Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹಿಂದೂ ಧರ್ಮದಲ್ಲಿ ವಾರದ ವಿಶಿಷ್ಟ ದಿನಗಳಲ್ಲಿ ನಾನ್ವೆಜ್ ಸೇವಿಸುವುದಿಲ್ಲ ಯಾಕೆ ಗೊತ್ತೇ?

ಕೆಲವು ವಿಶಿಷ್ಟ ದಿನಗಳಲ್ಲಿ ಹಿಂದೂ ಧರ್ಮೀಯರು ಸಾಮಾನ್ಯ ಮಾಂಸಾಹಾರಗಳಾದ ಕೋಳಿ, ಕುರಿ, ಮೀನು ಅಥವಾ ಮೊಟ್ಟೆಯನ್ನು ಸೇವಿಸುವುದಿಲ್ಲ. ಇವುಗಳಲ್ಲಿ ವಿಶೇಷವಾಗಿ ಮಂಗಳವಾರ, ಗುರುವಾರ ಮತ್ತು ಶನಿವಾರಗಳು ಪ್ರಮುಖವಾಗಿವೆ ಹಾಗೂ ವರ್ಷದ ಕೆಲವು ಪವಿತ್ರ ದಿನಗಳಾದ ಏಕಾದಶಿ, ಸಂಕ್ರಾಂತಿ, ದಸರಾ, ಸಂಕಷ್ಟಿ ಚತುರ್ಥಿ, ಅಂಗಾರಕಿ ಚತುರ್ಥಿ, ಗುಡಿಪಾಡ್ವಾ, ಅಕ್ಷಯ ತೃತೀಯ ಹಾಗೂ ದೀಪಾವಳಿಯ ಎಲ್ಲಾ ದಿನಗಳು ಮಾಂಸಾಹಾರ ಸೇವನೆರಹಿತ ದಿನಗಳಾಗಿವೆ.
ವಾರದ ದಿನಗಳನ್ನು ಹೊರತುಪಡಿಸಿ ಈ ವಿಶಿಷ್ಟ ದಿನಗಳಲ್ಲಿ ಮಾಂಸಾಹಾರ ಸೇವಿಸದೇ ಇರಲು ಅಪ್ಪಟ ಧಾರ್ಮಿಕ ಕಾರಣಗಳಿವೆ. ಹಿಂದೂ ಧರ್ಮದಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಪಾಪ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕನಿಷ್ಟ ಈ ದಿನಗಳಲ್ಲಾದರೂ ಮಾಂಸಾಹಾರ ಸೇವಿಸದೇ ಪ್ರಾಣಿವಧೆಯನ್ನು ನಡೆಸದಿರಲು ಹಾಗೂ ಈ ದಿನದ ಪಾವಿತ್ರ್ಯತೆಯನ್ನು ಕಾಪಾಡಲು ಯತ್ನಿಸುತ್ತಾರೆ.

ಸೋಮವಾರ, ಗುರುವಾರ ಮತ್ತು ಶನಿವಾರ
ಸೋಮವಾರ, ಗುರುವಾರ ಮತ್ತು ಶನಿವಾರಗಳಂದು ಮಾಂಸಾಹಾರ ಸೇವಿಸದೇ ಇರಲು ಕಾರಣವೇನೆಂದರೆ ಮಾನವಾದ ನಾವು ಮಿಶ್ರಾಹಾರಿಗಳಾಗಿದ್ದು ನಮಗೆ ಸಸ್ಯಾಹಾರವೂ ಮಾಂಸಾಹಾರವೂ ಮಿಶ್ರರೂಪದಲ್ಲಿ ಬೇಕೇ ಹೊರತು ವಾರದ ಎಲ್ಲಾ ದಿನ ಮಾಂಸಾಹಾರದ ಅಗತ್ಯವೇ ಇಲ್ಲ. ಅಲ್ಪ ಪ್ರಮಾಣದ ಮಾಂಸಾಹಾರದಿಂದಲೂ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದ, ಸಸ್ಯಜನ್ಯ ಆಹಾರಗಳಿಂದ ಸಿಗದ ಪೋಷಕಾಂಶಗಳು, ವಿಶೇಷವಾಗಿ ಕಬ್ಬಿಣ ಮತ್ತು ವಿಟಮಿನ್ ಬಿ12 ಗಳು ಲಭಿಸುತ್ತವೆ. ಇದೇ ಕಾರಣದಿಂದ ಮಾನವರು ಪರಿಪೂರ್ಣ ಮಾಂಸಾಹಾರಿಗಳಾಗುವ ಅವಶ್ಯಕತೆ ಇಲ್ಲ. ಹಾಗಾಗಿ ವಾರದ ಎಲ್ಲಾ ದಿನ ಮಾಂಸಾಹಾರ ಸೇವಿಸಿದರೆ ಈ ಆಹಾರಕ್ರಮವನ್ನು ನಮ್ಮ ದೇಹ ವ್ಯಸನವನ್ನಾಗಿ ಪರಿಗಣಿಸುತ್ತದೆ. ಹಾಗಾಗಿ ಎಲ್ಲಾ ದಿನ ಮಾಂಸಾಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಅತಿಯಾದ ಮಾಂಸಾಹಾರದಿಂದ ಈ ಎಲ್ಲಾ ಸಮಸ್ಯೆ ಕಾಡಬಹುದು
ಅತಿಯಾದ ಮಾಂಸಾಹಾರದಿಂದ ಮೂಲವ್ಯಾಧಿ, ಮೂತ್ರಪಿಂಡದ ಕಲ್ಲುಗಳು, ಕರುಳಿನ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಹೃದಯಾಘಾತ ಮೊದಲಾದವು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಒಮ್ಮೆ ಮಾಂಸಾಹಾರ ಒಗ್ಗಿಬಿಟ್ಟಿತೆಂದರೆ ಬೇರೆ ಆಹಾರವನ್ನೇ ದೇಹ ಬಯಸದೇ ಮಾನಸಿಕವಾಗಿಯೂ ಬಳಲಬಹುದು. ಹಾಗಾಗಿ, ಹಿಂದೂ ಧರ್ಮ ಈ ಕಟ್ಟುಪಾಡಿನ ಮೂಲಕ ದೇಹ ಮಾಂಸಾಹಾರದ ವ್ಯಸನಕ್ಕೆ ಒಳಗಾಗದಿರುವಂತೆ ತಡೆಯುತ್ತದೆ.

ವಾರದ ನಾಲ್ಕು ದಿನಗಳು
ಹಾಗಾಗಿ ವಾರದ ನಾಲ್ಕು ದಿನಗಳನ್ನು ನಾಲ್ಕು ಭಿನ್ನ ದೇವರಿಗೆ ಮುಡಿಪಾಗಿಸಿ ಈ ದಿನಗಳಂದು ಮಾಂಸಾಹಾರವನ್ನು ನಿಷೇಧಿಸಿದೆ. ಇವೆಂದರೆ:
ಸೋಮವಾರ: ಶಿವ ದೇವರಿಗೆ ಮೀಸಲು
ಮಂಗಳವಾರ: ಹನುಮಂತ ದೇವರಿಗೆ ಮೀಸಲು
ಗುರುವಾರ: ದತ್ತಾತ್ರೇಯ ದೇವರು ಮತ್ತು ಸಾಯಿ ಬಾಬಾ ಸ್ವಾಮಿ
ಹಾಗೂ ಶನಿವಾರ: ಹನುಮಂತ ದೇವರು ಹಾಗೂ ವೆಂಕಟೇಶ್ವರ ಸ್ವಾಮಿ.

ಕೆಲವು ಕಡೆ ಎಲ್ಲಾ ವಾರಗಳಲ್ಲೂ ನಾನ್ ವೆಜ್ ಸೇವಿಸುವುದಿಲ್ಲ!
ಈ ದಿನಗಳನ್ನು ಭಾರತದ ಬಹುತೇಕ ಪ್ರದೇಶಗಳಲ್ಲಿ ಅನ್ವಯಿಸಿಕೊಂಡರೆ ಕೆಲವು ಭಾಗಗಳಲ್ಲಿ ಬುಧವಾರ ಮತ್ತು ಶುಕ್ರವಾರಗಳಂದೂ ಇತರ ದೇವರಿಗೆ ಮೀಸಲಾಗಿಡಲಾಗಿದೆ ಹಾಗೂ ಇವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವ ಕಾರಣ ಖಚಿತವಾದ ಮಾಹಿತಿಯನ್ನು ನೀಡುವುದು ಕಷ್ಟಕರ. ಕೆಲವು ಕಡೆಗಳಲ್ಲಂತೂ ವಾರದ ಎಲ್ಲಾ ದಿನಗಳನ್ನೂ ಒಂದಲ್ಲಾ ಒಂದು ದೇವರಿಗೆ ಮೀಸಲಾಗಿರಿಸಿ ಮಾಂಸಾಹಾರವನ್ನೇ ನಿಷೇಧಿಸಲಾಗಿದೆ.

ಇವೆಲ್ಲಾ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ...
ಈ ಮೂಲಕ ಹಿಂದೂ ಧರ್ಮಿಯರ ಮೇಲೆ ಕೆಲವು ಧಾರ್ಮಿಕ ಕಟ್ಟುಪಾಡುಗಳನ್ನು ಹೇರುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾವಿರಾರು ವರ್ಷಗಳ ಹಿಂದೆಯೇ ಕ್ರಮವನ್ನು ಕೈಗೊಳ್ಳಲಾಗಿದ್ದು ಇಂದಿಗೂ ಅನುಯಾಯಿಗಳು ಈ ವಿಶಿಷ್ಟ ದಿನಗಳಲ್ಲಿ ಮಾಂಸಾಹಾರ ಸೇವಿಸದೇ ಧರ್ಮದ ಪಾಲನೆಯ ಮೂಲಕ ಆರೋಗ್ಯವನ್ನೂ ಕಾಪಾಡಿಕೊಂಡು ಬರುತ್ತಿದ್ದಾರೆ.



Click it and Unblock the Notifications











