Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮಂಗಳ ಗೌರಿ ವ್ರತದ ಹಿನ್ನಲೆ

ಮಾರನೇ ದಿನ ಆ ಹುಡುಗ ಮತ್ತೆ ಭಿಕ್ಷೆ ಬೇಡುತ್ತಾ ಬಂದ, ರಾಣಿ ಅವನಿಗೆ ಭಿಕ್ಷೆ ನೀಡಲು ಬಂದಳು. ಆದರೆ ಹುಡುಗ ಅವಳ ಕೈಯಿಂದ ಆ ಭಿಕ್ಷೆ ತೆಗೆದುಕೊಳ್ಳಲಿಲ್ಲ. ಹುಡುಗನ ಆ ವರ್ತನೆ ನೋಡಿ ರಾಜನಿಗೆ ತುಂಬಾ ಕೋಪ ಬರುತ್ತದೆ. ಕೋಪದಿಂದ ಕೇಳುತ್ತಾನೆ ಏಕೆ ನೀನು ಹೀಗೆ ಮಾಡುತ್ತಿದ್ದೀಯ? ಎಂದು ಕೋಪದಿಂದ ಕೇಳುತ್ತಾನೆ. ಅದಕ್ಕೆ ಆ ಹುಡುಗ ನಿಮಗೆ ಮಕ್ಕಳಿಲ್ಲ, ಆದ್ದರಿಂದ ನೀವು ಅದೃಷ್ಟವಂತರಲ್ಲ ಎಂದು ಹೇಳುತ್ತಾನೆ.
ಇದನ್ನು ಕೇಳಿದ ರಾಜ ರಾಣಿಗೆ ಕೋಪ ಮತ್ತು ಬೇಸರವಾಗುತ್ತದೆ. ತುಂಬಾ ಕೋಪದಿಂದ ಹೇಳುತ್ತಾನೆ, "ಅದೃಷ್ಟವಿದೆಯೇ ಅಥವಾ ಇಲ್ಲವೇ ಎಂದು ಶಿವ ನಿರ್ಧರಿಸುತ್ತಾನೆ " ಎಂದು ಹೇಳುತ್ತಾನೆ, ಆ ಹುಡುಗ ಮಾಯವಾಗುತ್ತಾನೆ, ಆಗ ಈ ರಾಜ, ರಾಣಿಗೆ ಆ ಬಾಲಕ ಶಿವ ಅಂತ ಗೊತ್ತಾಗುತ್ತದೆ. ಶಿವನ ಮೇಲೆ ಕೋಪಗೊಂಡಿದ್ದಕ್ಕೆ ಕ್ಷಮೆ ಕೇಳಿ, ಪ್ರಾರ್ಥನೆ ಮಾಡುತ್ತಾರೆ. ಅವರಿಗೆ ಒಂದು ಗಂಡು ಮಗು ಆಗುತ್ತದೆ, ಆಗ ಶಿವ ಪ್ರತ್ಯಕ್ಷವಾಗಿ "ಇವನ ಆಯುಸ್ಸು 16 ವರ್ಷಗಳವರೆಗೆ ಮಾತ್ರ" ಎಂದು ಹೇಳಿ ಮಾಯವಾಗುತ್ತಾನೆ. ಆ ಮಗುವಿಗೆ ಚಂದ್ರ ಶೇಖರ ಎಂದು ಹೆಸರಿಡುತ್ತಾರೆ.
ಚಂದ್ರ ಶೇಖರ ರಾಜಕುಮಾರನಿಗೆ ತನ್ನ ಆಯುಸ್ಸು ಕುರಿತು ತಿಳಿದಿರುತ್ತದೆ. ಇವನು ಕೂಡ ತನಗೆ 15 ವರ್ಷ ಕಳೆದ ಕೂಡಲೇ ಕಾಶಿಗೆ ಹೋಗುತ್ತಾನೆ. ಹೀಗೆ ಕಾಶಿಗೆ ಹೋಗುವಾಗ ದಾರಿ ಮಧ್ಯೆಯಲ್ಲಿ ಒಬ್ಬ ರಾಜಕುಮಾರಿ ತನ್ನ ಸಂಗಡಿಗರ ಜೊತೆ ಕೂತು ಮಾತನಾಡುತ್ತಿರುವುದು ಕಾಣುತ್ತದೆ, ಇವನು ನಡೆದು ಅವಳ ಸಮೀಪ ಹೋದಾಗ "ನಾನು ಗೌರಿಯನ್ನು ಪೂಜೆ ಮಾಡುತ್ತಿದ್ದೇನೆ ಆದ್ದರಿಂದ ನನ್ನ ಮದುವೆಯಾದ ಗಂಡು ತುಂಬಾ ವರ್ಷ ಬದುಕುತ್ತಾನೆ " ಎಂದು ಅವಳು ಹೇಳುವುದು ಕೇಳುತ್ತದೆ.
ಈ ರಾಜಕುಮಾರ ಅವಳನ್ನು ಮದುವೆಯಾಗಲು ತೀರ್ಮಾನಿಸಿ ಅವಳ ತಂದೆಯ ಹತ್ತಿರ ಹೋಗುತ್ತಾನೆ. ಆ ರಾಜಕುಮಾರಿಯ ತಂದೆ ಕಾಯಿಲೆ ಬಿದ್ದಿರುತ್ತಾನೆ, ತನ್ನ ಮಗಳನ್ನು ಕೇಳಿ ಬಂದ ಈ ರಾಜಕುಮಾರನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲು ಸಂತೋಷದಿಂದ ಒಪ್ಪುತ್ತಾನೆ. ಅವರ ಮದುವೆಯಾಗುತ್ತದೆ, ಅವತ್ತಿಗೆ ಅವನಿಗೆ 16 ವರ್ಷ ತುಂಬುತ್ತದೆ. ಅವನು ತನ್ನ ಕಥೆಯನ್ನು ರಾಜಕುಮಾರಿಗೆ ಹೇಳುತ್ತಾನೆ, ರಾತ್ರಿ ಅವನು ಮಲಗಿದ್ದಾಗ ಅವನ ಬಳಿ ಹಾವು ಬರುತ್ತಿರುವುದು ಕಾಣುತ್ತದೆ, ರಾಜಕುಮಾರಿ ಮಂಗಳ ಗೌರಿಗೆ ಪೂಜೆ ಮಾಡಿದ್ದ ಅಕ್ಕಿಯನ್ನು ಹಾವಿಗೆ ಎರಚುತ್ತಾಳೆ, ಹಾವು ಸತ್ತು ಹೋಗುತ್ತದೆ, ಸತ್ತ ಹಾವನ್ನು ಪೂಜೆಗೆ ಇಟ್ಟ ಕಲಶದಲ್ಲಿ ಹಾಕಿಡುತ್ತಾಳೆ.
ಮಾರನೆ ದಿನ ಬೆಳಗ್ಗೆ ರಾಜಕುಮಾರಿ ಏಳುವ ಮೊದಲು ಚಂದ್ರಶೇಖರ ತನ್ನ ಮದುವೆಯ ಉಂಗುರ ಬಿಚ್ಚಿಟ್ಟು ಕಾಶಿಗೆ ಹೋಗುತ್ತಾನೆ. ರಾಜಕುಮಾರಿಯನ್ನು ಮದುವೆಯಾಗಲು ಬೇರೆ ರಾಜಕುಮಾರರು ಮುಂದೆ ಬರುತ್ತಾರೆ, ಆದರೆ ಅವಳು ಒಪ್ಪುವುದಿಲ್ಲ. ಈ ರಾಜಕುಮಾರ ಕಾಶಿಗೆ ಹೋಗಿ ಒಂದು ವರ್ಷ ಕಳೆದರೂ ಸಾಯುವುದಿಲ್ಲ. ನಂತರ ಮರಳಿ ಬಂದು ರಾಜಕುಮಾರಿ ಜೊತೆ ಸುಖವಾಗಿ, ಸಂತೋಷದಿಂದ ಬಾಳ್ವೆ ನಡೆಸುತ್ತಾನೆ. ಮಂಗಳ ಗೌರಿ ಪೂಜೆ ಮಾಡಿದರೆ ಗಂಡನ ಆಯುಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯಲ್ಲಿ ಈ ವ್ರತ ಮಾಡಲಾಗುವುದು.



Click it and Unblock the Notifications