Just In
- 10 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 10 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 10 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 12 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊಸಳೆ ಸಾವಿನ ದುಃಖದಲ್ಲಿ ಅಡುಗೆ ಮಾಡದ ಗ್ರಾಮಸ್ಥರು!
ಮನುಷ್ಯರು ಸಂಘಜೀವಿ, ಹೀಗಾಗಿ ತಮ್ಮದೇ ಆಗಿರುವ ಒಂದು ಗುಂಪನ್ನು ಕಟ್ಟಿಕೊಂಡು ಇರುವರು. ಅದೇ ರೀತಿಯಾಗಿ ಕೆಲವೊಂದು ಪ್ರಾಣಿಗಳು ಕೂಡ ಗುಂಪಿನಲ್ಲಿ ಇರುವುದು. ಇನ್ನು ಕೆಲವು ಒಂಟಿಯಾಗಿರುವುದು. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧವು ತುಂಬಾ ಹಿಂದಿನಿಂದಲೂ ಬೆಸೆದುಕೊಂಡಿದೆ. ಮನುಷ್ಯ ತನ್ನ ಕೆಲವೊಂದು ಕೆಲಸಕಾರ್ಯಗಳಿಗೆ ಪ್ರಾಣಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಈಗಲೂ ಇದನ್ನು ಮಾಡುತ್ತಿದ್ದಾನೆ. ಇನ್ನು ಕೆಲವು ಮಂದಿ ಪ್ರಾಣಿಗಳೊಂದಿಗೆ ಗಾಢ ಸಂಬಂಧ ಹೊಂದಿರುವರು. ಹೀಗಾಗಿ ಅವರು ಅವುಗಳನ್ನು ತುಂಬಾ ಪ್ರೀತಿಸುವರು. ಸಾಕು ಪ್ರಾಣಿಗಳನ್ನು ಪ್ರೀತಿಸುವುದು ಸಹಜ. ಆದರೆ ಕೆಲವು ಜನರು ಕಾಡು ಪ್ರಾಣಿಗಳನ್ನು ಕೂಡ ಪ್ರೀತಿ ಮಾಡುವರು.
ಇಂತಹ ಎಷ್ಟೋ ಘಟನೆಗಳನ್ನು ನಾವು ಕೇಳಿದ್ದೇವೆ. ಇಲ್ಲೊಂದು ಗ್ರಾಮದಲ್ಲಿ ಮೊಸಳೆಯಿಂದು ಸಹಜವಾಗಿ ಸಾವನ್ನಪ್ಪಿದೆ. ಆದರೆ ಸಂಪೂರ್ಣ ಗ್ರಾಮವೇ ಅದರ ಬಗ್ಗೆ ಶೋಕಾರಣೆ ಮಾಡಿದೆ ಎಂದರೆ ಆ ಗ್ರಾಮದ ಜನರ ಪ್ರೀತಿ ಎಷ್ಟರ ಮಟ್ಟಿಗೆ ಇತ್ತು ಎನ್ನುವುದು ನಮಗೆ ತಿಳಿಯುವುದು. ಸುಮಾರು 130 ವರ್ಷಗಳಿಂದಲೂ ಮೊಸಳೆಯು ಈ ಗ್ರಾಮದ ಜನರೊಂದಿಗೆ ಬೆಸೆದು ಕೊಂಡಿತ್ತು. ಮೊಸಳೆ ಸಾವಿನಿಂದ ಗ್ರಾಮದ ಜನರು ತುಂಬಾ ದುಃಖಿತರಾದರು. ಅವರು ತಮ್ಮ ಮನೆಗಳಲ್ಲಿ ಅಡುಗೆ ಮಾಡಲಿಲ್ಲ ಮತ್ತು ಮೊಸಳೆಗೆ ಅಂತ್ಯಸಂಸ್ಕಾರವನ್ನು ಕೂಡ ಮಾಡಿದರು. ಈ ಗ್ರಾಮದಲ್ಲಿನ ಜನರು ಮೊಸಳೆಯು ತಮ್ಮ ರಕ್ಷಕನೆಂದು ತಿಳಿದಿದ್ದರು. ಮೊಸಳೆ ಹಾಗೂ ಈ ಗ್ರಾಮದ ಜನರ ಮಧ್ಯೆ ಇದ್ದ ಸಂಬಂಧದ ಬಗ್ಗೆ ನೀವು ಈ ಲೇಖನವನ್ನು ಮುಂದೆ ಓದುತ್ತಾ ಸಾಗಿದರೆ ತಿಳಿಯುವುದು.
ಗ್ರಾಮಸ್ಥರು ಈ ಮೊಸಳೆಗೆ `ಗಂಗಾರಾಮ್’ಎಂದು ಹೆಸರು ಇಟ್ಟಿದ್ದರು
ಗ್ರಾಮಸ್ಥರು ಈ ಮೊಸಳೆಗೆ ಗಂಗಾರಾಮ್ ಎಂದು ಹೆಸರನ್ನು ಇಟ್ಟಿದ್ದರು ಮತ್ತು ಸಂಪೂರ್ಣ ಗ್ರಾಮವು ಮೊಸಳೆಯನ್ನು ದೇವರಂತೆ ಪೂಜಿಸುತ್ತಿತ್ತು. ಕೆರೆಯಲ್ಲಿ ಮೊಸಳೆಯು ಸತ್ತಿರುವುದನ್ನು ಗ್ರಾಮಸ್ಥರು ನೋಡಿದರು.
ಪಶುವೈದ್ಯರು ಮೊಸಳೆಯ ಮರಣೋತ್ತರ ಪರೀಕ್ಷೆ ನಡೆಸಿದರು
ಮೊಸಳೆಯು ಕೆರೆಯಲ್ಲಿ ಸತ್ತ ಬಳಿಕ ಗ್ರಾಮಸ್ಥರು ಪಶುವೈದ್ಯರನ್ನು ಕರೆಸಿಕೊಂಡು ಅದರ ಮರಣೋತ್ತರ ಪರೀಕ್ಷೆ ಮಾಡಿಸಿದರು. ಮೊಸಳೆಯು ಸಹಜವಾಗಿ ಸಾವನ್ನಪ್ಪಿತ್ತು ಮತ್ತು ಇದು ಸುಮಾರು 250 ಕೆಜಿ ತೂಕ ಹೊಂದಿತ್ತು. ಗ್ರಾಮಸ್ಥರು ಇದರ ಬಳಿಕ ಮೊಸಳೆಯ ಅಂತ್ಯಸಂಸ್ಕಾರ ನಡೆಸಿದರು.
Most Read: ಅದೃಷ್ಟವಂತರಿಗೆ ಮಾತ್ರ ಈ 'ಸಸ್ಯಹಾರಿ ಮೊಸಳೆ'ಯ ದರ್ಶನ ಆಗುವುದು!
ಸುಮಾರು 500 ಜನರು ಉಪಸ್ಥಿತರಿದ್ದರು
ಮೊಸಳೆ ಸಾವಿನಿಂದಾಗಿ ಸಂಪೂರ್ಣ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿತು. ಹೆಚ್ಚಿನ ಎಲ್ಲಾ ಮನೆಗಳಲ್ಲಿ ಅಡುಗೆ ಮಾಡದೆ ಶೋಕಾಚರಣೆ ಮಾಡಲಾಯಿತು. ಮೊಸಳೆಯ ಅಂತ್ಯಸಂಸ್ಕಾರದಲ್ಲಿ ಸುಮಾರು 500 ಮಂದಿ ಭಾಗಿಯಾಗಿದ್ದರು ಎಂದು ವರದಿಗಳು ಹೇಳಿವೆ.
ಮೊಸಳೆಯು ಅಪಾಯಕಾರಿಯಾಗಿರಲಿಲ್ಲ
ಮೊಸಳೆಗಳು ತುಂಬಾ ಅಪಾಯಕಾರಿ ಎಂದು ಪರಿಗಣಿಸಲ್ಪಡುವುದು. ಆದರೆ ಗಂಗಾರಾಮ್ ಮಾತ್ರ ತುಂಬಾ ಶಾಂತ ಮತ್ತು ತನ್ನದೇ ಆದ ಲೋಕದಲ್ಲಿ ಇರುತ್ತಿದ್ದ. ಗ್ರಾಮಸ್ಥರು ಈ ಮೊಸಳೆಗೆ ಅನ್ನ ಮತ್ತು ಬೇಳೆ ಸಾರು ನೀಡುತ್ತಿದ್ದರು. ಮೊಸಳೆಯು ಕೆರೆಯಲ್ಲಿ ಆಡುತ್ತಿದ್ದ ಮಕ್ಕಳಿಗೆ ಯಾವತ್ತೂ ಹಾನಿ ಮಾಡುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಮೊಸಳೆ ಮತ್ತು ಮೊಸಳೆ ಹಾಗೂ ಗ್ರಾಮಸ್ಥರ ಮಧ್ಯೆ ಒಂದು ಅವಿನಾಭಾವ ಸಂಬಂಧ ಬೆಳೆದಿತ್ತು.
Most Read: ಥೈಲ್ಯಾಂಡ್ನಲ್ಲಿ ಮೊಸಳೆಯ ಚರ್ಮಕ್ಕೆ ಭಾರೀ ಬೇಡಿಕೆಯಂತೆ! ಯಾಕೆ ಗೊತ್ತೇ?
ಮೊಸಳೆಗೆ ಮಂದಿರ ನಿರ್ಮಾಣ ಮಾಡಲು ಗ್ರಾಮಸ್ಥರು ನಿರ್ಧರಿಸಿರುವರು
ಗ್ರಾಮದ ಸರಪಂಚ ಹೇಳುವಂತೆ ಗ್ರಾಮಸ್ಥರು ಸತ್ತಿರುವ ಮೊಸಳೆಗೆ ಮಂದಿರವೊಂದನ್ನು ನಿರ್ಮಾಣ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಮೊಸಳೆಯನ್ನು ದಫನ ಮಾಡಿರುವಂತಹ ಕೆರೆಯ ದಡದಲ್ಲಿ ಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರು ಚಿಂತನೆ ನಡೆಸುತ್ತಿದ್ದಾರೆ.