Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ಕಲ್ಲು, ಮುಚ್ಚಳ, ನಾಣ್ಯ ನುಂಗಿ ತನ್ನ ಆತಂಕ ನಿವಾರಿಸಿಕೊಳ್ಳುತಿದ್ದ ವ್ಯಕ್ತಿ!
ನಾವು ನಮ್ಮ ಸುತ್ತಮುತ್ತಲು ಚಿತ್ರವಿಚಿತ್ರವಾಗಿರುವ ಜನರನ್ನು ಕಾಣುತ್ತೇವೆ. ಇಂತಹ ವ್ಯಕ್ತಿಗಳು ಮಾನಸಿಕವಾಗಿ ಸ್ಥಿಮಿತದಲ್ಲಿರುವುದಿಲ್ಲ. ಈ ಕಾರಣದಿಂದಾಗಿ ಅವರ ವರ್ತನೆಯಲ್ಲಿಯೂ ಬದಲಾವಣೆಗಳು ಕಂಡುಬರುವುದು. ಮಣ್ಣು ತಿನ್ನುವುದು, ಪೆಟ್ರೋಲ್ ಕುಡಿಯುವುದು, ಹುಲ್ಲು ತಿನ್ನುವುದು ಇತ್ಯಾದಿಗಳ ಬಗ್ಗೆ ನಾವು ಕೇಳಿದ್ದೇವೆ. ಇಂತಹ ವ್ಯಕ್ತಿಗಳು ನಿಜವಾಗಿಯೂ ಮಾನಸಿಕವಾಗಿ ಏನೋ ಸಮಸ್ಯೆಯನ್ನು ಎದುರಿಸುತ್ತಾ ಇರುವರು. ಈ ಲೇಖನದಲ್ಲಿ ಇಂತಹ ಒಬ್ಬ ವ್ಯಕ್ತಿಯ ಬಗ್ಗೆ ನಾವು ತಿಳಿಸಿಕೊಡಲಿದ್ದೇವೆ.
ಇಲ್ಲೊಬ್ಬ ವ್ಯಕ್ತಿಯು ತನ್ನ ಆತಂಕ ನಿವಾರಣೆ ಮಾಡಲು ಕಲ್ಲು, ಬಾಟಲಿಯ ಮುಚ್ಚಳ ಮತ್ತು ನಾಣ್ಯಗಳನ್ನು ತಿಂದಿದ್ದಾನೆ. ಈತನ ಹೊಟ್ಟೆಯಲ್ಲಿ ಸುಮಾರು 2 ಕೆಜಿಯಷ್ಟು ಕಲ್ಲು, ಬಾಟಲಿ ಮುಚ್ಚಳ, ನಾಣ್ಯ ಇತ್ಯಾದಿ ಪತ್ತೆಯಾಗಿದೆ. ಇದನ್ನು ಕಂಡು ವೈದ್ಯರು ಕೂಡ ಬೆಚ್ಚಿ ಬಿದ್ದಿದ್ದಾರೆ. ಕಲ್ಲು, ನಾಣ್ಯ, ಬಾಟಲಿ ಮುಚ್ಚಳ ಇತ್ಯಾದಿಗಳನ್ನು ತಿನ್ನುವಂತಹ ವ್ಯಕ್ತಿಯ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ಓದುತ್ತಾ ಸಾಗಿ...

ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದೆ
ಹೊಟ್ಟೆ ನೋವಿನ ಸಮಸ್ಯೆಯಿದ್ದ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗುತ್ತಾನೆ. ಆದರೆ ಈ ವ್ಯಕ್ತಿಯನ್ನು ಪರಿಶೀಲಿಸಿದ ವೇಳೆ ವೈದ್ಯರೇ ದಂಗಾದರು.

ಪರಿಶೀಲನೆ ವೇಳೆ ಕಂಡುಬಂದಿರುವುದು
ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ವ್ಯಕ್ತಿಯ ಹೊಟ್ಟೆಯು ಉಬ್ಬರಗೊಂಡಿತ್ತು ಮತ್ತು ಹೊಟ್ಟೆಯನ್ನು ವೈದ್ಯರು ಮುಟ್ಟಿ ನೋಡಿದ ವೇಳೆ ಸಣ್ಣ ಸಣ್ಣ ಕಲ್ಲುಗಳು ಪತ್ತೆಯಾಗಿದೆ. ಮತ್ತಷ್ಟು ಪರಿಶೀಲನೆ ನಡೆಸಿದ ವೇಳೆ ವೈದ್ಯರಿಗೆ ಆಘಾತ ಉಂಟಾಯಿತು. ಯಾಕೆಂದರೆ ಆ ವ್ಯಕ್ತಿಯ ಹೊಟ್ಟೆಯೊಳಗಡೆ ಸಣ್ಣ ಸಣ್ಣ ಕಲ್ಲುಗಳು, ಬಾಟಲಿಯ ಮುಚ್ಚಳ ಇತ್ಯಾದಿಗಳು ಕಂಡುಬಂದವು. ಇದು ಸಂಪೂರ್ಣ ಹೊಟ್ಟೆಯನ್ನು ವ್ಯಾಪಿಸಿತ್ತು.

ಈ ಬಗ್ಗೆ ಆ ವ್ಯಕ್ತಿಯು ಏನು ಹೇಳಿದ
ತನ್ನ ಹೊಟ್ಟೆಯಲ್ಲಿದ್ದ ಕಲ್ಲುಗಳು, ಬಾಟಲಿ ಮುಚ್ಚಳ ಇತ್ಯಾದಿಗಳನ್ನು ಕಂಡು ವೈದ್ಯರು ಅಚ್ಚರಿಗೊಂಡರು. ಈ ಬಗ್ಗೆ ಆ ವ್ಯಕ್ತಿಯಲ್ಲಿ ಕೇಳಿದಾಗ, ತನಗೆ ಆತಂಕ ಉಂಟಾದ ವೇಳೆ ನಾನು ಶಾಂತವಾಗಲು ಔಷಧಿ ತೆಗೆದುಕೊಳ್ಳುತ್ತಾ ಇದ್ದೆ. ಇದರೊಂದಿಗೆ ನಾಣ್ಯ, ಮುಚ್ಚಳ ಮತ್ತು ಸಣ್ಣ ಸಣ್ಣ ಕಲ್ಲುಗಳನ್ನು ಕೂಡ ನುಂಗುತ್ತಲಿದ್ದೆ ಎಂದು ಹೇಳಿದ್ದಾನೆ.

ತಕ್ಷಣವೇ ಆತನ ಶಸ್ತ್ರಚಿಕಿತ್ಸೆ ಮಾಡಲಾಯಿತು
ಈ ವ್ಯಕ್ತಿಯನ್ನು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಲಾಯಿತು ಮತ್ತು ವೈದ್ಯರ ಪ್ರಕಾರ ಇದು ತುಂಬಾ ಕಠಿಣ ಶಸ್ತ್ರಚಿಕಿತ್ಸೆಯಾಗಿತ್ತು. ಯಾಕೆಂದರೆ ಇಂತಹ ಶಸ್ತ್ರಚಿಕಿತ್ಸೆಯು ತುಂಬಾ ಕಠಿಣವಾಗಿರುವುದು ಮತ್ತು ಗ್ಯಾಸ್ಟ್ರೋಸ್ಕೋಪಿ ಮೂಲಕವಾಗಿ ಇದನ್ನು ತೆಗೆಯಬೇಕಾಯಿತು. ಬಾಯಿಯ ಮೂಲಕವಾಗಿ ತುಂಬಾ ತೆಳುವಾದ ಟ್ಯೂಬ್ ನ್ನು ಹಾಕಲಾಯಿತು. ಇದರ ಬಳಿಕ ತುಂಬಾ ಭಿನ್ನವಾಗಿರುವಂತಹ ಶಸ್ತ್ರಚಿಕಿತ್ಸೆ ವಿಧಾನದ ಮೂಲಕ ಹೊಟ್ಟೆಯಲ್ಲಿ ಇದ್ದ ಕಲ್ಲುಗಳು ಹಾಗೂ ಇತರ ಸಾಮಗ್ರಿಗಳನ್ನು ಹೊರಗೆ ತೆಗೆಯಲಾಯಿತು.

ಆ ವ್ಯಕ್ತಿ ಚೇತರಿಸಿಕೊಂಡ
ಸುಮಾರು 2 ಕೆಜಿಯಷ್ಟು ಕಲ್ಲು, ಮುಚ್ಚಳ, ನಾಣ್ಯವನ್ನು ಆತ ನುಂಗಿ ಕೊಂಡಿದ್ದ. ವೈದ್ಯರು ತುಂಬಾ ಕಠಿಣವಾಗಿರುವಂತಹ ಶಸ್ತ್ರಚಿಕಿತ್ಸೆ ಮಾಡಿ ಅದರಲ್ಲಿ ಯಶಸ್ವಿ ಕೂಡ ಆದರು. ಆತನ ಹೊಟ್ಟೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊರಗೆ ತೆಗೆಯಲಾಯಿತು. ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಸುಮಾರು 9 ದಿನಗಳ ಕಾಲ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇದರ ಬಳಿಕ ಆತ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಮರಳಿದ್ದಾನೆ. ಆತಂಕ ನಿವಾರಣೆ ಮಾಡಲು ಈಗ ಆತನಿಗೆ ಚಿಕಿತ್ಸೆ ಕೂಡ ನೀಡಲಾಗುತ್ತಿದೆ. ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ಬರೆದು ತಿಳಿಸಿ.



Click it and Unblock the Notifications