Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ದೀಪಾವಳಿ ವಿಶೇಷ: ಈ ದೀಪಾವಳಿಗೆ ಅದೃಷ್ಟವನ್ನೇ ಖರೀದಿಸಿ!
ದೀಪಾವಳಿ ಹಬ್ಬ ಬಂತೆಂದರೆ ಸಾಕು. ಪ್ರತಿಯೊಬ್ಬರು ಏನಾದರೂ ಖರೀದಿ ಮಾಡಲು ಬಯಸುವರು. ಮನೆಗೆ ಬೇಕಾದ ಸಾಮಗ್ರಿ ಅಥವಾ ತಮ್ಮ ಸ್ವಂತ ಉಪಯೋಗಕ್ಕೆ ಬಳಸುವಂತಹ ಸಾಮಗ್ರಿಗಳನ್ನು ಹೆಚ್ಚಿನವರು ದೀಪಾವಳಿ ಹಬ್ಬದ ವೇಳೆ ಖರೀದಿಸುವರು.
ಆದರೆ ನಿಜವಾಗಿಯೂ ಇಂತಹ ಸಾಮಗ್ರಿಗಳು ನಿಮ್ಮ ಮನೆಗೆ ಸುಖ ಹಾಗೂ ಸಮೃದ್ಧಿ, ಅದೃಷ್ಟ ತರುತ್ತದೆಯಾ ಎಂದು ನಿಮಗೆ ತಿಳಿದಿದೆಯಾ? ಇಲ್ಲ ತಾನೇ? ಹಾಗಾದರೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ಈ ವರ್ಷದ ದೀಪಾವಳಿಗೆ ನೀವು ಖರೀದಿಸುವ ಸಾಮಗ್ರಿಯು ನಿಮ್ಮ ಮನೆಗೆ ಅದೃಷ್ಟ ಹಾಗೂ ಸಮೃದ್ಧಿ ತಂದುಕೊಡಲಿದೆ ಎಂದು ನಿಮಗೆ ತಿಳಿಸುವುದು. ಇದು ಹೇಗೆಂದು ನೀವು ಓದಿಕೊಳ್ಳಿ.

ನಿಮ್ಮ ವೃತ್ತಿ ಸಂಬಂಧಿಸಿದ ಏನಾದರೂ ಸಾಮಗ್ರಿ
ಈ ದೀಪಾವಳಿ ಸಂದರ್ಭದಲ್ಲಿ ನಿಮ್ಮ ವೃತ್ತಿಗೆ ಅನುಗುಣವಾಗಿ ಏನಾದರೂ ಖರೀದಿ ಮಾಡಿ. ಲೇಖಕರು ಪೆನ್ನು, ಚಿತ್ರಕಲಾವಿದರು ಬ್ರಷ್ ಮತ್ತು ಹೀಗೆ. ಈ ಹೊಸ ವಸ್ತುವನ್ನು ಪೂಜೆಯ ಸಂದರ್ಭದಲ್ಲಿ ಅಲ್ಲಿಟ್ಟುಬಿಡಿ.

ಪೊರಕೆ!
ಇದು ತುಂಬಾ ವಿಚಿತ್ರವಾಗಿ ಕಾಣಿಸಬಹುದು. ಆದರೆ ಪೊರಕೆ ಖರೀದಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿರುವ ಬಡತನ ಮತ್ತು ದುಃಖವನ್ನು ಗುಡಿಸಿಹಾಕುವುದು ಎಂದು ನಂಬಲಾಗಿದೆ. ಇದು ಸಮೃದ್ಧಿ ಉಂಟು ಮಾಡಲಿದೆ.

ಎಲೆಕ್ಟ್ರಾನಿಕ್ಸ್ ಖರೀದಿಸಿ
ಎಲೆಕ್ಟ್ರಾನಿಕ್ಸ್ ನಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ಇದು ಸರಿಯಾದ ಸಮಯವಾಗಿದೆ. ಹೆಚ್ಚಿನ ಕಡೆಗಳಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಇದೆ. ನೀವು ಯಾವುದಾದರೂ ಎಲೆಕ್ಟ್ರಾನಿಕ್ಸ್ ಸಾಮಗ್ರಿ ಖರೀದಿಸಲು ಬಯಸಿದ್ದರೆ ಇದು ಸರಿಯಾದ ಸಮಯವಾಗಿದೆ. ಧನಾತ್ಮಕ ಶಕ್ತಿ ಪಡೆಯಲು ಮನೆಯ ಈಶಾನ್ಯ ಭಾಗದಲ್ಲಿ ಇದನ್ನು ಇಡಬೇಕು.

ಲೆಕ್ಕದ ಪುಸ್ತಕ
ಯಾವುದೇ ರೀತಿಯ ವ್ಯಾಪಾರ ಮಾಡುವವರಿಗೆ ಇದು ಒಳ್ಳೆಯ ರೀತಿ ಕೆಲಸ ಮಾಡುವುದು. ಇಂತವರು ಒಂದು ಲೆಕ್ಕ ಪುಸ್ತಕವನ್ನು ಖರೀದಿಸಿಕೊಂಡು ಲೆಕ್ಕವನ್ನು ನಿರ್ವಹಿಸಬೇಕು. ಒಳ್ಳೆಯ ಫಲಿತಾಂಶ ಪಡೆಯಲು ಇದನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು.

ಬೆಳ್ಳಿ ಪಾತ್ರೆಗಳು
ಪ್ರತೀ ದೀಪಾವಳಿ ಸಂದರ್ಭದಲ್ಲಿ ಜನರು ಪಾತ್ರೆ ಖರೀದಿ ಮಾಡುವುದನ್ನು ನಾವು ನೋಡುತ್ತೇವೆ. ಈ ವರ್ಷ ದೀಪಾವಳಿಗೆ ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆ ಖರೀದಿ ಮಾಡಿದರೆ ಅದು ಅದೃಷ್ಟ ತರುವುದು. ಧನಾತ್ಮಕ ಶಕ್ತಿ ಬರಲು ಮನೆಯ ಪೂರ್ವ ಭಾಗದಲ್ಲಿ ಇದನ್ನು ಇಡಬೇಕು.

ಬಂಗಾರದ ನಾಣ್ಯ ಅಥವಾ ಸ್ವಸ್ತಿಕ್
ಲಕ್ಷ್ಮೀ ದೇವಿಯು ಇರುವಂತಹ ಬಂಗಾರದ ಪದಕ ಖರೀದಿಸಬೇಕೆಂದು ಬಲವಾಗಿ ನಂಬಲಾಗಿದೆ. ಬಂಗಾರದ ಪದಕ ಖರೀದಿಸುವ ಶಕ್ತಿ ನಿಮ್ಮಲ್ಲಿ ಇಲ್ಲವೆಂದಾದರೆ ಲಕ್ಷ್ಮೀ ದೇವಿಯ ಚಿತ್ರ ಖರೀದಿಸಿ ಅದನ್ನು ಹಣದ ಲಾಕರ್ ಅಥವಾ ಪರ್ಸ್ ನಲ್ಲಿ ಇಟ್ಟುಬಿಡಿ. ಇದು ಒಳ್ಳೆಯ ಅದೃಷ್ಟ ತರುವುದು.

ಶಂಖ
ಮನೆಯಲ್ಲಿ ಶಂಖ ಇಡುವುದುರಿಂದ ಅದೃಷ್ಟವು ಹೆಚ್ಚಾಗುವುದು ಎಂದು ನಂಬಲಾಗಿದೆ. ಒಳ್ಳೆಯ ರೀತಿಯಿಂದ ಇದಕ್ಕೆ ಪೂಜೆ ಮಾಡಿದರೆ ಅದರಿಂದ ಮನೆ ಮತ್ತು ಕೆಲಸದ ಸ್ಥಳದಲ್ಲಿ ಧನಾತ್ಮಕ ಶಕ್ತಿ ಬರುವುದು. ಮನೆಯಲ್ಲಿ ಶಂಖ ಇಟ್ಟು ಪೂಜಿಸಿದರೆ ಅದರಿಂದ ಹಣದ ಸಮಸ್ಯೆ ಯಾವತ್ತು ಬರುವುದಿಲ್ಲ ಮತ್ತು ಈ ದೀಪಾವಳಿಗೆ ಇದನ್ನು ಖರೀದಿಸುವುದು ತುಂಬಾ ಅದೃಷ್ಟವೆನ್ನಲಾಗಿದೆ.

ದಕ್ಷಿಣವರ್ತಿ ಶಂಖ
ಇದು ತುಂಬಾ ಅಪರೂಪ ಹಾಗೂ ಪವಿತ್ರ ಶಂಖವೆಂದು ನಂಬಲಾಗಿದೆ. ಇದು ಯಾವಾಗಲೂ ಲಕ್ಷ್ಮೀ ದೇವಿಯೊಂದಿಗೆ ಇರುತ್ತದೆ. ವಿಷ್ಣು ದೇವರು ಮತ್ತು ಲಕ್ಷ್ಮೀ ಜತೆಯಾಗಿರುವ ಹೆಚ್ಚಿನ ಚಿತ್ರಗಳಲ್ಲಿ ಅವರು ಶಂಖ ಹಿಡಿದುಕೊಂಡಿರುವುದನ್ನು ನೋಡಬಹುದು. ಶ್ರೀಮಂತರಾಗಲು ನೀವು ಮಾಡಬೇಕಾದ ಕೆಲಸವೆಂದರೆ ಪ್ರತೀ ಶುಕ್ರವಾರ ಈ ಶಂಖದೊಳಗೆ ಹಾಲು ಮತ್ತು ಗಂಗಾಜಲ ಹಾಕಬೇಕು. ಬಳಿಕ ಇದನ್ನು ಮನೆಯಿಡಿ ಚಿಮುಕಿಸಬೇಕು. ಹೀಗೆ ಮಾಡುವಂತಹವರಿಗೆ ಯಾವತ್ತೂ ಆರ್ಥಿಕ ಸಮಸ್ಯೆ ಬರುವುದಿಲ್ಲವೆಂದು ನಂಬಲಾಗಿದೆ.



Click it and Unblock the Notifications