Latest Updates
-
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ?
ದಟ್ಟ ಮಂಜಿನಲ್ಲಿ ಆರು ಕಿ.ಮೀ. ನಡೆದು ಮದುವೆ ಮಂಟಪ ತಲುಪಿದ ವರ!!
ಮದುವೆಯಾಗುವ ವರ ಹಾಗೂ ವಧು ಹಲವಾರು ಹೊಸ ಹೊಸ ವಿಧಾನಗಳಿಂದ ಮದುವೆ ಮಂಟಪಗಳಿಗೆ ಆಗಮಿಸುತ್ತಿರುವಂತಹ ದೃಶ್ಯಗಳನ್ನು ನಾವು ನೋಡಿದ್ದೇವೆ ಮತ್ತು ಇದರ ಬಗ್ಗೆ ಓದಿದ್ದೇವೆ. ಆದರೆ ಇಲ್ಲಿ ನಾವು ಹೇಳಲು ಹೊರಟಿರುವುದು ಉತ್ತರಾಖಂಡದಲ್ಲಿ ವರನೊಬ್ಬ ಮದುವೆ ಸಂಭ್ರಮಕ್ಕೆ ತೆರಳಲು ಸುಮಾರು ಆರು ಕಿ.ಮೀ. ದಟ್ಟ ಮಂಜಿನಲ್ಲಿ ನಡೆದುಕೊಂಡು ಹೋಗಿರುವುದು. ಉತ್ತರಾಖಂಡದಲ್ಲಿ ನಡೆದಿರುವಂತಹ ತುಂಬಾ ಅಪರೂಪದ ಮದುವೆ ಇದು ಎನ್ನಬಹುದು. ಯಾಕೆಂದರೆ ಇಲ್ಲಿ 25 ಜನರಿಗಿಂತ ಕಡಿಮೆ ಜನರು ಇರುವಂತಹ ಮದುವೆ ನಡೆಯುವುದು ತುಂಬಾ ವಿರಳ.
ಆದರೆ ಇಂತಹ ಘಟನೆಯು ರುಧ್ರಪ್ರಯಾಗ್ ನ ಮಕ್ಕು ಮಠದಲ್ಲಿ ನಡೆದಿದೆ. ವರ ಹಾಗೂ ಆತನ ಸಂಬಂಧಿಗಳು ಸುಮಾರು 6 ಕಿ.ಮೀ. ದೂರದ ತನಕ ದಟ್ಟ ಮಂಜಿನಲ್ಲಿ ನಡೆದುಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾರೆ. ಮಕ್ಕು ಮಠದಲ್ಲಿ ನಡೆಯಲಿರುವಂತಹ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸುಮಾರು 80 ಜನರು ತ್ರಿಯುಗಿನಾರಾಯಣ ಗ್ರಾಮದಿಂದ ತೆರಳಿದ್ದರು. ಆದರೆ ದಟ್ಟ ಮಂಜಿನಿಂದಾಗಿ ವಾಹನವು ರಸ್ತೆಯಲ್ಲೇ ಬಾಕಿಯಾದ ಕಾರಣದಿಂದ ನಡುರಸ್ತೆಯಲ್ಲೇ ಸಿಲುಕಿಕೊಂಡರು. ಇದರಿಂದರಿಂದಾಗಿ ಕುಟುಂಬದವರು ಮದುವೆಗೆ ಅಗತ್ಯವಿರುವ ಜನರನ್ನು ಮಾತ್ರ ಮದುವೆಗೆ ಕಳುಹಿಸಿಕೊಡಲು ನಿರ್ಧರಿಸಿದರು. ವರದ ಸೋದರ ಮಾವ, ಸೋದರಿ ಮತ್ತು ಇತರ ಕೆಲವು ಮಂದಿ ಹಿರಿಯರು ಮದುವೆಗೆ ತೆರಳಿದರು. ಈ ವೇಳೆ ಆರು ಕಿ.ಮೀ. ತನಕ ಇವರು ದಟ್ಟ ಮಂಜಿನಲ್ಲಿ ದಿಬ್ಬಣದಲ್ಲಿ ಸಾಗಿದರು. ಈ ವೇಳೆ ಮಕ್ಕಳು ಮಾತ್ರ ಮಂಜಿನಲ್ಲಿ ಆಡುತ್ತಾ ಖುಷಿ ಪಟ್ಟರು.

2002ರಲ್ಲಿ ನಾವು ಇಂತಹ ಮದುವೆ ದಿಬ್ಬಣ ನೋಡಿದ್ದೇವೆ ಮತ್ತು ಈಗ ಮತ್ತೆ ನೋಡುತ್ತಿದ್ದೇವೆ. ಜನರು ಇಲ್ಲಿ ನಡೆದುಕೊಂಡು ಬರುತ್ತಿದ್ದಾರೆ ಮತ್ತು ಈ ಎರಡು ಮದುವೆಯ ವರರು ಸೇನೆಯಲ್ಲಿದ್ದವರು ಎಂದು ವರನ ಸೋದರ ಆಶೀಶ್ ಗೈರೊಲಾ ತಿಳಿಸಿದರು. ಈ ಪ್ರಯಾಣವು ತುಂಬಾ ಕಠಿಣವಾಗಿತ್ತೇ ಎಂದು ಕೇಳಿದಾಗ, ನೀವು ಚಿತ್ರಗಳನ್ನು ನೋಡಿದರೆ ಆಗ ಅವರ ಕಷ್ಟಗಳನ್ನು ಬದಿಗಿರಿಸಿ, ಚಳಿಯಾಗಿದೆಯಾ ಎಂದು ಕೇಳುವಿರಿ. ನನ್ನ ಎಂಟು ವರ್ಷದ ಮಗ ಹಾದಿಯಲ್ಲಿ ಸಂಪೂರ್ಣವಾಗಿ ಮಂಜಿನೊಂದಿಗೆ ಆಟವಾಡುತ್ತಲಿದ್ದ.
ಕಳೆದ ಏಳು ದಿನಗಳಿಂದ ಇಲ್ಲಿಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗದೆ ಇರುವ ಕಾರಣದಿಂದಾಗಿ ಸರಿಯಾಗಿ ದೈನಂದಿನ ಕಾರ್ಯಗಳನ್ನು ಕೂಡ ನಿರ್ವಹಿಸಲು ಆಗಿಲ್ಲ. ವಿದ್ಯುತ್ ಕೊರತೆಯಿಂದ ಜನರು ತಮ್ಮ ಮೊಬೈಲ್ ಫೋನ್ ಗಳನ್ನು ಕಾರಿನಲ್ಲಿ ಚಾರ್ಜ್ ಮಾಡುತ್ತಲಿದ್ದರು ಎಂದು ಅವರು ತಿಳಿಸಿದ್ದಾರೆ. ತ್ರಿಯುಗಿನಾರಾಯಣ ಗ್ರಾಮದ ಮುಖ್ಯಸ್ಥರು ಹೇಳುವ ಪ್ರಕಾರ, ನಾನು ಕೂಡ ಮದುವೆಗೆ ಹೋಗಿದ್ದೆ. ಆದರೆ ಮಧ್ಯದಲ್ಲೇ ಸಿಲುಕಿಕೊಂಡೆವು. ಆದರೆ ನಾವೆಲ್ಲರೂ ಈ ಪ್ರಯಾಣವನ್ನು ಆನಂದಿಸಿದೆವು ಮತ್ತು ಮದುವೆಯು ಯಾವುದೇ ಸಮಸ್ಯೆಯಿಲ್ಲದೆ ನಡೆಯಿತು.
ನಮಗೆ ಮದುವೆ ಬಗ್ಗೆ ಮಾಹಿತಿ ಸಿಕ್ಕಿತು ಮತ್ತು ಜನರು ನಡೆದುಕೊಂಡು ಬರುತ್ತಿದ್ದಾರೆ ಎಂದು ತಿಳಿಯಿತು. ಅವರು ನಡೆದುಕೊಂಡು ಬಂದಿರುವುದು ಒಳ್ಳೆಯದು. ಯಾಕೆಂದರೆ ಮಂಜು ತುಂಬಾ ದಟ್ಟವಾಗಿ ಉರುಳುತ್ತಿದ್ದ ಕಾರಣದಿಂದಾಗಿ ಕಾರ್ ಸ್ಕಿಡ್ ಆಗುವಂತಹ ಸಾಧ್ಯತೆಯು ಹೆಚ್ಚಿತ್ತು. ಗ್ರಾಮಗಳಲ್ಲಿ ಮಂಜನ್ನು ತೆಗೆಯಲು ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ ರಸ್ತೆಗಳು ಈಗಲೂ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ರುದ್ರಪ್ರಯಾಗ್ ನ ಜಿಲ್ಲಾಧಿಕಾರಿ ಮಗ್ನೇಶ್ ಗಿಲ್ಡಿಲ್ಯಾಲ್ ಹೇಳಿದ್ದಾರೆ.



Click it and Unblock the Notifications
