Latest Updates
-
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ!
ಮಂಗಳ ಗೌರಿ ವ್ರತದ ಹಿನ್ನಲೆ

ಮಾರನೇ ದಿನ ಆ ಹುಡುಗ ಮತ್ತೆ ಭಿಕ್ಷೆ ಬೇಡುತ್ತಾ ಬಂದ, ರಾಣಿ ಅವನಿಗೆ ಭಿಕ್ಷೆ ನೀಡಲು ಬಂದಳು. ಆದರೆ ಹುಡುಗ ಅವಳ ಕೈಯಿಂದ ಆ ಭಿಕ್ಷೆ ತೆಗೆದುಕೊಳ್ಳಲಿಲ್ಲ. ಹುಡುಗನ ಆ ವರ್ತನೆ ನೋಡಿ ರಾಜನಿಗೆ ತುಂಬಾ ಕೋಪ ಬರುತ್ತದೆ. ಕೋಪದಿಂದ ಕೇಳುತ್ತಾನೆ ಏಕೆ ನೀನು ಹೀಗೆ ಮಾಡುತ್ತಿದ್ದೀಯ? ಎಂದು ಕೋಪದಿಂದ ಕೇಳುತ್ತಾನೆ. ಅದಕ್ಕೆ ಆ ಹುಡುಗ ನಿಮಗೆ ಮಕ್ಕಳಿಲ್ಲ, ಆದ್ದರಿಂದ ನೀವು ಅದೃಷ್ಟವಂತರಲ್ಲ ಎಂದು ಹೇಳುತ್ತಾನೆ.
ಇದನ್ನು ಕೇಳಿದ ರಾಜ ರಾಣಿಗೆ ಕೋಪ ಮತ್ತು ಬೇಸರವಾಗುತ್ತದೆ. ತುಂಬಾ ಕೋಪದಿಂದ ಹೇಳುತ್ತಾನೆ, "ಅದೃಷ್ಟವಿದೆಯೇ ಅಥವಾ ಇಲ್ಲವೇ ಎಂದು ಶಿವ ನಿರ್ಧರಿಸುತ್ತಾನೆ " ಎಂದು ಹೇಳುತ್ತಾನೆ, ಆ ಹುಡುಗ ಮಾಯವಾಗುತ್ತಾನೆ, ಆಗ ಈ ರಾಜ, ರಾಣಿಗೆ ಆ ಬಾಲಕ ಶಿವ ಅಂತ ಗೊತ್ತಾಗುತ್ತದೆ. ಶಿವನ ಮೇಲೆ ಕೋಪಗೊಂಡಿದ್ದಕ್ಕೆ ಕ್ಷಮೆ ಕೇಳಿ, ಪ್ರಾರ್ಥನೆ ಮಾಡುತ್ತಾರೆ. ಅವರಿಗೆ ಒಂದು ಗಂಡು ಮಗು ಆಗುತ್ತದೆ, ಆಗ ಶಿವ ಪ್ರತ್ಯಕ್ಷವಾಗಿ "ಇವನ ಆಯುಸ್ಸು 16 ವರ್ಷಗಳವರೆಗೆ ಮಾತ್ರ" ಎಂದು ಹೇಳಿ ಮಾಯವಾಗುತ್ತಾನೆ. ಆ ಮಗುವಿಗೆ ಚಂದ್ರ ಶೇಖರ ಎಂದು ಹೆಸರಿಡುತ್ತಾರೆ.
ಚಂದ್ರ ಶೇಖರ ರಾಜಕುಮಾರನಿಗೆ ತನ್ನ ಆಯುಸ್ಸು ಕುರಿತು ತಿಳಿದಿರುತ್ತದೆ. ಇವನು ಕೂಡ ತನಗೆ 15 ವರ್ಷ ಕಳೆದ ಕೂಡಲೇ ಕಾಶಿಗೆ ಹೋಗುತ್ತಾನೆ. ಹೀಗೆ ಕಾಶಿಗೆ ಹೋಗುವಾಗ ದಾರಿ ಮಧ್ಯೆಯಲ್ಲಿ ಒಬ್ಬ ರಾಜಕುಮಾರಿ ತನ್ನ ಸಂಗಡಿಗರ ಜೊತೆ ಕೂತು ಮಾತನಾಡುತ್ತಿರುವುದು ಕಾಣುತ್ತದೆ, ಇವನು ನಡೆದು ಅವಳ ಸಮೀಪ ಹೋದಾಗ "ನಾನು ಗೌರಿಯನ್ನು ಪೂಜೆ ಮಾಡುತ್ತಿದ್ದೇನೆ ಆದ್ದರಿಂದ ನನ್ನ ಮದುವೆಯಾದ ಗಂಡು ತುಂಬಾ ವರ್ಷ ಬದುಕುತ್ತಾನೆ " ಎಂದು ಅವಳು ಹೇಳುವುದು ಕೇಳುತ್ತದೆ.
ಈ ರಾಜಕುಮಾರ ಅವಳನ್ನು ಮದುವೆಯಾಗಲು ತೀರ್ಮಾನಿಸಿ ಅವಳ ತಂದೆಯ ಹತ್ತಿರ ಹೋಗುತ್ತಾನೆ. ಆ ರಾಜಕುಮಾರಿಯ ತಂದೆ ಕಾಯಿಲೆ ಬಿದ್ದಿರುತ್ತಾನೆ, ತನ್ನ ಮಗಳನ್ನು ಕೇಳಿ ಬಂದ ಈ ರಾಜಕುಮಾರನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲು ಸಂತೋಷದಿಂದ ಒಪ್ಪುತ್ತಾನೆ. ಅವರ ಮದುವೆಯಾಗುತ್ತದೆ, ಅವತ್ತಿಗೆ ಅವನಿಗೆ 16 ವರ್ಷ ತುಂಬುತ್ತದೆ. ಅವನು ತನ್ನ ಕಥೆಯನ್ನು ರಾಜಕುಮಾರಿಗೆ ಹೇಳುತ್ತಾನೆ, ರಾತ್ರಿ ಅವನು ಮಲಗಿದ್ದಾಗ ಅವನ ಬಳಿ ಹಾವು ಬರುತ್ತಿರುವುದು ಕಾಣುತ್ತದೆ, ರಾಜಕುಮಾರಿ ಮಂಗಳ ಗೌರಿಗೆ ಪೂಜೆ ಮಾಡಿದ್ದ ಅಕ್ಕಿಯನ್ನು ಹಾವಿಗೆ ಎರಚುತ್ತಾಳೆ, ಹಾವು ಸತ್ತು ಹೋಗುತ್ತದೆ, ಸತ್ತ ಹಾವನ್ನು ಪೂಜೆಗೆ ಇಟ್ಟ ಕಲಶದಲ್ಲಿ ಹಾಕಿಡುತ್ತಾಳೆ.
ಮಾರನೆ ದಿನ ಬೆಳಗ್ಗೆ ರಾಜಕುಮಾರಿ ಏಳುವ ಮೊದಲು ಚಂದ್ರಶೇಖರ ತನ್ನ ಮದುವೆಯ ಉಂಗುರ ಬಿಚ್ಚಿಟ್ಟು ಕಾಶಿಗೆ ಹೋಗುತ್ತಾನೆ. ರಾಜಕುಮಾರಿಯನ್ನು ಮದುವೆಯಾಗಲು ಬೇರೆ ರಾಜಕುಮಾರರು ಮುಂದೆ ಬರುತ್ತಾರೆ, ಆದರೆ ಅವಳು ಒಪ್ಪುವುದಿಲ್ಲ. ಈ ರಾಜಕುಮಾರ ಕಾಶಿಗೆ ಹೋಗಿ ಒಂದು ವರ್ಷ ಕಳೆದರೂ ಸಾಯುವುದಿಲ್ಲ. ನಂತರ ಮರಳಿ ಬಂದು ರಾಜಕುಮಾರಿ ಜೊತೆ ಸುಖವಾಗಿ, ಸಂತೋಷದಿಂದ ಬಾಳ್ವೆ ನಡೆಸುತ್ತಾನೆ. ಮಂಗಳ ಗೌರಿ ಪೂಜೆ ಮಾಡಿದರೆ ಗಂಡನ ಆಯುಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯಲ್ಲಿ ಈ ವ್ರತ ಮಾಡಲಾಗುವುದು.



Click it and Unblock the Notifications