Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಗುರುವಾರದಂದು ಅಪ್ಪಿತಪ್ಪಿಯೂ ಇಂತಹ ಕೆಲಸ ಕಾರ್ಯಗಳನ್ನು ಮಾಡಬೇಡಿ
ಹಿಂದೂ ಧರ್ಮದಲ್ಲಿನ ನಂಬಿಕೆಗಳು ಅಪಾರವಾಗಿರುವಂತದ್ದು. ಇದರ ಹಿಂದೆ ಕೆಲವೊಂದು ವೈಜ್ಞಾನಿಕವಾದ ಕಾರಣಗಳು ಇದ್ದರೆ, ಇನ್ನು ಕೆಲವು ದೇವರ ಬಗ್ಗೆ ಇರುವಂತಹ ನಂಬಿಕೆಯಿಂದಾಗಿ ಪಾಲಿಸಿಕೊಂಡು ಬಂದಿರುವಂತದ್ದಾಗಿದೆ. ಹಿಂದೂಗಳು ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಾಗಿ ಇಡುವರು. ಅದಕ್ಕೆ ಅನುಗುಣವಾಗಿ ಪೂಜೆಗಳನ್ನು ಮಾಡಿ ದೇವರನ್ನು ಒಲಿಸಿಕೊಳ್ಳುವರು. ಪ್ರತಿ ನಿತ್ಯವು ಆಯಾಯ ದೇವರಿಗೆ ಮಾಡುವಂತಹ ಪೂಜೆ ಹೇಗೆ ಮುಖ್ಯವೋ ಅದೇ ರೀತಿಯಾಗಿ ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಕೂಡ ಹೋಗಬೇಕಾಗುತ್ತದೆ. ಇದು ಕೂಡ ನಮ್ಮ ಜೀವನದ ಮೇಲೆ ಪ್ರಮುಖ ಪಾತ್ರ ವಹಿಸುವುದು. ಗುರುವಾರವು ವಿಷ್ಣು ದೇವರಿಗೆ ಮೀಸಲಾಗಿರುವಂತಹ ದಿನ ಎಂದು ಹೇಳಲಾಗುತ್ತದೆ. ಬ್ರಹಸ್ಪತಿ ದೇವರನ್ನು ಕೂಡ ಈ ದಿನದಂದು ಪೂಜಿಸಲಾಗುತ್ತದೆ. ಬ್ರಹಸ್ಪತಿ ದೇವರುಗಳ ಗುರು ಎಂದು ಹೇಳಲಾಗುತ್ತದೆ.

ಜ್ಯೋತಿಷಿಗಳ ಪ್ರಕಾರ
ಬ್ರಹಸ್ಪತಿ ದೇವರನ್ನು ವಿಷ್ಣುವಿನ ಮತ್ತೊಂದು ಅವತಾರ ಎಂದು ಕೂಡ ಹೇಳಲಾಗುತ್ತದೆ. ವಿಷ್ಣು ದೇವರ ಪತ್ನಿಯು ಲಕ್ಷ್ಮೀಯಾಗಿರುವ ಕಾರಣದಿಂದಾಗಿ ನಾವು ಈ ದಿನದಂದು ಆಕೆಯನ್ನು ಕೂಡ ಪೂಜೆ ಮಾಡುತ್ತೇವೆ. ಗುರುವಾರದಂದು ಉಪವಾಸ ಮಾಡಿ ವಿಷ್ಣು ದೇವರು ಮತ್ತು ಬ್ರಹಸ್ಪತಿ ದೇವರನ್ನು ಒಲಿಸಿಕೊಳ್ಳಲಾಗುತ್ತದೆ.
ಜ್ಯೋತಿಷಿಗಳ ಪ್ರಕಾರ ಗುರುವಾರದಂದು ನಾವು ಕೆಲವೊಂದು ಕೆಲಸಗಳನ್ನು ಮಾಡಬಾರದು. ಇದರಿಂದ ಬ್ರಹಸ್ಪತಿ ದೇವರು ಮುನಿಯುವರು. ಯಾಕೆಂದರೆ ಗುರುವಾರವು ಗುರು ಗ್ರಹಕ್ಕೆ ಸಂಬಂಧಪಟ್ಟಿದೆ. ಇದು ಬ್ರಹಸ್ಪತಿ ದೇವರಿಗೂ ಸಂಬಂಧಿಸಿದ್ದಾಗಿದೆ. ನೀವು ಈ ಕೆಲಸಗಳನ್ನು ಗುರುವಾರ ಮಾಡಿದರೆ ಬ್ರಹಸ್ಪತಿ ದೇವರ ಕೋಪಕ್ಕೆ ತುತ್ತಾಗಿ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ತಡೆಯಾಗುವುದು. ಯಾವ ಕೆಲಸಗಳನ್ನು ಮಾಡಬಾರದು ಎಂದು ಇಲ್ಲಿ ಹೇಳಲಾಗಿದೆ. ನೀವು ಅದನ್ನು ತಿಳಿದುಕೊಳ್ಳಿ.

ಗುರುವಾರ ಉಗುರು ಕತ್ತರಿಸಿಕೊಳ್ಳುವುದು
ಗುರುವಾರದಂದು ಉಗುರು ಕತ್ತರಿಸಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಕ್ಷೌರ ಕೂಡ ಗುರುವಾರ ಮಾಡಿಸಿಕೊಳ್ಳಬಾರದು. ಗಡ್ಡ ಕೂಡ ತೆಗೆಸಿಕೊಳ್ಳುವುದು ತಪ್ಪು. ಹೀಗೆ ಮಾಡಿದರೆ ಅದರಿಂದ ನಿಮ್ಮ ಮೇಲೆ ಗ್ರಹ ಧನಾತ್ಮಕ ಶಕ್ತಿಯ ಪರಿಣಾಮವು ಕಡಿಮೆ ಆಗುವುದು. ಇದರಲ್ಲಿ ಯಾವುದನ್ನಾದರೂ ಮಾಡಿದರೆ ಆಗ ಅವರ ಜೀವನದ ಆಯುಷ್ಯವು ಕಡಿಮೆ ಆಗುವುದು ಎಂದು ಹೇಳಲಾಗುತ್ತದೆ.

ಗುರುವಾರದಂದು ತಲೆಗೆ ಸ್ನಾನ ಮಾಡುವುದು
ಗುರುವಾರದಂದು ತಲೆಗೆ ಸ್ನಾನ ಮಾಡಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಜಾತಕದಲ್ಲಿರುವಂತಹ ಗುರುವು ಮಹಿಳೆಯರಿಗೆ ಪತಿಗೆ ಸಂಬಂಧಿಸಿದ್ದಾಗಿದೆ. ಗುರುವಾರದಂದು ಮಹಿಳೆಯರು ತಲೆಗೆ ಸ್ನಾನ ಮಾಡಿದರೆ ಆಗ ಪತಿಯ ಸಮೃದ್ಧಿ ಮೇಲೆ ಅದು ಪರಿಣಾಮ ಬೀರುವುದು. ಇದರಿಂದಾಗಿ ಮಹಿಳೆಯರು ಗುರುವಾರ ಕೂದಲು ಕತ್ತರಿಸಿಕೊಳ್ಳಬಾರದು ಮತ್ತು ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ.

ಬಟ್ಟೆ ಒಗೆಯುವುದು
ಗುರುವಾರದಂದು ಬಟ್ಟೆ ಒಗೆಯುವುದು ಕೂಡ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಗುರುವಾರದಂದು ನೆಲ ಒರೆಸುವುದು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವ ಕಾರಣದಿಂದ ಮನೆಯಲ್ಲಿ ಮಕ್ಕಳ ಶಿಕ್ಷಣದ ಪ್ರಗತಿ ಮೇಲೆ ಪರಿಣಾಮ ಬೀರುವುದು. ವ್ಯಕ್ತಿಯ ಸಂಪತ್ತು ಮತ್ತು ಆರ್ಥಿಕ ಪರಿಸ್ಥಿತಿಗೂ ಇದು ಒಳ್ಳೆಯದಲ್ಲವೆಂದು ಪರಿಗಣಿಸಲ್ಪಟ್ಟಿದೆ.

ಜೇಡರ ಬಲೆ ತೆಗೆಯುವುದು
ಹಿಂದೂ ಪುರಾಣಗಳ ಪ್ರಕಾರ ಪ್ರತಿನಿತ್ಯ ಮನೆಯನ್ನು ಶುದ್ಧ ಹಾಗೂ ಶುಚಿಗೊಳಿಸುವುದು ಅತೀ ಅಗತ್ಯ. ಮನೆಯು ಶುಚಿಯಾಗಿಲ್ಲದೆ ಇದ್ದರೆ ಆಗ ಲಕ್ಷ್ಮೀ ದೇವಿಯು ನಿಮ್ಮ ಮನೆಗೆ ಬರುವುದಿಲ್ಲ ಎಂದು ನಂಬಲಾಗಿದೆ. ಇದಕ್ಕಾಗಿಯೇ ನಾವು ಮನೆಯ ಸುತ್ತಲು ಹಾಗೂ ಮನೆಯ ಒಳಗೆ ಇರುವಂತಹ ಜೇಡರ ಬಲೆಯನ್ನು ತೆಗೆಯುತ್ತೇವೆ. ಅದಾಗ್ಯೂ, ಮನೆಯಲ್ಲಿ ಜೇಡರಬಲೆಯಿದ್ದರೆ ಆಗ ನೀವು ಅದನ್ನು ಗುರುವಾರ ತೆಗೆಯಲು ಹೋಗಬೇಡಿ. ನಿಮಗೆ ಅಷ್ಟು ಅಗತ್ಯವಿದ್ದರೆ ಮನೆಯ ಮೂಲೆಗಳು ಹಾಗೂ ಜೇಡರಬಲೆಯನ್ನು ಹಿಂದಿನ ದಿನ ತೆಗೆದು ಸ್ವಚ್ಛ ಮಾಡಿಕೊಳ್ಳಿ.



Click it and Unblock the Notifications