Just In
Don't Miss
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- Movies ಪುಟ್ಟಕ್ಕನ ಮನೆಗೆ ಕುಡಿದು ಬಂದ ಮುರಳಿಗೆ ಶಾಕ್; ಅಮ್ಮ ಅರೆಸ್ಟ್.. ಸಹನಾ ಮೇಲೆ ಗೂಬೆ ಕೂರಿಸಿದ ಪತಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಫೋನ್ ಖರೀದಿಗೆ ಅಂಡಾಣು ಮಾರಲು ಮುಂದಾದಳು! ಕೊನೆಗೆ ಏನಾಯಿತು ಗೊತ್ತೇ?
ಐ ಫೋನ್ ಖರೀದಿದಾಗಿ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಿರುವಂತಹ ಸುದ್ದಿ ನೀವು ಓದಿರಬಹುದು. ಇಂತಹ ಹಲವಾರು ಚಿತ್ರ ವಿಚಿತ್ರ ಜನರು ನಮ್ಮ ಸುತ್ತಲೂ ಇರುತ್ತಾರೆ. ಇವರಿಗೆ ತಮ್ಮ ಜೀವನಕ್ಕಿಂತಹ ಬಾಹ್ಯವಾಗಿ ಕಾಣಿಸುವಂತಹ ಆಕರ್ಷಣೆ, ಐಷಾರಾಮ ತುಂಬಾ ಇಷ್ಟವಾಗುವುದು. ಇದಕ್ಕಾಗಿ ಅವರು ದರೋಡೆ, ಕೊಲೆ, ಸುಳಿಗೆ ಮುಂತಾದ ಯಾವುದೇ ಕೃತ್ಯಕ್ಕೂ ಮುಂದಾಗುವರು. ಇಂತಹವರು ಕೊನೆಗೆ ಬೀಳುವುದು ಹಳ್ಳಕ್ಕೆ ಎನ್ನುವುದು ತಿಳಿದಿರಲ್ಲ. ಇದೇ ವಿಭಾಗದಲ್ಲಿ ನಾವು ಇಂತಹ ಹಲವಾರು ಘಟನೆಗಳ ಬಗ್ಗೆ ಓದಿಕೊಂಡಿದ್ದೇವೆ. ಈ ಲೇಖನದಲ್ಲಿ ನಾವು ಯುವತಿಯೊಬ್ಬಳು ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ ಖರೀದಿ ಮಾಡಲು ಸುಲಭವಾಗಿ ಹಣ ಸಂಪಾದನೆ ಮಾಡುವಂತಹ ದಾರಿ ಕಂಡುಕೊಂಡಳು. ಆಕೆ ಕಂಡುಕೊಂಡ ದಾರಿ ಯಾವುದು? ಆಕೆಗೆ ಇದರಿಂದ ಲಾಭವಾಯಿತೇ ಅಥವಾ ಪ್ರಾಣಕ್ಕೆ ಹಾನಿಯಾಯಯಿತೇ ಎಂದು ನೀವು ತಿಳಿಯಿರಿ.
ಆಕೆ ತನ್ನ ಅಂಡಾಣುಗಳನ್ನು ಮಾರಲು ನಿರ್ಧರಿಸಿದಳು
ಪೂರ್ವ ಚೀನಾದ ವಿಶ್ವವಿದ್ಯಾನಿಲಯವೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು(ಗುರುತು ಬಹಿರಂಗಪಡಿಸಲಾಗಿಲ್ಲ) ಹಣ ಮಾಡಲು ತುಂಬಾ ಸುಲಭವಾದ ವಿಧಾನ ಕಂಡುಕೊಂಡಳು. ಹೊಸ ಐಫೋನ್ ಖರೀದಿ ಮಾಡಲು ಆಕೆ ತನ್ನ ಅಂಡಾಣುಗಳನ್ನು ಕಾನೂನುಬಾಹಿರವಾಗಿ ಮಾರಲು ಯತ್ನಿಸಿದ ವೇಳೆ ಶಸ್ತ್ರಚಿಕಿತ್ಸೆಯಿಂದ ಮೃತಪಟ್ಟಳು.
ಆಕೆಗೆ ಪ್ರತೀ ದಿನ ಹತ್ತು ಇಂಜೆಕ್ಷನ್ ಕೊಡಲಾಗುತ್ತಿತ್ತು!
ಶಸ್ತ್ರಚಿಕಿತ್ಸೆಗೆ ಮೊದಲು 20ರ ಹರೆಯದ ಯುವತಿಗೆ ಪ್ರತೀ ದಿನ ಹತ್ತು ಇಂಜೆಕ್ಷನ್ ಕೊಡಲಾಗುತ್ತಿತ್ತು ಎಂದು ವರದಿಗಳು ಹೇಳಿವೆ. ಶಸ್ತ್ರಚಿಕಿತ್ಸೆ ಮೂಲಕವಾಗಿ ತನ್ನ ಅಂಡಾಣುಗಳನ್ನು ತೆಗೆಯುವ ಮೊದಲು ಆಕೆಯಲ್ಲಿ ಅಂಡೋತ್ಪತ್ತಿ ಮಾಡಲು ಹೀಗೆ ಮಾಡಲಾಗುತ್ತಿತ್ತು.
ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು
ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಮತ್ತು ಮೂರು ದಿನಗಳಲ್ಲಿ ಆಕೆಯ ಆರೋಗ್ಯವು ಸಂಪೂರ್ಣವಾಗಿ ಹದಗೆಟ್ಟಿತು. ಆಕೆಯ ಹೊಟ್ಟೆ ಉಬ್ಬರ ಉಂಟಾಯಿತು ಮತ್ತು ಉಸಿರಾಡಲು ಕಷ್ಟವಾಗುತ್ತಿತ್ತು. ಇದರಿಂದಾಗಿ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.
ಆಕೆಗೆ ದುಷ್ಪರಿಣಾಮಗಳ ಬಗ್ಗೆ ತಿಳಿದೇ ಇರಲಿಲ್ಲ!
ಅಂಡಾಣುಗಳನ್ನು ತೆಗೆಯುವುದರಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಆಕೆಗೆ ತಿಳಿದೇ ಇರಲಿಲ್ಲ. ಆಕೆ ಅಂಡಾಣು ಮಾರಾಟ ಮಾಡಲು ಸಂಪರ್ಕಿಸಿದ ವ್ಯಕ್ತಿ ಕೂಡ ದೇಹಕ್ಕೆ ಇದರಿಂದ ಯಾವುದೇ ಹಾನಿಯಾಗದು ಎಂದು ಹೇಳಿದ್ದ. ಅಂಡಾಣುವನ್ನು ತೆಗೆಯುವ ಮೊದಲು ಪ್ರತೀ ದಿನ 15 ದಿನಗಳ ಕಾಲ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಇದರ ಬಳಿಕ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಅಂಡಾಣು ತೆಗೆಯುತ್ತಾರೆ ಎಂದು ಹೇಳಿ ಆಕೆಗೆ ಮಂಕುಬೂದಿ ಎರಚಿದ್ದ.
ಪರೀಕ್ಷೆಯಲ್ಲಿ ಪತ್ತೆಯಾಗಿರುವುದು
ಈ ಯುವತಿಯಗೆ `ಓವರಿಯನ್ ಹೈಪರ್ಸ್ಟೈಮ್ಯುಲೇಶನ್ ಸಿಂಡ್ರೋಮ್' ಕಾಣಿಸಿಕೊಂಡಿತು. ಈ ಸಮಸ್ಯೆಯು ಗರ್ಭಕೋಶವು ಅತಿಯಾಗಿ ಅಂಡೋತ್ಪತ್ತಿ ಮಾಡಲು ಉತ್ತೇಜಿಸುವ ಸಮಸ್ಯೆಯಾಗಿದೆ ಮತ್ತು ಅದರ ಸುತ್ತಲು ದ್ರವ ಶೇಖರಣೆ ಆಗುವುದು.
ಆಕೆಗೆ ತಕ್ಷಣವೇ ಚಿಕಿತ್ಸೆ ನೀಡಲಾಯಿತು
ಆಕೆಯ ಹೊಟ್ಟೆಯಿಂದ 5 ಲೀಟರ್ ನಷ್ಟು ನೀರನ್ನು ಹೊರಗೆ ತೆಗೆಯಲಾಯಿತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆಕೆಯ ಗರ್ಭಕೋಶವು 7-8 ತಿಂಗಳ ಗರ್ಭಿಣಿಯರ ಗರ್ಭಕೋಶದಂತೆ ಉಬ್ಬಿ ಹೋಗಿತ್ತು.
Most Read: ಲಿಂಗ ಪರಿವರ್ತನೆ ಮಾಡಿಕೊಂಡ ಈ ಪುರುಷರು-ಈಗ ಸುಂದರ ಹುಡುಗಿಯರಂತೆ ಕಾಣುತ್ತಿದ್ದಾರೆ!!
ಆಕೆ ಅದೃಷ್ಟದಿಂದ ಚೇತರಿಸಿಕೊಂಡಳು
ಯುವತಿಯ ಆರೋಗ್ಯ ಸ್ಥಿತಿಯು ಕೈಮೀರಿ ಹೋದ ವೇಳೆ ಆಕೆ ಪರೀಕ್ಷೆ ಮಾಡಿಕೊಳ್ಳದೆ ಇದ್ದರೆ ಪ್ರಾಣಕ್ಕೆ ಹಾನಿಯಾಗುವಂತಹ ಸಂಭವವಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆಕೆಗೆ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು ಮತ್ತು ಆಕೆ ಈಗ ಚೇತರಿಕೆ ಹಾದಿಯಲ್ಲಿದ್ದಾಳೆ ಎಂದು ವೈದ್ಯರು ತಿಳಿಸಿರುವರು. ಹಣ ಸಂಪಾದನೆ ಮಾಡುವುದು ಅಷ್ಟು ಸುಲಭದ ವಿಚಾರವಲ್ಲವೆಂದು ಆ ಯುವತಿಯು ಈಗ ಪಾಠ ಕಲಿತುಕೊಂಡಿರಬಹುದು. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನೀವು ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.