Just In
- 2 hrs ago ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- 15 hrs ago ಪೂರ್ವಜನರಿಗೆ ಗ್ರಹಣಗಳು ಹೇಗೆ ತಿಳಿಯುತ್ತಿತ್ತು..? ಅವರು ಏನೆಲ್ಲಾ ಕಥೆ ನಂಬಿದ್ದರು ಗೊತ್ತೆ.?
- 16 hrs ago ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು
- 17 hrs ago ನಾರಾಯಣ ಮೂರ್ತಿ 4 ತಿಂಗಳ ಮೊಮ್ಮಗ ಈಗ ₹240 ಕೋಟಿ ಆಸ್ತಿ ಒಡೆಯ..! ಹೇಗೆ ಸಾಧ್ಯ..?
Don't Miss
- News ಕನ್ನಡ ನಾಮಫಲಕ: ಬಲವಂತದ ಕ್ರಮ ಬೇಡ ಎಂದ ಕೋರ್ಟ್
- Movies 'ಹಿಟ್ಲರ್ ಕಲ್ಯಾಣ' ಅಂತ್ಯ; ಧಾರಾವಾಹಿ ಬಿಟ್ಟು ಸಿನಿಮಾದಲ್ಲಿ ಬ್ಯುಸಿಯಾಗ್ತಾರಾ 'ಉಪಾಧ್ಯಕ್ಷ'ನ ಬೆಡಗಿ?
- Finance ತನ್ನ 4 ವರ್ಷದ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಇನ್ಫೋಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಚ್ಚರಿ ಲೋಕ: ತಮ್ಮದೇ ಸಾವನ್ನು ಚಿತ್ರೀಕರಿಸಿರುವವರು!!
ಹುಟ್ಟು ಅನಿಶ್ಚಿತ ಮತ್ತು ಸಾವು ನಿಶ್ಚಿತ ಎನ್ನಲಾಗುತ್ತದೆ. ಕೆಲವರು ಸಾವಿನೆಡೆಗೆ ಸಾಗಿದಂತೆ ಹೆಚ್ಚು ಖುಷಿಯಿಂದ ಇರುವುದನ್ನು ಕಾಣುತ್ತೇವೆ. ಇಹಲೋಕದ ಮೋಹವನ್ನು ತ್ಯಜಿಸಿರುವವರಿಗೆ ಮಾತ್ರ ಹೀಗೆ ಇರಲು ಸಾಧ್ಯ. ಕೆಲವೊಂದು ಜನರು ಸಾಯುತ್ತಿರುವ ದೃಶ್ಯಗಳನ್ನು ಇಂದಿನ ಆಧುನಿಕ ಯುಗದಲ್ಲಿ ಸೆರೆ ಹಿಡಿಯುವುದು ಅಷ್ಟೊಂದು ಕಷ್ಟವೇನಲ್ಲ. ಆದರೆ ಕೆಲವು ಜನರು ತಮ್ಮ ಸಾವನ್ನು ತಾವೇ ರೆಕಾರ್ಡ್ ಮಾಡಿಕೊಂಡಿರುವುದು ಮಾತ್ರ ತುಂಬಾ ಅಚ್ಚರಿಯ ವಿಚಾರವಾಗಿದೆ. ಹಲವಾರು ಮಂದಿ ಇಂತಹ ಕೆಲಸ ಮಾಡಿದ್ದಾರೆ. ಸೈನೇಡ್ ಸೇವನೆಯಿಂದ ಹಿಡಿದು ಸಾಯಲು ಉಪವಾಸ ಮಾಡುವುದು ಇದರಲ್ಲಿ ಒಳಗೊಂಡಿದೆ. ಇದು ನಿಮಗೆ ಆಘಾತ ನೀಡಬಹುದು. ತಮ್ಮ ಸಾವಿನ ಬಗ್ಗೆ ತಾವೇ ರೆಕಾರ್ಡ್ ಮಾಡಿಕೊಂಡಿರುವ ವ್ಯಕ್ತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಯುವ....
ಕಾರ್ಲ್ ಪ್ಯಾಟಿಸನ್ ಸ್ಮಿತ್ ಸಾವು
ಕಾರ್ಲ್ ಪ್ಯಾಟಿಸನ್ ಸ್ಮಿತ್ ಅವರು ವೃತ್ತಿಯಲ್ಲಿ ಸರೀಸೃಪ ಶಾಸ್ತ್ರಜ್ಞರಾಗಿದ್ದರು. ಹಾವೊಂದು ತನಗೆ ಕಚ್ಚಿದ ಬಳಿಕ ದೇಹದಲ್ಲಿ ನಿಧಾನವಾಗಿ ವಿಷ ಹೇಗೆ ಪಸರಿಸಿತು ಮತ್ತು ಸಾವು ಹತ್ತಿರ ಹೇಗೆ ಬಂತು ಎಂದು ಬರೆದಿದ್ದಾರೆ. ಹಾವಿನ ಬಗ್ಗೆ ಅಧ್ಯಯನ ಮಾಡಲು ಹಾವನ್ನು ಹಿಡಿದಾಗ ಅದು ಕಚ್ಚಿದೆ. ಇದರ ಬಳಿಕ ತನ್ನ ಅನುಭವ ಮತ್ತು ಆಹಾರ ಸೇವನೆ ಬಗ್ಗೆ ಅವರು ಬರೆದಿದ್ದಾರೆ.
Most read: ಅಚ್ಚರಿ ಲೋಕ: ಬೊಕ್ಕ ತಲೆ ಸಮಸ್ಯೆಗೆ ಇವರು 'ದನದ ಮೂತ್ರ' ಬಳಸುತ್ತಾರಂತೆ!!
ಹಾವು ಕಚ್ಚಿದ ದಿನ ರಕ್ತಸ್ರಾವದೊಂದಿಗೆ ತುಂಬಾ ಚಳಿ ಹಾಗೂ ನಡುಕವಾಗುತ್ತಲಿತ್ತು. . ಮರುದಿನ ಅವರಿಗೆ ರಕ್ತಸ್ರಾವವು ಅತಿಯಾಗಿ ಆಯಿತು ಮತ್ತು ಮೂತ್ರದ ಬದಲು ರಕ್ತವಿಸರ್ಜನೆಯಾಯಿತು. ಇದರ ಬಳಿಕ ಬಾಯಿ, ಮೂಗು ಮತ್ತು ಗುದನಾಳದಲ್ಲೂ ರಕ್ತಸ್ರಾವವಾಯಿತು. ಅವರು ಚಿಕಿತ್ಸೆ ವೇಳೆ ಮೃತಪಟ್ಟರು ಮತ್ತು ಮರಣೋತ್ತರ ವರದಿಯ ಪ್ರಕಾರ ದೇಹದೊಳಗಿನ ಅತಿಯಾದ ರಕ್ತಸ್ರಾವವದಿಂದಾಗಿ ಅವರು ಮೃತರಾದರು.
ಪ್ರಸಾದ್ ಸಾವು
ಪ್ರಸಾದ್ ಎಂಬ ವ್ಯಕ್ತಿಯೊಬ್ಬ ಸೈನೇಡ್ ಬಗ್ಗೆ ವಿವರ ನೀಡುವ ಮೊದಲು ವೈದ್ಯಕೀಯ ಲೋಕಕ್ಕೆ ಅದರ ರುಚಿ ಹೇಗಿರುತ್ತದೆ ಎಂದು ತಿಳಿದಿರಲಿಲ್ಲ. ಒಂದು ಕಪ್ ಸೈನೇಡ್ ಕುಡಿದು ಪ್ರಸಾದ್ ಸಾವನ್ನಪ್ಪಿದ. ಆತ ತನ್ನ ಸಾವಿನ ಬಗ್ಗೆ ಬರಹವನ್ನು ಪೂರ್ತಿಗೊಳಿಸುವ ಮೊದಲೇ ಸಾವನ್ನಪ್ಪಿದ. ಆತನ ಬರಹದಲ್ಲಿ ಹೀಗಿತ್ತು. ವೈದ್ಯರೇ, ಇದು ಪೊಟಾಶಿಯಂ ಸೈನೇಡ್. ನಾನು ಇದರ ರುಚಿ ನೋಡಿದೆ. ಇದು ನಿಧಾನವಾಗಿ ಬರುವುದು ಮತ್ತು ಸುಡಲು ಆರಂಭವಾಗುವುದು, ಸಂಪೂರ್ಣ ನಾಲಗೆ ಸುಡುವುದು ಮತ್ತು ತುಂಬಾ ಕಠಿಣವಾಗುವುದು. ಇದು ತುಂಬಾ ಅತಿಕಾರದ ರುಚಿ ಹೊಂದಿದೆ. ನಾನೊಂದು ಕಥೆಯಲ್ಲಿ ಓದಿದ್ದೆ. ಒಬ್ಬ ವ್ಯಕ್ತಿಯನ್ನು ಕೊಲ್ಲಲ್ಲು ಪುಸ್ತಕಕ್ಕೆ ಸೈನೇಡ್ ಹಚ್ಚಲಾಗಿತ್ತು. ಆತ ಬೆರಳಿನಿಂದ ಪುಟ ತಿರುಗಿಸಿ, ನಾಲಗೆಗೆ ಇಡುತ್ತಲಿದ್ದ. ಹೀಗೆ ಸೈನೇಡ್ ಗೊತ್ತಿಲ್ಲದೆ ಸೇವಿಸಿ ಸತ್ತ ಮತ್ತು ಇದರ ಬಗ್ಗೆ ಯಾರಿಗೂ ಸಂಶಯವಾಗಲಿಲ್ಲ. ಸೈನೇಡ್ ಬಳಸಿಕೊಂಡು ಹೇಗೆ ಸುಲಭವಾಗಿ ಕೊಲ್ಲಬಹುದು ಎಂದು ನನಗೀಗ ಅರಿವಾಗಿದೆ.
Most Read: ಅಂಗೈ ನೋಡಿ ನೀವು ಲಾಟರಿ ಗೆಲ್ಲುತ್ತೀರಾ, ಇಲ್ಲವಾ? ಎಂದು ಹೇಳಬಹುದಂತೆ!!
ಅನಾಮಿಕ ಜರ್ಮನಿ ವ್ಯಕ್ತಿ
58ರ ಹರೆಯದ ವ್ಯಕ್ತಿಯೊಬ್ಬನ ಶವವು ಕಾಡಿನ ಮಧ್ಯೆ ಬೇಟೆಗಾರರಿಬ್ಬರಿಗೆ ಸಿಕ್ಕಿದೆ. ಸ್ವಲ್ಪ ದೂರದಲ್ಲೇ ಚಾಪೆ ಕೂಡ ಸಿಕ್ಕಿದೆ. ವ್ಯಕ್ತಿಯು ಸಾಯುವ ಮೊದಲು ಉಪವಾಸ ಮಾಡಿಕೊಂಡಿದ್ದನೆಂದು ಇದು ಹೇಳುತ್ತದೆ. ಆದರೆ ಸಂಪೂರ್ಣ ವಿವರವನ್ನು ಸಾರ್ವಜನಿಕಗೊಳಿಸಿಲ್ಲ. ತನ್ನ ಮಗಳೊಂದಿಗೆ ತುಂಬಾ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಹೀಗೆ ಮಾಡಿಕೊಂಡಿದ್ದಾನೆ ಎಂದು ಆತನಲ್ಲಿದ್ದ ಡೈರಿಗಳು ಹೇಳಿವೆ. ಆತ ನಿರುದ್ಯೋಗಿಯಾಗಿದ್ದ ಮತ್ತು ಕಾಡಿನಲ್ಲಿ ಏನೂ ತಿನ್ನದೆ ಕೇವಲ ನೀರು ಮಾತ್ರ ಸೇವಿಸುತ್ತಿದ್ದ.
ನಾರ ಅಲ್ಮೆಡಾ ಸಾವು
24ರ ಹರೆಯದ ಬ್ರೆಜಿಲಿನ ಬ್ಲಾಗರ್ ಆಗಿದ್ದ ನಾರ ಅಲ್ಮೆಡಾ ಅವರು 2018ರಲ್ಲಿ ಹೊಟ್ಟೆಯ ಕ್ಯಾನ್ಸರ್ ನಿಂದ ಸಾವನ್ನಪ್ಪಿದರು. ಸಾವಿಗೆ ಒಂದು ವರ್ಷಕ್ಕೆ ಮೊದಲು ಕ್ಯಾನ್ಸರ್ ಬಗ್ಗೆ ತಿಳಿದುಬಂತು ಮತ್ತು ಆಕೆ ತನ್ನ ಆರೋಗ್ಯ ಮತ್ತು ಪಡೆಯುತ್ತಿರುವ ಚಿಕಿತ್ಸೆ ಎಲ್ಲವನ್ನು ದಾಖಲಿಸಿಕೊಂಡಿದ್ದಾಳೆ. ಆಕೆ 4.5 ಮಿಲಿಯನ್ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಗಳಿದ್ದಾರೆ ಮತ್ತು ಆಕೆ ತನ್ನ ಭಾವನೆಗಳನ್ನು, ನಿದ್ರೆಯಿಲ್ಲದೆ ಕಳೆದ ರಾತ್ರಿಗಳು ಮತ್ತು ಎದುರಿಸುವ ನೋವು-ಸಂಕಷ್ಟ ಹೀಗೆ ಎಲ್ಲಾ ಫೋಟೊಗಳನ್ನು ಯಾವಾಗಲೂ ಶೇರ್ ಮಾಡಿಕೊಳ್ಳುತ್ತಿದ್ದಳು. ಸಾವಿಗೆ ಒಂದು ತಿಂಗಳು ಮೊದಲು ಆಕೆ ಫೋಟೊವನ್ನು ಶೇರ್ ಮಾಡಿ ಹೀಗೆ ಬರೆದಿದ್ದಳು...ಅಂತ್ಯದಲ್ಲಿ ಎಲ್ಲವೂ ಸರಿಯಾಗಿ ನಾನು ತುಂಬಾ ಬಲಿಷ್ಠವಾಗಿ ಮರಳಲಿದ್ದೇನೆಂದು ನಂಬಿದ್ದೇನೆ. ಬೇರೆ ಜನರಿಗೂ ನೆರವಾಗಲು ಬಯಸಿದ್ದೇನೆ. ದುರಾದೃಷ್ಟದಿಂದ ಇದು ಸಂಭವಿಸಲೇ ಇಲ್ಲ.