Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ರೈತನ ಬೆಳೆ ರಕ್ಷಿಸುತ್ತಿರುವ ಹುಲಿವೇಷದ ನಾಯಿ
ಶಿವಮೊಗ್ಗದ ರೈತರೊಬ್ಬರ ಮನೆಯಲ್ಲಿ ಹುಲಿಯೊಂದು ಓಡಾಡಿದಂತೆ ಕಂಡವರು ಅರೆಕ್ಷಣ ಅಯ್ಯೋ... ಇಲ್ಲಿಗೆ ಹುಲಿ ಬಂದಿದೆಯೇ? ಎಂದು ಗಾಬರಿ ಬೀಳುತ್ತಿದ್ದರು. ಸೂಕ್ಷ್ಮವಾಗಿ ನೋಡಿದರೆ ಹುಲಿಯಲ್ಲ, ಅರೇ... ಹುಲಿ ಅಲ್ಲ, ಹುಲಿಯಂತೆ ಕಾಣುವ ಈ ಪ್ರಾಣಿ ಯಾವುದೆಂದು ನೋಡಿದರೆ ಅದೊಂದು ನಾಯಿಯಾಗಿತ್ತು. ನಾಯಿಗೆ ಹುಲಿಯಂತೆ ಕಾಣಲು ಬಣ್ಣ ಬಳಿದಿದ್ದರು.
ಇದೇನು ಹುಲಿವೇಷಕ್ಕೆ ಮನುಷ್ಯರು ಬಣ್ಣ ಬಳಿದಂತೆ ನಾಯಿಗೂ ಬಳಿದಿದ್ದಾರೆ, ಈ ನಾಯಿಗೆ ಏಕೆ ಬೇಕು ಈ ಹುಲಿಯ ಬಣ್ಣ ಎಂದು ನೋಡಿದರೆ ಅಲ್ಲಿ ಹುಲಿಯಂತೆ ಕಾಣುವ ನಾಯಿಯನ್ನು ತನ್ನ ಬೆಳೆಯ ರಕ್ಷಣೆಗೆ ಬಳಸಿದ ರೈತನ ಚಾಣಾಕ್ಷತನ ಹಾಗೂ ಅವನ ನೋವು ಎರಡೂ ಎದ್ದು ಕಾಣುತ್ತದೆ.
ರೈತರು ಬೆಳೆದ ಬೆಲೆ ಕೈ ಸಿಗಲು ಎಷ್ಟು ಕಷ್ಟಪಡುತ್ತಾರೆ ಎನ್ನುವುದು ಅವರಿಗಷ್ಟೇ ಗೊತ್ತಿರುತ್ತದೆ. ಪ್ರಕೃತಿ ವಿಕೋಪ, ಮಂಗ, ಹಂದಿ ಹೀಗೆ ಇತರ ಪ್ರಾಣಿಗಳ ಕಾಟಗಳಿಂದ ರೈತ ತನ್ನ ಬೆಳೆ ರಕ್ಷಣೆ ಮಾಡುವಷ್ಟರಲ್ಲಿ ಸುಸ್ತಾಗಿ ಹೋಗುತ್ತಾನೆ. ಇನ್ನು ಬೆಳೆ ಬೆಳೆಯುವ ಕಡೆ ಮಂಗಗಳ ಕಾಟ ಇದ್ದರಂತೂ ಮುಗಿಯಿತು. ಬೆಳೆದು ಬಂದ ಬೆಳೆಗಳು ಕಪಿಚೇಷ್ಠೆಗೆ ಸಿಲುಕಿ ನಲುಗಿ ಹೋಗಿರುತ್ತವೆ. ಎಷ್ಟೇ ಕಾವಲು ಕುಳಿತರು ಅವು ತಮ್ಮ ಕೆಲಸ ಮಾಡದೆ ಬಿಡುವುದಿಲ್ಲ. ಇನ್ನು ಅವುಗಳಿಗಂತೂ ಮನುಷ್ಯನ ಭಯ ಇರುವುದಿಲ್ಲ.
ಹಾಗಾಗಿ ತನ್ನ ಬೆಳೆಯನ್ನು ರಕ್ಷಣೆ ಮಾಡಲು ತೀರ್ಥಹಳ್ಳಿ ತಾಲೂಕಿನ ನಲ್ಲೂರು ರೈತ ಶ್ರೀಕಂಠ ಗೌಡ ಈ ಐಡಿಯಾ ಮಾಡಿದ್ದಾರೆ. ಅವರ ಬೆಳೆಗೆ ಮಂಗಗಳು ದಾಳಿ ತುಂಬಾ ನಷ್ಟ ಮಾಡುತ್ತಿದ್ದವು. ಆಗ ಬಟ್ಕಳದಲ್ಲಿ ಒಬ್ಬ ರೈತ ಹುಲಿಯ ಆಕೃತಿ ತಂದು ಇಟ್ಟಾಗ ಅದಕ್ಕೆ ಹೆದರಿ ಮಂಗಗಳು ಬಾರದಿದ್ದ ಕತೆ ಕೇಳಿದ್ದು ನೆನಪಾಗಿ ಹಾಗೇ ಮಾಡುತ್ತಾರೆ.
ಹುಲಿಯ ಆಕೃತಿಯನ್ನು ನೋಡಿ ಭಯಪಟ್ಟು ಮಂಗಗಳು ಬರುತ್ತಿರಲಿಲ್ಲ, ಆದರೆ ಆ ಆಕೃತಿ ಎಲ್ಲಿಗೂ ಚಲಿಸದೆ ಒಂದೇ ಕಡೆ ಇರುವುದನ್ನು ನೋಡಿದ ಮಂಗಗಳು ಮತ್ತೆ ತಮ್ಮ ಕಪಿಚೇಷ್ಠೆಗೆ ಮುಂದಾಗುತ್ತವೆ. ಆಗ ಶ್ರೀಕಂಠ ಗೌಡರಿಗೆ ಹೊಳೆದಿದ್ದೇ ನಾಯಿಯನ್ನೇ ಹುಲಿ ಮಾಡುವ ಯೋಚನೆ.
#Karnataka farmer paints #TigerStripes on #dog to #SaveCrop from #monkeys
— 4to40 (@4to40) November 29, 2019
Srikanta Gowda, a farmer from #Naluru village, #Thirthahalli taluk in #Karnataka, has painted his dog to look like a tiger to save his crop from monkeys. https://t.co/ZZwhD2pe0g pic.twitter.com/VBhcbEeEWT
ಇದೀಗ ನಾಯಿ ಹುಲಿಯ ಗತ್ತಿನಲ್ಲಿ ಬೆಳೆ ಬೆಳೆದ ತೋಟದಲ್ಲಿ ಓಡಾಡುತ್ತಿದ್ದರೆ ಮಂಗಗಳು ಅದಕ್ಕೆ ಹೆದರಿ ಬರುವುದನ್ನು ನಿಲ್ಲಿಸಿವೆ. ತಮ್ಮ ಐಡಿಯಾ ವರ್ಕ್ಔಟ್ ಆಯ್ತು ಅಂತ ಶ್ರೀಕಂಠ ಗೌಡರಿಗೂ ನೆಮ್ಮದಿಯಾಗಿದೆ. ಇವರ ಐಡಿಯಾಕ್ಕೆ ಟ್ವಿಟರ್ನಲ್ಲಿ ಭಾರಿ ಮೆಚ್ಚುಗೆಯೂ ಸಿಕ್ಕಿದೆ.



Click it and Unblock the Notifications
