Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
40 ಬಗೆಯ ಹಣ್ಣುಗಳು ಈ ಒಂದೇ ಮರದಲ್ಲಿ!! ಎಂತಹ ವಿಸ್ಮಯ !!
ಮನೆಯ ಸುತ್ತಮುತ್ತ ಹಸಿರಾದ ಪರಿಸರ , ಗಿಡ , ಮರ ಬಳ್ಳಿಗಳ ಸಮಾಗಮ , ನಡುವೆ ಅಲ್ಲಲ್ಲಿ ಅರಳಿ ನಿಂತ ಹೂಗಳು , ಇದರ ಮಧ್ಯೆ ಸಣ್ಣಗೆ ಜುಳು ಜುಳು ಎಂದು ಹರಿಯುವ ನೀರಿನ ಇಂಪಾದ ಕಲರವ ಮತ್ತು ಅಲ್ಲಲ್ಲಿ ಜಿಂಕೆ , ಮೊಲಗಳ ಬೀಡು . ಇವಿಷ್ಟಿದ್ದರೆ ಸಾಕು . ಮನುಷ್ಯನಿಗೆ ಸ್ವರ್ಗವೇ ಕೈಯಲ್ಲಿದ್ದಂತೆ . ಬೇರೆ ಯಾವ ದುಡ್ಡು ಕಾಸು ಆಸ್ತಿ ಪಾಸ್ತಿ ಯಾವುದೂ ಬೇಡವೆನಿಸುತ್ತದೆ . ಏಕೆಂದರೆ ಅಷ್ಟು ಚೆನ್ನಾಗಿ ಮನಸ್ಸಿಗೆ ಮುದ ನೀಡಿರುತ್ತದೆ ಆ ಸುಂದರ ಪರಿಸರ . ನಾವೆಲ್ಲಾ ನಮ್ಮ ಅಜ್ಜ ಅಜ್ಜಿಯ ಹತ್ತಿರ ಕಥೆ ಕೇಳಿಯೇ ಇರುತ್ತೇವೆ . ದೂರದಲ್ಲಿ ಒಂದು ಕಾಡು . ಅಲ್ಲಿ ಒಂದು ಸುಂದರ ಸರೋವರ . ಅಲ್ಲಿಗೆ ಒಬ್ಬ ರಾಜ ಕುದುರೆ ಮೇಲೆ ಬರುತ್ತಾನೆ . ಎಂದೆಲ್ಲಾ ಹೇಳಿರುತ್ತಾರೆ . ಅದನ್ನು ನೆನೆಸಿಕೊಂಡು ಹಾಗೇ ಭಾವನಾಲೋಕಕ್ಕೆ ಹೋಗುತ್ತಿದ್ದುದೂ ಉಂಟು . ಇವೆಲ್ಲಾ ಏಕೆ ಪೀಠಿಕೆ ಹಾಕುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ ? ಈ ಕಥೆಯಲ್ಲಿ ಇಂತಹದೇ ಒಂದು ವಿಸ್ಮಯ ಮತ್ತು ನಿಮ್ಮನ್ನು ಮಂತ್ರ ಮುಗ್ಧರನ್ನಾಗಿಸುವ ಒಂದು ವಿಷಯ ಅಡಗಿದೆ.
ಮನುಷ್ಯ ಇತ್ತೀಚಿಗೆ ಜಗತ್ತಿನ ನಾಗಾಲೋಟಕ್ಕೆ ಹೊಂದಿಕೊಳ್ಳುವಂತೆ ತಾನೂ ಬದಲಾಗಿ ತನ್ನ ಸುತ್ತಲಿನ ನಿಸರ್ಗದ ಸೊಬಗನ್ನೂ ತನಗೆ ಹೇಗೆ ಬೇಕೋ ಹಾಗೆ ಬದಲಾಯಿಸಿ ಎಲ್ಲಾವನ್ನೂ ಕಾಂಕ್ರೀಟ್ ಮಯವಾಗಿಸಿದ್ದಾನೆ . ಅವನ ಪ್ರಕಾರ ಸುಂದರವಾದ ಕಟ್ಟಡಗಳು , ಗಗನಚುಂಬಿ ಅಪಾರ್ಟ್ಮೆಂಟ್ ಗಳು ನಡುವೆ ಎಲ್ಲೋ ಒಂದು ಕಡೆ ಆರ್ಟಿಫಿಷಿಯಲ್ ವಾಟರ್ ಫಾಲ್ ಇದ್ದರೆ , ಅದೇ ಅವನಿಗೆ ಸುಂದರ ಪರಿಸರ ಮತ್ತು ಈಗಿನ ಕಾಲದ ಸ್ವರ್ . ನಿಜವಾದ ನೈಸರ್ಗಿಕ ಪ್ರಕೃತಿಯ ಸೊಬಗನ್ನು ಉಳಿಸಿಕೊಳ್ಳಬೇಕು ಎಂದು ಯೋಚಿಸುವವರು ತೀರಾ ಕಡಿಮೆ ಅದು ಬೆರಳೆಣಿಕೆಯಷ್ಟು ಮಾತ್ರ . ಇದು ಹೀಗೆ ಮುಂದುವರಿದರೆ ನಮ್ಮ ಮುಂದಿನ ಮನುಕುಲದ ಪೀಳಿಗೆಗೆ ನಿಸರ್ಗ ಎಂದರೆ ಏನು ಎಂದು ಚಿತ್ರ ಬಿಡಿಸಿ ತೋರಿಸುವ ಕೆಲಸ ಮಾಡಬೇಕಾಗುತ್ತದೆ . ಇಂತಹ ಬೆರಳೆಣಿಕೆಯಷ್ಟು ಜನರಲ್ಲಿ ಸ್ಯಾಮ್ ವ್ಯಾನ್ ಆಕೆನ್ ಕೂಡ ಒಬ್ಬರು . ಇವರು ಕೂಡ ಪ್ರಕೃತಿಯ ಸೊಬಗನ್ನು ಚೆನ್ನಾಗಿ ಸವಿದು ಅದರ ಬಗ್ಗೆ ವಿಶೇಷವಾದ ಕಾಳಜಿ ಬೆಳೆಸಿಕೊಂಡವರು . ಮತ್ತು ಪ್ರಕೃತಿಯ ಸುಂದರತೆಯ ಕನಸು ಕಂಡು ತಕ್ಷಣ ಅದನ್ನು ಚಿತ್ರ ಬಿಡಿಸಿ ಸಾಕ್ಷರತೆ ಮೆರೆದು ತಮ್ಮ ಚಿತ್ರಗಳ ಮೂಲಕ ಜಗತ್ತಿಗೆ ಪರಿಚಯ ಗೊಳಿಸಬೇಕೆಂಬ ಮಹದಾಸೆ ಹೊಂದಿದ್ದರು . ಅದರಂತೆಯೇ ಮಾಡಿದರೂ ಕೂಡ .

ಸಾಮಾನ್ಯವಾಗಿ ನಿಸರ್ಗದ ನಿಯಮದ ಪ್ರಕಾರ ಒಂದು ಜಾತಿಯ ಗಿಡ ಅಥವಾ ಬಳ್ಳಿಯಲ್ಲಿ ಅದೇ ಜಾತಿಯ ಹೂ , ಕಾಯಿ ಮತ್ತು ಹಣ್ಣು ಬಿಡುವುದು ವಾಡಿಕೆ . ಹಿಂದಿನ ಹಳ್ಳಿ ಜನರ ಮಾತೇ ಇದೆ . ಮಾವಿನ ಕಾಯಿ ಮರದಲ್ಲಿ ಬೇವಿನ ಕಾಯಿ ಬಿಡುವುದೇ ಎಂದು . ಅದರಂತೆ " ಬಾಳೆಗೆ ಒಂದೇ ಗೊನೆ ಬಾಳೋರಿಗೆ ಒಂದೇ ಮನೆ " ಎಂಬ ಗಾಧೆ ಕೂಡ ಇಂದಿಗೂ ಪ್ರಚಲಿತದಲ್ಲಿದೆ . ಅದೇನೇ ಆದರೂ ಒಂದು ಮರದಲ್ಲಿ ಒಂದೇ ರೀತಿಯ ಫಲ ಬಿಡುವುದು ಸರ್ವೇ ಸಾಮಾನ್ಯ . ಆದರೆ ಸ್ಯಾಮ್ ವ್ಯಾನ್ ಆಕೆನ್ ಕಂಡ ಕನಸು ಒಂದೇ ಮರದಲ್ಲಿ ಸುಮಾರು 40 ರೀತಿಯ ಹಣ್ಣುಗಳು ಬಿಟ್ಟರೆ ಹೇಗಿರುತ್ತದೆ ಎಂದು !!! ಇದು ಕೇಳಲು ಏನೋ ಒಂದು ಥರ ವಿಚಿತ್ರ ಎನಿಸಿದರೂ ಇದು ಸತ್ಯ . ನಿಜವಾಗಲೂ 40 ರೀತಿಯ ಹಣ್ಣುಗಳು ಬಿಡುವ ಮರ ಜಗತ್ತಿನಲ್ಲಿ ಇದೆ !!!
ಇಲ್ಲಿ ನಾವು ಈ 40 ರೀತಿಯ ಹಣ್ಣುಗಳನ್ನು ಬಿಡುವ ಮರ ಜನ್ಮ ತಾಳಿದ ಕಥೆಯನ್ನು ಹೇಳಲು ಬಯಸುತ್ತೇವೆ . ಇದರ ಕೃಷಿ , ಸಂಶೋಧನೆ ಮತ್ತು ಸಂರಕ್ಷಣೆ ಹೇಗೆ ನಡೆಯಿತೆಂದು ತಿಳಿಸಲು ಈ ಲೇಖನವನ್ನು ಸಾದರ ಪಡಿಸುತ್ತಿದ್ದೇವೆ . ಸ್ಯಾಮ್ ವ್ಯಾನ್ ಆಕೆನ್ ಒಬ್ಬ ಹವ್ಯಾಸಿ ಮತ್ತು ಸಮಕಾಲೀನ ಚಿತ್ರ ಬಿಡಿಸುವವರು ಮತ್ತು ಸೈರಾಕ್ಯೂಸ್ ವಿಶ್ವ ವಿದ್ಯಾಲಯದಲ್ಲಿ ಆರ್ಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು . ಅವರು ಅವರ ಕನಸಿನ ಕೂಸಾದ " ಒಂದೇ ಮರದಲ್ಲಿ 40 ರೀತಿಯ ಹಣ್ಣುಗಳು " ಎಂಬ ಪ್ರಾಜೆಕ್ಟ್ ಹೇಗೆ ಶುರುವಾಯಿತು ಮತ್ತು ಹೇಗೆ ಮುನ್ನಡೆಯಿತು , ಅದಕ್ಕೆ ಎದುರಾದ ಚಾಲೆಂಜ್ ಗಳೇನು ಎಂಬುದನ್ನು ಬಹಳ ಅಚ್ಚುಕಟ್ಟಾಗಿ ಹಂಚಿಕೊಂಡಿದ್ದಾರೆ .
ಸ್ಯಾಮ್ ವ್ಯಾನ್ ಆಕೆನ್ ಗೆ ನಿಸರ್ಗ ಎಂದರೆ ಮೊದಲಿನಿಂದಲೂ ಪಂಚ ಪ್ರಾಣ . ಅವರೇ ಹೇಳಿರುವಂತೆ ಅವರದು ಕೃಷಿ ಕುಟುಂಬದ ಹಿನ್ನೆಲೆ . ಆದ್ದರಿಂದ ಅವರು ಸಣ್ಣ ಮಗುವಾಗಿದ್ದಾಗಿನಿಂದ ಪ್ರಕೃತಿಯ ಸೊಬಗಿನ ಮಡಿಲಲ್ಲೇ ಬೆಳೆದರು . ಅವರು ಹುಟ್ಟಿದಾಗಿನಿಂದ ಮನುಷ್ಯ ಹೇಗೆ ನಿಸರ್ಗದ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬುದನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು . ಈ ವಿಷಯವೇ ಅವರ ಈ ಕನಸಿಗೆ ಒತ್ತು ಕೊಟ್ಟು ನನಸಾಗಲು ಪ್ರೇರೇಪಿಸಿತು . ಅವರು ಪ್ರಪ್ರಥಮ ಬಾರಿಗೆ ಈಡನ್ ಎಕ್ಸಿಬಿಷನ್ ನಲ್ಲಿ ವಿವಿಧ ತರಕಾರಿಗಳನ್ನು ಒಟ್ಟಿಗೆ ಕಸಿ ಮಾಡಿ ಅದರಿಂದ ಬಂದಂತಹ ವಿಚಿತ್ರ ಸಸಿಗಳನ್ನು ಪ್ರದರ್ಶನಕ್ಕೆ ಇಟ್ಟು ಎಲ್ಲರ ಗಮನ ಸೆಳೆದಿದ್ದರು . ಇದು ತಕ್ಷಣ ಎಲ್ಲರ ಮೆಚ್ಚುಗೆ ಗಳಿಸಿತು.
ಇದರಿಂದ ಉತ್ತೇಜಿತಗೊಂಡ ಸ್ಯಾಮ್ ವ್ಯಾನ್ ಆಕೆನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪ್ರಯೋಗವನ್ನು ಹಣ್ಣುಗಳ ಮೇಲೆ ಏಕೆ ಪ್ರಯೋಗ ಮಾಡಬಾರದು ಎಂದು ಯೋಚಿಸಿ ತಕ್ಷಣ ಈ ಮಹತ್ತರ ಯೋಜನೆಯನ್ನು ಕೈ ಗೆತ್ತಿಕೊಂಡು ಕೆಲವು ವರ್ಷಗಳ ಕಾಲ ಹಲವಾರು ಮರಗಳ ಮೇಲೆ ಸಂಶೋಧನೆ ಕೈ ಗೊಂಡು ಸುಮಾರು 40 ಹಣ್ಣುಗಳ ಸಸಿಗಳನ್ನು ಕಸಿ ಮಾಡಲು ಮುಂದಾದರು ಮತ್ತು ಇದರಲ್ಲಿ ಯಶಸ್ಸನ್ನು ಕೂಡ ಪಡೆದರು . ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಅವರ ಆ ಶ್ರಮದ ಸಂಶೋಧನೆಯ ಪ್ರತಿಫಲವೇ ಸುಮಾರು 40 ಹಣ್ಣುಗಳ ಹೈಬ್ರಿಡ್ ಮರ ಜನ್ಮ ತಾಳಲು ಕಾರಣವಾಯಿತು .ಸ್ಯಾಮ್ ವ್ಯಾನ್ ಆಕೆನ್ ರ ಪ್ರಕಾರ ಆ ಹೈಬ್ರಿಡ್ ಮರ ವಸಂತ ಕಾಲದಲ್ಲಿ ಬಗೆ ಬಗೆಯ ಹೂ ಬಿಟ್ಟು ಎಲ್ಲರನ್ನೂ ಬೆರಗು ಗೊಳಿಸುತ್ತದೆ . ಇದು ಕಲೆಯ ದೃಷ್ಟಿಯಲ್ಲಿ ನೋಡುವುದಾದರೆ ನಿಜಕ್ಕೂ ಒಂದು ಅದ್ಭುತಕ್ಕೆ ಉದಾಹರಣೆಯೇ ಸರಿ .
ಸ್ಯಾಮ್ ವ್ಯಾನ್ ಆಕೆನ್ ಹೇಳಿರುವ ಪ್ರಕಾರ ಈ ಅದ್ಬುತ ಸಾಧನೆಗೆ ಕೆಲವು ತಿಂಗಳುಗಳೇ ಹಿಡಿದಿದ್ದು , ಇದರ ಪ್ರತಿಫಲವೇ ಅವರು ಬೆಳೆಸಿದ ಒಂದೇ ಮರದಲ್ಲಿ ಬಾದಾಮಿ , ಪ್ಲಮ್ , ಪೀಚ್ , ಏಪ್ರಿಕಾಟ್ , ನೆಕ್ಟರಿನ್ ಎಂಬ ಇತ್ಯಾದಿ ಹಣ್ಣುಗಳನ್ನು ಬಿಡಲು ಪ್ರಾರಂಭಿಸಿತು . ಇವು ಕೇವಲ ಕೆಲವು ಹಣ್ಣುಗಳು ಮಾತ್ರ . ಇನ್ನೂ ಹಲವಾರು ರೀತಿಯ , ಬಗೆ ಬಗೆಯ , ನಾವು ಇದುವರೆಗೂ ಎಲ್ಲೂ ನೋಡಿರದ ಹಣ್ಣುಗಳನ್ನು ಈ ಮರದಲ್ಲಿ ಕಾಣಬಹುದು ಎನ್ನುತ್ತಾರೆ ಸ್ಯಾಮ್ ವ್ಯಾನ್ ಆಕೆನ್.
ಸ್ಯಾಮ್ ವ್ಯಾನ್ ಆಕೆನ್ ರದು ಧಾರಾಳ ಮನೋಭಾವ . ಅವರ ಈ ಯೋಜನೆ ಕೇವಲ ಅವರ ಮನಸ್ಸಿನ ಖುಷಿಗಷ್ಟೇ ಸೀಮಿತವಾಗಿರಲಿ ಎಂಬ ಭಾವನೆ ಎಂದಿಗೂ ಅವರಿಗೆ ಬರಲೇ ಇಲ್ಲ . ಅವರ ವಿಶಾಲ ಮನೋಭಾವದಿಂದ ಈ ಯೋಜನೆ ಜಗತ್ತಿಗೆ ಪ್ರಸಿದ್ಧಿಯಾಗಲೀ ಎಂಬ ಕಾರಣಕ್ಕೆ ಇಂತಹ ಸುಮಾರು 16 ಮರಗಳನ್ನು ದೇಶದ ಹಲವು ಭಾಗಗಳಲ್ಲಿ ವಿವಿಧ ಮ್ಯೂಸಿಯಂ , ಸದಾ ಜನನಿಬಿಡ ಪ್ರದೇಶಗಳು , ಕಮ್ಯೂನಿಟಿ ಸೆಂಟರ್ ಗಳು ಮತ್ತು ಪ್ರೈವೇಟ್ ಆರ್ಟ್ ಗ್ಯಾಲರಿ ಗಳಲ್ಲಿ ನೆಟ್ಟು ಬೆಳೆಸಲಾರಂಭಿಸಿದರು . ಇದರಿಂದ ಹಲವಾರು ಮಂದಿ ಪ್ರೇರೇಪಿತಗೊಳ್ಳುತ್ತಾರೆ ಮತ್ತು ಇಂತಹ ಹಲವಾರು ಚಿಂತನೆಗಳು ಮೈದಳೆಯುತ್ತವೆ ಎಂಬುದು ಅವರ ಭಾವನೆ . ನಿಜಕ್ಕೂ ಎಂತಹ ಅದ್ಭುತ ಸಾಧನೆ ಎಂದು ನಾವೆಲ್ಲರೂ ತಲೆದೂಗಬೇಕು . ಅಲ್ಲವೇ ?



Click it and Unblock the Notifications
