Latest Updates
-
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ
ಎಟಿಎಂ ಒಳಗಡೆ, ಮಹಿಳೆಯ ಎದುರು ಜನನೇಂದ್ರಿಯ ಹೊರತೆಗೆದ ವ್ಯಕ್ತಿ!
ಕೆಲವೊಮ್ಮೆ ವಿಕೃತ ಕಾಮುಕರು ನಡೆಸುವಂತಹ ಕೃತ್ಯವು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡುವುದು. ಯಾಕೆಂದರೆ ಕೆಲವು ಪುರುಷರಿಂದಾಗಿ ಇಡೀ ಪುರುಷ ಸಮಾಜವನ್ನೇ ದೂಷಿಸುವಂತೆ ಮಾಡಿದೆ. ಮಹಿಳೆಯರು ರಾತ್ರಿ ವೇಳೆ ಅಥವಾ ಒಬ್ಬಂಟಿಯಾಗಿ ಇರುವ ವೇಳೆ ಕೆಲವು ಮಂದಿ ಅವರಿಗೆ ತುಂಬಾ ಲೈಂಗಿಕ ಕಿರುಕುಳ ನೀಡುವರು.

ಇಂದಿನ ಮುಂದುವರಿದಿರುವ ಸಮಾಜದಲ್ಲೂ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತದೆ. ಮುಂಬಯಿಯಲ್ಲಿ ಮಹಿಳೆಯೊಬ್ಬರು ಎಟಿಎಂನಲ್ಲಿ ಹಣ ತೆಗೆಯಲು ಹೋದ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆಕೆಯ ಮೈಮುಟ್ಟಿ ತುಂಬಾ ಅಶ್ಲೀಲವಾಗಿ ವರ್ತಿಸಿರುವುದು ಮಾತ್ರವಲ್ಲದೆ, ತನ್ನ ಜನನಾಂಗವನ್ನು ಹೊರಗೆ ತೆಗೆದಿದ್ದಾನೆ. ಇದರ ಬಗ್ಗೆ ನೀವು ಮತ್ತಷ್ಟು ಓದಿಕೊಳ್ಳಿ.

ಅಂದು ಆಕೆಯ ಹುಟ್ಟುಹಬ್ಬ
ಶಿಬಾನಿ ಎನ್ನುವ ಯುವತಿ ಮುಂಜಾನೆ 3 ಗಂಟೆ ವೇಳೆಗೆ ಎಟಿಎಂ ಬಳಿಕ ಹಣ ತೆಗೆಯಲು ರಿಕ್ಷಾ ನಿಲ್ಲಿಸಿದಳು. ರಿಕ್ಷಾದವನಿಗೆ ಹಣ ನೀಡಲು ಆಕೆಗೆ ನಗದು ಬೇಕಿತ್ತು. ಅಂದು ಆಕೆಯ ಹುಟ್ಟುಹಬ್ಬ ಮತ್ತು ಈ ದಿನದಂದೇ ಇಂತಹ ಘಟನೆಯು ನಡೆದಿರುವುದು ಆಕೆಗೆ ತುಂಬಾ ಭೀತಿ ಮೂಡಿಸಿದೆ.

ಆ ವ್ಯಕ್ತಿ ನೆರವು ನೀಡಲು ಮುಂದೆ ಬಂದ
ಆಕೆ ಎಟಿಎಂ ಒಳಗೆ ಹಣ ತೆಗೆಯಲು ಪ್ರಯತ್ನಿಸುತ್ತಿದ್ದ ವೇಳೆ ಸಂದೀಪ್ ಖುಂಭರ್ಕಾರ್ ಎಂಬಾತ ಎಟಿಎಂ ಒಳಗೆ ನುಗ್ಗಿದ ಮತ್ತು ರಿಕ್ಷಾದವನಿಗೆ ಹಣ ನೀಡಲು ನೆರವಾಗಬೇಕೇ ಎಂದು ಕೇಳಿದ.
ಆಕೆಯನ್ನು ತುಂಬಾ ಅಶ್ಲೀಲವಾಗಿ ಸ್ಪರ್ಶಿಸಿದ
ಆರೋಪಿತ ಆಕೆಯ ಹತ್ತಿರಕ್ಕೆ ಬಂದ ಮತ್ತು ಆಕೆಯ ಭುಜ ಮತ್ತು ತೊಡೆಗಳನ್ನು ಮುಟ್ಟಿದ. ನೆರವು ಬೇಕೇ ಎಂದು ಮತ್ತೊಮ್ಮೆ ಕೇಳಿದ. ಆಕೆ ಎಟಿಎಂನಲ್ಲಿ ಹಣ ತೆಗೆಯಲು ಪ್ರಯತ್ನಿಸುತ್ತಿದ್ದ ವೇಳೆ ಆತ ಎಟಿಎಂ ಹೊರಗೆ ಆಕೆಯನ್ನು ಕರೆದು, ತನ್ನ ಶಿಶ್ನ ನೋಡುವಂತೆ ತಿಳಿಸಿದೆ. ಆಕೆ ಈ ಎಲ್ಲಾ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಳು.
ಪೊಲೀಸರು ಕೆಲವೇ ನಿಮಿಷಗಳಲ್ಲಿ ಆ ವ್ಯಕ್ತಿಯನ್ನು ಬಂಧಿಸಿದರು
ಆ ಪ್ರದೇಶದಲ್ಲಿ ಪೊಲೀಸ್ ವಾಹನವಿದ್ದ ಕಾರಣದಿಂದಾಗಿ ಕೆಲವೇ ನಿಮಿಷದಲ್ಲಿ ಆತನನ್ನು ಬಂಧಿಸಲಾಯಿತು. ಘಟನೆ ವೇಳೆ ತಾನು ಕುಡಿದಿದ್ದೆ ಮತ್ತು ಇದಕ್ಕೆ ತಾನು ಕ್ಷಮೆ ಕೇಳುತ್ತೇನೆ ಎಂದು ಆತ ಹೇಳಿದ್ದಾನೆ. ಆದರೆ ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಇಂತಹ ಕೃತ್ಯಗಳಿಗೆ ಮದ್ಯಪಾನ ಮಾಡಿರುವುದು ಕ್ಷಮೆಯೇ? ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.



Click it and Unblock the Notifications











