Just In
- 11 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 11 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 12 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 14 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News ಹುಬ್ಬಳ್ಳಿ ಹತ್ಯೆಯನ್ನು ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ: ಪ್ರಹ್ಲಾದ್ ಜೋಶಿ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುತು ಮರೆಮಾಚಿ ಕ್ಷೌರದಂಗಡಿ ನಡೆಸುತ್ತಿರುವ ಸಹೋದರಿಯರು!
ಕ್ಷೌರದ (ಕೂದಲು ಕತ್ತರಿಸುವ) ಅಂಗಡಿಗೆ ಹೋದರೆ ನಿಮಗೆ ಕಾಣಿಸುವುದು ಹುಡುಗರು ಕೆಲಸ ಮಾಡುವುದು ಮಾತ್ರ. ಅದರಲ್ಲೂ ಪುರುಷರಿಗಾಗಿ ಇರುವಂತಹ ಸೆಲೂನ್ ಗಳಲ್ಲಿ ಅಪ್ಪತಪ್ಪಿಯೂ ಮಹಿಳೆಯರು ಕೆಲಸ ಮಾಡುವುದಿಲ್ಲ. ಯಾಕೆಂದರೆ ಇದು ಪುರುಷರಿಗಾಗಿಯೇ ಮೀಸಲಾಗಿರುವಂತಹ ಕ್ಷೇತ್ರವೆಂದು ಹೇಳಲಾಗುತ್ತದೆ. ಆದರೆ ಇಂದಿನ ಮುಂದುವರಿದಿರುವ ದುನಿಯಾದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಕೈಯಾಡಿಸುತ್ತಿದ್ದಾರೆ.
ಆದರೆ ಕೆಲವೊಂದು ಸಲ ಅನಿವಾರ್ಯವಾಗಿ ಉದ್ಯೋಗವನ್ನು ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ವೇಳೆ ಪುರುಷರ ಪ್ರಧಾನವಾಗಿರುವಂತಹ ಸಮಾಜದಲ್ಲಿ ತಮ್ಮ ಪರಿಚಯವನ್ನೇ ಮರೆಮಾಚಬೇಕಾಗುತ್ತದೆ. ಇಂತಹ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ...
ತಮ್ಮ ತಂದೆಯ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿ
ಹದಿಹರೆಯದ ಯುವತಿಯರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಹುಡುಗರ ವೇಷದಲ್ಲಿ ತಮ್ಮ ತಂದೆಯ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಗುರುತಿಸಿರುವ ಸರ್ಕಾರವನ್ನು ಅವರನ್ನು ಗೌರವಿಸಿದೆ. ಜ್ಯೋತಿ ಕುಮಾರಿ(18) ಮತ್ತು ಆಕೆಯ ಸೋದರ ನೇಹಾ(16) ಉತ್ತರ ಪ್ರದೇಶದ ಸಣ್ಣ ಹಳ್ಳಿಯಲ್ಲಿರುವ ತಮ್ಮ ತಂದೆಯ ಕ್ಷೌರದ ಅಂಗಡಿಯಲ್ಲಿ 2014ರಲ್ಲಿ ಕೆಲಸ ಮಾಡಲು ಆರಂಭಿಸಿದರು. ಇವರ ತಂದೆ ಅನಾರೋಗ್ಯಕ್ಕೆ ಒಳಗಾದ ಕಾರಣದಿಂದಾಗಿ ಕ್ಷೌರದ ಅಂಗಡಿಯನ್ನು ಮುಚ್ಚಬೇಕಾಗಿ ಬಂತು. ಆದರೆ ಈ ಕುಟುಂಬಕ್ಕೆ ಬೇರೆ ಯಾವುದೇ ರೀತಿಯ ಆದಾಯವು ಇಲ್ಲದೆ ಇದ್ದ ಕಾರಣದಿಂದಾಗಿ ಹುಡುಗಿಯರಿಬ್ಬರು ಕ್ಷೌರದಂಗಡಿ ನಡೆಸಲು ಮುಂದಾದರು.
ಗುರುತನ್ನೇ ಮರೆಮಾಚಲು ಕಾರಣವೇನು?
ಹದಿಹರೆಯದ ಯುವತಿಯರು ತಮ್ಮ ಮೀಸೆ ಅಥವಾ ಕೂದಲು ತೆಗೆಯುವ ಬಗ್ಗೆ ಕೆಲವು ಜನರಿಗೆ ತುಂಬಾ ಸಂಶಯವಿತ್ತು. ಇನ್ನು ಕೆಲವು ಮಂದಿ ತಮ್ಮ ಜತೆಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು ಎಂದು ಜ್ಯೋತಿ ಹೇಳುತ್ತಾರೆ. ಇದರಿಂದಾಗಿ ಅವರು ತಮ್ಮ ಗುರುತನ್ನೇ ಮರೆಮಾಚಿ, ಸಂಪೂರ್ಣವಾಗಿ ಹುಡುಗರಂತೆ ಕಾಣಿಸಿಕೊಳ್ಳಲು ನಿರ್ಧರಿಸಿದರು.
ದೀಪಕ್ ಮತ್ತು ರಾಜು ಎನ್ನುವ ಹೆಸರನ್ನು ಇಟ್ಟುಕೊಂಡರು!
ಈ ಹುಡುಗಿಯರು ತಮ್ಮ ಕೂದಲನ್ನು ಸಣ್ಣದಾಗಿ ಕತ್ತರಿಸಿಕೊಂಡರು. ಇದರ ಬಳಿಕ ಪುರುಷರಂತೆ ಸ್ಟೇನ್ ಲೆಸ್ ಸ್ಟೀಲ್ ಬ್ರಾಸ್ ಲೆಟ್ ಧರಿಸಿದರು ಮತ್ತು ತಮಗೆ ದೀಪಕ್ ಮತ್ತು ರಾಜು ಎನ್ನುವ ಹೆಸರನ್ನು ಇಟ್ಟುಕೊಂಡರು. ಗ್ರಾಮದಲ್ಲಿ ಇರುವಂತಹ ಸುಮಾರು 100ರಷ್ಟು ಮನೆಗಳಿಗೆ ಇವರ ನಿಜವಾದ ಪರಿಚಯವಿತ್ತು. ಆದರೆ ತಮ್ಮ ಸುತ್ತಲಿನ ಕೆಲವೊಂದು ಹಳ್ಳಿಗಳ ಜನರಿಗೆ ತಮ್ಮ ಗುರುತಿನ ಬಗ್ಗೆ ಕೆಲವು ವರ್ಷಗಳ ಬಗ್ಗೆ ತಿಳಿದೇ ಇರಲಿಲ್ಲ. ಕೆಲವರಿಗೆ ಇಂದು ಕೂಡ ಆ ಬಗ್ಗೆ ತಿಳಿದಿಲ್ಲ ಎಂದು ನೇಹಾ ಹೇಳುತ್ತಾರೆ.
Most Read:ಕೈಯಲ್ಲಿ ಹೆಚ್ಚು ಹಣ ಉಳಿತಾಯಕ್ಕೆ 7 ಸ್ಮಾರ್ಟ್ ಟಿಪ್ಸ್
ದಿನಕ್ಕೆ 400 ರೂ. ದುಡಿಯುತ್ತಿದ್ದರು
ಈ ಸೋದರಿಯರು ದಿನಕ್ಕೆ 400 ರೂ. ದುಡಿಯುತ್ತಿದ್ದರು. ಇದರಿಂದ ತಂದೆಯ ಔಷಧಿ ಮತ್ತು ಕುಟುಂಬದ ಜೀವನ ನಿರ್ವಹಣೆಗೆ ಸಾಕಾಗುತ್ತಿತ್ತು. 2014ರಲ್ಲಿ ನಾವು ಈ ಕೆಲಸ ಆರಂಭಿಸಿದಾಗ ತುಂಬಾ ಸಮಸ್ಯೆಗಳನ್ನು ಎದುರಿಸಿದೆವು. ಗ್ರಾಮದಲ್ಲಿರುವ ಜನರು ನಮ್ಮನ್ನು ಹೀಯಾಳಿಸಿದರು. ಆದರೆ ನಾವು ಅವರನ್ನು ಕಡೆಗಣಿಸಿದೆವು ಮತ್ತು ಕೆಲಸದ ಕಡೆ ಗಮನಹರಿಸಿದೆವು. ಯಾಕೆಂದರೆ ನಮಗೆ ಬೇರೆ ಆಯ್ಕೆಯೇ ಇರಲಿಲ್ಲ ಎನ್ನುತ್ತಾರೆ ನೇಹಾ.
ಮಧ್ಯಾಹ್ನ ಬಳಿಕ ಮಾತ್ರ ಅಂಗಡಿ ತೆರೆಯುತ್ತಿದ್ದರು
ವಿದ್ಯಾಭ್ಯಾಸವನ್ನು ಮುಂದುವರಿಸುವ ಕಾರಣದಿಂದಾಗಿ ಇವರು ಮಧ್ಯಾಹ್ನ ಬಳಿಕ ಮಾತ್ರ ಅಂಗಡಿ ತೆರೆಯುತ್ತಿದ್ದರು. ಜ್ಯೋತಿ ಈಗ ಪದವಿ ಪಡೆದಿದ್ದಾರೆ ಮತ್ತು ನೇಹಾ ಈಗಲೂ ಕಲಿಯುತ್ತಿದ್ದಾರೆ. ವರ್ಷಗಳು ಉರುಳಿದಂತೆ ಇವರು ತಮ್ಮ ನಿಜವಾದ ಪರಿಚಯವನ್ನು ಗ್ರಾಹಕರಿಗೆ ಹೇಳುತ್ತಾ ಇದ್ದಾರೆ. ನಮಗೆ ಈಗ ಆತ್ಮವಿಶ್ವಾಸ ಬಂದಿದೆ ಮತ್ತು ಯಾವುದೇ ರೀತಿಯ ಭೀತಿಯಿಲ್ಲ ಎಂದು ನೇಹಾ ಹೇಳುತ್ತಾರೆ. ಹೆಚ್ಚಿನ ಜನರಿಗೆ ನಾವು ಹುಡುಗಿಯರು ಎಂದು ಈಗ ತಿಳಿದುಬಂದಿದೆ ಎಂದು ತನ್ನ ಕೂದಲನ್ನು ಉದ್ದ ಬಿಡುತ್ತಿರುವ ಜ್ಯೋತಿ ತಿಳಿಸಿದ್ದಾರೆ.
ಇವರು ಸಮಾಜಕ್ಕೆ ಕೂಡ ಪ್ರೇರಣೆ
ಗೋರಖ್ ಪುರದ ಪತ್ರಕರ್ತರೊಬ್ಬರು ಈ ಸೋದರಿಯರು ಕಥೆಯನ್ನು ಹಿಂದಿ ದಿನಪತ್ರಿಕೆಯೊಂದರಲ್ಲಿ ಪ್ರಕಟಿಸಿದ ಬಳಿಕ ಸರ್ಕಾರವು ಅವರನ್ನು ಗೌರವಿಸಿದೆ. ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಜೀವನ ಸಾಗಿಸುವುದಕ್ಕೆ ಇವರು ಒಳ್ಳೆಯ ಉದಾಹರಣೆ. ಇವರು ಸಮಾಜಕ್ಕೆ ಕೂಡ ಪ್ರೇರಣೆ ಮತ್ತು ಇವರ ಕಥೆಯನ್ನು ಯುವ ಜನಾಂಗಕ್ಕೆ ಹೇಳಬೇಕಾಗಿದೆ ಎಂದು ಸರ್ಕಾರಿ ಅಧಿಕಾರಿ ಅಭಿಷೇಕ್ ಪಾಂಡೆ ಹೇಳುತ್ತಾರೆ.
Most Read:ತಾಯಿಗೆ ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೆವ್ವದ ಆಕೃತಿಗಳು
ಈ ಬಾಲಕಿಯರ ತಂದೆ ಹೇಳುವ ಪ್ರಕಾರ
ಅವರಿಬ್ಬರು ಕೆಲಸ ಮಾಡುವಾಗ ನನಗೆ ತುಂಬಾ ನೋವಾಗುತ್ತಲಿತ್ತು. ಆದರೆ ನನ್ನ ಮಕ್ಕಳಿಂದ ತುಂಬಾ ಹೆಮ್ಮೆಯೆನಿಸುತ್ತಿದೆ. ಅವರು ಹಠಾತ್ ತೊಂದರೆಯಿಂದ ಕುಟುಂಬವನ್ನು ಕಾಪಾಡಿದ್ದಾರೆ ಎಂದು ಸೋದರಿಯರ ತಂದೆ ಧ್ರುವ ನಾರಾಯಣ್ ಹೇಳಿದ್ದಾರೆ. ಸ್ಥಳೀಯ ದಿನಪತ್ರಿಕೆಯಲ್ಲಿ ತಮ್ಮ ಕಥೆಯು ಪ್ರಕಟಗೊಂಡ ಬಳಿಕ ಕ್ಷೌರದ ಅಂಗಡಿಯು ಮತ್ತಷ್ಟು ಜನಪ್ರಿಯವಾಗಿದೆ. ಈ ಕಾರಣದಿಂದಾಗಿ ಬನ್ವಾರಿ ಟೊಲಾ ಗ್ರಾಮದಲ್ಲಿ ಕ್ಷೌರದಂಗಡಿಯನ್ನು ನಾವು ಮುಂದುವರಿಸಿಕೊಂಡು ಹೋಗಲಿದ್ದೇವೆ. ತಮ್ಮ ನಿಜ ಪರಿಚಯದಿಂದಾಗಿ ಹೆಚ್ಚಿನ ಗ್ರಾಹಕರಿಗೆ ಯಾವುದೇ ರೀತಿಯ ಚಿಂತೆಯಾಗಿಲ್ಲ ಮತ್ತು ಸಂಕಷ್ಟದಲ್ಲಿ ಹೀಗೆ ಮಾಡುತ್ತಲಿರುವ ಕಾರಣದಿಂದಾಗಿ ಹೆಚ್ಚಿನವರ ಮನಸ್ಸಿಗೆ ಇದು ನಾಟಿದೆ ಎಂದು ಸೋದರಿಯರು ತಿಳಿಸುತ್ತಾರೆ.
ನಿಜವಾಗಿಯೂ ಬಾಲಕಿಯರ ಇದು ದಿಟ್ಟ ಹೆಜ್ಜೆ
ಭಾರತದಲ್ಲಿ ಹೆಚ್ಚಾಗಿ ಮಹಿಳೆಯರು ಗದ್ದೆ, ಮನೆ, ಬಟ್ಟೆ ಹೊಲಿಯುವ ಕೆಲಸ ಮಾಡುತ್ತಾರೆ. ಆದರೆ ಇಂತಹ ಕೆಲಸಗಳನ್ನು ಮಾಡುವುದು ತುಂಬಾ ಕಡಿಮೆ. ಅದರಲ್ಲೂ ಕ್ಷೌರದಂಗಡಿ ಎನ್ನುವುದು ಪುರುಷರಿಗೆ ಉದ್ಯೋಗ ಮಾಡಲು ಮಾತ್ರಸೀಮಿತ ಎನ್ನುವ ಮಾತಿದೆ. ಅದರಲ್ಲೂ ತುಂಬಾ ಸಂಪ್ರದಾಯ ಬದ್ಧ ವಾಗಿರುವಂತಹ ಗ್ರಾಮದಲ್ಲಿ ಪುರುಷರಿಗಾಗಿ ಮೀಸಲು ಎಂದೇ ಭಾವಿಸಲಾಗಿರುವ ಕ್ಷೌರದಂಗಡಿ ನಡೆಸಿಕೊಂಡು ಹೋಗುವುದು ನಿಜವಾಗಿಯೂ ದಿಟ್ಟ ಹೆಜ್ಜೆ ಎನ್ನಬಹುದು.