Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ಥಾಯ್ಲೆಂಡ್ನ ಈ ದೇವಾಲಯವನ್ನು ನೆನಪಿಸಿಕೊಂಡಾಗಲೇ ಚಳಿ-ಜ್ವರ ಶುರುವಾಗುತ್ತದೆ!!
ಜೀವನದಲ್ಲಿ ಮಾಡುವಂತಹ ಪಾಪಕೃತ್ಯಗಳಿಂದ ನಮಗೆ ಸಾವಿನ ಬಳಿಕ ನರಕ ಪ್ರಾಪ್ತಿಯಾಗುವುದು ಎಂದು ಪ್ರತಿಯೊಂದು ಧರ್ಮದಲ್ಲೂ ಹೇಳಲಾಗುತ್ತದೆ. ಈ ಲೇಖನದಲ್ಲಿ ನರಕದಲ್ಲಿ ಜೀವನ ಹೇಗಿರಲಿದೆ ಎನ್ನುವ ಬಗ್ಗೆ ತಿಳಿಸಿಕೊಡಲಾಗಿದೆ.

ಥಾಯ್ಲೆಂಡ್ ನ ಮಂದಿರವೊಂದರಲ್ಲಿ ಇದರ ದರ್ಶನ ಮಾಡಿಸಲಾಗಿದೆ. ಕೇವಲ ಒಂದು ಮಂದಿರ ಮಾತ್ರವಲ್ಲ, ಇನ್ನು ಹಲವಾರು ಇದೆ. ಹೆಚ್ಚಾಗಿ ಎಲ್ಲಾ ಮಂದಿರಗಳಲ್ಲಿ ಇದು ಸಾಮಾನ್ಯವಾಗಿರುವುದು. ಯಾಕೆಂದರೆ ಇಲ್ಲಿನ ಆಕೃತಿಗಳು ತುಂಬಾ ಭೀತಿ ಮೂಡಿಸುತ್ತದೆ. ಥಾಯ್ಲೆಂಡ್ ನ ಮಂದಿರದ ವಿವರ ತಿಳಿಯಿರಿ.

ಮಂದಿರದ ಬಾಗಿಲು ಇದನ್ನು ಹೇಳುತ್ತದೆ
ಈ ಮಂದಿರಕ್ಕೆ ಭೇಟಿ ನೀಡುವಂತಹ ಜನರನ್ನು ಇಲ್ಲಿನ ಬಾಗಿಲುಗಳಲ್ಲಿ ಇರುವಂತಹ ದೊಡ್ಡ ಬಾಣಲೆಯಲ್ಲಿ ಪಾಪ ಮಾಡಿದವರನ್ನು ಬೇಯಿಸುವ ಚಿತ್ರವು ಸ್ವಾಗತಿಸುತ್ತದೆ. ಪಾಪಿಗಳನ್ನು ನರಕದಲ್ಲಿರುವಂತಹ ನಾಯಿಗಳಿಗೆ ಬಿಸಾಕುವುದು ಮತ್ತು ಕೆಲವು ಪಾಪಿಗಳು ಚಾಚಿಕೊಂಡಿರುವ ಪಕ್ಕೆಲುಗಳೊಂದಿಗೆ ಕಾಣಬಹುದು.

ಒಂದು ಫಲಕ ಹೇಳುವಂತೆ…
ಈ ಜೀವನದಲ್ಲಿ ನೀವು ಪಿಶಾಚಿಯನ್ನು ಭೇಟಿಯಾದರೆ, ಮುಂದಿನ ಜೀವನದಲ್ಲಿ ಅವುಗಳನ್ನು ಸೋಲಿಸುವಂತಹ ಅರ್ಹತೆ ಮುಂದೂಡಬೇಡಿ. ಇನ್ನೊಂದು ಫಲಕದ ಪ್ರಕಾರ `ಪ್ರತಿನಿತ್ಯ ಸ್ವಲ್ಪ ದಾನ ಮಾಡಿ ಮತ್ತು ನಿಮ್ಮ ಜೀವನ ಸಂತೋಷವಾಗಿರುವುದು'

ನಂಬಿಕೆ
ಈ ಮಂದಿರದಲ್ಲಿರುವಂತಹ ನಂಬಿಕೆಯ ಪ್ರಕಾರ, ಬೌದ್ಧ ಧರ್ಮದವರು ಸತ್ತರೆ ಆಗ ಅವರ ಒಳ್ಳೆಯದು ಮತ್ತು ಕೆಟ್ಟದನ್ನು ಪರೀಕ್ಷೆ ಮಾಡಲು ನಾಲ್ಕು ಹಂತಗಳನ್ನು ದಾಟಿ ಹೋಗಬೇಕಾಗುತ್ತದೆ. ಕೆಟ್ಟದು ಒಳ್ಳೆಯದಕ್ಕಿಂತ ಕಡಿಮೆ ಇದ್ದರೆ ಆಗ ಸ್ವರ್ಗಕ್ಕೆ ಹೋಗಬಹುದು. ಆದರೆ ಒಳ್ಳೆಯದಕ್ಕಿಂತ ಕೆಟ್ಟದು ಜಾಸ್ತಿಯಾಗಿದ್ದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇದು ಪ್ರವಾಸಿ ಕೇಂದ್ರ
ತುಂಬಾ ವಿಚಿತ್ರವಾಗಿರುವಂತಹ ಮಂದಿರವು ಈಗ ಪ್ರವಾಸಿ ಕೇಂದ್ರವಾಗಿದೆ. ಇದು ಜನರನ್ನು ದೇಶವಿದೇಶಗಳಿಂದ ಸೆಳೆಯುತ್ತಿದೆ. ಈ ಮಂದಿರವು ಹುಟ್ಟುಹಬ್ಬ, ಮದುವೆ ಮತ್ತು ಅಂತ್ಯಕ್ರಿಯೆಯು ತುಂಬಾ ಜನಪ್ರಿಯವಾಗಿದೆ.



Click it and Unblock the Notifications