Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಸೋಲು ಮತ್ತು ಗೆಲುವು: ನೀವು ತಿಳಿಯಲೇಬೇಕಾದ ಸಂಗತಿಗಳು
ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದರ ಹಿಂದೆ ಒಂದು ಸದಾ ಹಿಂಬಾಲಿಸುತ್ತಲೇ ಇರುತ್ತದೆ . ಕೆಲವು ದಿನ , ತಿಂಗಳು ಅಥವಾ ವರ್ಷಗಳ ಕಾಲ ಸೋಲನ್ನುಂಡ ಮನುಷ್ಯ ಹಲವು ವರ್ಷಗಳ ಕಾಲ ತನ್ನ ಜೀವನದಲ್ಲಿ ಗೆಲುವನ್ನೇ ಕಾಣುತ್ತಾ ಹೋಗುತ್ತಾನೆ . ಆದರೆ ಎರಡೂ ಸಮಯದಲ್ಲೂ ಹಿಗ್ಗದೇ ಕುಗ್ಗದೆ ಸಮಾನ ಅಂತರದಿಂದ ಬದುಕನ್ನು ಕಟ್ಟಿಕೊಳ್ಳುವ ಆಲೋಚನೆ ಮಾಡಬೇಕು . ಎಲ್ಲರೂ ಅಷ್ಟೇ ಬದುಕಿನಲ್ಲಿ ನನಗೆ ಬರೀ ಯಶಸ್ವಿ ದಿನಗಳನ್ನು ಮಾತ್ರ ಕೊಡು ದೇವರೇ ಎಂದು ಭಗವಂತನ ಬಳಿ ಪ್ರಾರ್ಥಿಸುತ್ತಾರೆ . ಆದರೆ ಯಾವಾಗಲೂ ಸುಖದ ಸುಪ್ಪತ್ತಿಗೆಯಲ್ಲೇ ತೇಲಾಡಿದರೆ ಕಷ್ಟದ ಮಹತ್ವ ಗೊತ್ತಾಗುವುದಾದರೂ ಹೇಗೆ ? ಎಲ್ಲರೂ ಅಷ್ಟೇ , ಕಷ್ಟ ಬಂದರೆ ಹೆದರಿಕೊಂಡು ಓಡುತ್ತಾರೆ .
ಇಲ್ಲವೇ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ . ಅದೇ ಸುಖ ಬಂದರೆ ಅದನ್ನು ಪ್ರೀತಿ ಆದರದಿಂದ ಸ್ವಾಗತಿಸುತ್ತಾರೆ ಮತ್ತು ತಾವು ಬಂದ ದಾರಿಯನ್ನೇ ಮರೆತು ಸಂಬಂಧಗಳನ್ನು ಲೆಕ್ಕಿಸದೆ ತಮಗೆ ಯಾರಿಂದ ಏನು ಎಂಬ ಮನಸ್ಥಿತಿಗೆ ಬಂದು ತಮಗಿಷ್ಟ ಬಂದಂತೆ ಜೀವನ ನಡೆಸಲು ಶುರು ಮಾಡುತ್ತಾರೆ . ಅದಕ್ಕೆ ದೇವರು ಬಡವ ಶ್ರೀಮಂತ ಎನ್ನದೆ ಎಲ್ಲರ ಬಾಳಿನಲ್ಲೂ ಎರಡೂ ತರನಾದ ಸುಖ ದುಃಖ ಗಳ ಮಿಶ್ರಣದ ಹೂರಣವನ್ನು ತುಂಬಿರುತ್ತಾನೆ . ಕೆಲವರು ಯಾವುದಕ್ಕೂ ಯೋಚಿಸದೆ ಬದುಕಿನಲ್ಲಿ ಬೇಕಾದ ಹಾಗೆ ಬದುಕಿ ಕೊನೆಗೊಂದು ದಿನ ಎಲ್ಲವನ್ನೂ ಕಳೆದುಕೊಂಡು ನಿಜವಾದ ಜೀವನದ ಅರ್ಥ ಕಂಡುಕೊಳ್ಳುತ್ತಾರೆ .ಇನ್ನೂ ಕೆಲವರು ಮೊದಲಿನಿಂದಲೂ ಬುದ್ಧಿವಂತಿಕೆಯಿಂದ ಮತ್ತು ಬಹಳ ಎಚ್ಚರಿಕೆಯಿಂದ ಜೀವನ ನಡೆಸಿ ಅಭಿವೃದ್ಧಿ ಹೊಂದುತ್ತಾ ಹೋಗುತ್ತಾರೆ . ಗೆಲುವು ನಮ್ಮ ಜೀವನದ ಸಂಭ್ರಮವನ್ನು ಆಚರಿಸಲು ನೆರವಾದರೆ ಸೋಲು ನಮಗೆ ಜೀವನದಲ್ಲಿ ಒಳ್ಳೆಯ ಪಾಠ ಕಲಿಸುತ್ತದೆ ಮತ್ತು ನಮ್ಮ ಅನುಭವವನ್ನು ಹೆಚ್ಚು ಮಾಡುತ್ತದೆ . ಹಾಗಾಗಿ ನಾವು ಇನ್ನಷ್ಟು ಬುದ್ಧಿವಂತರಾಗಿ ನಮ್ಮ ಮುಂದಿನ ಪೀಳಿಗೆಯವರಿಗೆ ಮಾರ್ಗದರ್ಶಕರಾಗುತ್ತೇವೆ.

*ಏನೇ ಬಂದರೂ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ
ಇದು ಎಲ್ಲರಿಗೂ ಅನ್ವಯಿಸುವ ತತ್ವ . ಏಕೆಂದರೆ ಮೊದಲೇ ಹೇಳಿದಂತೆ ಮನುಷ್ಯ ಕಷ್ಟ ಬಂದರೆ ಕುಗ್ಗುತ್ತಾನೆ . ಸುಖ ಬಂದರೆ ಹಿಗ್ಗುತ್ತಾನೆ . ಆದರೆ ನಾವು ಇಲ್ಲಿ ಒಂದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು . ಕೈ ಕೆಸರಾದರೆ ಬಾಯಿ ಮೊಸರು ಎಂಬ ಹಿರಿಯರ ನಾಣ್ಣುಡಿಯಂತೆ ಬಿಸಿಲಿನಲ್ಲಿ ಬೆವರಿದರೆ ಮಾತ್ರ ತಣ್ಣನೆಯ ಗಾಳಿಯ ಅನುಭವ ಚೆನ್ನಾಗಿ ಆಗುವುದು . ಅದಕ್ಕೆ ಎಂದಿಗೂ ಅಷ್ಟೇ . ಕಷ್ಟ ಎನ್ನುವುದು ಚಲಿಸುವ ಮೋಡಗಳಿದ್ದಂತೆ . ಸ್ವಲ್ಪ ಗಾಳಿ ಬೀಸಿದರೂ ತನಗರಿವಿಲ್ಲದಂತೆ ಮುಂದಕ್ಕೆ ಸಾಗುತ್ತದೆ . ಹಾಗಿದ್ದ ಮೇಲೆ ನಮ್ಮ ಜೀವನ ಎಂಬ ಈ ಕಾಲ ಚಕ್ರದಲ್ಲಿ ಕೆಟ್ಟ ದಿನಗಳು ಉರುಳಿದ ಮೇಲೆ ಒಳ್ಳೆಯ ದಿನ ಬರಲೇ ಬೇಕಲ್ಲವೇ?
*ಸತತವಾಗಿ ಸೋಲನ್ನೇ ನೋಡುತ್ತಿದ್ದರೆ , ಗೆಲುವಿಗಾಗಿ ಹೋರಾಡುವುದನ್ನು ಮೊದಲು ರೂಡಿಸಿಕೊಳ್ಳಿ ಮತ್ತು ಅದಕ್ಕಾಗಿ ನಿಮ್ಮ ಜೀವನವನ್ನೇ ತ್ಯಾಗ ಮಾಡಿ
ಕೆಲವು ದಿನ ಅಥವಾ ತಿಂಗಳು ಅಥವಾ ವರ್ಷಗಳ ಸಮಯವೇ ಹಾಗಿರುತ್ತದೆ . ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಾವುದೂ ಕೈ ಗೂಡುವುದಿಲ್ಲ. ಎಲ್ಲವೂ ನಷ್ಟವಾಗುತ್ತಾ ಹೋಗುತ್ತದೆ . ಒಂದರ ಮೇಲೊಂದು ಕಷ್ಟಗಳ ಸರಮಾಲೆಯೇ ಬಂದು ಬಿಡುತ್ತದೆ . ದುಡ್ಡು , ಕಾಸು , ಆಸ್ತಿ , ಪಾಸ್ತಿ , ಮಾನ , ಮರ್ಯಾದೆ ಎಲ್ಲವೂ ಕೈ ತಪ್ಪಿ ಹೋಗುತ್ತದೆ . ಆಗ ಎಲ್ಲರ ತಲೆಯಲ್ಲಿ ಮೊದಲು ಬರುವುದೇ ನಾನೇಕೆ ಬದುಕಬೇಕು ? ಎಂಬ ಯೋಚನೆ . ಆದರೆ ಇಲ್ಲಿಯೇ ನಿಜವಾಗಿಯೂ ನೀವು ಎಡವುವುದು . ಏಕೆಂದರೆ ಅದು ದೇವರು ಇರುವ ಅಷ್ಟೂ ಜನರಲ್ಲಿ ನಿಮ್ಮನ್ನೇ ಆಯ್ದುಕೊಂಡು ಕಷ್ಟಗಳ ಸರಮಾಲೆಯ ಪರೀಕ್ಷೆಯನ್ನೇ ಕೊಟ್ಟು ನೀವು ಇದರಲ್ಲಿ ಬುದ್ಧಿವಂತಿಕೆಯಿಂದ ಜಯಶೀಲರಾಗಲಿ ಎಂದು ಕಾಯುತ್ತಿರುತ್ತಾನೆ . ನೀವು ಆ ಸಮಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸ್ವಲ್ಪ ತಲೆ ಓಡಿಸಿದರೆ ಸಾಕು . ಖಂಡಿತ ನಿಮಗೆ ಬಂದಿರುವ ಕಷ್ಟ ಮಂಜಿನಂತೆ ಕರಗಿ ಹೋಗುತ್ತದೆ ಮತ್ತು ಜೀವನ ನಿಮ್ಮನ್ನು ಮೊದಲಿಗಿಂತ ಚೆನ್ನಾಗಿ ಬದುಕುವಂತೆ ಮಾಡುತ್ತದೆ . ಅದಕ್ಕೆ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ " ನಿಮ್ಮ ತ್ಯಾಗ ದೇವರಿಗೆ ಪ್ರಿಯ . ಆಗ ದೇವರು ನಿಮ್ಮ ಇಷ್ಟಗಳನ್ನು ಪೂರೈಸುತ್ತಾನೆ ಮತ್ತು ನಿಮಗೆ ಒಳ್ಳೆಯ ಜೀವನ ಲಭಿಸುತ್ತದೆ " ಎಂದು ಹೇಳಿದ್ದಾನೆ .
*ಜೀವನದಲ್ಲಿನ ಸೋಲುಗಳು ನಿಮ್ಮನ್ನು ಇನ್ನಷ್ಟು ಜೀವನದ ಸತ್ಯಗಳನ್ನು ತಿಳಿದುಕೊಳ್ಳಲು ಪ್ರೇರೇಪಿಸುತ್ತವೆ
ಅಲೆಕ್ಸಾಂಡರ್ ಗ್ರಹಾಂ ಬೆಲ್ ರವರ ಹೇಳಿಕೆಯಂತೆ ನಮ್ಮ ಜೀವನದಲ್ಲಿ ಒಂದು ಬಾಗಿಲು ಮುಚ್ಚಿಕೊಂಡರೆ ಮತ್ತೊಂದು ನಮಗೇ ಗೊತ್ತಿಲ್ಲದಂತೆ ನಮ್ಮ ಹಿಂದೆಯೇ ತೆರೆದುಕೊಂಡಿರುತ್ತದೆ . ನಾವು ಸ್ವಲ್ಪ ಹಿಂದೆ ತಿರುಗಿ ನೋಡಬೇಕಷ್ಟೆ . ಆದರೆ ನಾವು ಆ ಕ್ಷಣದ ಗಾಬರಿಯಿಂದ ನಮ್ಮ ಜೀವನದಲ್ಲಿ ಮುಚ್ಚಿ ಹೋದ ಬಾಗಿಲನ್ನೇ ನೋಡುತ್ತಾ , ಅದೇ ಮತ್ತೊಮ್ಮೆ ನಮಗಾಗಿ ತೆರೆಯುತ್ತದೆ ಎಂಬ ಆಸೆಯಲ್ಲಿ ಅದೇ ನೆನಪಿನಲ್ಲಿ ಕೊರಗುತ್ತಾ , ಬಾಕಿ ಇರುವ ಅಮೂಲ್ಯವಾದ ಸಮಯವನ್ನು ಮತ್ತು ನಮಗಾಗಿ ಕಾದಿರುವ ಮುಂದಿನ ಒಳ್ಳೆಯ ಜೀವನವನ್ನು ನಮ್ಮ ಕೈಯ್ಯಾರೆ ನಾವೇ ಹಾಳು ಮಾಡಿಕೊಂಡು ಬಿಡುತ್ತೇವೆ . ಆದ್ದರಿಂದ ಕಷ್ಟಗಳು ಅಥವಾ ಸೋಲುಗಳು ಎದುರಾದಾಗ ಆದಷ್ಟು ತಾಳ್ಮೆಯಿಂದ ಇರಬೇಕು ಮತ್ತು ಇದು ನಮಗಾಗಿಯೇ ಬಂದಿರುವ ನಮ್ಮ ಭವಿಷ್ಯದ ಜೀವನಕ್ಕೆ ನಾಂದಿ ಎಂದು ತಿಳಿದುಕೊಂಡು ಜೀವನ ನಡೆಸಬೇಕು .
*ಸದಾ ಆಶಾವಾದಿಯಾಗಿರಿ , ಗೆಲುವು ನಿಮ್ಮದಾಗುತ್ತದೆ
ನಿಮಗೆ ಎದುರಾದ ಅತ್ಯಂತ ಕೆಟ್ಟ ದಿನಗಳೆಂದು ನೀವು ಭಾವಿಸುವ ದಿನಗಳು ನಿಮ್ಮಿಂದ ಏನನ್ನೋ ನಿರೀಕ್ಷಿಸುತ್ತಾ ಇರುವುದಂತೂ ಸತ್ಯ . ಅದಕ್ಕೆ ಎಂದಿಗೂ ಅಷ್ಟೇ ನಿಮಗೆ ಸಿಗಬೇಕೆಂದಿರುವ ವಸ್ತು ಅಗಲೀ ಅಥವಾ ದುಡ್ಡು , ಕಾಸು , ಆಸ್ತಿ , ಪಾಸ್ತಿ ಅಥವಾ ಇನ್ನೇನೇ ಆಗಲಿ ನಿಮಗೆ ಸಿಗಲೇ ಬೇಕೆಂದಿದ್ದರೆ ಅದನ್ನು ಯಾರೂ ತಪ್ಪಿಸುವುದಕ್ಕೆ ಆಗುವುದಿಲ್ಲ . ಒಂದಲ್ಲಾ ಒಂದು ಸಮಯದಲ್ಲಿ , ಒಂದಲ್ಲಾ ಒಂದು ರೀತಿಯಲ್ಲಿ ಅದು ನಿಮಗೆ ಸಿಕ್ಕೇ ಸಿಗುತ್ತದೆ . ಆದ್ದರಿಂದ ಆದಷ್ಟು ನೀವು ಒಬ್ಬರಿಗೆ ಕೆಟ್ಟದ್ದನ್ನು ಬಯಸದೆ ಯಾರಿಗೂ ಕೇಡನ್ನು ಮಾಡದೇ ಎದೆಗುಂದದೆ ಆತ್ಮವಿಶ್ವಾಸದಿಂದ ಆಶಾವಾದಿಯಾಗಿದ್ದರೆ ನಿಮ್ಮ ಬದುಕು ನಿಮ್ಮ ಚಿತ್ರಣವನ್ನೇ ಒಂದು ಒಳ್ಳೆಯ ರೀತಿಯಲ್ಲಿ ಬದಲಾಯಿಸಿ ಬಿಡುತ್ತದೆ .
*ನಿಮ್ಮ ಬುದ್ಧಿ ನಿಮ್ಮ ಸ್ತಿಮಿತದಲ್ಲಿರಲಿ
ಹಲವಾರು ಜನರಿಗೆ ತಮಗೆ ಕಷ್ಟ ಬಂದ ತಕ್ಷಣ ಅಥವಾ ಮುಂದೆ ಕಷ್ಟ ಬರುತ್ತದೆ ಎಂದು ಗೊತ್ತಾದರೆ ಸಾಕು , ಅದರಿಂದ ಪಾರಾಗುವ ಆಲೋಚನೆ ಮಾಡದೆ ಆತುರ ಪಟ್ಟು ಸಾವಿನ ದಾರಿ ಹುಡುಕಿ ಕೊಂಡು ಬಿಡುತ್ತಾರೆ . ಇದಕ್ಕೆ ಕಾರಣ ಆ ಸಮಯದಲ್ಲಿ ನಿಮ್ಮ ಬುದ್ಧಿ ನಿಮಗೆ ಕೈ ಕೊಟ್ಟಿರುತ್ತದೆ . ಮನಸ್ಸಿಗೆ ಬರೀ ಇಲ್ಲ ಸಲ್ಲದ ಯೋಚನೆಗಳೇ ಬರುತ್ತಿರುತ್ತವೆ . ಅಂತಹ ಕ್ಷಣದಲ್ಲಿ ಯಾವತ್ತೂ ಅಷ್ಟೇ ನಿಮ್ಮನ್ನೇ ನಂಬಿಕೊಂಡಿರುವ ನಿಮ್ಮ ತಂದೆ ತಾಯಿಯರಾಗಲೀ , ಗಂಡ ಹೆಂಡತಿಯಾಗಲೀ ಅಥವಾ ನಿಮ್ಮ ಅವಶ್ಯಕತೆ ಇರುವ ಇನ್ನಾವುದೇ ಸಂಬಂಧ ಆಗಲೀ , ಅವರುಗಳ ಬಗ್ಗೆ ಒಂದು ಬಾರಿ ಯೋಚನೆ ಮಾಡಿ ನೋಡಿ . ಖಂಡಿತ ನಿಮ್ಮ ಮನಸ್ಸಿನಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಮುದುಡಿ ಕುಳಿತಿರುವ ಕರುಣೆ , ಕಾಳಜಿ ಎಂಬ ಅಂಶಗಳು ತಾವಾಗಿಯೇ ಚಿಗುರೊಡೆಯುತ್ತವೆ ಮತ್ತು ನಿಮ್ಮ ಹಿಂದಿನ ಸುಖದ ಕ್ಷಣಗಳನ್ನು ಮತ್ತು ಅನುಭವವನ್ನು ನೆನಪಿಗೆ ತಂದು ಮುಂದೆಯೂ ಇಂತಹದೇ ಕ್ಷಣಗಳು ನಮಗಾಗಿ ಕಾದಿರಬಹುದು ಎಂಬ ಹೊಸ ಭರವಸೆಯನ್ನು ಹುಟ್ಟು ಹಾಕುತ್ತವೆ.
*ನೀವು ಇಷ್ಟು ದಿನ ಶ್ರಮಿಸಿದ ಅನುಭವವೇ ನಿಮಗೆ ದಾರಿ ದೀಪ:
ಒಳ್ಳೆಯ ದಿನಗಳು ಮನುಷ್ಯನಿಗೆ ಸುಖವನ್ನೇ ಕೊಟ್ಟು ಅವನ ಸೋಮಾರಿತನವನ್ನು ಹೆಚ್ಚು ಮಾಡಿದರೆ , ಕೆಟ್ಟ ಮತ್ತು ಸೋಲಿನ ದಿನಗಳು ಅವನ ಬುದ್ಧಿವಂತಿಕೆಯನ್ನು ಹೆಚ್ಚು ಮಾಡಿ ಅವನನ್ನು ತನ್ನ ಸುತ್ತಮುತ್ತಲಿನ ಸಮಾಜದ ಮಧ್ಯದಲ್ಲಿ ಒಬ್ಬ ಶ್ರಮಜೀವಿಯನ್ನಾಗಿ ಮಾಡುತ್ತದೆ . ಅವನು ಅನೇಕ ರೀತಿಯ ಪಾಠಗಳನ್ನು ಕಲಿಯುತ್ತಾನೆ . ಅನುಭವವನ್ನು ರೂಢಿ ಮಾಡಿಕೊಳ್ಳುತ್ತಾನೆ . ಮುಂದಿನ ಜೀವನದ ಬಗ್ಗೆ ತನ್ನದೇ ಆದ ಒಂದು ಭವಿಷ್ಯದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಾನೆ . ಏಕೆಂದರೆ ಅವನಿಗೆ ಎದುರಾದ ಎಲ್ಲಾ ಸಿಹಿ ಕಹಿ ಅನುಭವಗಳೇ ಅವನಿಗೆ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳುವ ಅವಕಾಶ ಒದಗಿಸಿರುತ್ತವೆ ಮತ್ತು ಜೀವನವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ತುಂಬುತ್ತದೆ.



Click it and Unblock the Notifications













