Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮರಣೋತ್ತರ ಪರೀಕ್ಷೆಯಿಂದ ತಿಳಿಯಿತು 8 ವರ್ಷ ದಾಂಪತ್ಯ ನಡೆಸಿದ ಪತ್ನಿ ಮಹಿಳೆಯಲ್ಲ ಪುರುಷ
ಸಲಿಂಗ ಪ್ರೇಮ, ಮದುವೆ ಇವುಗಳ ಬಗ್ಗೆ ಅನೇಕ ಸುದ್ದಿಗಳನ್ನು ಓದಿರುತ್ತೀರಿ. ಆದರೆ ಈ ಸುದ್ದಿ ಅದೇ ರೀತಿಯದ್ದು ಆದರೂ ಆ ಕತೆಗಳಿಗಿಂತ ಸಂಪೂರ್ಣ ಭಿನ್ನ. ಸಲಿಂಗಿಗಳು ಮದುವೆಯಾದ ಬಳಿಕ ಸಮಾಜದ ಮುಂದೆ ಅವರು ಸಲಿಂಗಿಗಳಂತೆಯೇ ಬಾಳುತ್ತಾರೆ. ಆದರೆ ಮಧ್ಯ ಪ್ರದೇಶದ ಒಂದು ಚಿಕ್ಕ ಪಟ್ಟಣವಾಗಿರುವ ಸೆಹೋರೆಯ ಸುದ್ದಿಯೊಂದು ಇದೀಗ ದೇಶದ ಗಮನ ಸೆಳೆದಿದೆ.
ಸತ್ತಿದ್ದು ಹೆಣ್ಣಲ್ಲ ಗಂಡು ಎಂದ ಪೋಸ್ಟ್ಮಾರ್ಟಂ ರಿಪೋರ್ಟ್
ಗಂಡ-ಹೆಂಡತಿ ನಡುವೆ ಏನೋ ಕಾರಣಕ್ಕೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಆಕೆಯ ಪೋಸ್ಟ್ಮಾರ್ಟಂ ರಿಪೋರ್ಟ್ ಸತ್ತಿದ್ದು ಹೆಣ್ಣಲ್ಲ,ಗಂಡು ಎಂದು ಹೇಳಿದಾಗ ನೆರೆಹೊರೆಯವರು ಹಾಗೂ ಮನೆಯವರು ಆಘಾತಕ್ಕೆ ಒಳಗಾಗಿದ್ದರು.

2012ರಲ್ಲಿ ಮದುವೆಯಾಗಿದ್ದ ಜೋಡಿ
ಇವರಿಬ್ಬರು ಪ್ರೀತಿಸಿ 2012ರಲ್ಲಿ ಮದುವೆಯಾಗಿದ್ದರು. ಮನೆಯವರ ಮುಂದೆ ಹಾಗೂ ನೆರೆಹೊರೆಯವರ ಮುಂದೆ ಗಂಡ-ಹೆಂಡತಿಯಂತೆಯೇ ಬಿಂಬಿಸಿಕೊಂಡರು. ಮದುವೆಯಾದ ಎರಡು ವರ್ಷಗಳ ಬಳಿಕ ಒಂದು ಮಗುವನ್ನು ಕೂಡ ದತ್ತು ಸ್ವೀಕರಿಸಿದ್ದರು.

ಬೆಂಕಿ ಹಚ್ಚಿಕೊಂಡ ಹೆಂಡತಿ
ಯಾವುದೋ ಕಾರಣಕ್ಕೆ ಆಗಸ್ಟ್ 11ರಂದು ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಹೆಂಡತಿ ಮೈಗೆ ಬೆಂಕಿ ಹಚ್ಚಿಕೊಂಡಳು ಆಕೆಯನ್ನು ರಕ್ಷಿಸಲು ಹೋದ ಪತಿಗೂ ಬೆಂಕಿ ತಗುಲಿ ಗಂಡ-ಹೆಂಡತಿ ಇಬ್ಬರಿಗೂ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಹೆಂಡತಿ ಆಗಸ್ಟ್ 12ಕ್ಕೆ ಮೃತಪಟ್ಟರೆ, ಗಂಡ ಆಗಸ್ಟ್ 16ಕ್ಕೆ ಮೃತಪಟ್ಟಿದ್ದ. ಈf ಅವರ ಮರಣೋತ್ತರ ವರದಿ ಬಂದಿದ್ದು ಅದರಲ್ಲಿ ಮೃತ ಪಟ್ಟ ಹೆಂಡತಿ ಮಹಿಳೆಯಲ್ಲ , ಪುರುಷ ಎಂಬುವುದು ಬಯಲಾಗಿದೆ.

LGBTಗೆ ಸಪೋರ್ಟ್ ಮಾಡುತ್ತಿದ್ದ
ಮೃತ ವ್ಯಕ್ತಿಯ ಸಹೋದರ ಹೇಳುವ ಪ್ರಕಾರ ತಮ್ಮ LGBT ಸಮುದಾಯಕ್ಕೆ ಬೆಂಬಲ ನೀಡುತ್ತಿದ್ದ. ಕೇಳಿದರೆ ನನ್ನ ಸ್ನೇಹಿತ ಸಲಿಂಗಿ... ಅಂಥವರು ಭಯ ಮುಕ್ತರಾಗಿ ಬಾಳುವಂತರಾಗಬೇಕು ಎಂದು ಹೇಳುತ್ತಿದ್ದ ಎಂದಿದ್ದಾರೆ.

ಕಾಯ್ದೆ 377 ರದ್ದು ಬಳಿಕ ಸಲಿಂಗ ಕಾಮ ಅಪರಾಧವಲ್ಲ
2018 ಸೆಪ್ಟೆಂಬರ್ನಲ್ಲಿ ಕಾಯ್ದೆ 377 ರದ್ದು ಮಾಡಲಾಗಿದೆ. ಇದರಿಂದಾಗಿ ಈಗ ಭಾರತದಲ್ಲಿ ಸಲಿಂಗಿಗಳ ಮದುವೆ ಅಥವಾ ಸಲಿಂಗ ಕಾಮ ಅಪರಾಧವಲ್ಲ. ಆದರೆ ಸಮಾಜ ಈಗಲೂ ಸಲಿಂಗಿಗಳನ್ನು ಸ್ವೀಕರಿಸಲು ಸಿದ್ಧವಿಲ್ಲ. ಇದರ ಪರಿಣಾಮ ಸಲಿಂಗಿಗಳು ಎಲ್ಲರಂತೆ ಬದುಕಲು ಸಾಧ್ಯವಾಗುತ್ತಿಲ್ಲ.



Click it and Unblock the Notifications
