Just In
Don't Miss
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶ್ವದೆಲ್ಲೆಡೆಯಿಂದ ಮಹಿಳೆಯರು ಗರ್ಭಿಣಿಯಾಗಲು ಈ ಸ್ಥಳಕ್ಕೆ ಬರುತ್ತಾರಂತೆ!
ಜನಾಂಗೀಯ ಶುದ್ಧೀಕರಣದ ನೆಪವೊಡ್ಡಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಸಾವಿರಾರು ಮಂದಿ ಅಮಾಯಕರ ನರಮೇಧ ನಡೆಸಿದ್ದ. ಪರಿಶುದ್ಧ ಆರ್ಯನ್ ಪಂಗಡಕ್ಕೆ ಸೇರದೆ ಇರುವಂತಹ ಜನರನ್ನು ಅವನು ಹತ್ಯೆ ಮಾಡಿಸಿದ್ದ. ಇದರ ಬಳಿಕ ಆರ್ಯನ್ ಪಂಗಡವು ಹೆಚ್ಚು ಜನಪ್ರಿಯವಾಯಿತು ಮತ್ತು ಮಾನವ ಜಾತಿಯಲ್ಲೇ ಇದು ಅತ್ಯಂತ ಪರಿಶುದ್ಧ ತಳಿಯೆಂದು ಪರಿಗಣಿಸಲಾಯಿತು.
ಭೂಮಿ ಮೇಲಿರುವ ಜನರಲ್ಲಿ ಆರ್ಯನ್ನರು ಪರಿಶುದ್ಧ ರಕ್ತ ಹೊಂದಿರುವವರು ಎಂದು ನಾಝಿಗಳು ನಂಬಿದ್ದರು. ಆರ್ಯನ್ನರು ಸಾಮಾನ್ಯವಾಗಿ ತೆಳುವಾದ ಚರ್ಮ, ಹೊಂಬಣ್ಣದ ಕೂದಲು ಮತ್ತು ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವನು. ವಿಶ್ವದೆಲ್ಲೆಡೆಯ ಜನರು ಈಗ ಪರಿಶುದ್ಧ ಆರ್ಯನ್ ತಳಿಗಾಗಿ ಹುಡುಕಾಟ ನಡೆಸುವರು ಮತ್ತು ಇದೇ ತಳಿಯ ಮಗು ಬೇಕೆಂದು ಬಯಸುತ್ತಿದ್ದಾರೆ. ಆರ್ಯನ್ ತಳಿಯ ಮಗುವನ್ನು ಪಡೆಯಲು ಮಹಿಳೆಯರು ಬಯಸುತ್ತಿರುವುದು ಯಾಕೆ ಎಂದು ಈ ಲೇಖನದ ಮೂಲಕ ತಿಳಿಯುವ....
ಆರ್ಯನ್ನರ ಪರಿಶುದ್ಧ ರಕ್ತವೆಂದು ಇಲ್ಲಿನ ಜನರು ಹೇಳುವರು...
ಇತಿಹಾಸಕಾರರ ಪ್ರಕಾರ ಬ್ರೊಕಪ ಎನ್ನುವ ಪಂಗಡದ ಜನರು ನೀಲಿ ಕಣ್ಣುಗಳು, ತೆಳು ಚರ್ಮ ಮತ್ತು ಇತರ ಸಮುದಾಯದವರಿಗಿಂತ ಎತ್ತರದ ದೇಹ ಹೊಂದಿದ್ದರು. ಲಡಾಕ್ ನಲ್ಲಿ ನೆಲೆನಿಂತ ಅಲೆಕ್ಸಾಂಡರ್ ನ ಸೇನೆಯ ವಂಶಸ್ಥರು ಎಂದು ಹೇಳಲಾಗುತ್ತದೆ. ಈ ಜನರಲ್ಲಿ ಪರಿಶುದ್ಧ ಆರ್ಯನ್ ರಕ್ತವಿದೆ ಎಂದು ಹೇಳಲಾಗುತ್ತದೆ.
ಇವರು ತಮ್ಮ ಪೂರ್ವಿಜರು ಮತ್ತು ಸಂತತಿ ಬಗ್ಗೆ ಹೆಮ್ಮೆ ಪಡುವರು
ಬ್ರೊಕಪ ಜನರು ತಮ್ಮ ಪೂರ್ವಿಜರು ಹಾಗೂ ಸಂತತಿ ಬಗ್ಗೆ ಇರುವ ವೈವಿಧ್ಯತೆ ಬಗ್ಗೆ ತುಂಬಾ ಹೆಮ್ಮೆಪಡುವರು. ತಮ್ಮ ಸಂತತಿ ಹಾಗೂ ಜೀವನವನ್ನು ಇವರು ಕೆಲವೊಂದು ಕಠಿಣ ನಿಯಮಗಳ ಮೂಲಕ ಸಂರಕ್ಷಿಸಿದ್ದಾರೆ.
ಬ್ರೊಕಪ ಸಮುದಾಯದವರು 4 ಗ್ರಾಮಗಳಲ್ಲಿರುವರು
ಇತಿಹಾಸಕಾರರ ಪ್ರಕಾರ 1991ರಲ್ಲಿ ಲಡಾಖ್ ನ ನಾಲ್ಕು ಗ್ರಾಮಗಳಲ್ಲಿ 1900 ಬ್ರೊಕಪಗಳು ಮಾತ್ರ ಬದುಕುಳಿದಿದ್ದರು. ಈ ಜನರು ತಮ್ಮ ಜನಾಂಗ ಹಾಗೂ ಜನಾಂಗೀಯತೆ ಬಗ್ಗೆ ತುಂಬಾ ನಿಖರವಾಗಿದ್ದರು. ಇವರು ಬೇರೆ ಸಮುದಾಯಗಳ ಜತೆಗೆ ಹೆಚ್ಚು ಬೆರೆಯದ ಕಾರಣದಿಂದಾಗಿ ಹೊರಜಗತ್ತಿನಿಂದ ದೂರವಾದರು. ಈ ಜನಾಂಗದ ಹುಡುಗಿಯು ಬೇರೆ ಜನಾಂಗದ ಹುಡುಗನನ್ನು ಮದುವೆಯಾದರೆ ಆಗ ಅವರಿಗೆ ಗ್ರಾಮಕ್ಕೆ ಮರಳಲು ಅವಕಾಶವಿರಲಿಲ್ಲ.
ಸರ್ಕಾರ ಮಧ್ಯಪ್ರವೇಶಿಸಿ ಪ್ರವಾಸಿ ತಾಣವನ್ನಾಗಿಸಿತು!
ಇಲ್ಲಿನ ಗ್ರಾಮಗಳಿಗೆ ಹೊರಗಿನ ಜನರಿಗೆ ಪ್ರವೇಶಿಸಲು ಅನುಮತಿ ಇಲ್ಲದೆ ಇದ್ದರೂ ಭಾರತ ಸರ್ಕಾರವು ಮಧ್ಯ ಪ್ರವೇಶ ಮಾಡಿ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಿತು. ಈ ಗ್ರಾಮದಲ್ಲಿ ಇರುವ ಜನರು ನೀಲಿ ಕಣ್ಣುಗಳು, ತೆಳು ಚರ್ಮ, ಹೆಚ್ಚಿನ ಜಾಣ್ಮೆ ಹೊಂದಿರುವ ಕಾರಣದಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗಳು ಇಲ್ಲಿನ ಜನರ ತಳಿ ಬಗ್ಗೆ ಹೆಚ್ಚು ಕುತೂಹಲ ಹೊಂದಿರುವರು.
Most Read: ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?
ಪುರುಷರ ಕಡೆ ಮಹಿಳೆಯರು ಆಕರ್ಷಿತರಾಗುವರು
ಇಲ್ಲಿನ ಜನರನ್ನು ಪರಿಶುದ್ಧ ಆರ್ಯನ್ನರು ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ವಿಶ್ವದೆಲ್ಲೆಡೆಯಿಂದ ಮಹಿಳೆಯರು ಇಲ್ಲಿಗೆ ಬಂದು ಗರ್ಭ ಧರಿಸಲು ಬಯಸುವರು.
ಬ್ರೊಕಪಗಳು ಮಾತ್ರ ಪರಿಶುದ್ಧ ಆರ್ಯನ್ನರು
ಆರ್ಯನ್ನರ ಇತಿಹಾಸವನ್ನು ನೋಡಿದಾಗ ಬ್ರೊಕಪ ಜನಾಂಗದವರು ಮಾತ್ರ ಆರ್ಯನ್ನರ ಪರಿಶುದ್ಧ ತಳಿ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಇಲ್ಲಿಗೆ ವಿಶ್ವದ ವಿವಿಧ ಭಾಗದ ಮಹಿಳೆಯರು ಬಂದು ಪರಿಶುದ್ಧ ಆರ್ಯನ್ನರ ತಳಿಯನ್ನು ತಮ್ಮ ಗರ್ಭದಲ್ಲಿ ಧರಿಸುವರು.
Most Read: ಪೂಜಾ ಕೋಣೆಯಲ್ಲಿ ಇಂತಹ ದೇವರ ಪ್ರತಿಮೆ ಇರಿಸಬೇಡಿ, ಇಲ್ಲಾಂದ್ರೆ ಕಷ್ಟದ ಮೇಲೆ ಕಷ್ಟ ಬರಬಹುದು!
ಇದೀಗ ವ್ಯಾಪಾರವಾಗಿದೆ
ಕೆಲವು ಮಹಿಳೆಯರು ಇಲ್ಲಿನ ಪುರುಷರಿಂದಾಗಿ ತಾವು ಗರ್ಭಿಣಿಯಾಗಿದ್ದೇವೆಂದು ತುಂಬಾ ಸಂತೋಷದಿಂದ ಹೇಳಿರುವ ಬಳಿಕ ಇದೀಗ ಇಲ್ಲಿ ವ್ಯಾಪಾರವಾಗಿ ಹೋಗಿದೆ. ಇಲ್ಲಿ ಗರ್ಭ ಧರಿಸಲು ಮಹಿಳೆಯರು ಬಂದಾಗ ಹೆಚ್ಚಿನ ಹಣ ತೆಗೆದುಕೊಂಡು ವ್ಯವಸ್ಥಿತವಾಗಿ ಇದನ್ನು ನಿರ್ವಹಿಸಲಾಗುತ್ತದೆ. ಇಲ್ಲಿ ಫೋಟೊ ತೆಗೆಯಲು ಹಣ ನೀಡಬೇಕಾಗುತ್ತದೆ.