Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಳಬುತ್ತಿಯಲ್ಲಿರುವ ಸಿಹಿ ಕಹಿಯನ್ನು ಸಮಾನವಾಗಿ ಸ್ವೀಕರಿಸಿ
ಯುಗಾದಿಯನ್ನು ಹೊಸ ವರುಷವೆಂದೇ ನಾಡಿನಲ್ಲಿ ಜನಪ್ರಿಯವಾಗಿ ಆಚರಿಸುತ್ತಾರೆ. ಬೇವು ಬೆಲ್ಲ ಈ ಹಬ್ಬದ ವಿಶೇಷತೆಯಾಗಿದ್ದು ಜೀವನದಲ್ಲಿ ಬರುವ ಸಿಹಿ ಕಹಿಯನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಆಶಯ ಈ ಬೇವು ಬೆಲ್ಲದ ಸಿಹಿಯಲ್ಲಡಗಿದೆ.

ಯುಗ ಯುಗಗಳು ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷವ ಹೊಸ ಹರುಷವ ಎಲ್ಲೆಡೆಯೂ ತಂದಿದೆ ಎಂಬ ಜನಪ್ರಿಯ ಹಾಡು ಯುಗಾದಿಯು ಆಗಮನವನ್ನು ಬರಮಾಡಿಕೊಳ್ಳುತ್ತಿದೆ. ಯುಗಾದಿಯನ್ನು ಹೊಸ ವರುಷವೆಂದೇ ನಾಡಿನಲ್ಲಿ ಜನಪ್ರಿಯವಾಗಿ ಆಚರಿಸುತ್ತಾರೆ. ಬೇವು ಬೆಲ್ಲ ಈ ಹಬ್ಬದ ವಿಶೇಷತೆಯಾಗಿದ್ದು ಜೀವನದಲ್ಲಿ ಬರುವ ಸಿಹಿ ಕಹಿಯನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಆಶಯ ಈ ಬೇವು ಬೆಲ್ಲದ ಸಿಹಿಯಲ್ಲಡಗಿದೆ. ಯುಗಾದಿ ಆಚರಣೆ ಹೀಗಿರಲಿ- ಸುಖ, ಶಾಂತಿ, ಸಮೃದ್ಧಿ ನಿಮ್ಮದಾಗುತ್ತದೆ
ಚಳಿಗಾಲದ ಕೊರೆಯುವ ಚಳಿಯಿಂದ ಮುಕ್ತಿಯನ್ನು ಪಡೆದುಕೊಂಡು ಭೂಮಿ ತಾಯಿ ಸಂಪದ್ಭರಿತವಾಗುವ ಕಾಲವನ್ನು ಯುಗಾದಿ ಸೂಚಿಸುತ್ತದೆ. ಮಾವು, ತೆಂಗು, ಕಂಗು, ಹಲಸು, ಹೂವುಗಳು, ಬೇರೆ ಬೇರೆ ಫಲಗಳು ಚಿಗುರು ಬಿಟ್ಟು ಮಳೆಯ ಆಗಮನವನ್ನು ಮಾಡುವ ಸಮಯ ಇದಾಗಿದೆ. ಇಂದಿನ ಲೇಖನದಲ್ಲಿ ಯುಗಾದಿ ಹಬ್ಬದ ಕುರಿತಾದ ಇನ್ನಷ್ಟು ಮಾಹಿತಿಗಳನ್ನು ನಾವು ಹಂಚಿಕೊಳ್ಳುತ್ತಿದ್ದು ಈ ಹಬ್ಬದ ಪ್ರಾಮುಖ್ಯತೆಯನ್ನು ನೀವು ಇನ್ನಷ್ಟು ಆಳವಾಗಿ ಅರಿತುಕೊಳ್ಳಬಹುದಾಗಿದೆ.

ಬೇವು ಬೆಲ್ಲದ ಅರ್ಥ
ಹಬ್ಬದ ಸಂದರ್ಭದಲ್ಲಿ ಭಕ್ಷ್ಯಗಳನ್ನು ತಯಾರಿಸುವುದು ಪ್ರತಿಯೊಬ್ಬ ಭಾರತೀಯರು ಅನುಸರಿಸುವ ಕ್ರಮವಾಗಿದೆ. ಯುಗಾದಿಯ ವಿಶೇಷ ತಿನಿಸು ಬೇವು ಬೆಲ್ಲವಾಗಿದೆ. ಬೇವು ಹುಳಿ ಮತ್ತು ಬೆಲ್ಲದ ಹುಡಿಯಿಂದ ಈ ಖಾದ್ಯವನ್ನು ತಯಾರಿಸುತ್ತಾರೆ.
ಜೀವನದಲ್ಲಿ ಸಿಹಿಯನ್ನು ಮಾತ್ರವೇ ನಿರೀಕ್ಷಿಸದೆ ಕಹಿಯನ್ನು ಸಿಹಿಯಂತೆಯೇ ಸ್ವೀಕರಿಸಿ ಎಂಬುದಾಗಿ ಈ ಹಬ್ಬ ಬೇವು ಬೆಲ್ಲದ ಸಮ್ಮಿಶ್ರಣದೊಂದಿಗೆ ನಿಮ್ಮನ್ನು ಸಮೀಪಿಸಲಿದೆ. ಆದ್ದರಿಂದ ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸಿ ಎಂಬುದಾಗಿಯೇ ಬೇವು ಬೆಲ್ಲ ನಮಗೆ ತಿಳಿಸುತ್ತದೆ.
ಯುಗಾದಿ ಪಚಡಿ
ಯುಗಾದಿ ಹಬ್ಬದಂದು ತಯಾರಿಸಲಾಗುವ ಇನ್ನೊಂದು ಖಾದ್ಯವಾಗಿದೆ ಪಚಡಿ. ಇದಕ್ಕಾಗಿ ಬೇವಿನ ಹೂವನ್ನು ಬಳಸುತ್ತಾರೆ. ಅಂತೆಯೇ ಇದಕ್ಕಾಗಿ ಬಳಸುವ ಇನ್ನಷ್ಟು ಸಾಮಾಗ್ರಿಗಳು ತುಸು ವಿಶೇಷ ಎಂದೆನ್ನಬಹುದಾಗಿದೆ. ಬೇವಿನ ಕಹಿಗಾಗಿ ಅದರ ಹೂವನ್ನು ಬಳಸಿದರೆ ಸಿಹಿಗಾಗಿ ಬಾಳೆಹಣ್ಣು ಮತ್ತು ಬೆಲ್ಲವನ್ನು ಬಳಸುತ್ತಾರೆ. ಅಂತೆಯೇ ಖಾರಕ್ಕಾಗಿ ಕಾಳುಮೆಣಸು ಮತ್ತು ಹಸಿಮೆಣಸನ್ನು ಉಪಯೋಗಿಸುತ್ತಾರೆ. ಸ್ವಲ್ಪ ಉಪ್ಪು ಮತ್ತು ಹುಳಿಯನ್ನು ಬೆರೆಸಿ ಈ ಪಚ್ಚಡಿಯನ್ನು ತಯಾರಿಸುತ್ತಾರೆ. ಹೊಸ ವರ್ಷಕ್ಕೆ ಇರಲೇಬೇಕು 'ಯುಗಾದಿ ಪಚಡಿ'
ಬೇವಿನ ಹೂವು ನಮ್ಮ ಜೀವನದಲ್ಲಿ ಬರುವ ನಿರಾಸೆಯನ್ನು ಪ್ರತಿನಿಧಿಸುತ್ತದೆ. ಅಂತೆಯೇ ಬಾಳೆಹಣ್ಣು ಮತ್ತು ಬೆಲ್ಲ ಜೀವನದ ಸಿಹಿಯ ಪ್ರತೀಕವಾಗಿದೆ. ಕಾಳುಮೆಣಸು ಮತ್ತು ಹಸಿಮೆಣಸು ಕೋಪದ ಸಂಕೇತವಾಗಿದ್ದರೆ, ಹುಳಿಯು ನಮ್ಮ ಜೀವನದ ಒತ್ತಡದಿಂದ ನಾವು ಅನುಭವಿಸುವ ಕಿರಿಕಿರಿಯನ್ನು ವ್ಯಕ್ತಪಡಿಸುತ್ತದೆ ಅಂತೆಯೇ ನಮ್ಮ ಜೀವನದಲ್ಲಿ ಬರುವ ಸ್ವಾರಸ್ಯವನ್ನು ಮಾವು ಪ್ರತಿನಿಧಿಸುತ್ತದೆ.
ಜೀವನದಲ್ಲಿ ಬಂದೊದದಗುವ ಕಹಿಯನ್ನು ನಿರಾಸೆಯಿಲ್ಲದೆ ಸ್ವೀಕರಿಸಬೇಕು ಅಂತೆಯೇ ಭಗವಂತ ಇದರ ಬೆನ್ನಿಗೇ ಸಿಹಿಯನ್ನು ಉಣಬಡಿಸಲಿದ್ದಾರೆ ಎಂಬ ನಿರೀಕ್ಷೆಯನ್ನು ನಾವಿಟ್ಟುಕೊಳ್ಳಬೇಕು. ಭಗವಂತ ನಮಗೆ ನೀಡಿರುವ ಕೊಡುಗೆ ಅಪೂರ್ವ ಮತ್ತು ವಿಶೇಷವಾಗಿರುತ್ತದೆ ಎಂಬುದನ್ನು ನಾವು ಮರೆಯಬಾರದು.
ಅಂತೆಯೇ ಈ ಹಬ್ಬ ನಮ್ಮ ಸುಖ ಸಂತೋಷ, ದುಃಖ, ಕಹಿಯ ಪ್ರತೀಕವಾಗಿದೆ. ಬಾಳಿನಲ್ಲಿ ಸಿಹಿ ಮತ್ತು ಕಹಿಯ ಬುತ್ತಿಯನ್ನು ಉಣಬಡಿಸಲಿದೆ ಈ ಹಬ್ಬ. ಭವಿಷ್ಯದಲ್ಲಿ ಬರುವ ತೊಡಕುಗಳನ್ನು ನಗು ನಗುತ್ತಲೇ ಎದುರಿಸೋಣ, ಜಯ ಎಂದೆಂದಿಗೂ ನಮ್ಮದೇ.



Click it and Unblock the Notifications


