Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಮರಣೋತ್ತರ ಪರೀಕ್ಷೆಯಿಂದ ತಿಳಿಯಿತು 8 ವರ್ಷ ದಾಂಪತ್ಯ ನಡೆಸಿದ ಪತ್ನಿ ಮಹಿಳೆಯಲ್ಲ ಪುರುಷ
ಸಲಿಂಗ ಪ್ರೇಮ, ಮದುವೆ ಇವುಗಳ ಬಗ್ಗೆ ಅನೇಕ ಸುದ್ದಿಗಳನ್ನು ಓದಿರುತ್ತೀರಿ. ಆದರೆ ಈ ಸುದ್ದಿ ಅದೇ ರೀತಿಯದ್ದು ಆದರೂ ಆ ಕತೆಗಳಿಗಿಂತ ಸಂಪೂರ್ಣ ಭಿನ್ನ. ಸಲಿಂಗಿಗಳು ಮದುವೆಯಾದ ಬಳಿಕ ಸಮಾಜದ ಮುಂದೆ ಅವರು ಸಲಿಂಗಿಗಳಂತೆಯೇ ಬಾಳುತ್ತಾರೆ. ಆದರೆ ಮಧ್ಯ ಪ್ರದೇಶದ ಒಂದು ಚಿಕ್ಕ ಪಟ್ಟಣವಾಗಿರುವ ಸೆಹೋರೆಯ ಸುದ್ದಿಯೊಂದು ಇದೀಗ ದೇಶದ ಗಮನ ಸೆಳೆದಿದೆ.
ಸತ್ತಿದ್ದು ಹೆಣ್ಣಲ್ಲ ಗಂಡು ಎಂದ ಪೋಸ್ಟ್ಮಾರ್ಟಂ ರಿಪೋರ್ಟ್
ಗಂಡ-ಹೆಂಡತಿ ನಡುವೆ ಏನೋ ಕಾರಣಕ್ಕೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಆಕೆಯ ಪೋಸ್ಟ್ಮಾರ್ಟಂ ರಿಪೋರ್ಟ್ ಸತ್ತಿದ್ದು ಹೆಣ್ಣಲ್ಲ,ಗಂಡು ಎಂದು ಹೇಳಿದಾಗ ನೆರೆಹೊರೆಯವರು ಹಾಗೂ ಮನೆಯವರು ಆಘಾತಕ್ಕೆ ಒಳಗಾಗಿದ್ದರು.

2012ರಲ್ಲಿ ಮದುವೆಯಾಗಿದ್ದ ಜೋಡಿ
ಇವರಿಬ್ಬರು ಪ್ರೀತಿಸಿ 2012ರಲ್ಲಿ ಮದುವೆಯಾಗಿದ್ದರು. ಮನೆಯವರ ಮುಂದೆ ಹಾಗೂ ನೆರೆಹೊರೆಯವರ ಮುಂದೆ ಗಂಡ-ಹೆಂಡತಿಯಂತೆಯೇ ಬಿಂಬಿಸಿಕೊಂಡರು. ಮದುವೆಯಾದ ಎರಡು ವರ್ಷಗಳ ಬಳಿಕ ಒಂದು ಮಗುವನ್ನು ಕೂಡ ದತ್ತು ಸ್ವೀಕರಿಸಿದ್ದರು.

ಬೆಂಕಿ ಹಚ್ಚಿಕೊಂಡ ಹೆಂಡತಿ
ಯಾವುದೋ ಕಾರಣಕ್ಕೆ ಆಗಸ್ಟ್ 11ರಂದು ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಹೆಂಡತಿ ಮೈಗೆ ಬೆಂಕಿ ಹಚ್ಚಿಕೊಂಡಳು ಆಕೆಯನ್ನು ರಕ್ಷಿಸಲು ಹೋದ ಪತಿಗೂ ಬೆಂಕಿ ತಗುಲಿ ಗಂಡ-ಹೆಂಡತಿ ಇಬ್ಬರಿಗೂ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಹೆಂಡತಿ ಆಗಸ್ಟ್ 12ಕ್ಕೆ ಮೃತಪಟ್ಟರೆ, ಗಂಡ ಆಗಸ್ಟ್ 16ಕ್ಕೆ ಮೃತಪಟ್ಟಿದ್ದ. ಈf ಅವರ ಮರಣೋತ್ತರ ವರದಿ ಬಂದಿದ್ದು ಅದರಲ್ಲಿ ಮೃತ ಪಟ್ಟ ಹೆಂಡತಿ ಮಹಿಳೆಯಲ್ಲ , ಪುರುಷ ಎಂಬುವುದು ಬಯಲಾಗಿದೆ.

LGBTಗೆ ಸಪೋರ್ಟ್ ಮಾಡುತ್ತಿದ್ದ
ಮೃತ ವ್ಯಕ್ತಿಯ ಸಹೋದರ ಹೇಳುವ ಪ್ರಕಾರ ತಮ್ಮ LGBT ಸಮುದಾಯಕ್ಕೆ ಬೆಂಬಲ ನೀಡುತ್ತಿದ್ದ. ಕೇಳಿದರೆ ನನ್ನ ಸ್ನೇಹಿತ ಸಲಿಂಗಿ... ಅಂಥವರು ಭಯ ಮುಕ್ತರಾಗಿ ಬಾಳುವಂತರಾಗಬೇಕು ಎಂದು ಹೇಳುತ್ತಿದ್ದ ಎಂದಿದ್ದಾರೆ.

ಕಾಯ್ದೆ 377 ರದ್ದು ಬಳಿಕ ಸಲಿಂಗ ಕಾಮ ಅಪರಾಧವಲ್ಲ
2018 ಸೆಪ್ಟೆಂಬರ್ನಲ್ಲಿ ಕಾಯ್ದೆ 377 ರದ್ದು ಮಾಡಲಾಗಿದೆ. ಇದರಿಂದಾಗಿ ಈಗ ಭಾರತದಲ್ಲಿ ಸಲಿಂಗಿಗಳ ಮದುವೆ ಅಥವಾ ಸಲಿಂಗ ಕಾಮ ಅಪರಾಧವಲ್ಲ. ಆದರೆ ಸಮಾಜ ಈಗಲೂ ಸಲಿಂಗಿಗಳನ್ನು ಸ್ವೀಕರಿಸಲು ಸಿದ್ಧವಿಲ್ಲ. ಇದರ ಪರಿಣಾಮ ಸಲಿಂಗಿಗಳು ಎಲ್ಲರಂತೆ ಬದುಕಲು ಸಾಧ್ಯವಾಗುತ್ತಿಲ್ಲ.



Click it and Unblock the Notifications