Just In
Don't Miss
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಲಿಂಗಿ ಸಮುದಾಯಕ್ಕಾಗಿ ಉದ್ಯೋಗ ಮೇಳ
ಸಲಿಂಗಿಗಳನ್ನು ಸಮಾನವಾಗಿ ನೋಡಬೇಕು ಎನ್ನುವ ಕಾನೂನು ಹೋರಾಟವು ನಡೆಯುತ್ತಿರುವಂತೆ ಅವರಿಗಾಗಿ ಈಗ ಉದ್ಯೋಗ ಮೇಳವೊಂದು ನಡೆಯುತ್ತಲಿದೆ. ಇದರಲ್ಲಿ ಐಟಿ, ಫ್ರಂಟ್ ಡೆಸ್ಕ್, ಅಡ್ಮಿನ್ ಮತ್ತು ಹೌಸ್ ಕೀಪಿಂಗ್ ಸಹಿತ ಸುಮಾರು 50ಕ್ಕೂ ಹೆಚ್ಚು ಕಂಪೆನಿಗಳು ಇದರಲ್ಲಿ ಭಾಗಿಯಾಗಲಿದೆ.
ಭಾರತದಲ್ಲಿ ಸಲಿಂಗ ಕಾಮಕ್ಕೆ ಕಾನುನು ಬದ್ಧ ಮಾನ್ಯತೆ ನೀಡಿದ ಒಂದು ವರ್ಷದ ಬಳಿಕ ಬೆಂಗಳೂರಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸಲಿಂಗ ಸಮುದಾಯಕ್ಕೆ ಇದೇ ಜುಲೈ ತಿಂಗಳಲ್ಲಿ ಉದ್ಯೋಗ ಮೇಳವು ನಡೆಯಲಿದೆ. ಪ್ರೈಡ್ ಸರ್ಕಲ್ ಎನ್ನುವ ಎರಡು ವರ್ಷ ಹಳೆಯ ಕಂಪೆನಿಯೊಂದು ಉದ್ಯೋಗಸ್ಥ ವಿದೇಶಿ ಹಾಗೂ ಭಾರತೀಯ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಈ ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತಲಿದೆ. ಪ್ರೈಡ್ ಸರ್ಕಲ್ ರೈಸ್'(ರಿ ಇಮೇಜಿಂಗ್ ಇನಕ್ಲೂಷನ್ ಫಾರ್ ಸೋಶಿಯಲ್ ಇಕ್ವಿಟಿ) ಎನ್ನುವ ಧ್ಯೇಯದಡಿಯಲ್ಲಿ ಈ ಉದ್ಯೋಗ ಮೇಳವನ್ನು ಇನ್ನು ಹತ್ತು ನಗರಗಳಲ್ಲಿ ನಡೆಸಲು ನಿರ್ಧಾರ ಮಾಡಿದೆ. ಇದರಿಂದ 2020 ವೇಳೆ ಸುಮಾರು 1000 ಉದ್ಯೋಗ ನಿರ್ಮಾಣವಾಗಲಿದೆ.
ಬೆಂಗಳೂರು ಉದ್ಯೋಗ ಮೇಳದಲ್ಲಿ ಸುಮಾರು 50 ಕಂಪೆನಿಗಳು ಭಾಗಿಯಾಗುವ ನಿರೀಕ್ಷೆಯಿದೆ. ಐಟಿ, ಫ್ರಂಟ್ ಡೆಸ್ಕ್, ಅಡ್ಮಿನ್ ಮತ್ತು ಹೌಸ್ ಕೀಪಿಂಗ್ ಮತ್ತು ಇತರ ವಿಭಾಗಗಳಲ್ಲಿ ಉದ್ಯೋಗವಿದೆ. ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಮೊದಲು ನೋಂದಣಿ ಮಾಡಿಕೊಳ್ಳಬೇಕು ಮತ್ತು ಹಾಗೆ ಬಂದವರಿಗೆ ಅವಕಾಶವಿಲ್ಲ ಎಂದು ಪ್ರೈಡ್ ಸರ್ಕಲ್ ನ ಸಹ ಸಂಸ್ಥಾಪಕರಾಗಿರುವ ಶ್ರೀನಿ ರಾಮಸ್ವಾಮಿ ಹೇಳಿದ್ದಾರೆ.
ಎರಡು ವಾರಗಳ ಮೊದಲು ನಾವು ಭಾರತದಲ್ಲೇ ಮೊದಲ ಬಾರಿಗೆ ಸಲಿಂಗಿ ಸಮುದಾಯಕ್ಕಾಗಿ ರೆಸ್ಯುಮೆ ಡೆಟಾ ಬೇಸ್ ಮಾಡಿದ್ದಾರೆ. ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪಿಎಚ್ ಡಿ ಶಿಕ್ಷಣ ಪೂರೈಸಿದವರ ತನಕ ಅಭ್ಯರ್ಥಿಗಳು ಇದ್ದಾರೆ. ವೈಯಕ್ತಿಕ ವಿವರಗಳನ್ನು ಪರಿಶೀಲಿಸಿದ ಬಳಿಕ ನಾವು ಇದನ್ನು ಕಂಪೆನಿಗಳಿಗೆ ಕಳುಹಿಸಿಕೊಡುತ್ತಿದ್ದೇವೆ. ಸಂದರ್ಶನವು ಉದ್ಯೋಗ ಮೇಳದ ದಿನ ನಡೆಯಲಿದೆ ಮತ್ತು ಕಂಪೆನಿಯ ಪ್ರತಿನಿಧಿಗಳು ಅಭ್ಯರ್ಥಿಗಳನ್ನು ಭೇಟಿ ಮಾಡಲಿದ್ದಾರೆ. ಈ ಡೆಟಾ ಬೇಸ್ ನಲ್ಲಿ ಸುಮಾರು 80 ರೆಸ್ಯೂಮಿ ಹೊಂದಿದೆ ಎಂದು ಅವರು ಹೇಳುತ್ತಾರೆ.
ಈ ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ. ಇಲ್ಲಿ ಕಂಪೆನಿಗಳು ಶುಲ್ಕ ಪಾವತಿಸುತ್ತವೆ. ಸಮುದಾಯದ ಬಗ್ಗೆ ಒಳ್ಳೆಯ ಕೆಲಸ ಮಾಡುತ್ತಿರುವಂತಹ ಹಲವಾರು ಸರಕಾರೇತರ ಸಂಸ್ಥೆಗಳೊಂದಿಗೆ ಕೂಡ ನಾವು ಕೆಲಸ ಮಾಡುತ್ತಲಿದ್ದೇವೆ. ಬೆಂಗಳೂರನ್ನು ನಾವು ಮೊದಲು ಆಯ್ಕೆ ಮಾಡಿಕೊಂಡಿದ್ದೇವೆ. ಯಾಕೆಂದರೆ ಇಲ್ಲಿ ಅವಕಾಶಗಳು ಹೆಚ್ಚಾಗಿವೆ. ದಿನಪೂರ್ತಿ ನಡೆಯಲಿರುವಂತಹ ಕಾನ್ಫರೆನ್ಸ್ ನಲ್ಲಿ ಪ್ರಸಿದ್ಧ ವ್ಯಕ್ತಿಗಳು ಇಲ್ಲಿ ಮಾತನಾಡಲಿದ್ದಾರೆ. ಸುಮಾರು 20 ಬೂತ್ ಗಳನ್ನು ನಾವು ಹಾಕಿಕೊಂಡಿದ್ದೇವೆ.
ಇಲ್ಲಿ ಉದ್ಯೋಗದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲಿದ್ದೇವೆ ಎಂದು ರಾಮಸ್ವಾಮಿ ಮಾಹಿತಿ ನೀಡಿದರು. 2018ರಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 377 ತೆಗೆದು ಹಾಕಿದ ಬಳಿಕ ಕಂಪೆನಿಗಳು ಈಗ ಸಲಿಂಗಿಗಳಿಗೆ ಕೂಡ ಉದ್ಯೋಗ ನೀಡಲು ಮುಂದಾಗುತ್ತಿವೆ.
ಕಂಪೆನಿಗಳು ಲೋಗೋ ಹಾಕಿಕೊಂಡು ಬೆಂಬಲ ವ್ಯಕ್ತಪಡಿಸಿವೆ. ಕೆಲವೊಂದು ಕಂಪೆನಿಗಳಲ್ಲಿ ಫ್ರಂಟ್ ಡೆಸ್ಕ್ ಮತ್ತು ಅಡ್ಮಿನ್ ಗೆ ಲಿಂಗ ಪರಿವರ್ತನೆ ಮಾಡಿಕೊಂಡಿರುವವರನ್ನು ಆಯ್ಕೆ ಮಾಡಲಾಗಿದೆ. ಸಲಿಂಗಿ ಸಮುದಾಯದವರನ್ನು ಉದ್ಯೋಗಕ್ಕಾಗಿ ನೇಮಿಸುವಂತಹ ಪ್ರಕ್ರಿಯೆಯು ಇನ್ನಷ್ಟು ಹೆಚ್ಚಬೇಕು ಮತ್ತು ಅವರಿಗೆ ಕೂಡ ಉದ್ಯೋಗದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು. ಸಲಿಂಗಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಿರುವಂತಹ ಜಪಾನ್ ಮತ್ತು ಅಮೆರಿಕಾದಂತಹ ರಾಷ್ಟ್ರಗಳಿಂದ ಅವರು ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಇದರ ಬಗ್ಗೆ ಆಸಕ್ತಿ ಇರುವಂತಹವರು [email protected] ಗೆ ಮೇಲ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಉದ್ಯೋಗ ಮೇಳವು ಜುಲೈ 12ರಂದು ಹೋಟೆಲ್ ಲಲಿತ್ ಅಶೋಕದಲ್ಲಿ ನಡೆಯಲಿದೆ.