Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದುರ್ಗಾ ಮೂರ್ತಿ ಮಾಡಲು ವೇಶ್ಯೆಯರ ಮನೆಯ ಹೊಸ್ತಿಲ ಮಣ್ಣೇ ಬೇಕು, ಏಕೆ ಗೊತ್ತಾ?
ನವರಾತ್ರಿ-ಇದು ದುರ್ಗೆಯನ್ನು ಒಂಭತ್ತು ದಿನಗಳ ಆರಾಧಿಸುವ ಒಂದು ಆಚರನೆಯಾಗಿದೆ. ನವರಾತ್ರಿ ಬಂತೆಂದರೆ ಹಿಂದೂಗಳ ಮನೆ-ಮನೆಗಳಲ್ಲಿ ಸಡಗರ -ಸಂಭ್ರಮ. ಅಕ್ಟೋಬರ್ 15ರಿಂದ ನವರಾತ್ರಿ ಸಡಗರ ಶುರುವಾಗಿದೆ.
ಒಂಭತ್ತು ದಿನಗಳಲ್ಲಿ ದೇವಿಯ ವಿವಿಧ ರೂಪವನ್ನು ಆರಾಧಿಸಲಾಗುವುದು, ಹತ್ತನೇ ದಿನದಂದು ವಿಜಯದಶಮಿ ಆಚರಿಸಲಾಗುವುದು.
ನಮ್ಮ ಕರ್ನಾಟಕದಲ್ಲಿ ಈ ದಿನ ದಸರಾ ಹಬ್ಬದ ಸಡಗರ. ಕೋಲ್ಕತ್ತಾ, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜಾ ಎಂದು ಆಚರಿಸಲಾಗುವುದು. ನವರಾತ್ರಿಯ ಕೊನೆಯ ದಿನ ದುರ್ಗಾಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು.
ದುರ್ಗಾಮೂರ್ತಿಯನ್ನು ತಯಾರಿಸುವಾಗ ಅದಕ್ಕೆ ಇಂಥದ್ದೇ ವಸ್ತುಗಳನ್ನು ಬಳಸಿ ತಯಾರಿಸಬೇಕೆಂಬ ನಿಯಮಗಳಿವೆ. ಅದರಲ್ಲೂ ದುರ್ಗಾಮೂರ್ತಿ ತಯಾರಿಸುವಾಗ ವೇಶ್ಯೆಯರ ಜಾಗದ ಮಣ್ಣನ್ನು ಪಡೆದು ಅದರಿಂದ ಮೂರ್ತಿಯನ್ನು ತಯಾರಿಸುತ್ತಾರೆ. ವೇಶ್ಯೆಯರ ಮನೆಯ ಜಾಗದ ಮಣ್ಣು ಬಳಸದೆ ಮೂರ್ತಿ ತಯಾರಿಸಿದರೆ ಆ ಮೂರ್ತಿಯನ್ನು ಪರಿಗಣಿಸಲಾಗುವುದಿಲ್ಲ. ದುರ್ಗಾ ಮೂರ್ತಿ ತಯಾರಿಸುವಾಗ ಏಕೆ ವೇಶ್ಯೆಯರ ಮನೆಯ ಮಣ್ಣು ಬಳಸುತ್ತಾರೆ, ಇದರ ಹಿಂದಿನ ಉದ್ದೇಶವೇನು ಎಂದು ನೋಡೋಣ ಬನ್ನಿ:

ಸಮಾಜದಲ್ಲಿ ಕೀಳಾಗಿ ನೋಡುವ ವೇಶ್ಯೆಯರಿಗೆ ನವರಾತ್ರಿಯಲ್ಲಿ ವಿಶೇಷ ಮರ್ಯಾದೆ
ಹೆಣ್ಣನ್ನು ಕೀಳಾಗಿ ಕಾಣುವ ಪುರುಷ ಪ್ರಧಾನ ಸಮಾಜ ಇಂದಿಗೂ ಇದೆ ಎಂಬುವುದನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ, ಅದರಲ್ಲೂ ವೇಶ್ಯೆಯರನ್ನೂ ಇಡೀ ಸಮಾಜ ಕೀಳಾಗಿ ನೋಡುತ್ತದೆ. ಅವರಿಗೆ ಸಮಾಜದಲ್ಲಿ ಯಾವುದೇ ಬೆಲೆ ನೀಡುವುದಿಲ್ಲ, ಮೈ ಮಾರಿ ಬದುಕುವ ಆಕೆಯ ಬಗ್ಗೆ ಎಲ್ಲರಿಗೆ ಒಂದು ರೀತಿಯ ತಾತ್ಸಾರ ಭಾವವಿರುತ್ತದೆ. ಆದರೆ ನವರಾತ್ರಿಯ ಸಮಯದಲ್ಲಿ ಆಕೆಗೆ ವಿಶೇಷ ಮರ್ಯಾದೆ. ಆಕೆಯನ್ನು ತಾತ್ಸಾರದಿಂದ ನೋಡುವವರು ಆಕೆಯ ಮನೆ ಮುಂದೆ ಬಂದು ನಿನ್ನ ಮನೆಯ ಸ್ವಲ್ಪ ಮಣ್ಣು ಕೂಡ ತಾಯಿ ಎಂದು ಬೇಡಿ ಮಣ್ಣನ್ನು ಪಡೆದುಕೊಂಡು ಹೋಗುತ್ತಾರೆ. ಆಕೆಯ ಮನೆಯ ಮಣ್ಣನ್ನು ಬೆರೆಸಿ ಶಕ್ತಿಮಾತೆ ದುರ್ಗಾದೇವಿಯ ಮೂರ್ತಿಯನ್ನು ತಯಾರಿಸುತ್ತಾರೆ.

ವೇಶ್ಯೆಯರ ಮನೆಯಲ್ಲಿ ಮಣ್ಣಿಗಾಗಿ ಭಿಕ್ಷೆ ಬೇಡುತ್ತಾರೆ
ದುರ್ಗೆಯ ಮೂರ್ತಿಯನ್ನು ಮಾಡಲು ದೇವಾಲಯದ ಅರ್ಚಕರು ವೇಶ್ಯೆಯರ ಮನೆ ಬಾಗಿಲಿಗೆ ಹೋಗಿ ಮಣ್ಣು ನೀಡುವಮತೆ ಭಿಕ್ಷೆ ಮಾಡುತ್ತಾರೆ, ಮಂತ್ರಗಳನ್ನು ಹೇಳುತ್ತಾರೆ. ಒಂದು ವೇಳೆ ಆಕೆ ನಿರಾಕರಿಸಿದರೆ ಆಕೆ ನೀಡುವವರಿಗೆ ಆಕೆಯ ಬಳಿ ಭಿಕ್ಷೆ ಬೇಡಿ ಮಣ್ಣನ್ನು ತರಲಾಗುವುದು.

ವೇಶ್ಯೆಯರ ಮಣ್ಣನ್ನು ಏಕೆ ಬಳಸಲಾಗುವುದು?
ವೇಶ್ಯೆಯರ ಮನೆಯ ಮಣ್ಣು ಪವಿತ್ರವಾದ ಮಣ್ಣೆಂದು ಪರಿಗಣಿಸಲಾಗಿದೆ. ಯಶರು ವೇಶ್ಯೆಯರ ಮನೆಗೆ ಪ್ರವೇಶಿಸುತ್ತಾರೋ ಅವರು ತಮ್ಮ ಅಹಂ, ದ್ವೇಷ ಎಲ್ಲವನ್ನೂ ಬಾಗಿಲಿನಲ್ಲಿಯೇ ಬಿಟ್ಟು ಮನೆಯೊಳಗೆ ಪ್ರವೇಶಿಸುತ್ತಾರೆ. ಆದ್ದರಿಂದ ಈ ಮಣ್ಣನ್ನು ಪವಿತ್ರವಾದ ಮಣ್ಣೆಂದು ಹೇಳಲಾಗುವುದು. ಅಲ್ಲದೆ ವೇಶ್ಯೆಯರ ಮನೆಯನ್ನು ಬಂಗಾಳಿಯಲ್ಲಿ ನಿಶಿದ್ದೋ ಪಲ್ಲಿಸ್ ಎಂದು ಕರೆಯಲಾಗುವುದು, ಅಂದರೆ ಜನರು ನಿರಾಕರಿಸಿದ ಸ್ಥಳ ಎಂಬ ಅರ್ಥ. ದುರ್ಗಾ ಪೂಜೆಗೆ ತಿಂಗಳ ಮುಂಚೆಯೇ ಮಣ್ಣನ್ನು ಸಂಗ್ರಹಿಸಿ ಮೂರ್ತಿಯನ್ನು ಮಾಡಲಾಗುವುದು.

ಪಶ್ಚಿಮ ಬಂಗಾಳದಲ್ಲಿ ಕಟ್ಟುನಿಟ್ಟಾಗಿ ಪಾಲಿಸುವ ಆಚರಣೆ
ವೇಶ್ಯೆಯರ ಮನೆಗೆ ಹೋಗಿ ಮಣ್ಣನ್ನು ಸಂಗ್ರಹಿಸುವ ಆಚರಣೆಯನ್ನು ಬಂಗಾಳಿಗಳು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ, ಆದರೆ ಇದರ ಕಡೆ ಇದನ್ನು ಅಷ್ಟಾಗಿ ಪಾಲಿಸುವುದಿಲ್ಲ. ನವರಾತ್ರಿಯ ಸಮಯದಲ್ಲಿ ವೇಶ್ಯೆಯ ಮನೆ ಬಾಗಿಲಿಗೆ ಹೋಗಿ ಹೊಸ್ತಿಲಿನ ಮಣ್ಣು ನೀಡುವಂತೆ ಬೇಡುವವರು ಉಳಿದ ಸಮಯದಲ್ಲಿ ಆಕೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ.

ದುರ್ಗಾಮೂರ್ತಿ ತಯಾರಿಸಲು ಏನೆಲ್ಲಾ ಬಳಸುತ್ತಾರೆ?
ದುರ್ಗಾಮೂರ್ತಿಯನ್ನು ತಯಾರಿಸಲು ಗಂಗಾ ನದಿ ತೀರದಿಂದ ಮಣ್ಣು, ಸೆಗಣಿ, ಗೋ ಮೂತ್ರ ಜೊತೆಗೆ ವೇಶ್ಯೆಯ ಮನೆಯ ಹೊಸ್ತಿಲಿನಲ್ಲಿನ ಮಣ್ಣು ಇವುಗಳನ್ನು ಬಳಸಿ ತಯಾರಿಸಲಾಗುವುದು.



Click it and Unblock the Notifications