಚು ಲಾಭವಾಗುತ್ತದೆ. ಭಕ್ತರು ಪೂಜಿಸುವ ವೇಳೆ ಗಣೇಶ ಸ್ತೋತ್ರ ಮತ್ತು ಸರ್ಪ ಸ್ತ್ರೋತ್ರಗಳನ್ನು ಪಠಿಸಿದರೆ ಒಳ್ಳೆಯದು.

ವೃಷಭ ಮತ್ತು ತುಲಾ ರಾಶಿ
ವೃಷಭ ಮತ್ತು ತುಲಾ ರಾಶಿಯ ಯಜಮಾನ ಶುಕ್ರ. ಈ ರಾಶಿಯವರು ಉತ್ತರ ದಿಕ್ಕಿಗೆ ಮುಖ ಮಾಡಿ ನಾಗದೇವತೆಗೆ ಬಿಳಿ ಹೂವುಗಳು ಮತ್ತು ಶ್ರೀಗಂಧವನ್ನು ಹಚ್ಚಿ ಪೂಜಿಸಿದರೆ ಒಳ್ಳೆಯದು. ಅಲ್ಲದೇ ಪೂಜಿಸುವ ವೇಳೆ ನಾಗಸ್ತ್ರೋತ್ರ ಮತ್ತು ಗಣೇಶ ಚಾಲೀಸವನ್ನು ಪಠಿಸಿದರೆ ಶುಭ ಫಲ ನಿಮ್ಮದಾಗುತ್ತದೆ.

ಮಿಥುನ ಮತ್ತು ಕನ್ಯಾ ರಾಶಿ
ಮಿಥುನ ಮತ್ತು ಕನ್ಯಾ ರಾಶಿಯನ್ನು ಆಳುವ ಗ್ರಹ ಬುಧ. ಈ ರಾಶಿಯ ಭಕ್ತರು ಈಶಾನ್ಯ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಒಳ್ಳೆಯದು. ಪೂಜೆಯ ವೇಳೆ ಬಿಲ್ಪತ್ರೆ ಮತ್ತು ಕಬ್ಬಿನ ಹಾಲನ್ನು ಬಳಸಿ ಪೂಜೆ ಆರಭಿಸಿ. ಗಣೇಶ ಕವಚವನ್ನು ಪಠಿಸಿದರೆ ನಿಮ್ಮ ಅಪೇಕ್ಷೆಗಳು ಈಡೇರುತ್ತದೆ.

ಕರ್ಕ ರಾಶಿ
ಕರ್ಕ ರಾಶಿಯ ಅಧಿಪತಿ ಚಂದ್ರ. ಕರ್ಕ ರಾಶಿಯವರು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಒಳ್ಳೆಯದು. ಮೊಸರು ಮತ್ತು ಬಿಳಿ ಹೂವುಗಳನ್ನು ನಾಗದೇವತೆಗೆ ಅರ್ಪಿಸಿ ಗಣೇಶ ಅಥರ್ವಶೀರ್ಷ ಪಠಿಸಿ ಭಕ್ತಿಯಿಂದ ಪೂಜಿಸಿ.

ಸಿಂಹ ರಾಶಿ
ಸಿಂಹ ರಾಶಿಯ ಯಜಮಾನ ಸೂರ್ಯ. ಸಿಂಹ ರಾಶಿಯವರು ಪೂರ್ವ ದಿಕ್ಕಿನಲ್ಲಿ ಪೂಜಿಸಿ. ಕೆಂಪು ಹೂವುಗಳು ಮತ್ತು ಕೇಸರಿಯನ್ನು ನೀಡಿ ಸರ್ಪವನ್ನು ಪೂಜಿಸಿ. ಸಮೃದ್ಧಿಗಾಗಿ ದೇವರಿಗೆ ಇಷ್ಟವಾದ ಖಾದ್ಯಗಳನ್ನು ಪುಜೆಗೆ ಇಟ್ಟು ನಾಗ ಸ್ಟ್ರೋತ್ರವನ್ನು ಪಠಿಸಿ.

ಧನು ಮತ್ತು ಮೀನ ರಾಶಿ
ಧನು ಮತ್ತು ಮೀನ ರಾಶಿಯನ್ನುಆಳುವ ಗ್ರಹ ಗುರು. ಪೂರ್ವ-ಉತ್ತರ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಒಳ್ಳೆಯದು. ಹಳದಿ ಹೂವು ಮತ್ತು ಹಳದಿ ವಸ್ತುಗಳನ್ನು ಬಳಸಿ ಪೂಜೆ ಮಾಡಿದರೆ ಶುಭವಾಗುತ್ತದೆ. ಸುಗಮ ಜೀವನಕ್ಕಾಗಿ ಗಣೇಶ ಅಷ್ಟಕ ಪಠಿಸಿ ಮತ್ತು ನಾಗ ಸಹಸ್ರನಾಮಾವಳಿ ಪಠಿಸಿ.

ಮಕರ ಮತ್ತು ಕುಂಭ ರಾಶಿ
ಮಕರ ಮತ್ತು ಕುಂಭ ರಾಶಿಯ ಅಧಿಪತಿ ಶನಿ. ಈ ರಾಶಿಯವರು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಒಳ್ಳೆಯದು. ಉತ್ತಮ ಜೀವನ ಮತ್ತು ಸಮೃದ್ಧಿಗಾಗಿ ನೀಲಿ ಹೂವುಗಳನ್ನು ಬಳಸಿ.



Click it and Unblock the Notifications