Just In
- 5 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 6 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 7 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 8 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋಲು ಮತ್ತು ಗೆಲುವು: ನೀವು ತಿಳಿಯಲೇಬೇಕಾದ ಸಂಗತಿಗಳು
ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದರ ಹಿಂದೆ ಒಂದು ಸದಾ ಹಿಂಬಾಲಿಸುತ್ತಲೇ ಇರುತ್ತದೆ . ಕೆಲವು ದಿನ , ತಿಂಗಳು ಅಥವಾ ವರ್ಷಗಳ ಕಾಲ ಸೋಲನ್ನುಂಡ ಮನುಷ್ಯ ಹಲವು ವರ್ಷಗಳ ಕಾಲ ತನ್ನ ಜೀವನದಲ್ಲಿ ಗೆಲುವನ್ನೇ ಕಾಣುತ್ತಾ ಹೋಗುತ್ತಾನೆ . ಆದರೆ ಎರಡೂ ಸಮಯದಲ್ಲೂ ಹಿಗ್ಗದೇ ಕುಗ್ಗದೆ ಸಮಾನ ಅಂತರದಿಂದ ಬದುಕನ್ನು ಕಟ್ಟಿಕೊಳ್ಳುವ ಆಲೋಚನೆ ಮಾಡಬೇಕು . ಎಲ್ಲರೂ ಅಷ್ಟೇ ಬದುಕಿನಲ್ಲಿ ನನಗೆ ಬರೀ ಯಶಸ್ವಿ ದಿನಗಳನ್ನು ಮಾತ್ರ ಕೊಡು ದೇವರೇ ಎಂದು ಭಗವಂತನ ಬಳಿ ಪ್ರಾರ್ಥಿಸುತ್ತಾರೆ . ಆದರೆ ಯಾವಾಗಲೂ ಸುಖದ ಸುಪ್ಪತ್ತಿಗೆಯಲ್ಲೇ ತೇಲಾಡಿದರೆ ಕಷ್ಟದ ಮಹತ್ವ ಗೊತ್ತಾಗುವುದಾದರೂ ಹೇಗೆ ? ಎಲ್ಲರೂ ಅಷ್ಟೇ , ಕಷ್ಟ ಬಂದರೆ ಹೆದರಿಕೊಂಡು ಓಡುತ್ತಾರೆ .
ಇಲ್ಲವೇ
ಮನ
ನೊಂದು
ಆತ್ಮಹತ್ಯೆ
ಮಾಡಿಕೊಳ್ಳುತ್ತಾರೆ
.
ಅದೇ
ಸುಖ
ಬಂದರೆ
ಅದನ್ನು
ಪ್ರೀತಿ
ಆದರದಿಂದ
ಸ್ವಾಗತಿಸುತ್ತಾರೆ
ಮತ್ತು
ತಾವು
ಬಂದ
ದಾರಿಯನ್ನೇ
ಮರೆತು
ಸಂಬಂಧಗಳನ್ನು
ಲೆಕ್ಕಿಸದೆ
ತಮಗೆ
ಯಾರಿಂದ
ಏನು
ಎಂಬ
ಮನಸ್ಥಿತಿಗೆ
ಬಂದು
ತಮಗಿಷ್ಟ
ಬಂದಂತೆ
ಜೀವನ
ನಡೆಸಲು
ಶುರು
ಮಾಡುತ್ತಾರೆ
.
ಅದಕ್ಕೆ
ದೇವರು
ಬಡವ
ಶ್ರೀಮಂತ
ಎನ್ನದೆ
ಎಲ್ಲರ
ಬಾಳಿನಲ್ಲೂ
ಎರಡೂ
ತರನಾದ
ಸುಖ
ದುಃಖ
ಗಳ
ಮಿಶ್ರಣದ
ಹೂರಣವನ್ನು
ತುಂಬಿರುತ್ತಾನೆ
.
ಕೆಲವರು
ಯಾವುದಕ್ಕೂ
ಯೋಚಿಸದೆ
ಬದುಕಿನಲ್ಲಿ
ಬೇಕಾದ
ಹಾಗೆ
ಬದುಕಿ
ಕೊನೆಗೊಂದು
ದಿನ
ಎಲ್ಲವನ್ನೂ
ಕಳೆದುಕೊಂಡು
ನಿಜವಾದ
ಜೀವನದ
ಅರ್ಥ
ಕಂಡುಕೊಳ್ಳುತ್ತಾರೆ
.ಇನ್ನೂ
ಕೆಲವರು
ಮೊದಲಿನಿಂದಲೂ
ಬುದ್ಧಿವಂತಿಕೆಯಿಂದ
ಮತ್ತು
ಬಹಳ
ಎಚ್ಚರಿಕೆಯಿಂದ
ಜೀವನ
ನಡೆಸಿ
ಅಭಿವೃದ್ಧಿ
ಹೊಂದುತ್ತಾ
ಹೋಗುತ್ತಾರೆ
.
ಗೆಲುವು
ನಮ್ಮ
ಜೀವನದ
ಸಂಭ್ರಮವನ್ನು
ಆಚರಿಸಲು
ನೆರವಾದರೆ
ಸೋಲು
ನಮಗೆ
ಜೀವನದಲ್ಲಿ
ಒಳ್ಳೆಯ
ಪಾಠ
ಕಲಿಸುತ್ತದೆ
ಮತ್ತು
ನಮ್ಮ
ಅನುಭವವನ್ನು
ಹೆಚ್ಚು
ಮಾಡುತ್ತದೆ
.
ಹಾಗಾಗಿ
ನಾವು
ಇನ್ನಷ್ಟು
ಬುದ್ಧಿವಂತರಾಗಿ
ನಮ್ಮ
ಮುಂದಿನ
ಪೀಳಿಗೆಯವರಿಗೆ
ಮಾರ್ಗದರ್ಶಕರಾಗುತ್ತೇವೆ.
*ಏನೇ
ಬಂದರೂ
ನಿಮ್ಮ
ಮೇಲೆ
ನಿಮಗೆ
ನಂಬಿಕೆ
ಇರಲಿ
ಇದು
ಎಲ್ಲರಿಗೂ
ಅನ್ವಯಿಸುವ
ತತ್ವ
.
ಏಕೆಂದರೆ
ಮೊದಲೇ
ಹೇಳಿದಂತೆ
ಮನುಷ್ಯ
ಕಷ್ಟ
ಬಂದರೆ
ಕುಗ್ಗುತ್ತಾನೆ
.
ಸುಖ
ಬಂದರೆ
ಹಿಗ್ಗುತ್ತಾನೆ
.
ಆದರೆ
ನಾವು
ಇಲ್ಲಿ
ಒಂದನ್ನು
ಚೆನ್ನಾಗಿ
ಅರ್ಥ
ಮಾಡಿಕೊಳ್ಳಬೇಕು
.
ಕೈ
ಕೆಸರಾದರೆ
ಬಾಯಿ
ಮೊಸರು
ಎಂಬ
ಹಿರಿಯರ
ನಾಣ್ಣುಡಿಯಂತೆ
ಬಿಸಿಲಿನಲ್ಲಿ
ಬೆವರಿದರೆ
ಮಾತ್ರ
ತಣ್ಣನೆಯ
ಗಾಳಿಯ
ಅನುಭವ
ಚೆನ್ನಾಗಿ
ಆಗುವುದು
.
ಅದಕ್ಕೆ
ಎಂದಿಗೂ
ಅಷ್ಟೇ
.
ಕಷ್ಟ
ಎನ್ನುವುದು
ಚಲಿಸುವ
ಮೋಡಗಳಿದ್ದಂತೆ
.
ಸ್ವಲ್ಪ
ಗಾಳಿ
ಬೀಸಿದರೂ
ತನಗರಿವಿಲ್ಲದಂತೆ
ಮುಂದಕ್ಕೆ
ಸಾಗುತ್ತದೆ
.
ಹಾಗಿದ್ದ
ಮೇಲೆ
ನಮ್ಮ
ಜೀವನ
ಎಂಬ
ಈ
ಕಾಲ
ಚಕ್ರದಲ್ಲಿ
ಕೆಟ್ಟ
ದಿನಗಳು
ಉರುಳಿದ
ಮೇಲೆ
ಒಳ್ಳೆಯ
ದಿನ
ಬರಲೇ
ಬೇಕಲ್ಲವೇ?
Most Read: ಜೀವನದಲ್ಲಿ ಗುರಿ ಸಾಧಿಸಲು ಈ 4 ಅಸ್ತ್ರಗಳು ಸಾಕು!
*ಸತತವಾಗಿ
ಸೋಲನ್ನೇ
ನೋಡುತ್ತಿದ್ದರೆ
,
ಗೆಲುವಿಗಾಗಿ
ಹೋರಾಡುವುದನ್ನು
ಮೊದಲು
ರೂಡಿಸಿಕೊಳ್ಳಿ
ಮತ್ತು
ಅದಕ್ಕಾಗಿ
ನಿಮ್ಮ
ಜೀವನವನ್ನೇ
ತ್ಯಾಗ
ಮಾಡಿ
ಕೆಲವು
ದಿನ
ಅಥವಾ
ತಿಂಗಳು
ಅಥವಾ
ವರ್ಷಗಳ
ಸಮಯವೇ
ಹಾಗಿರುತ್ತದೆ
.
ಯಾವುದೇ
ಕೆಲಸಕ್ಕೆ
ಕೈ
ಹಾಕಿದರೂ
ಯಾವುದೂ
ಕೈ
ಗೂಡುವುದಿಲ್ಲ.
ಎಲ್ಲವೂ
ನಷ್ಟವಾಗುತ್ತಾ
ಹೋಗುತ್ತದೆ
.
ಒಂದರ
ಮೇಲೊಂದು
ಕಷ್ಟಗಳ
ಸರಮಾಲೆಯೇ
ಬಂದು
ಬಿಡುತ್ತದೆ
.
ದುಡ್ಡು
,
ಕಾಸು
,
ಆಸ್ತಿ
,
ಪಾಸ್ತಿ
,
ಮಾನ
,
ಮರ್ಯಾದೆ
ಎಲ್ಲವೂ
ಕೈ
ತಪ್ಪಿ
ಹೋಗುತ್ತದೆ
.
ಆಗ
ಎಲ್ಲರ
ತಲೆಯಲ್ಲಿ
ಮೊದಲು
ಬರುವುದೇ
ನಾನೇಕೆ
ಬದುಕಬೇಕು
?
ಎಂಬ
ಯೋಚನೆ
.
ಆದರೆ
ಇಲ್ಲಿಯೇ
ನಿಜವಾಗಿಯೂ
ನೀವು
ಎಡವುವುದು
.
ಏಕೆಂದರೆ
ಅದು
ದೇವರು
ಇರುವ
ಅಷ್ಟೂ
ಜನರಲ್ಲಿ
ನಿಮ್ಮನ್ನೇ
ಆಯ್ದುಕೊಂಡು
ಕಷ್ಟಗಳ
ಸರಮಾಲೆಯ
ಪರೀಕ್ಷೆಯನ್ನೇ
ಕೊಟ್ಟು
ನೀವು
ಇದರಲ್ಲಿ
ಬುದ್ಧಿವಂತಿಕೆಯಿಂದ
ಜಯಶೀಲರಾಗಲಿ
ಎಂದು
ಕಾಯುತ್ತಿರುತ್ತಾನೆ
.
ನೀವು
ಆ
ಸಮಯವನ್ನು
ಸರಿಯಾಗಿ
ಅರ್ಥ
ಮಾಡಿಕೊಂಡು
ಸ್ವಲ್ಪ
ತಲೆ
ಓಡಿಸಿದರೆ
ಸಾಕು
.
ಖಂಡಿತ
ನಿಮಗೆ
ಬಂದಿರುವ
ಕಷ್ಟ
ಮಂಜಿನಂತೆ
ಕರಗಿ
ಹೋಗುತ್ತದೆ
ಮತ್ತು
ಜೀವನ
ನಿಮ್ಮನ್ನು
ಮೊದಲಿಗಿಂತ
ಚೆನ್ನಾಗಿ
ಬದುಕುವಂತೆ
ಮಾಡುತ್ತದೆ
.
ಅದಕ್ಕೆ
ಶ್ರೀ
ಕೃಷ್ಣನು
ಭಗವದ್ಗೀತೆಯಲ್ಲಿ
"
ನಿಮ್ಮ
ತ್ಯಾಗ
ದೇವರಿಗೆ
ಪ್ರಿಯ
.
ಆಗ
ದೇವರು
ನಿಮ್ಮ
ಇಷ್ಟಗಳನ್ನು
ಪೂರೈಸುತ್ತಾನೆ
ಮತ್ತು
ನಿಮಗೆ
ಒಳ್ಳೆಯ
ಜೀವನ
ಲಭಿಸುತ್ತದೆ
"
ಎಂದು
ಹೇಳಿದ್ದಾನೆ
.
*ಜೀವನದಲ್ಲಿನ
ಸೋಲುಗಳು
ನಿಮ್ಮನ್ನು
ಇನ್ನಷ್ಟು
ಜೀವನದ
ಸತ್ಯಗಳನ್ನು
ತಿಳಿದುಕೊಳ್ಳಲು
ಪ್ರೇರೇಪಿಸುತ್ತವೆ
ಅಲೆಕ್ಸಾಂಡರ್
ಗ್ರಹಾಂ
ಬೆಲ್
ರವರ
ಹೇಳಿಕೆಯಂತೆ
ನಮ್ಮ
ಜೀವನದಲ್ಲಿ
ಒಂದು
ಬಾಗಿಲು
ಮುಚ್ಚಿಕೊಂಡರೆ
ಮತ್ತೊಂದು
ನಮಗೇ
ಗೊತ್ತಿಲ್ಲದಂತೆ
ನಮ್ಮ
ಹಿಂದೆಯೇ
ತೆರೆದುಕೊಂಡಿರುತ್ತದೆ
.
ನಾವು
ಸ್ವಲ್ಪ
ಹಿಂದೆ
ತಿರುಗಿ
ನೋಡಬೇಕಷ್ಟೆ
.
ಆದರೆ
ನಾವು
ಆ
ಕ್ಷಣದ
ಗಾಬರಿಯಿಂದ
ನಮ್ಮ
ಜೀವನದಲ್ಲಿ
ಮುಚ್ಚಿ
ಹೋದ
ಬಾಗಿಲನ್ನೇ
ನೋಡುತ್ತಾ
,
ಅದೇ
ಮತ್ತೊಮ್ಮೆ
ನಮಗಾಗಿ
ತೆರೆಯುತ್ತದೆ
ಎಂಬ
ಆಸೆಯಲ್ಲಿ
ಅದೇ
ನೆನಪಿನಲ್ಲಿ
ಕೊರಗುತ್ತಾ
,
ಬಾಕಿ
ಇರುವ
ಅಮೂಲ್ಯವಾದ
ಸಮಯವನ್ನು
ಮತ್ತು
ನಮಗಾಗಿ
ಕಾದಿರುವ
ಮುಂದಿನ
ಒಳ್ಳೆಯ
ಜೀವನವನ್ನು
ನಮ್ಮ
ಕೈಯ್ಯಾರೆ
ನಾವೇ
ಹಾಳು
ಮಾಡಿಕೊಂಡು
ಬಿಡುತ್ತೇವೆ
.
ಆದ್ದರಿಂದ
ಕಷ್ಟಗಳು
ಅಥವಾ
ಸೋಲುಗಳು
ಎದುರಾದಾಗ
ಆದಷ್ಟು
ತಾಳ್ಮೆಯಿಂದ
ಇರಬೇಕು
ಮತ್ತು
ಇದು
ನಮಗಾಗಿಯೇ
ಬಂದಿರುವ
ನಮ್ಮ
ಭವಿಷ್ಯದ
ಜೀವನಕ್ಕೆ
ನಾಂದಿ
ಎಂದು
ತಿಳಿದುಕೊಂಡು
ಜೀವನ
ನಡೆಸಬೇಕು
.
*ಸದಾ
ಆಶಾವಾದಿಯಾಗಿರಿ
,
ಗೆಲುವು
ನಿಮ್ಮದಾಗುತ್ತದೆ
ನಿಮಗೆ
ಎದುರಾದ
ಅತ್ಯಂತ
ಕೆಟ್ಟ
ದಿನಗಳೆಂದು
ನೀವು
ಭಾವಿಸುವ
ದಿನಗಳು
ನಿಮ್ಮಿಂದ
ಏನನ್ನೋ
ನಿರೀಕ್ಷಿಸುತ್ತಾ
ಇರುವುದಂತೂ
ಸತ್ಯ
.
ಅದಕ್ಕೆ
ಎಂದಿಗೂ
ಅಷ್ಟೇ
ನಿಮಗೆ
ಸಿಗಬೇಕೆಂದಿರುವ
ವಸ್ತು
ಅಗಲೀ
ಅಥವಾ
ದುಡ್ಡು
,
ಕಾಸು
,
ಆಸ್ತಿ
,
ಪಾಸ್ತಿ
ಅಥವಾ
ಇನ್ನೇನೇ
ಆಗಲಿ
ನಿಮಗೆ
ಸಿಗಲೇ
ಬೇಕೆಂದಿದ್ದರೆ
ಅದನ್ನು
ಯಾರೂ
ತಪ್ಪಿಸುವುದಕ್ಕೆ
ಆಗುವುದಿಲ್ಲ
.
ಒಂದಲ್ಲಾ
ಒಂದು
ಸಮಯದಲ್ಲಿ
,
ಒಂದಲ್ಲಾ
ಒಂದು
ರೀತಿಯಲ್ಲಿ
ಅದು
ನಿಮಗೆ
ಸಿಕ್ಕೇ
ಸಿಗುತ್ತದೆ
.
ಆದ್ದರಿಂದ
ಆದಷ್ಟು
ನೀವು
ಒಬ್ಬರಿಗೆ
ಕೆಟ್ಟದ್ದನ್ನು
ಬಯಸದೆ
ಯಾರಿಗೂ
ಕೇಡನ್ನು
ಮಾಡದೇ
ಎದೆಗುಂದದೆ
ಆತ್ಮವಿಶ್ವಾಸದಿಂದ
ಆಶಾವಾದಿಯಾಗಿದ್ದರೆ
ನಿಮ್ಮ
ಬದುಕು
ನಿಮ್ಮ
ಚಿತ್ರಣವನ್ನೇ
ಒಂದು
ಒಳ್ಳೆಯ
ರೀತಿಯಲ್ಲಿ
ಬದಲಾಯಿಸಿ
ಬಿಡುತ್ತದೆ
.
*ನಿಮ್ಮ
ಬುದ್ಧಿ
ನಿಮ್ಮ
ಸ್ತಿಮಿತದಲ್ಲಿರಲಿ
ಹಲವಾರು
ಜನರಿಗೆ
ತಮಗೆ
ಕಷ್ಟ
ಬಂದ
ತಕ್ಷಣ
ಅಥವಾ
ಮುಂದೆ
ಕಷ್ಟ
ಬರುತ್ತದೆ
ಎಂದು
ಗೊತ್ತಾದರೆ
ಸಾಕು
,
ಅದರಿಂದ
ಪಾರಾಗುವ
ಆಲೋಚನೆ
ಮಾಡದೆ
ಆತುರ
ಪಟ್ಟು
ಸಾವಿನ
ದಾರಿ
ಹುಡುಕಿ
ಕೊಂಡು
ಬಿಡುತ್ತಾರೆ
.
ಇದಕ್ಕೆ
ಕಾರಣ
ಆ
ಸಮಯದಲ್ಲಿ
ನಿಮ್ಮ
ಬುದ್ಧಿ
ನಿಮಗೆ
ಕೈ
ಕೊಟ್ಟಿರುತ್ತದೆ
.
ಮನಸ್ಸಿಗೆ
ಬರೀ
ಇಲ್ಲ
ಸಲ್ಲದ
ಯೋಚನೆಗಳೇ
ಬರುತ್ತಿರುತ್ತವೆ
.
ಅಂತಹ
ಕ್ಷಣದಲ್ಲಿ
ಯಾವತ್ತೂ
ಅಷ್ಟೇ
ನಿಮ್ಮನ್ನೇ
ನಂಬಿಕೊಂಡಿರುವ
ನಿಮ್ಮ
ತಂದೆ
ತಾಯಿಯರಾಗಲೀ
,
ಗಂಡ
ಹೆಂಡತಿಯಾಗಲೀ
ಅಥವಾ
ನಿಮ್ಮ
ಅವಶ್ಯಕತೆ
ಇರುವ
ಇನ್ನಾವುದೇ
ಸಂಬಂಧ
ಆಗಲೀ
,
ಅವರುಗಳ
ಬಗ್ಗೆ
ಒಂದು
ಬಾರಿ
ಯೋಚನೆ
ಮಾಡಿ
ನೋಡಿ
.
ಖಂಡಿತ
ನಿಮ್ಮ
ಮನಸ್ಸಿನಲ್ಲಿ
ಎಲ್ಲೋ
ಒಂದು
ಮೂಲೆಯಲ್ಲಿ
ಮುದುಡಿ
ಕುಳಿತಿರುವ
ಕರುಣೆ
,
ಕಾಳಜಿ
ಎಂಬ
ಅಂಶಗಳು
ತಾವಾಗಿಯೇ
ಚಿಗುರೊಡೆಯುತ್ತವೆ
ಮತ್ತು
ನಿಮ್ಮ
ಹಿಂದಿನ
ಸುಖದ
ಕ್ಷಣಗಳನ್ನು
ಮತ್ತು
ಅನುಭವವನ್ನು
ನೆನಪಿಗೆ
ತಂದು
ಮುಂದೆಯೂ
ಇಂತಹದೇ
ಕ್ಷಣಗಳು
ನಮಗಾಗಿ
ಕಾದಿರಬಹುದು
ಎಂಬ
ಹೊಸ
ಭರವಸೆಯನ್ನು
ಹುಟ್ಟು
ಹಾಕುತ್ತವೆ.
*ನೀವು
ಇಷ್ಟು
ದಿನ
ಶ್ರಮಿಸಿದ
ಅನುಭವವೇ
ನಿಮಗೆ
ದಾರಿ
ದೀಪ:
ಒಳ್ಳೆಯ
ದಿನಗಳು
ಮನುಷ್ಯನಿಗೆ
ಸುಖವನ್ನೇ
ಕೊಟ್ಟು
ಅವನ
ಸೋಮಾರಿತನವನ್ನು
ಹೆಚ್ಚು
ಮಾಡಿದರೆ
,
ಕೆಟ್ಟ
ಮತ್ತು
ಸೋಲಿನ
ದಿನಗಳು
ಅವನ
ಬುದ್ಧಿವಂತಿಕೆಯನ್ನು
ಹೆಚ್ಚು
ಮಾಡಿ
ಅವನನ್ನು
ತನ್ನ
ಸುತ್ತಮುತ್ತಲಿನ
ಸಮಾಜದ
ಮಧ್ಯದಲ್ಲಿ
ಒಬ್ಬ
ಶ್ರಮಜೀವಿಯನ್ನಾಗಿ
ಮಾಡುತ್ತದೆ
.
ಅವನು
ಅನೇಕ
ರೀತಿಯ
ಪಾಠಗಳನ್ನು
ಕಲಿಯುತ್ತಾನೆ
.
ಅನುಭವವನ್ನು
ರೂಢಿ
ಮಾಡಿಕೊಳ್ಳುತ್ತಾನೆ
.
ಮುಂದಿನ
ಜೀವನದ
ಬಗ್ಗೆ
ತನ್ನದೇ
ಆದ
ಒಂದು
ಭವಿಷ್ಯದ
ದೃಷ್ಟಿಕೋನವನ್ನು
ಬೆಳೆಸಿಕೊಳ್ಳುತ್ತಾನೆ
.
ಏಕೆಂದರೆ
ಅವನಿಗೆ
ಎದುರಾದ
ಎಲ್ಲಾ
ಸಿಹಿ
ಕಹಿ
ಅನುಭವಗಳೇ
ಅವನಿಗೆ
ಜ್ಞಾನವನ್ನು
ಸಂಪಾದನೆ
ಮಾಡಿಕೊಳ್ಳುವ
ಅವಕಾಶ
ಒದಗಿಸಿರುತ್ತವೆ
ಮತ್ತು
ಜೀವನವನ್ನು
ಚೆನ್ನಾಗಿ
ಅರ್ಥ
ಮಾಡಿಕೊಳ್ಳುವ
ಶಕ್ತಿಯನ್ನು
ತುಂಬುತ್ತದೆ.