Latest Updates
-
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಮುಂಬೈ ಮಳೆ ರಜೆ: ಮನೆಯಲ್ಲೇ ಕುಟುಂಬದೊಂದಿಗೆ ಫಿಟ್ ಆಗಿರಲು 12 ನಿಮಿಷದ ಸಿಂಪಲ್ ಯೋಗ! -
ಕ್ರಿಕೆಟ್ ಮ್ಯಾಚ್ ನೋಡುವಾಗ ದಂಪತಿಗಳ ನಡುವೆ ಜಗಳವೇ? ಶಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಸಮಾಧಾನದ ಸೂತ್ರ! -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆಯನ್ನು ತೇವಾಂಶ ಮತ್ತು ಬೂಸಿನಿಂದ ರಕ್ಷಿಸಲು ಇಲ್ಲಿವೆ ಸರಳ ಮನೆಮದ್ದುಗಳು! -
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು?
ಶುಕ್ರವಾರ ಲಕ್ಷ್ಮಿಯನ್ನು ಹೀಗೆ ಪೂಜಿಸಿದರೆ ಆರ್ಥಿಕ ಸಂಕಷ್ಟ ದೂರಾಗುವುದು
ಶುಕ್ರವಾರ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠವಾದ ದಿನ, ಈ ದಿನ ಲಕ್ಷ್ಮಿಯನ್ನು ಆರಾಧಿಸುವುದರಿಂದ ಮನೆಯ ಸಂಪತ್ತು ಹೆಚ್ಚುವುದು, ನಿಮಗೆ ಆರ್ಥಿಕ ತೊಂದರೆಗಳಿದ್ದರೆ ಅವುಗಳು ದೂರಾಗುವುದು. ನೀವು ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಈ ರೀತಿ ಲಕ್ಷ್ಮಿ ಪೂಜೆ ಮಾಡಿದರೆ ನಿಮಗೆ ಹೆಚ್ಚಿನ ಫಲ ಸಿಗುವುದು.

* ಶುಕ್ರವಾರ ಉಪವಾಸವಿದ್ದು ಲಕ್ಷ್ಮಿಯನ್ನು ಆರಾಧಿಸಿ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಪೂಜೆ ಕೋಣೆ ಶುದ್ಧ ಮಾಡಿ, ಲಜ್ಷ್ಮಿಗೆ ಕಳಸ ಇಟ್ಟು ಪೂಜಿಸಿ. ಈ ದಿನ ನೀವು ಬಿಳಿ, ಕೆಂಪು ಅಥವಾ ಕೆನೆ ಬಣ್ಣದ ವಸ್ತ್ರ ಧರಿಸಿ. ಲಕ್ಷ್ಮಿ ಪೂಜಿಸುವಾಗ ಶ್ರೀಸೂಕ್ತವನ್ನು ಪಠಿಸಿ.
* ಶುಕ್ರವಾರ ಲಕ್ಷ್ಮಿ ಪೂಜೆಗೆ ಕಮಲದ ಹೂವು, ಶಂಖ, ಕೆಂಪು ಅಥವಾ ಗುಲಾಬಿ ಬಟ್ಟೆ ಅರ್ಪಿಸಿ, ಪೂಜಿಸಿ.
* ಶುಕ್ರವಾರ ಮನೆಯನ್ನು ಸ್ವಚ್ಛವಾಗಿಡಿ, ಸ್ವಚ್ಛತೆ ಇರುವ ಸ್ಥಳದಲ್ಲಿ ಲಕ್ಷ್ಮಿ ದೇವಿ ನೆಲೆಸುವುದು. ಮನೆಯಲ್ಲಿ ಬಲೆ ಕಟ್ಟಲು ಬಿಡಬೇಡಿ.
* ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ಮಾತೆ ಲಕ್ಷ್ಮಿಯ ಫೋಟೋ ಇಟ್ಟು ಪೂಜಿಸಿ. ಪೂಜಾ ಸ್ಥಳದ ಬಳಿ ಅಡುಗೆ ಕೋಣೆ ಅಥವಾ ಶೌಚಾಲಯ ಇರಬಾರದು.
* ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಶುಕ್ರವಾರದಂದು, ತಾಯಿಗೆ ಬಿಳಿ ನೈವೇದ್ಯ ಅರ್ಪಿಸಬೇಕು. ಅಕ್ಕಿ ಪಾಯಸ ಮಾಡಿ ಅರ್ಪಿಸಿ.
* ಶುಕ್ರವಾರ 11/4ಕೆಜಿ ಅಕ್ಕಿಯನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಇಟ್ಟು ಗಂಟು ಹಾಕಿ 'ಓಂ ಶ್ರೀ ಶ್ರೀ ನಮಃ' ಎಂಬ ಮಂತ್ರವನ್ನು ಐದು ಬಾರಿ ಜಪಿಸಿ ನಂತರ ಈ ಮೂಟೆಯನ್ನು ಮನೆಯ ಬೀರುವಿನಲ್ಲಿಡಿ. ಹೀಗೆ ಮಾಡುವುದರಿಂದ ಧನ ಲಾಭವಾಗುತ್ತದೆ.
* ಶುಕ್ರವಾರ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಅವಳಿಗೆ ಕೆಂಪು ಬಣ್ಣದ ಬಟ್ಟೆಗಳನ್ನು ಅರ್ಪಿಸುವುದು ಮಂಗಳಕರ.
* ಶುಕ್ರವಾರ ಶ್ರೀ ವಿಷ್ಣು-ಲಕ್ಷ್ಮಿಯನ್ನು ಪೂಜಿಸಿ ಮಂತ್ರಗಳನ್ನು ಪಠಿಸಿ.



Click it and Unblock the Notifications
