Just In
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 2 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 3 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 7 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಬಂಧಗಳ ವಿಷಯದಲ್ಲಿ 'ಕರ್ಕ ರಾಶಿ'ಯವರು ಇಂತಹ ಸಮಸ್ಯೆಗಳನ್ನು ಎದುರಿಸುವರು...
ಜ್ಯೋತಿಷ್ಯ ಶಾಸ್ತ್ರವು ಅಗಾದವಾದ ವಿಚಾರ. ಇದರಿಂದ ವ್ಯಕ್ತಿಯ ವೃತ್ತಿಜೀವನ, ವಿವಾಹ ಬಂಧನ, ವೈವಾಹಿಕ ಸಂಬಂಧ ಸೇರಿದಂತೆ ಎಲ್ಲಾ ಬಗೆಯ ವಿಚಾರಗಳನ್ನು ತೆರೆದಿಡುತ್ತದೆ. ವ್ಯಕ್ತಿಯ ರಾಶಿಚಕ್ರದ ಆಧಾರದ ಮೇಲೆ ಅವರ ಸಂಬಂಧ ಹೇಗಿರುತ್ತದೆ ಎನ್ನುವುದನ್ನು ಊಹಿಸಬಹುದು. ಹನ್ನೆರಡು ರಾಶಿಚಕ್ರಗಳಿಗೆ ಹೋಲಿಸಿದರೆ ಕರ್ಕ ರಾಶಿಯ ವ್ಯಕ್ತಿಗಳು ಅತ್ಯಂತ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಅಲ್ಲದೆ ಜನರೊಂದಿಗೆ ಬಹುಬೇಗ ಸಂಬಂಧವನ್ನು ಬೇಳೆಸುತ್ತಾರೆ ಎನ್ನಲಾಗುವುದು. ನಿಷ್ಠಾವಂತ ವ್ಯಕ್ತಿಗಳಾದ ಇವರು ತಮ್ಮ ಸಂಬಂಧಗಳನ್ನು ದೀರ್ಘಾವಧಿಯವರೆಗೆ ಕಾಯ್ದುಕೊಳ್ಳುವರು ಎನ್ನಲಾಗುತ್ತದೆ.
ಗ್ರಹಗಳ ಪ್ರಭಾವ ಹಾಗೂ ನಕ್ಷತ್ರಗಳ ಪಾತ್ರ ವ್ಯಕ್ತಿಯ ಮೇಲೆ ಮಹತ್ತರವಾದ ಬದಲಾವಣೆ ಅಥವಾ ಪರಿಣಾಮವನ್ನುಂಟುಮಾಡುವುದು. ಕರ್ಕ ರಾಶಿಯ ಮೇಲೆ ಇವುಗಳ ಪ್ರಭಾವ ಹೇಗಿದೆ? ಇದರಿಂದ ಕರ್ಕ ರಾಶಿಯವರು ಸಂಬಂಧಗಳಲ್ಲಿ ಯಾವ ಬಗೆಯ ಸಮಸ್ಯೆಗಳನ್ನು ಹಾಗೂ ಸನ್ನಿವೇಶಗಳನ್ನು ಎದುರಿಸ ಬೇಕಾಗುವುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...
ನಿರಂತರ ಪ್ರೀತಿಯ ಅಗತ್ಯತೆ
ಸಂಬಂಧಗಳ ವಿಚಾರದಲ್ಲಿ ಪ್ರತಿಯೊಬ್ಬರು ಸಹ ನಿರಂತರ ಪ್ರೀತಿಯನ್ನು ತೋರಿಸುವ ಪಾಲುದಾರರನ್ನು ಹೊಂದಿರಲು ಬಯಸುತ್ತಾರೆ. ಹಾಗೆಯೇ ಕರ್ಕ ರಾಶಿಯವ್ಯಕ್ತಿಗಳು ಸಹ. ಪ್ರೀತಿ ಮತ್ತು ಸಂಗಾತಿಯು ಇವರ ಜೀವನದಲ್ಲಿ ಅತ್ಯಂತ ಮಹತ್ತರವಾದ ವಿಷಯವಾಗಿರುತ್ತದೆ. ಇವರು ಬಯಸಿದ ವ್ಯಕ್ತಿಯಿಂದ ಪ್ರೀತಿ ಪಡೆಯಲು ಸಾಧ್ಯವಾಗದೆ ಇದ್ದರೆ ಅದೊಂದು ಕಠಿಣವಾದ ಹಾಗೂ ಕಹಿಯಾದ ಸಂಗತಿ ಎಂದು ಭಾವಿಸುವರು. ತಮ್ಮ ಸಂಗಾತಿಯಿಂದ ಅಥವಾ ಸಂಬಂಧದಲ್ಲಿ ನಿರಂತರವಾದ ಪ್ರೀತಿ ದೊರೆಯಬೇಕು ಎಂದು ಬಯಸುವರು.
Most Read:ಶನಿ ದೇವನ ನಿಧಾನ ಗತಿಯ ಚಲನೆಯ ಹಿಂದಿರುವ ಅಸಲಿ ಕಹಾನಿ...
ಸಂಗಾತಿ ದೂರವಾಗುವ ಭಯ
ಇವರು ತಮ್ಮ ಸಂಗಾತಿ ಸದಾ ಬಳಿಯಲ್ಲಿಯೇ ಇರಬೇಕು ಎಂದು ಭಾವಿಸುತ್ತಾರೆ. ಅವರು ಸ್ವಲ್ಪ ದಿನದ ಮಟ್ಟಿಗೆ ದೂರವಿದ್ದರೂ ಅಸುರಕ್ಷಿತವಾದ ಭಾವನೆಯನ್ನು ಹೊಂದುವರು. ಇದು ಇವರ ಸಂಬಂಧ ಯಶಸ್ವಿಯಾಗಲು ಸಹಾಯ ಮಾಡುವುದು. ಕೆಲವೊಮ್ಮೆ ಸಂವಹನದ ಕೊರತೆಯಿಂದ ಇಬ್ಬರ ನಡುವೆ ಸಮಸ್ಯೆಗಳು ಉದ್ಭವಿಸುವುದು. ಇದಕ್ಕೆ ಅತಿಯಾದ ಸ್ವಾಮ್ಯತ್ವದ ಗುಣವು ಕಾರಣವಾಗಿರುವುದು. ನಂಬಿಕೆಯ ಸಮಸ್ಯೆಯಿಂದಲೂ ಸಂಬಂಧ ಹಾಳಾಗಬಹುದು ಅಥವಾ ಅಂತ್ಯವಾಗಬಹುದು ಎನ್ನುವ ಭಯವಿರುತ್ತದೆ.
ಅತಿಯಾದ ಕಾಳಜಿ ಬೇಸರವನ್ನುಂಟುಮಾಡುವುದು
ಸಂಬಂಧಗಳಲ್ಲಿ ಪರಸ್ಪರ ಕಾಳಜಿಯು ಅತ್ಯಗತ್ಯವಾಗಿರುತ್ತದೆ. ಆದರೆ ಅದೇ ಕಾಳಜಿ ಅತಿಯಾಗಿ ತೋರಿಸುವುದರಿಂದ ಅದೊಂದು ಬಗೆಯ ಗೊಂದಲ ಹಾಗೂ ಉಸಿರುಗಟ್ಟಿಸುವಂತಹ ಅನುಭವವನ್ನು ನೀಡುವುದು. ಇವರು ತೋರುವ ಅತಿಯಾದ ಕಾಳಜಿಯು ಸಂಬಂಧದಲ್ಲಿ ಸ್ವಾತಂತ್ರ್ಯವನ್ನು ಹಾಳುಮಾಡುವುದು. ಅಲ್ಲದೆ ಸಮತೋಲಿತ ಸಂಬಂಧ ಹೊಂದಲು ಕಷ್ಟವಾಗುವುದು. ಹಾಗಾಗಿ ಇವರು ಅತಿಯಾದ ಪ್ರೀತಿಯಿಂದಲೂ ಉಸಿರುಗಟ್ಟಿ ದಂತಹ ಅನುಭವ ಅಥವಾ ಭಾವನೆಯನ್ನು ಹೊಂದುವರು.
Most Read:ನೋಡಿ ಇದೇ ಕಾರಣಕ್ಕೆ ಕಣ್ಣುಗಳಲ್ಲಿ ಸದಾ ನೀರು ತುಂಬಿಕೊಂಡಿರುವುದು!
ಪ್ರೀತಿಯ ಕಲ್ಪನೆ
ಜೀವನದ ಕೊನೆಯ ಹಂತದವರೆಗೂ ಒಂದೇ ಸಂಬಂಧದಲ್ಲಿ ಉಳಿಯಬೇಕು, ತಾವು ಬಯಸುವ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಇರಬೇಕು ಹಾಗೂ ಪ್ರೀತಿಯ ಜೀವನದ ಸೌಂದರ್ಯ ಹೃದಯವನ್ನು ತುಂಬಬೇಕು ಎನ್ನುವ ಕಲ್ಪನೆಯನ್ನು ಹೊಂದಿರುತ್ತಾರೆ. ಇನ್ನೊಂದೆಡೆಗೆ ವಿಭಿನ್ನ ಪಾಲುದಾರರೊಂದಿಗೆ ಪ್ರಯೋಗ ನಡೆಸುವುದು ಮತ್ತು ಪ್ರೀತಿಯ ಪರಿಕಲ್ಪನೆಯನ್ನು ಅನ್ವೇಷಿಸುವ ಪರಿಕಲ್ಪನೆಯು ಇವರನ್ನು ಸಮಾನವಾಗಿ ಆಕರ್ಷಿಸುತ್ತದೆ. ಹಾಗಾಗಿ ಇವರ ಜೀವನದಲ್ಲಿ ಹೃದಯವು ಎರಡು ಆಕರ್ಷಕ ಮಾರ್ಗಗಳ ನಡುವೆ ತೂಗಾಡುತ್ತದೆ.
ಭವಿಷ್ಯದ ಯೋಜನೆ ವಸ್ತುನಿಷ್ಠವಾಗಿರುವುದಿಲ್ಲ
ಇವರು ಮದುವೆಯ ಕಲ್ಪನೆಯನ್ನು ಹಾಗೂ ಸಂಬಂಧವನ್ನು ಪ್ರೀತಿಸುತ್ತಾರೆ. ಜೊತೆಗೆ ತಮ್ಮದೇ ಆದ ಸ್ವಂತ ಮನೆಯಲ್ಲಿ ಸಂಸಾರ ನಡೆಸುತ್ತಾರೆ, ಮಕ್ಕಳನ್ನು ಹೊಂದುತ್ತಾರೆ. ನಿಮ್ಮ ಸಮಯವನ್ನು ಇವುಗಳಿಗಾಗಿ ಸೂಕ್ತ ರೀತಿಯಲ್ಲಿ ನಿಯೋಜಿಸುತ್ತೀರಿ. ಆದರೆ ಕೆಲವೊಮ್ಮೆ ಭವಿಷ್ಯದ ಯೋಜನೆಗಳ ಬಗ್ಗೆ ಸ್ಪಷ್ಟತೆ ಹೊಂದಿರುವುದಿಲ್ಲ. ಇದು ಸಂಬಂಧಗಳಲ್ಲಿ ಗೊಂದಲ ಸೃಷ್ಟಿಸುವುದು. ಪರಸ್ಪರ ಚರ್ಚೆಯ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಬಹುದು.