Latest Updates
-
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ
ಮೊಸಳೆ ಸಾವಿನ ದುಃಖದಲ್ಲಿ ಅಡುಗೆ ಮಾಡದ ಗ್ರಾಮಸ್ಥರು!
ಮನುಷ್ಯರು ಸಂಘಜೀವಿ, ಹೀಗಾಗಿ ತಮ್ಮದೇ ಆಗಿರುವ ಒಂದು ಗುಂಪನ್ನು ಕಟ್ಟಿಕೊಂಡು ಇರುವರು. ಅದೇ ರೀತಿಯಾಗಿ ಕೆಲವೊಂದು ಪ್ರಾಣಿಗಳು ಕೂಡ ಗುಂಪಿನಲ್ಲಿ ಇರುವುದು. ಇನ್ನು ಕೆಲವು ಒಂಟಿಯಾಗಿರುವುದು. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧವು ತುಂಬಾ ಹಿಂದಿನಿಂದಲೂ ಬೆಸೆದುಕೊಂಡಿದೆ. ಮನುಷ್ಯ ತನ್ನ ಕೆಲವೊಂದು ಕೆಲಸಕಾರ್ಯಗಳಿಗೆ ಪ್ರಾಣಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಈಗಲೂ ಇದನ್ನು ಮಾಡುತ್ತಿದ್ದಾನೆ. ಇನ್ನು ಕೆಲವು ಮಂದಿ ಪ್ರಾಣಿಗಳೊಂದಿಗೆ ಗಾಢ ಸಂಬಂಧ ಹೊಂದಿರುವರು. ಹೀಗಾಗಿ ಅವರು ಅವುಗಳನ್ನು ತುಂಬಾ ಪ್ರೀತಿಸುವರು. ಸಾಕು ಪ್ರಾಣಿಗಳನ್ನು ಪ್ರೀತಿಸುವುದು ಸಹಜ. ಆದರೆ ಕೆಲವು ಜನರು ಕಾಡು ಪ್ರಾಣಿಗಳನ್ನು ಕೂಡ ಪ್ರೀತಿ ಮಾಡುವರು.

ಇಂತಹ ಎಷ್ಟೋ ಘಟನೆಗಳನ್ನು ನಾವು ಕೇಳಿದ್ದೇವೆ. ಇಲ್ಲೊಂದು ಗ್ರಾಮದಲ್ಲಿ ಮೊಸಳೆಯಿಂದು ಸಹಜವಾಗಿ ಸಾವನ್ನಪ್ಪಿದೆ. ಆದರೆ ಸಂಪೂರ್ಣ ಗ್ರಾಮವೇ ಅದರ ಬಗ್ಗೆ ಶೋಕಾರಣೆ ಮಾಡಿದೆ ಎಂದರೆ ಆ ಗ್ರಾಮದ ಜನರ ಪ್ರೀತಿ ಎಷ್ಟರ ಮಟ್ಟಿಗೆ ಇತ್ತು ಎನ್ನುವುದು ನಮಗೆ ತಿಳಿಯುವುದು. ಸುಮಾರು 130 ವರ್ಷಗಳಿಂದಲೂ ಮೊಸಳೆಯು ಈ ಗ್ರಾಮದ ಜನರೊಂದಿಗೆ ಬೆಸೆದು ಕೊಂಡಿತ್ತು. ಮೊಸಳೆ ಸಾವಿನಿಂದ ಗ್ರಾಮದ ಜನರು ತುಂಬಾ ದುಃಖಿತರಾದರು. ಅವರು ತಮ್ಮ ಮನೆಗಳಲ್ಲಿ ಅಡುಗೆ ಮಾಡಲಿಲ್ಲ ಮತ್ತು ಮೊಸಳೆಗೆ ಅಂತ್ಯಸಂಸ್ಕಾರವನ್ನು ಕೂಡ ಮಾಡಿದರು. ಈ ಗ್ರಾಮದಲ್ಲಿನ ಜನರು ಮೊಸಳೆಯು ತಮ್ಮ ರಕ್ಷಕನೆಂದು ತಿಳಿದಿದ್ದರು. ಮೊಸಳೆ ಹಾಗೂ ಈ ಗ್ರಾಮದ ಜನರ ಮಧ್ಯೆ ಇದ್ದ ಸಂಬಂಧದ ಬಗ್ಗೆ ನೀವು ಈ ಲೇಖನವನ್ನು ಮುಂದೆ ಓದುತ್ತಾ ಸಾಗಿದರೆ ತಿಳಿಯುವುದು.

ಗ್ರಾಮಸ್ಥರು ಈ ಮೊಸಳೆಗೆ `ಗಂಗಾರಾಮ್’ಎಂದು ಹೆಸರು ಇಟ್ಟಿದ್ದರು
ಗ್ರಾಮಸ್ಥರು ಈ ಮೊಸಳೆಗೆ ಗಂಗಾರಾಮ್ ಎಂದು ಹೆಸರನ್ನು ಇಟ್ಟಿದ್ದರು ಮತ್ತು ಸಂಪೂರ್ಣ ಗ್ರಾಮವು ಮೊಸಳೆಯನ್ನು ದೇವರಂತೆ ಪೂಜಿಸುತ್ತಿತ್ತು. ಕೆರೆಯಲ್ಲಿ ಮೊಸಳೆಯು ಸತ್ತಿರುವುದನ್ನು ಗ್ರಾಮಸ್ಥರು ನೋಡಿದರು.

ಪಶುವೈದ್ಯರು ಮೊಸಳೆಯ ಮರಣೋತ್ತರ ಪರೀಕ್ಷೆ ನಡೆಸಿದರು
ಮೊಸಳೆಯು ಕೆರೆಯಲ್ಲಿ ಸತ್ತ ಬಳಿಕ ಗ್ರಾಮಸ್ಥರು ಪಶುವೈದ್ಯರನ್ನು ಕರೆಸಿಕೊಂಡು ಅದರ ಮರಣೋತ್ತರ ಪರೀಕ್ಷೆ ಮಾಡಿಸಿದರು. ಮೊಸಳೆಯು ಸಹಜವಾಗಿ ಸಾವನ್ನಪ್ಪಿತ್ತು ಮತ್ತು ಇದು ಸುಮಾರು 250 ಕೆಜಿ ತೂಕ ಹೊಂದಿತ್ತು. ಗ್ರಾಮಸ್ಥರು ಇದರ ಬಳಿಕ ಮೊಸಳೆಯ ಅಂತ್ಯಸಂಸ್ಕಾರ ನಡೆಸಿದರು.

ಸುಮಾರು 500 ಜನರು ಉಪಸ್ಥಿತರಿದ್ದರು
ಮೊಸಳೆ ಸಾವಿನಿಂದಾಗಿ ಸಂಪೂರ್ಣ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿತು. ಹೆಚ್ಚಿನ ಎಲ್ಲಾ ಮನೆಗಳಲ್ಲಿ ಅಡುಗೆ ಮಾಡದೆ ಶೋಕಾಚರಣೆ ಮಾಡಲಾಯಿತು. ಮೊಸಳೆಯ ಅಂತ್ಯಸಂಸ್ಕಾರದಲ್ಲಿ ಸುಮಾರು 500 ಮಂದಿ ಭಾಗಿಯಾಗಿದ್ದರು ಎಂದು ವರದಿಗಳು ಹೇಳಿವೆ.

ಮೊಸಳೆಯು ಅಪಾಯಕಾರಿಯಾಗಿರಲಿಲ್ಲ
ಮೊಸಳೆಗಳು ತುಂಬಾ ಅಪಾಯಕಾರಿ ಎಂದು ಪರಿಗಣಿಸಲ್ಪಡುವುದು. ಆದರೆ ಗಂಗಾರಾಮ್ ಮಾತ್ರ ತುಂಬಾ ಶಾಂತ ಮತ್ತು ತನ್ನದೇ ಆದ ಲೋಕದಲ್ಲಿ ಇರುತ್ತಿದ್ದ. ಗ್ರಾಮಸ್ಥರು ಈ ಮೊಸಳೆಗೆ ಅನ್ನ ಮತ್ತು ಬೇಳೆ ಸಾರು ನೀಡುತ್ತಿದ್ದರು. ಮೊಸಳೆಯು ಕೆರೆಯಲ್ಲಿ ಆಡುತ್ತಿದ್ದ ಮಕ್ಕಳಿಗೆ ಯಾವತ್ತೂ ಹಾನಿ ಮಾಡುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಮೊಸಳೆ ಮತ್ತು ಮೊಸಳೆ ಹಾಗೂ ಗ್ರಾಮಸ್ಥರ ಮಧ್ಯೆ ಒಂದು ಅವಿನಾಭಾವ ಸಂಬಂಧ ಬೆಳೆದಿತ್ತು.

ಮೊಸಳೆಗೆ ಮಂದಿರ ನಿರ್ಮಾಣ ಮಾಡಲು ಗ್ರಾಮಸ್ಥರು ನಿರ್ಧರಿಸಿರುವರು
ಗ್ರಾಮದ ಸರಪಂಚ ಹೇಳುವಂತೆ ಗ್ರಾಮಸ್ಥರು ಸತ್ತಿರುವ ಮೊಸಳೆಗೆ ಮಂದಿರವೊಂದನ್ನು ನಿರ್ಮಾಣ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಮೊಸಳೆಯನ್ನು ದಫನ ಮಾಡಿರುವಂತಹ ಕೆರೆಯ ದಡದಲ್ಲಿ ಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರು ಚಿಂತನೆ ನಡೆಸುತ್ತಿದ್ದಾರೆ.



Click it and Unblock the Notifications