Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
40 ಬಗೆಯ ಹಣ್ಣುಗಳು ಈ ಒಂದೇ ಮರದಲ್ಲಿ!! ಎಂತಹ ವಿಸ್ಮಯ !!
ಮನೆಯ ಸುತ್ತಮುತ್ತ ಹಸಿರಾದ ಪರಿಸರ , ಗಿಡ , ಮರ ಬಳ್ಳಿಗಳ ಸಮಾಗಮ , ನಡುವೆ ಅಲ್ಲಲ್ಲಿ ಅರಳಿ ನಿಂತ ಹೂಗಳು , ಇದರ ಮಧ್ಯೆ ಸಣ್ಣಗೆ ಜುಳು ಜುಳು ಎಂದು ಹರಿಯುವ ನೀರಿನ ಇಂಪಾದ ಕಲರವ ಮತ್ತು ಅಲ್ಲಲ್ಲಿ ಜಿಂಕೆ , ಮೊಲಗಳ ಬೀಡು . ಇವಿಷ್ಟಿದ್ದರೆ ಸಾಕು . ಮನುಷ್ಯನಿಗೆ ಸ್ವರ್ಗವೇ ಕೈಯಲ್ಲಿದ್ದಂತೆ . ಬೇರೆ ಯಾವ ದುಡ್ಡು ಕಾಸು ಆಸ್ತಿ ಪಾಸ್ತಿ ಯಾವುದೂ ಬೇಡವೆನಿಸುತ್ತದೆ . ಏಕೆಂದರೆ ಅಷ್ಟು ಚೆನ್ನಾಗಿ ಮನಸ್ಸಿಗೆ ಮುದ ನೀಡಿರುತ್ತದೆ ಆ ಸುಂದರ ಪರಿಸರ . ನಾವೆಲ್ಲಾ ನಮ್ಮ ಅಜ್ಜ ಅಜ್ಜಿಯ ಹತ್ತಿರ ಕಥೆ ಕೇಳಿಯೇ ಇರುತ್ತೇವೆ . ದೂರದಲ್ಲಿ ಒಂದು ಕಾಡು . ಅಲ್ಲಿ ಒಂದು ಸುಂದರ ಸರೋವರ . ಅಲ್ಲಿಗೆ ಒಬ್ಬ ರಾಜ ಕುದುರೆ ಮೇಲೆ ಬರುತ್ತಾನೆ . ಎಂದೆಲ್ಲಾ ಹೇಳಿರುತ್ತಾರೆ . ಅದನ್ನು ನೆನೆಸಿಕೊಂಡು ಹಾಗೇ ಭಾವನಾಲೋಕಕ್ಕೆ ಹೋಗುತ್ತಿದ್ದುದೂ ಉಂಟು . ಇವೆಲ್ಲಾ ಏಕೆ ಪೀಠಿಕೆ ಹಾಕುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ ? ಈ ಕಥೆಯಲ್ಲಿ ಇಂತಹದೇ ಒಂದು ವಿಸ್ಮಯ ಮತ್ತು ನಿಮ್ಮನ್ನು ಮಂತ್ರ ಮುಗ್ಧರನ್ನಾಗಿಸುವ ಒಂದು ವಿಷಯ ಅಡಗಿದೆ.
ಮನುಷ್ಯ ಇತ್ತೀಚಿಗೆ ಜಗತ್ತಿನ ನಾಗಾಲೋಟಕ್ಕೆ ಹೊಂದಿಕೊಳ್ಳುವಂತೆ ತಾನೂ ಬದಲಾಗಿ ತನ್ನ ಸುತ್ತಲಿನ ನಿಸರ್ಗದ ಸೊಬಗನ್ನೂ ತನಗೆ ಹೇಗೆ ಬೇಕೋ ಹಾಗೆ ಬದಲಾಯಿಸಿ ಎಲ್ಲಾವನ್ನೂ ಕಾಂಕ್ರೀಟ್ ಮಯವಾಗಿಸಿದ್ದಾನೆ . ಅವನ ಪ್ರಕಾರ ಸುಂದರವಾದ ಕಟ್ಟಡಗಳು , ಗಗನಚುಂಬಿ ಅಪಾರ್ಟ್ಮೆಂಟ್ ಗಳು ನಡುವೆ ಎಲ್ಲೋ ಒಂದು ಕಡೆ ಆರ್ಟಿಫಿಷಿಯಲ್ ವಾಟರ್ ಫಾಲ್ ಇದ್ದರೆ , ಅದೇ ಅವನಿಗೆ ಸುಂದರ ಪರಿಸರ ಮತ್ತು ಈಗಿನ ಕಾಲದ ಸ್ವರ್ . ನಿಜವಾದ ನೈಸರ್ಗಿಕ ಪ್ರಕೃತಿಯ ಸೊಬಗನ್ನು ಉಳಿಸಿಕೊಳ್ಳಬೇಕು ಎಂದು ಯೋಚಿಸುವವರು ತೀರಾ ಕಡಿಮೆ ಅದು ಬೆರಳೆಣಿಕೆಯಷ್ಟು ಮಾತ್ರ . ಇದು ಹೀಗೆ ಮುಂದುವರಿದರೆ ನಮ್ಮ ಮುಂದಿನ ಮನುಕುಲದ ಪೀಳಿಗೆಗೆ ನಿಸರ್ಗ ಎಂದರೆ ಏನು ಎಂದು ಚಿತ್ರ ಬಿಡಿಸಿ ತೋರಿಸುವ ಕೆಲಸ ಮಾಡಬೇಕಾಗುತ್ತದೆ . ಇಂತಹ ಬೆರಳೆಣಿಕೆಯಷ್ಟು ಜನರಲ್ಲಿ ಸ್ಯಾಮ್ ವ್ಯಾನ್ ಆಕೆನ್ ಕೂಡ ಒಬ್ಬರು . ಇವರು ಕೂಡ ಪ್ರಕೃತಿಯ ಸೊಬಗನ್ನು ಚೆನ್ನಾಗಿ ಸವಿದು ಅದರ ಬಗ್ಗೆ ವಿಶೇಷವಾದ ಕಾಳಜಿ ಬೆಳೆಸಿಕೊಂಡವರು . ಮತ್ತು ಪ್ರಕೃತಿಯ ಸುಂದರತೆಯ ಕನಸು ಕಂಡು ತಕ್ಷಣ ಅದನ್ನು ಚಿತ್ರ ಬಿಡಿಸಿ ಸಾಕ್ಷರತೆ ಮೆರೆದು ತಮ್ಮ ಚಿತ್ರಗಳ ಮೂಲಕ ಜಗತ್ತಿಗೆ ಪರಿಚಯ ಗೊಳಿಸಬೇಕೆಂಬ ಮಹದಾಸೆ ಹೊಂದಿದ್ದರು . ಅದರಂತೆಯೇ ಮಾಡಿದರೂ ಕೂಡ .

ಸಾಮಾನ್ಯವಾಗಿ ನಿಸರ್ಗದ ನಿಯಮದ ಪ್ರಕಾರ ಒಂದು ಜಾತಿಯ ಗಿಡ ಅಥವಾ ಬಳ್ಳಿಯಲ್ಲಿ ಅದೇ ಜಾತಿಯ ಹೂ , ಕಾಯಿ ಮತ್ತು ಹಣ್ಣು ಬಿಡುವುದು ವಾಡಿಕೆ . ಹಿಂದಿನ ಹಳ್ಳಿ ಜನರ ಮಾತೇ ಇದೆ . ಮಾವಿನ ಕಾಯಿ ಮರದಲ್ಲಿ ಬೇವಿನ ಕಾಯಿ ಬಿಡುವುದೇ ಎಂದು . ಅದರಂತೆ " ಬಾಳೆಗೆ ಒಂದೇ ಗೊನೆ ಬಾಳೋರಿಗೆ ಒಂದೇ ಮನೆ " ಎಂಬ ಗಾಧೆ ಕೂಡ ಇಂದಿಗೂ ಪ್ರಚಲಿತದಲ್ಲಿದೆ . ಅದೇನೇ ಆದರೂ ಒಂದು ಮರದಲ್ಲಿ ಒಂದೇ ರೀತಿಯ ಫಲ ಬಿಡುವುದು ಸರ್ವೇ ಸಾಮಾನ್ಯ . ಆದರೆ ಸ್ಯಾಮ್ ವ್ಯಾನ್ ಆಕೆನ್ ಕಂಡ ಕನಸು ಒಂದೇ ಮರದಲ್ಲಿ ಸುಮಾರು 40 ರೀತಿಯ ಹಣ್ಣುಗಳು ಬಿಟ್ಟರೆ ಹೇಗಿರುತ್ತದೆ ಎಂದು !!! ಇದು ಕೇಳಲು ಏನೋ ಒಂದು ಥರ ವಿಚಿತ್ರ ಎನಿಸಿದರೂ ಇದು ಸತ್ಯ . ನಿಜವಾಗಲೂ 40 ರೀತಿಯ ಹಣ್ಣುಗಳು ಬಿಡುವ ಮರ ಜಗತ್ತಿನಲ್ಲಿ ಇದೆ !!!
ಇಲ್ಲಿ ನಾವು ಈ 40 ರೀತಿಯ ಹಣ್ಣುಗಳನ್ನು ಬಿಡುವ ಮರ ಜನ್ಮ ತಾಳಿದ ಕಥೆಯನ್ನು ಹೇಳಲು ಬಯಸುತ್ತೇವೆ . ಇದರ ಕೃಷಿ , ಸಂಶೋಧನೆ ಮತ್ತು ಸಂರಕ್ಷಣೆ ಹೇಗೆ ನಡೆಯಿತೆಂದು ತಿಳಿಸಲು ಈ ಲೇಖನವನ್ನು ಸಾದರ ಪಡಿಸುತ್ತಿದ್ದೇವೆ . ಸ್ಯಾಮ್ ವ್ಯಾನ್ ಆಕೆನ್ ಒಬ್ಬ ಹವ್ಯಾಸಿ ಮತ್ತು ಸಮಕಾಲೀನ ಚಿತ್ರ ಬಿಡಿಸುವವರು ಮತ್ತು ಸೈರಾಕ್ಯೂಸ್ ವಿಶ್ವ ವಿದ್ಯಾಲಯದಲ್ಲಿ ಆರ್ಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು . ಅವರು ಅವರ ಕನಸಿನ ಕೂಸಾದ " ಒಂದೇ ಮರದಲ್ಲಿ 40 ರೀತಿಯ ಹಣ್ಣುಗಳು " ಎಂಬ ಪ್ರಾಜೆಕ್ಟ್ ಹೇಗೆ ಶುರುವಾಯಿತು ಮತ್ತು ಹೇಗೆ ಮುನ್ನಡೆಯಿತು , ಅದಕ್ಕೆ ಎದುರಾದ ಚಾಲೆಂಜ್ ಗಳೇನು ಎಂಬುದನ್ನು ಬಹಳ ಅಚ್ಚುಕಟ್ಟಾಗಿ ಹಂಚಿಕೊಂಡಿದ್ದಾರೆ .
ಸ್ಯಾಮ್ ವ್ಯಾನ್ ಆಕೆನ್ ಗೆ ನಿಸರ್ಗ ಎಂದರೆ ಮೊದಲಿನಿಂದಲೂ ಪಂಚ ಪ್ರಾಣ . ಅವರೇ ಹೇಳಿರುವಂತೆ ಅವರದು ಕೃಷಿ ಕುಟುಂಬದ ಹಿನ್ನೆಲೆ . ಆದ್ದರಿಂದ ಅವರು ಸಣ್ಣ ಮಗುವಾಗಿದ್ದಾಗಿನಿಂದ ಪ್ರಕೃತಿಯ ಸೊಬಗಿನ ಮಡಿಲಲ್ಲೇ ಬೆಳೆದರು . ಅವರು ಹುಟ್ಟಿದಾಗಿನಿಂದ ಮನುಷ್ಯ ಹೇಗೆ ನಿಸರ್ಗದ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬುದನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು . ಈ ವಿಷಯವೇ ಅವರ ಈ ಕನಸಿಗೆ ಒತ್ತು ಕೊಟ್ಟು ನನಸಾಗಲು ಪ್ರೇರೇಪಿಸಿತು . ಅವರು ಪ್ರಪ್ರಥಮ ಬಾರಿಗೆ ಈಡನ್ ಎಕ್ಸಿಬಿಷನ್ ನಲ್ಲಿ ವಿವಿಧ ತರಕಾರಿಗಳನ್ನು ಒಟ್ಟಿಗೆ ಕಸಿ ಮಾಡಿ ಅದರಿಂದ ಬಂದಂತಹ ವಿಚಿತ್ರ ಸಸಿಗಳನ್ನು ಪ್ರದರ್ಶನಕ್ಕೆ ಇಟ್ಟು ಎಲ್ಲರ ಗಮನ ಸೆಳೆದಿದ್ದರು . ಇದು ತಕ್ಷಣ ಎಲ್ಲರ ಮೆಚ್ಚುಗೆ ಗಳಿಸಿತು.
ಇದರಿಂದ ಉತ್ತೇಜಿತಗೊಂಡ ಸ್ಯಾಮ್ ವ್ಯಾನ್ ಆಕೆನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪ್ರಯೋಗವನ್ನು ಹಣ್ಣುಗಳ ಮೇಲೆ ಏಕೆ ಪ್ರಯೋಗ ಮಾಡಬಾರದು ಎಂದು ಯೋಚಿಸಿ ತಕ್ಷಣ ಈ ಮಹತ್ತರ ಯೋಜನೆಯನ್ನು ಕೈ ಗೆತ್ತಿಕೊಂಡು ಕೆಲವು ವರ್ಷಗಳ ಕಾಲ ಹಲವಾರು ಮರಗಳ ಮೇಲೆ ಸಂಶೋಧನೆ ಕೈ ಗೊಂಡು ಸುಮಾರು 40 ಹಣ್ಣುಗಳ ಸಸಿಗಳನ್ನು ಕಸಿ ಮಾಡಲು ಮುಂದಾದರು ಮತ್ತು ಇದರಲ್ಲಿ ಯಶಸ್ಸನ್ನು ಕೂಡ ಪಡೆದರು . ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಅವರ ಆ ಶ್ರಮದ ಸಂಶೋಧನೆಯ ಪ್ರತಿಫಲವೇ ಸುಮಾರು 40 ಹಣ್ಣುಗಳ ಹೈಬ್ರಿಡ್ ಮರ ಜನ್ಮ ತಾಳಲು ಕಾರಣವಾಯಿತು .ಸ್ಯಾಮ್ ವ್ಯಾನ್ ಆಕೆನ್ ರ ಪ್ರಕಾರ ಆ ಹೈಬ್ರಿಡ್ ಮರ ವಸಂತ ಕಾಲದಲ್ಲಿ ಬಗೆ ಬಗೆಯ ಹೂ ಬಿಟ್ಟು ಎಲ್ಲರನ್ನೂ ಬೆರಗು ಗೊಳಿಸುತ್ತದೆ . ಇದು ಕಲೆಯ ದೃಷ್ಟಿಯಲ್ಲಿ ನೋಡುವುದಾದರೆ ನಿಜಕ್ಕೂ ಒಂದು ಅದ್ಭುತಕ್ಕೆ ಉದಾಹರಣೆಯೇ ಸರಿ .
ಸ್ಯಾಮ್ ವ್ಯಾನ್ ಆಕೆನ್ ಹೇಳಿರುವ ಪ್ರಕಾರ ಈ ಅದ್ಬುತ ಸಾಧನೆಗೆ ಕೆಲವು ತಿಂಗಳುಗಳೇ ಹಿಡಿದಿದ್ದು , ಇದರ ಪ್ರತಿಫಲವೇ ಅವರು ಬೆಳೆಸಿದ ಒಂದೇ ಮರದಲ್ಲಿ ಬಾದಾಮಿ , ಪ್ಲಮ್ , ಪೀಚ್ , ಏಪ್ರಿಕಾಟ್ , ನೆಕ್ಟರಿನ್ ಎಂಬ ಇತ್ಯಾದಿ ಹಣ್ಣುಗಳನ್ನು ಬಿಡಲು ಪ್ರಾರಂಭಿಸಿತು . ಇವು ಕೇವಲ ಕೆಲವು ಹಣ್ಣುಗಳು ಮಾತ್ರ . ಇನ್ನೂ ಹಲವಾರು ರೀತಿಯ , ಬಗೆ ಬಗೆಯ , ನಾವು ಇದುವರೆಗೂ ಎಲ್ಲೂ ನೋಡಿರದ ಹಣ್ಣುಗಳನ್ನು ಈ ಮರದಲ್ಲಿ ಕಾಣಬಹುದು ಎನ್ನುತ್ತಾರೆ ಸ್ಯಾಮ್ ವ್ಯಾನ್ ಆಕೆನ್.
ಸ್ಯಾಮ್ ವ್ಯಾನ್ ಆಕೆನ್ ರದು ಧಾರಾಳ ಮನೋಭಾವ . ಅವರ ಈ ಯೋಜನೆ ಕೇವಲ ಅವರ ಮನಸ್ಸಿನ ಖುಷಿಗಷ್ಟೇ ಸೀಮಿತವಾಗಿರಲಿ ಎಂಬ ಭಾವನೆ ಎಂದಿಗೂ ಅವರಿಗೆ ಬರಲೇ ಇಲ್ಲ . ಅವರ ವಿಶಾಲ ಮನೋಭಾವದಿಂದ ಈ ಯೋಜನೆ ಜಗತ್ತಿಗೆ ಪ್ರಸಿದ್ಧಿಯಾಗಲೀ ಎಂಬ ಕಾರಣಕ್ಕೆ ಇಂತಹ ಸುಮಾರು 16 ಮರಗಳನ್ನು ದೇಶದ ಹಲವು ಭಾಗಗಳಲ್ಲಿ ವಿವಿಧ ಮ್ಯೂಸಿಯಂ , ಸದಾ ಜನನಿಬಿಡ ಪ್ರದೇಶಗಳು , ಕಮ್ಯೂನಿಟಿ ಸೆಂಟರ್ ಗಳು ಮತ್ತು ಪ್ರೈವೇಟ್ ಆರ್ಟ್ ಗ್ಯಾಲರಿ ಗಳಲ್ಲಿ ನೆಟ್ಟು ಬೆಳೆಸಲಾರಂಭಿಸಿದರು . ಇದರಿಂದ ಹಲವಾರು ಮಂದಿ ಪ್ರೇರೇಪಿತಗೊಳ್ಳುತ್ತಾರೆ ಮತ್ತು ಇಂತಹ ಹಲವಾರು ಚಿಂತನೆಗಳು ಮೈದಳೆಯುತ್ತವೆ ಎಂಬುದು ಅವರ ಭಾವನೆ . ನಿಜಕ್ಕೂ ಎಂತಹ ಅದ್ಭುತ ಸಾಧನೆ ಎಂದು ನಾವೆಲ್ಲರೂ ತಲೆದೂಗಬೇಕು . ಅಲ್ಲವೇ ?



Click it and Unblock the Notifications