Latest Updates
-
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ?
ಗುರುವಾರದಂದು ಅಪ್ಪಿತಪ್ಪಿಯೂ ಇಂತಹ ಕೆಲಸ ಕಾರ್ಯಗಳನ್ನು ಮಾಡಬೇಡಿ
ಹಿಂದೂ ಧರ್ಮದಲ್ಲಿನ ನಂಬಿಕೆಗಳು ಅಪಾರವಾಗಿರುವಂತದ್ದು. ಇದರ ಹಿಂದೆ ಕೆಲವೊಂದು ವೈಜ್ಞಾನಿಕವಾದ ಕಾರಣಗಳು ಇದ್ದರೆ, ಇನ್ನು ಕೆಲವು ದೇವರ ಬಗ್ಗೆ ಇರುವಂತಹ ನಂಬಿಕೆಯಿಂದಾಗಿ ಪಾಲಿಸಿಕೊಂಡು ಬಂದಿರುವಂತದ್ದಾಗಿದೆ. ಹಿಂದೂಗಳು ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಾಗಿ ಇಡುವರು. ಅದಕ್ಕೆ ಅನುಗುಣವಾಗಿ ಪೂಜೆಗಳನ್ನು ಮಾಡಿ ದೇವರನ್ನು ಒಲಿಸಿಕೊಳ್ಳುವರು. ಪ್ರತಿ ನಿತ್ಯವು ಆಯಾಯ ದೇವರಿಗೆ ಮಾಡುವಂತಹ ಪೂಜೆ ಹೇಗೆ ಮುಖ್ಯವೋ ಅದೇ ರೀತಿಯಾಗಿ ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಕೂಡ ಹೋಗಬೇಕಾಗುತ್ತದೆ. ಇದು ಕೂಡ ನಮ್ಮ ಜೀವನದ ಮೇಲೆ ಪ್ರಮುಖ ಪಾತ್ರ ವಹಿಸುವುದು. ಗುರುವಾರವು ವಿಷ್ಣು ದೇವರಿಗೆ ಮೀಸಲಾಗಿರುವಂತಹ ದಿನ ಎಂದು ಹೇಳಲಾಗುತ್ತದೆ. ಬ್ರಹಸ್ಪತಿ ದೇವರನ್ನು ಕೂಡ ಈ ದಿನದಂದು ಪೂಜಿಸಲಾಗುತ್ತದೆ. ಬ್ರಹಸ್ಪತಿ ದೇವರುಗಳ ಗುರು ಎಂದು ಹೇಳಲಾಗುತ್ತದೆ.

ಜ್ಯೋತಿಷಿಗಳ ಪ್ರಕಾರ
ಬ್ರಹಸ್ಪತಿ ದೇವರನ್ನು ವಿಷ್ಣುವಿನ ಮತ್ತೊಂದು ಅವತಾರ ಎಂದು ಕೂಡ ಹೇಳಲಾಗುತ್ತದೆ. ವಿಷ್ಣು ದೇವರ ಪತ್ನಿಯು ಲಕ್ಷ್ಮೀಯಾಗಿರುವ ಕಾರಣದಿಂದಾಗಿ ನಾವು ಈ ದಿನದಂದು ಆಕೆಯನ್ನು ಕೂಡ ಪೂಜೆ ಮಾಡುತ್ತೇವೆ. ಗುರುವಾರದಂದು ಉಪವಾಸ ಮಾಡಿ ವಿಷ್ಣು ದೇವರು ಮತ್ತು ಬ್ರಹಸ್ಪತಿ ದೇವರನ್ನು ಒಲಿಸಿಕೊಳ್ಳಲಾಗುತ್ತದೆ.
ಜ್ಯೋತಿಷಿಗಳ ಪ್ರಕಾರ ಗುರುವಾರದಂದು ನಾವು ಕೆಲವೊಂದು ಕೆಲಸಗಳನ್ನು ಮಾಡಬಾರದು. ಇದರಿಂದ ಬ್ರಹಸ್ಪತಿ ದೇವರು ಮುನಿಯುವರು. ಯಾಕೆಂದರೆ ಗುರುವಾರವು ಗುರು ಗ್ರಹಕ್ಕೆ ಸಂಬಂಧಪಟ್ಟಿದೆ. ಇದು ಬ್ರಹಸ್ಪತಿ ದೇವರಿಗೂ ಸಂಬಂಧಿಸಿದ್ದಾಗಿದೆ. ನೀವು ಈ ಕೆಲಸಗಳನ್ನು ಗುರುವಾರ ಮಾಡಿದರೆ ಬ್ರಹಸ್ಪತಿ ದೇವರ ಕೋಪಕ್ಕೆ ತುತ್ತಾಗಿ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ತಡೆಯಾಗುವುದು. ಯಾವ ಕೆಲಸಗಳನ್ನು ಮಾಡಬಾರದು ಎಂದು ಇಲ್ಲಿ ಹೇಳಲಾಗಿದೆ. ನೀವು ಅದನ್ನು ತಿಳಿದುಕೊಳ್ಳಿ.

ಗುರುವಾರ ಉಗುರು ಕತ್ತರಿಸಿಕೊಳ್ಳುವುದು
ಗುರುವಾರದಂದು ಉಗುರು ಕತ್ತರಿಸಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಕ್ಷೌರ ಕೂಡ ಗುರುವಾರ ಮಾಡಿಸಿಕೊಳ್ಳಬಾರದು. ಗಡ್ಡ ಕೂಡ ತೆಗೆಸಿಕೊಳ್ಳುವುದು ತಪ್ಪು. ಹೀಗೆ ಮಾಡಿದರೆ ಅದರಿಂದ ನಿಮ್ಮ ಮೇಲೆ ಗ್ರಹ ಧನಾತ್ಮಕ ಶಕ್ತಿಯ ಪರಿಣಾಮವು ಕಡಿಮೆ ಆಗುವುದು. ಇದರಲ್ಲಿ ಯಾವುದನ್ನಾದರೂ ಮಾಡಿದರೆ ಆಗ ಅವರ ಜೀವನದ ಆಯುಷ್ಯವು ಕಡಿಮೆ ಆಗುವುದು ಎಂದು ಹೇಳಲಾಗುತ್ತದೆ.

ಗುರುವಾರದಂದು ತಲೆಗೆ ಸ್ನಾನ ಮಾಡುವುದು
ಗುರುವಾರದಂದು ತಲೆಗೆ ಸ್ನಾನ ಮಾಡಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಜಾತಕದಲ್ಲಿರುವಂತಹ ಗುರುವು ಮಹಿಳೆಯರಿಗೆ ಪತಿಗೆ ಸಂಬಂಧಿಸಿದ್ದಾಗಿದೆ. ಗುರುವಾರದಂದು ಮಹಿಳೆಯರು ತಲೆಗೆ ಸ್ನಾನ ಮಾಡಿದರೆ ಆಗ ಪತಿಯ ಸಮೃದ್ಧಿ ಮೇಲೆ ಅದು ಪರಿಣಾಮ ಬೀರುವುದು. ಇದರಿಂದಾಗಿ ಮಹಿಳೆಯರು ಗುರುವಾರ ಕೂದಲು ಕತ್ತರಿಸಿಕೊಳ್ಳಬಾರದು ಮತ್ತು ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ.

ಬಟ್ಟೆ ಒಗೆಯುವುದು
ಗುರುವಾರದಂದು ಬಟ್ಟೆ ಒಗೆಯುವುದು ಕೂಡ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಗುರುವಾರದಂದು ನೆಲ ಒರೆಸುವುದು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವ ಕಾರಣದಿಂದ ಮನೆಯಲ್ಲಿ ಮಕ್ಕಳ ಶಿಕ್ಷಣದ ಪ್ರಗತಿ ಮೇಲೆ ಪರಿಣಾಮ ಬೀರುವುದು. ವ್ಯಕ್ತಿಯ ಸಂಪತ್ತು ಮತ್ತು ಆರ್ಥಿಕ ಪರಿಸ್ಥಿತಿಗೂ ಇದು ಒಳ್ಳೆಯದಲ್ಲವೆಂದು ಪರಿಗಣಿಸಲ್ಪಟ್ಟಿದೆ.

ಜೇಡರ ಬಲೆ ತೆಗೆಯುವುದು
ಹಿಂದೂ ಪುರಾಣಗಳ ಪ್ರಕಾರ ಪ್ರತಿನಿತ್ಯ ಮನೆಯನ್ನು ಶುದ್ಧ ಹಾಗೂ ಶುಚಿಗೊಳಿಸುವುದು ಅತೀ ಅಗತ್ಯ. ಮನೆಯು ಶುಚಿಯಾಗಿಲ್ಲದೆ ಇದ್ದರೆ ಆಗ ಲಕ್ಷ್ಮೀ ದೇವಿಯು ನಿಮ್ಮ ಮನೆಗೆ ಬರುವುದಿಲ್ಲ ಎಂದು ನಂಬಲಾಗಿದೆ. ಇದಕ್ಕಾಗಿಯೇ ನಾವು ಮನೆಯ ಸುತ್ತಲು ಹಾಗೂ ಮನೆಯ ಒಳಗೆ ಇರುವಂತಹ ಜೇಡರ ಬಲೆಯನ್ನು ತೆಗೆಯುತ್ತೇವೆ. ಅದಾಗ್ಯೂ, ಮನೆಯಲ್ಲಿ ಜೇಡರಬಲೆಯಿದ್ದರೆ ಆಗ ನೀವು ಅದನ್ನು ಗುರುವಾರ ತೆಗೆಯಲು ಹೋಗಬೇಡಿ. ನಿಮಗೆ ಅಷ್ಟು ಅಗತ್ಯವಿದ್ದರೆ ಮನೆಯ ಮೂಲೆಗಳು ಹಾಗೂ ಜೇಡರಬಲೆಯನ್ನು ಹಿಂದಿನ ದಿನ ತೆಗೆದು ಸ್ವಚ್ಛ ಮಾಡಿಕೊಳ್ಳಿ.



Click it and Unblock the Notifications