ವಿನಾಯಕ 2019: ಗಣೇಶೋತ್ಸವನ್ನು ಅದ್ಧೂರಿಯಾಗಿ ಆಚರಿಸುವ 9 ಸ್ಥಳಗಳು

ಈಗ ಎಲ್ಲೆಲ್ಲಿಯೂ ಗಣೇಶ ಹಬ್ಬದ ಸಡಗರ ಎದ್ದು ಕಾಣುತ್ತಿದೆ. ಕಲೆಗಾರರು ಗಣೇಶ ಮೂರ್ತಿಗಳ ತಯಾರಿಯಲ್ಲಿ ನಿರತರಾಗಿದ್ದಾರೆ. ಗಣೇಶ ಹಬ್ಬ ಆಚರಿಸುವಲ್ಲಿ ಯುವಕರಿಗೆ ಸ್ವಲ್ಪ ಹುರುಪು ಅಧಿಕವೇ ಎಂದು ಹೇಳಬಹುದು.

ganesha festival

ಗಲ್ಲಿ-ಗಲ್ಲಿಗೂ ಒಂದೊಂದು ಯುವಕರ ಸಂಘವಿರುತ್ತದೆ. ಆ ಸಂಘದವರು ಈ ವರ್ಷ ಗಣೇಶೋತ್ಸವನ್ನು ಕಳೆದ ಸಾಲಿಗಿಂತ ಈ ಸಾರಿ ಹೆಚ್ಚು ವಿಜೃಂಭಣೆಯಿಂದ ಆಚರಿಸಬೇಕೆಂಬ ಹುರುಪಿನಲ್ಲಿ ಈಗಾಗಲೇ ಸಿದ್ಧತೆಯಲ್ಲಿ ತೊಡಗಿರುತ್ತೀರಿ.

ಈ ವರ್ಷದ ಗಣೇಶ ಚತುರ್ಥಿ ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದೆ ಆದರೂ, ಗಲ್ಲಿಗಳಲ್ಲಿ ಮಾಡುವ ಗಣೇಶೋತ್ಸವ ಆ ಮಾಸ ಪೂರ್ತಿ ಆಚರಿಸುತ್ತಾರೆ.

ಭಾರತದ ಮೂಲೆ-ಮೂಲೆಯಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು, ಆದರೆ ಕೆಲವೊಂದು ಕಡೆಗಳಲ್ಲಿ ಮಾತ್ರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಆ ಸ್ಥಳಗಳಾವುವು ಎಂದು ನೋಡೋಣವೇ? ಈ ಸ್ಥಳಗಳಂತೆ ತುಂಬಾ ವಿಜೃಂಭನೆಯಿಂದ ನಿಮ್ಮ ಸ್ಥಳಗಳಲ್ಲಿಯೂ ಆಚರಿಸುವುದಾದರೆ ಆ ಸ್ಥಳದ ಹೆಸರನ್ನು ಬರೆದು ನಮಗೆ ಕಳುಹಿಸಬಹುದು.

ಲಾಲ್ ಬಾಗ್ ಚಾ ರಾಜ್ ( ಲಾಲ್ ಬಾಗ್ ನ ರಾಜ)

ಲಾಲ್ ಬಾಗ್ ಚಾ ರಾಜ್ ( ಲಾಲ್ ಬಾಗ್ ನ ರಾಜ)

ಈ ಗಣೇಶೋತ್ಸದಲ್ಲಿ ಅತೀ ಎತ್ತರದ ಗಣೇಶನ ಮೂರ್ತಿಯನ್ನು ಕೂರಿಸಲಾಗುವುದು. ಬಾಲಿವುಡ್ ನ ಪ್ರಸಿದ್ಧ ಸೆಲೆಬ್ರಿಟಿಗಳಾದ ಅಮಿತಾ ಬಚ್ಚನ್, ಸಲ್ಮಾನ್ ಖಾನ್ ಮೊದಲಾದವರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಮುಂಬಯಿಚಾ ರಾಜ:ಗಾಲಿ ಗಣೇಶ

ಮುಂಬಯಿಚಾ ರಾಜ:ಗಾಲಿ ಗಣೇಶ

ಮುಂಬಯಿಯ ಮತ್ತೊಂದು ವಿಜೃಂಭಣೆಯ ಗಣೇಶೋತ್ಸವೆಂದರೆ ಗಾಲಿ ಗಣೇಶ. 20 ಅಡಿಗಿಂತಲೂ ಎತ್ತರದ ಗಾಲಿ ಗಣೇಶನನ್ನು ನೋಡಲು ಲಕ್ಷಾಂತರ ಭಕ್ತಾಧಿಗಳು ಭಾಗವಹಿಸುತ್ತಾರೆ.

 ಬೆಂಗಳೂರಿನಲ್ಲಿ- ಅವಿನ್ಯೂ ರೋಡ್ ನ ಗಣೇಶೋತ್ಸವ

ಬೆಂಗಳೂರಿನಲ್ಲಿ- ಅವಿನ್ಯೂ ರೋಡ್ ನ ಗಣೇಶೋತ್ಸವ

ಬೆಂಗಳೂರಿನ ಅವಿನ್ಯೂ ರೋಡ್ ನ ಗಣೇಶೋತ್ಸವ ಬೆಂಗಳೂರಿನ ಅತ್ಯಂತ ವಿಜೃಂಭಣೆ ಯ ಗಣೇಶೋತ್ಸವಾಗಿದೆ.

ಎಪಿಎಸ್ ಕಾಲೇಜು ಗ್ರೌಂಡ್, ಬಸವನ ಗುಡಿ

ಎಪಿಎಸ್ ಕಾಲೇಜು ಗ್ರೌಂಡ್, ಬಸವನ ಗುಡಿ

ಇಲ್ಲಿ ಅನೇಕ ವರ್ಷಗಳಿಂದ ಗಣೇಶೋತ್ಸವನ್ನು ಆಚರಿಸುತ್ತಿದ್ದು, ಪ್ರತೀವರ್ಷವೂ ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ.

ಗಿರ್ ಗಾವುಂಚಾ ರಾಜ

ಗಿರ್ ಗಾವುಂಚಾ ರಾಜ

ಇಲ್ಲಿ ಗಣೇಶನನ್ನು ಜೇಡಿ ಮಣ್ಣು ಬಳಸಿ ಮಾಡಲಾಗುವುದು ಮತ್ತು ಯಾವುದೇ ಕೃತಕ ಬಣ್ಣ ಬಳಿಯದೇ eco friendly(ಪರಿಸರ ಸ್ನೇಹಿ) ಆಗಿ ಹಬ್ಬವನ್ನು ಆಚರಿಸಲಾಗುವುದು.

ದಾಗ್ ದೂಶಿತ್, ಪುಣೆ

ದಾಗ್ ದೂಶಿತ್, ಪುಣೆ

ಚಿಕ್ಕದಾದ ಗಣೇಶ ದೇವಾಲಯವು ತುಂಬಾ ಪ್ರಸಿದ್ಧಿಯನ್ನು ಪಡೆದಂತಹ ದೇವಾಲಯವಾಗಿದ್ದು, ಇಲ್ಲಿಗೆ ಗಣೇಶೋತ್ಸವ ಸಮಯದಲ್ಲಿ ಪುಣೆಯಿಂದ ಮಾತ್ರವಲ್ಲ, ಭಾರತಾದ್ಯಂತದಿಂದ ಭಕ್ತರು ಬಂದು ದರ್ಶನ ಪಡೆಯುತ್ತಾರೆ.

ಭಾಂದ್ರಕರ್ಚಾ ರಾಜ

ಭಾಂದ್ರಕರ್ಚಾ ರಾಜ

ಇಲ್ಲಿ ಗಣೇಶೋತ್ಸವಕ್ಕೆ ಸಾಕಷ್ಟು ಧಾನಿಗಳು ಧನ ಸಹಾಯ ಮಾಡುತ್ತಾರೆ. ಕಮ್ಮಿಯೆಂದರೂ 20,000ಕ್ಕೂ ಅಧಿಕ ಜನರಿಗೆ ಈ ಗಣೋತ್ಸವ ಸಮಯದಲ್ಲಿ ಅನ್ನದಾನ ಮಾಡಲಾಗುವುದು.

ಕೇತ್ ವಾಡಿಚಾ ಗಣರಾಜ

ಕೇತ್ ವಾಡಿಚಾ ಗಣರಾಜ

ಇಲ್ಲಿ 2000ನೇ ಇಸವಿಯಲ್ಲಿ 35 ಅಡಿಯ ಗಣೇಶ ಮೂರ್ತಿಯನ್ನು ಕೂರಿಸಿ, ಮುಂಬಯಿಯಲ್ಲಿಯೇ ಅತೀ ಎತ್ತರದ ಗಣಪನಮೂರ್ತಿಯನ್ನು ಕೂರಿಸಿ ಮಾಡಲಾದ ಗಣೇಶೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ರೆಕಾರ್ಡ್ ಅನ್ನು ಯಾರೂ ಇದುವರೆಗೆ ಮುರಿದಿಲ್ಲ ಅನ್ನುವುದೇ ಇಲ್ಲಿಯ ಮತ್ತೊಂದು ವಿಶೇಷತೆ.

GBS ಸಮಾಜ್ ಗಣೇಶೋತ್ಸವ್ ಅಥವಾ ಜಿಬಿಎಸ್ ಸಮಾಜ ಗಣೇಶೋತ್ಸವ

GBS ಸಮಾಜ್ ಗಣೇಶೋತ್ಸವ್ ಅಥವಾ ಜಿಬಿಎಸ್ ಸಮಾಜ ಗಣೇಶೋತ್ಸವ

ಮುಂಬಯಿಯಲ್ಲಿ ಆಚರಿಸುವ ಅತ್ಯಂತ ವಿಜೃಂಭಣೆಯ ಗಣೇಶೋತ್ಸವೆಂದರೆ GBS ಸಮಾಜ್ ಗಣೇಶೋತ್ಸವ್. ಇಲ್ಲಿ 24 ಕ್ಯಾರೆಟ್ ಚಿನ್ನವನ್ನು ಬಳಸಿ ಮಾಡಲಾದ ಆಸನದಲ್ಲಿ ಗಣೇಶನನ್ನು ಕೂರಿಸಲಾಗುವುದು.

X
Desktop Bottom Promotion