Latest Updates
-
ಉತ್ತರ ಪ್ರದೇಶದಲ್ಲಿ ಬಿಸಿಲ ಬೇಗೆ: ಎಸಿ ಇಲ್ಲದೆಯೂ ಮನೆಯನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಜಾರುವ ನೆಲದಲ್ಲಿ ವ್ಯಾಯಾಮ ಮಾಡುವುದು ಹೇಗೆ? ಮನೆಯಲ್ಲೇ ಫಿಟ್ ಆಗಿರಲು ಇಲ್ಲಿದೆ 12 ನಿಮಿಷದ ಪ್ಲಾನ್! -
ಬೆಂಗಳೂರಿನ ನೀರಿನ ಅಭಾವ: ರೂಮ್ಮೇಟ್ಗಳ ಜಗಳ ತಪ್ಪಿಸಲು ಈ 'ಮೈಕ್ರೋ-ಸ್ಕ್ರಿಪ್ಟ್' ಟ್ರಿಕ್ ಬಳಸಿ! -
ಚೆನ್ನೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಕೇವಲ 15 ನಿಮಿಷದ ಈ ಟಿಪ್ಸ್ ಸಾಕು! -
ಅಮರನಾಥ ಯಾತ್ರೆ 2026: ಹಿಮಾಲಯದ ಕಡಿದಾದ ಹಾದಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಕ್ರಮಗಳನ್ನು ಮರೆಯದಿರಿ! -
ಮೊಹರಂ ಮೆರವಣಿಗೆ: ಇಂದು ನಿಮ್ಮ ನಗರದಲ್ಲಿ ಟ್ರಾಫಿಕ್ ಸಮಸ್ಯೆ? ಹೊರಡುವ ಮುನ್ನ ಈ ಅಪ್ಡೇಟ್ ನೋಡಿ -
ಮುಂಬೈ ನೀರಿನ ಕಡಿತ: ನೀರು ಉಳಿಸಿ ಫಿಟ್ ಆಗಿರಲು 12 ನಿಮಿಷದ ವ್ಯಾಯಾಮ ಮತ್ತು ಸ್ನಾನದ ಟಿಪ್ಸ್! -
ಬೆಂಗಳೂರು ಮೆಟ್ರೋ ವ್ಯತ್ಯಯ: ಆಫೀಸ್ ತಲುಪಲು ತಡವಾಗುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದ ತೇವಾಂಶದಿಂದ ನಿಮ್ಮ ಮನೆ ಮತ್ತು ವಸ್ತುಗಳನ್ನು ರಕ್ಷಿಸಲು ಇಲ್ಲಿವೆ ಸರಳ ಟಿಪ್ಸ್! -
ಮುಂಬೈ ಮಳೆಗಾಲದಲ್ಲಿ ಆರೋಗ್ಯವಾಗಿರಬೇಕೆ? ರಸ್ತೆ ಬದಿಯ ತಿಂಡಿ ತಿನ್ನುವ ಮುನ್ನ ಈ ಎಚ್ಚರಿಕೆ ವಹಿಸಿ!
ಅಚ್ಚರಿ ಲೋಕ: ತಮ್ಮದೇ ಸಾವನ್ನು ಚಿತ್ರೀಕರಿಸಿರುವವರು!!
ಹುಟ್ಟು ಅನಿಶ್ಚಿತ ಮತ್ತು ಸಾವು ನಿಶ್ಚಿತ ಎನ್ನಲಾಗುತ್ತದೆ. ಕೆಲವರು ಸಾವಿನೆಡೆಗೆ ಸಾಗಿದಂತೆ ಹೆಚ್ಚು ಖುಷಿಯಿಂದ ಇರುವುದನ್ನು ಕಾಣುತ್ತೇವೆ. ಇಹಲೋಕದ ಮೋಹವನ್ನು ತ್ಯಜಿಸಿರುವವರಿಗೆ ಮಾತ್ರ ಹೀಗೆ ಇರಲು ಸಾಧ್ಯ. ಕೆಲವೊಂದು ಜನರು ಸಾಯುತ್ತಿರುವ ದೃಶ್ಯಗಳನ್ನು ಇಂದಿನ ಆಧುನಿಕ ಯುಗದಲ್ಲಿ ಸೆರೆ ಹಿಡಿಯುವುದು ಅಷ್ಟೊಂದು ಕಷ್ಟವೇನಲ್ಲ. ಆದರೆ ಕೆಲವು ಜನರು ತಮ್ಮ ಸಾವನ್ನು ತಾವೇ ರೆಕಾರ್ಡ್ ಮಾಡಿಕೊಂಡಿರುವುದು ಮಾತ್ರ ತುಂಬಾ ಅಚ್ಚರಿಯ ವಿಚಾರವಾಗಿದೆ. ಹಲವಾರು ಮಂದಿ ಇಂತಹ ಕೆಲಸ ಮಾಡಿದ್ದಾರೆ. ಸೈನೇಡ್ ಸೇವನೆಯಿಂದ ಹಿಡಿದು ಸಾಯಲು ಉಪವಾಸ ಮಾಡುವುದು ಇದರಲ್ಲಿ ಒಳಗೊಂಡಿದೆ. ಇದು ನಿಮಗೆ ಆಘಾತ ನೀಡಬಹುದು. ತಮ್ಮ ಸಾವಿನ ಬಗ್ಗೆ ತಾವೇ ರೆಕಾರ್ಡ್ ಮಾಡಿಕೊಂಡಿರುವ ವ್ಯಕ್ತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಯುವ....

ಕಾರ್ಲ್ ಪ್ಯಾಟಿಸನ್ ಸ್ಮಿತ್ ಸಾವು
ಕಾರ್ಲ್ ಪ್ಯಾಟಿಸನ್ ಸ್ಮಿತ್ ಅವರು ವೃತ್ತಿಯಲ್ಲಿ ಸರೀಸೃಪ ಶಾಸ್ತ್ರಜ್ಞರಾಗಿದ್ದರು. ಹಾವೊಂದು ತನಗೆ ಕಚ್ಚಿದ ಬಳಿಕ ದೇಹದಲ್ಲಿ ನಿಧಾನವಾಗಿ ವಿಷ ಹೇಗೆ ಪಸರಿಸಿತು ಮತ್ತು ಸಾವು ಹತ್ತಿರ ಹೇಗೆ ಬಂತು ಎಂದು ಬರೆದಿದ್ದಾರೆ. ಹಾವಿನ ಬಗ್ಗೆ ಅಧ್ಯಯನ ಮಾಡಲು ಹಾವನ್ನು ಹಿಡಿದಾಗ ಅದು ಕಚ್ಚಿದೆ. ಇದರ ಬಳಿಕ ತನ್ನ ಅನುಭವ ಮತ್ತು ಆಹಾರ ಸೇವನೆ ಬಗ್ಗೆ ಅವರು ಬರೆದಿದ್ದಾರೆ.
ಹಾವು ಕಚ್ಚಿದ ದಿನ ರಕ್ತಸ್ರಾವದೊಂದಿಗೆ ತುಂಬಾ ಚಳಿ ಹಾಗೂ ನಡುಕವಾಗುತ್ತಲಿತ್ತು. . ಮರುದಿನ ಅವರಿಗೆ ರಕ್ತಸ್ರಾವವು ಅತಿಯಾಗಿ ಆಯಿತು ಮತ್ತು ಮೂತ್ರದ ಬದಲು ರಕ್ತವಿಸರ್ಜನೆಯಾಯಿತು. ಇದರ ಬಳಿಕ ಬಾಯಿ, ಮೂಗು ಮತ್ತು ಗುದನಾಳದಲ್ಲೂ ರಕ್ತಸ್ರಾವವಾಯಿತು. ಅವರು ಚಿಕಿತ್ಸೆ ವೇಳೆ ಮೃತಪಟ್ಟರು ಮತ್ತು ಮರಣೋತ್ತರ ವರದಿಯ ಪ್ರಕಾರ ದೇಹದೊಳಗಿನ ಅತಿಯಾದ ರಕ್ತಸ್ರಾವವದಿಂದಾಗಿ ಅವರು ಮೃತರಾದರು.

ಪ್ರಸಾದ್ ಸಾವು
ಪ್ರಸಾದ್ ಎಂಬ ವ್ಯಕ್ತಿಯೊಬ್ಬ ಸೈನೇಡ್ ಬಗ್ಗೆ ವಿವರ ನೀಡುವ ಮೊದಲು ವೈದ್ಯಕೀಯ ಲೋಕಕ್ಕೆ ಅದರ ರುಚಿ ಹೇಗಿರುತ್ತದೆ ಎಂದು ತಿಳಿದಿರಲಿಲ್ಲ. ಒಂದು ಕಪ್ ಸೈನೇಡ್ ಕುಡಿದು ಪ್ರಸಾದ್ ಸಾವನ್ನಪ್ಪಿದ. ಆತ ತನ್ನ ಸಾವಿನ ಬಗ್ಗೆ ಬರಹವನ್ನು ಪೂರ್ತಿಗೊಳಿಸುವ ಮೊದಲೇ ಸಾವನ್ನಪ್ಪಿದ. ಆತನ ಬರಹದಲ್ಲಿ ಹೀಗಿತ್ತು. ವೈದ್ಯರೇ, ಇದು ಪೊಟಾಶಿಯಂ ಸೈನೇಡ್. ನಾನು ಇದರ ರುಚಿ ನೋಡಿದೆ. ಇದು ನಿಧಾನವಾಗಿ ಬರುವುದು ಮತ್ತು ಸುಡಲು ಆರಂಭವಾಗುವುದು, ಸಂಪೂರ್ಣ ನಾಲಗೆ ಸುಡುವುದು ಮತ್ತು ತುಂಬಾ ಕಠಿಣವಾಗುವುದು. ಇದು ತುಂಬಾ ಅತಿಕಾರದ ರುಚಿ ಹೊಂದಿದೆ. ನಾನೊಂದು ಕಥೆಯಲ್ಲಿ ಓದಿದ್ದೆ. ಒಬ್ಬ ವ್ಯಕ್ತಿಯನ್ನು ಕೊಲ್ಲಲ್ಲು ಪುಸ್ತಕಕ್ಕೆ ಸೈನೇಡ್ ಹಚ್ಚಲಾಗಿತ್ತು. ಆತ ಬೆರಳಿನಿಂದ ಪುಟ ತಿರುಗಿಸಿ, ನಾಲಗೆಗೆ ಇಡುತ್ತಲಿದ್ದ. ಹೀಗೆ ಸೈನೇಡ್ ಗೊತ್ತಿಲ್ಲದೆ ಸೇವಿಸಿ ಸತ್ತ ಮತ್ತು ಇದರ ಬಗ್ಗೆ ಯಾರಿಗೂ ಸಂಶಯವಾಗಲಿಲ್ಲ. ಸೈನೇಡ್ ಬಳಸಿಕೊಂಡು ಹೇಗೆ ಸುಲಭವಾಗಿ ಕೊಲ್ಲಬಹುದು ಎಂದು ನನಗೀಗ ಅರಿವಾಗಿದೆ.

ಅನಾಮಿಕ ಜರ್ಮನಿ ವ್ಯಕ್ತಿ
58ರ ಹರೆಯದ ವ್ಯಕ್ತಿಯೊಬ್ಬನ ಶವವು ಕಾಡಿನ ಮಧ್ಯೆ ಬೇಟೆಗಾರರಿಬ್ಬರಿಗೆ ಸಿಕ್ಕಿದೆ. ಸ್ವಲ್ಪ ದೂರದಲ್ಲೇ ಚಾಪೆ ಕೂಡ ಸಿಕ್ಕಿದೆ. ವ್ಯಕ್ತಿಯು ಸಾಯುವ ಮೊದಲು ಉಪವಾಸ ಮಾಡಿಕೊಂಡಿದ್ದನೆಂದು ಇದು ಹೇಳುತ್ತದೆ. ಆದರೆ ಸಂಪೂರ್ಣ ವಿವರವನ್ನು ಸಾರ್ವಜನಿಕಗೊಳಿಸಿಲ್ಲ. ತನ್ನ ಮಗಳೊಂದಿಗೆ ತುಂಬಾ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಹೀಗೆ ಮಾಡಿಕೊಂಡಿದ್ದಾನೆ ಎಂದು ಆತನಲ್ಲಿದ್ದ ಡೈರಿಗಳು ಹೇಳಿವೆ. ಆತ ನಿರುದ್ಯೋಗಿಯಾಗಿದ್ದ ಮತ್ತು ಕಾಡಿನಲ್ಲಿ ಏನೂ ತಿನ್ನದೆ ಕೇವಲ ನೀರು ಮಾತ್ರ ಸೇವಿಸುತ್ತಿದ್ದ.

ನಾರ ಅಲ್ಮೆಡಾ ಸಾವು
24ರ ಹರೆಯದ ಬ್ರೆಜಿಲಿನ ಬ್ಲಾಗರ್ ಆಗಿದ್ದ ನಾರ ಅಲ್ಮೆಡಾ ಅವರು 2018ರಲ್ಲಿ ಹೊಟ್ಟೆಯ ಕ್ಯಾನ್ಸರ್ ನಿಂದ ಸಾವನ್ನಪ್ಪಿದರು. ಸಾವಿಗೆ ಒಂದು ವರ್ಷಕ್ಕೆ ಮೊದಲು ಕ್ಯಾನ್ಸರ್ ಬಗ್ಗೆ ತಿಳಿದುಬಂತು ಮತ್ತು ಆಕೆ ತನ್ನ ಆರೋಗ್ಯ ಮತ್ತು ಪಡೆಯುತ್ತಿರುವ ಚಿಕಿತ್ಸೆ ಎಲ್ಲವನ್ನು ದಾಖಲಿಸಿಕೊಂಡಿದ್ದಾಳೆ. ಆಕೆ 4.5 ಮಿಲಿಯನ್ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಗಳಿದ್ದಾರೆ ಮತ್ತು ಆಕೆ ತನ್ನ ಭಾವನೆಗಳನ್ನು, ನಿದ್ರೆಯಿಲ್ಲದೆ ಕಳೆದ ರಾತ್ರಿಗಳು ಮತ್ತು ಎದುರಿಸುವ ನೋವು-ಸಂಕಷ್ಟ ಹೀಗೆ ಎಲ್ಲಾ ಫೋಟೊಗಳನ್ನು ಯಾವಾಗಲೂ ಶೇರ್ ಮಾಡಿಕೊಳ್ಳುತ್ತಿದ್ದಳು. ಸಾವಿಗೆ ಒಂದು ತಿಂಗಳು ಮೊದಲು ಆಕೆ ಫೋಟೊವನ್ನು ಶೇರ್ ಮಾಡಿ ಹೀಗೆ ಬರೆದಿದ್ದಳು...ಅಂತ್ಯದಲ್ಲಿ ಎಲ್ಲವೂ ಸರಿಯಾಗಿ ನಾನು ತುಂಬಾ ಬಲಿಷ್ಠವಾಗಿ ಮರಳಲಿದ್ದೇನೆಂದು ನಂಬಿದ್ದೇನೆ. ಬೇರೆ ಜನರಿಗೂ ನೆರವಾಗಲು ಬಯಸಿದ್ದೇನೆ. ದುರಾದೃಷ್ಟದಿಂದ ಇದು ಸಂಭವಿಸಲೇ ಇಲ್ಲ.



Click it and Unblock the Notifications