Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮೊಸಳೆ ಸಾವಿನ ದುಃಖದಲ್ಲಿ ಅಡುಗೆ ಮಾಡದ ಗ್ರಾಮಸ್ಥರು!
ಮನುಷ್ಯರು ಸಂಘಜೀವಿ, ಹೀಗಾಗಿ ತಮ್ಮದೇ ಆಗಿರುವ ಒಂದು ಗುಂಪನ್ನು ಕಟ್ಟಿಕೊಂಡು ಇರುವರು. ಅದೇ ರೀತಿಯಾಗಿ ಕೆಲವೊಂದು ಪ್ರಾಣಿಗಳು ಕೂಡ ಗುಂಪಿನಲ್ಲಿ ಇರುವುದು. ಇನ್ನು ಕೆಲವು ಒಂಟಿಯಾಗಿರುವುದು. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧವು ತುಂಬಾ ಹಿಂದಿನಿಂದಲೂ ಬೆಸೆದುಕೊಂಡಿದೆ. ಮನುಷ್ಯ ತನ್ನ ಕೆಲವೊಂದು ಕೆಲಸಕಾರ್ಯಗಳಿಗೆ ಪ್ರಾಣಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಈಗಲೂ ಇದನ್ನು ಮಾಡುತ್ತಿದ್ದಾನೆ. ಇನ್ನು ಕೆಲವು ಮಂದಿ ಪ್ರಾಣಿಗಳೊಂದಿಗೆ ಗಾಢ ಸಂಬಂಧ ಹೊಂದಿರುವರು. ಹೀಗಾಗಿ ಅವರು ಅವುಗಳನ್ನು ತುಂಬಾ ಪ್ರೀತಿಸುವರು. ಸಾಕು ಪ್ರಾಣಿಗಳನ್ನು ಪ್ರೀತಿಸುವುದು ಸಹಜ. ಆದರೆ ಕೆಲವು ಜನರು ಕಾಡು ಪ್ರಾಣಿಗಳನ್ನು ಕೂಡ ಪ್ರೀತಿ ಮಾಡುವರು.

ಇಂತಹ ಎಷ್ಟೋ ಘಟನೆಗಳನ್ನು ನಾವು ಕೇಳಿದ್ದೇವೆ. ಇಲ್ಲೊಂದು ಗ್ರಾಮದಲ್ಲಿ ಮೊಸಳೆಯಿಂದು ಸಹಜವಾಗಿ ಸಾವನ್ನಪ್ಪಿದೆ. ಆದರೆ ಸಂಪೂರ್ಣ ಗ್ರಾಮವೇ ಅದರ ಬಗ್ಗೆ ಶೋಕಾರಣೆ ಮಾಡಿದೆ ಎಂದರೆ ಆ ಗ್ರಾಮದ ಜನರ ಪ್ರೀತಿ ಎಷ್ಟರ ಮಟ್ಟಿಗೆ ಇತ್ತು ಎನ್ನುವುದು ನಮಗೆ ತಿಳಿಯುವುದು. ಸುಮಾರು 130 ವರ್ಷಗಳಿಂದಲೂ ಮೊಸಳೆಯು ಈ ಗ್ರಾಮದ ಜನರೊಂದಿಗೆ ಬೆಸೆದು ಕೊಂಡಿತ್ತು. ಮೊಸಳೆ ಸಾವಿನಿಂದ ಗ್ರಾಮದ ಜನರು ತುಂಬಾ ದುಃಖಿತರಾದರು. ಅವರು ತಮ್ಮ ಮನೆಗಳಲ್ಲಿ ಅಡುಗೆ ಮಾಡಲಿಲ್ಲ ಮತ್ತು ಮೊಸಳೆಗೆ ಅಂತ್ಯಸಂಸ್ಕಾರವನ್ನು ಕೂಡ ಮಾಡಿದರು. ಈ ಗ್ರಾಮದಲ್ಲಿನ ಜನರು ಮೊಸಳೆಯು ತಮ್ಮ ರಕ್ಷಕನೆಂದು ತಿಳಿದಿದ್ದರು. ಮೊಸಳೆ ಹಾಗೂ ಈ ಗ್ರಾಮದ ಜನರ ಮಧ್ಯೆ ಇದ್ದ ಸಂಬಂಧದ ಬಗ್ಗೆ ನೀವು ಈ ಲೇಖನವನ್ನು ಮುಂದೆ ಓದುತ್ತಾ ಸಾಗಿದರೆ ತಿಳಿಯುವುದು.

ಗ್ರಾಮಸ್ಥರು ಈ ಮೊಸಳೆಗೆ `ಗಂಗಾರಾಮ್’ಎಂದು ಹೆಸರು ಇಟ್ಟಿದ್ದರು
ಗ್ರಾಮಸ್ಥರು ಈ ಮೊಸಳೆಗೆ ಗಂಗಾರಾಮ್ ಎಂದು ಹೆಸರನ್ನು ಇಟ್ಟಿದ್ದರು ಮತ್ತು ಸಂಪೂರ್ಣ ಗ್ರಾಮವು ಮೊಸಳೆಯನ್ನು ದೇವರಂತೆ ಪೂಜಿಸುತ್ತಿತ್ತು. ಕೆರೆಯಲ್ಲಿ ಮೊಸಳೆಯು ಸತ್ತಿರುವುದನ್ನು ಗ್ರಾಮಸ್ಥರು ನೋಡಿದರು.

ಪಶುವೈದ್ಯರು ಮೊಸಳೆಯ ಮರಣೋತ್ತರ ಪರೀಕ್ಷೆ ನಡೆಸಿದರು
ಮೊಸಳೆಯು ಕೆರೆಯಲ್ಲಿ ಸತ್ತ ಬಳಿಕ ಗ್ರಾಮಸ್ಥರು ಪಶುವೈದ್ಯರನ್ನು ಕರೆಸಿಕೊಂಡು ಅದರ ಮರಣೋತ್ತರ ಪರೀಕ್ಷೆ ಮಾಡಿಸಿದರು. ಮೊಸಳೆಯು ಸಹಜವಾಗಿ ಸಾವನ್ನಪ್ಪಿತ್ತು ಮತ್ತು ಇದು ಸುಮಾರು 250 ಕೆಜಿ ತೂಕ ಹೊಂದಿತ್ತು. ಗ್ರಾಮಸ್ಥರು ಇದರ ಬಳಿಕ ಮೊಸಳೆಯ ಅಂತ್ಯಸಂಸ್ಕಾರ ನಡೆಸಿದರು.

ಸುಮಾರು 500 ಜನರು ಉಪಸ್ಥಿತರಿದ್ದರು
ಮೊಸಳೆ ಸಾವಿನಿಂದಾಗಿ ಸಂಪೂರ್ಣ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿತು. ಹೆಚ್ಚಿನ ಎಲ್ಲಾ ಮನೆಗಳಲ್ಲಿ ಅಡುಗೆ ಮಾಡದೆ ಶೋಕಾಚರಣೆ ಮಾಡಲಾಯಿತು. ಮೊಸಳೆಯ ಅಂತ್ಯಸಂಸ್ಕಾರದಲ್ಲಿ ಸುಮಾರು 500 ಮಂದಿ ಭಾಗಿಯಾಗಿದ್ದರು ಎಂದು ವರದಿಗಳು ಹೇಳಿವೆ.

ಮೊಸಳೆಯು ಅಪಾಯಕಾರಿಯಾಗಿರಲಿಲ್ಲ
ಮೊಸಳೆಗಳು ತುಂಬಾ ಅಪಾಯಕಾರಿ ಎಂದು ಪರಿಗಣಿಸಲ್ಪಡುವುದು. ಆದರೆ ಗಂಗಾರಾಮ್ ಮಾತ್ರ ತುಂಬಾ ಶಾಂತ ಮತ್ತು ತನ್ನದೇ ಆದ ಲೋಕದಲ್ಲಿ ಇರುತ್ತಿದ್ದ. ಗ್ರಾಮಸ್ಥರು ಈ ಮೊಸಳೆಗೆ ಅನ್ನ ಮತ್ತು ಬೇಳೆ ಸಾರು ನೀಡುತ್ತಿದ್ದರು. ಮೊಸಳೆಯು ಕೆರೆಯಲ್ಲಿ ಆಡುತ್ತಿದ್ದ ಮಕ್ಕಳಿಗೆ ಯಾವತ್ತೂ ಹಾನಿ ಮಾಡುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಮೊಸಳೆ ಮತ್ತು ಮೊಸಳೆ ಹಾಗೂ ಗ್ರಾಮಸ್ಥರ ಮಧ್ಯೆ ಒಂದು ಅವಿನಾಭಾವ ಸಂಬಂಧ ಬೆಳೆದಿತ್ತು.

ಮೊಸಳೆಗೆ ಮಂದಿರ ನಿರ್ಮಾಣ ಮಾಡಲು ಗ್ರಾಮಸ್ಥರು ನಿರ್ಧರಿಸಿರುವರು
ಗ್ರಾಮದ ಸರಪಂಚ ಹೇಳುವಂತೆ ಗ್ರಾಮಸ್ಥರು ಸತ್ತಿರುವ ಮೊಸಳೆಗೆ ಮಂದಿರವೊಂದನ್ನು ನಿರ್ಮಾಣ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಮೊಸಳೆಯನ್ನು ದಫನ ಮಾಡಿರುವಂತಹ ಕೆರೆಯ ದಡದಲ್ಲಿ ಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರು ಚಿಂತನೆ ನಡೆಸುತ್ತಿದ್ದಾರೆ.



Click it and Unblock the Notifications
