Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮಾರ್ಗಶಿರ ಮಾಸ: ಲಕ್ಷ್ಮಿ ಪೂಜೆಯ ಬಗ್ಗೆ ತಿಳಿದಿರಬೇಕಾದ 10 ಸಂಗತಿಗಳಿವು
ಕರ್ನಾಟಕದಲ್ಲಿ ಡಿಸೆಂಬರ್ 5ರಿಂದ ಮಾರ್ಗಶಿರ ಮಾಸ ಪ್ರಾರಂಭವಾದರೆ ಜನವರಿ2, 2022ಕ್ಕೆ ಮುಕ್ತಾಯವಾಗುವುದು.
ಮಾರ್ಗಶಿರ/ ಮಾರ್ಗಶೀರ್ಷ ಮಾಸವೆಂಬುವುದು ಶ್ರೀ ವಿಷ್ಣು ಹಾಗೂ ಲಕ್ಷ್ಮಿಯ ಆರಾಧನೆಗೆ ಮೀಸಲಿಟ್ಟಿರುವ ಮಾಸವಾಗಿದೆ. ಮಾರ್ಗಶಿರ ಮಾಸದ ಪ್ರತೀ ಗುರುವಾರದಂದು ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು. ಲಕ್ಷ್ಮಿ ಮಾತೆಯನ್ನು ಆರಾಧಿಸುವುದರಿಂದ ಐಶ್ವರ್ಯ, ಸಂಪತ್ತು, ಅದೃಷ್ಟ ನೀಡಿ ಹರಿಸುತ್ತಾಳೆ ಎಂಬುವುದು ಆಕೆಯನ್ನು ನಂಬಿದ ಭಕ್ತರ ಅಚಲ ನಂಬಿಕೆಯಾಗಿದೆ.

ಲಕ್ಷ್ಮಿ ಪೂಜೆಯ ದಿನದಂದು ಉಪವಾಸವಿದ್ದು ಆಕೆಯನ್ನು ಆರಾಧಿಸುವುದರಿಂದ ಬದುಕಿನಲ್ಲಿರುವ ಕಷ್ಟಗಳು ನಿವಾರಣೆಯಾಗುವುದು, ಲಕ್ಷ್ಮಿ ನೆಮ್ಮದಿ ಬದುಕನ್ನು ಕರುಣಿಸುತ್ತಾಳೆ.
ಮಾರ್ಗಶಿರ ಮಾಸದಲ್ಲಿ ನೀವು ಲಕ್ಷ್ಮಿ ಪೂಜೆ ಮಾಡುವಾಗ ಗಮನಿಸಬೇಕಾದ 10 ಪ್ರಮುಖ ವಿಷಯಗಳ ಬಗ್ಗೆ ಹೇಳಲಾಗಿದೆ ನೋಡಿ:

ದಂಪತಿ ಅಷ್ಟ ಲಕ್ಷ್ಮಿಯರನ್ನು ಪೂಜಿಸಿ
1. ಲಕ್ಷ್ಮಿ ಪೂಜೆ ಮಾಡುವಾಗ ದಂಪತಿಗಳು ಉಪವಾಸದ ನಿಯಮಗಳನ್ನು ಪಾಲಿಸಬೇಕು. ದಂಪತಿ ಜೊತೆಯಾಗಿ ಲಕ್ಷ್ಮಿಗೆ ಪೂಜೆಯನ್ನು ಸಲ್ಲಿಸಬೇಕು.
2. ಭಕ್ತರು ಅಷ್ಟಲಕ್ಷ್ಮಿಯರನ್ನು ಪೂಜಿಸಬೇಕು.
ಅಷ್ಟಲಕ್ಷ್ಮಿಯರು
* ಶ್ರೀ ಧನ ಲಕ್ಷ್ಮಿ ಮಾತೆ
* ಶ್ರೀ ಗಜ ಲಕ್ಷ್ಮಿ ಮಾತೆ
* ಶ್ರೀ ವೀರ ಲಕ್ಷ್ಮಿ ಮಾತೆ
* ಶ್ರೀ ಐಶ್ವರ್ಯ ಲಕ್ಷ್ಮಿ ಮಾತೆ
* ಶ್ರೀ ವಿಜಯ ಲಕ್ಷ್ಮಿ ಮಾತೆ
* ಶ್ರೀ ಆದಿ ಲಕ್ಷ್ಮಿ ಮಾತೆ
* ಶ್ರೀ ಧಾನ್ಯ ಲಕ್ಷ್ಮಿ ಮಾತೆ
* ಶ್ರೀ ಸಂತಾನ ಲಕ್ಷ್ಮಿ ಮಾತೆ

ಲಕ್ಷ್ಮಿ ಪೂಜೆಯ ನಿಯಮ
3. ಉಪವಾಸ ಗುರುವಾರ ಬೆಳಗ್ಗೆಯಿಂದ ಪ್ರಾರಂಭವಾಗುವುದು. ಸ್ನಾನ ಮಾಡಿ ಮಡಿ ಬಟ್ಟೆ ತೊಟ್ಟು ಮೊದಲಿಗೆ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ಲಕ್ಷ್ಮಿಗೆ ಪೂಜೆ ಸಲ್ಲಿಸಬೇಕು.
4. ಕಲಶದ ಒಳಗಡೆ ನೀರು ತುಂಬಿ 5 ಬಗೆಯ ಎಲೆಗಳಿಂದ ಅಲಂಕರಿಸಬೇಕು ನಂತರ ತೆಂಗಿನಕಾಯಿಯನ್ನು ಕಲಶದ ಬಾಯಿಯಲ್ಲಿ ಇಡಬೇಕು, ಕಲಶದ ಒಳಗಡೆ ನೀರಿನಲ್ಲಿ ಸ್ವಲ್ಪ ಅಕ್ಕಿ ಹಾಗೂ ನಾಣ್ಯಗಳನ್ನು ಹಾಕಿರಬೇಕು.

ಲಕ್ಷ್ಮಿಗೆ ಅಲಂಕಾರ
5. ಕಲಶವನ್ನು ಕೆಂಪು ಬಟ್ಟೆಯಿಂದ ಅಲಂಕರಿಸಬೇಕು. ಕುಂಕುಮ ಬಳಸಿ ಸ್ವಸ್ತಿಕ್ ಬಳಸಿ ಅದರ ಮೇಲೆ ಹಲಗೆ ಇಟ್ಟು ಕಲಶವನ್ನು ಪ್ರತಿಷ್ಠಾಪನೆ ಮಾಡಿ.
6. ಪ್ರಸಾದಕ್ಕೆ 5 ಬಗೆಯ ಹಣ್ಣುಗಳಿರಬೇಕು. ಸೇಬು, ಕಿತ್ತಳೆ, ಪಿಯರ್ಸ್, ಕಿತ್ತಳೆ, ದಾಳಿಂಬೆ ಇಡಬಹುದು ಅಲ್ಲದೆ ಲಕ್ಷ್ಮಿ ಮುಂದೆ ಬಾಳೆ ಹಣ್ಣಿನ ಚಿಪ್ಪು ಇಡಿ.

'ಮಹಾಲಕ್ಷ್ಮಿ ವ್ರತ ಕತೆ' ಓದಿ
7. ಕಲಶದ ಮುಂದೆ ಹೂಗಳಿಂದ ಅಲಂಕರಿಸಿ, ದೀಪ ಬೆಳಗಿ.
8. ಈ ದಿನ 'ಮಹಾಲಕ್ಷ್ಮಿ ವ್ರತ ಕತೆ' ಓದಬೇಕು, ಲಕ್ಷ್ಮಿ ಮಂತ್ರಗಳನ್ನು ಪಠಿಸಿ. ಲಕ್ಷ್ಮಿ ಪೂಜೆ ಮಾಡುವಾಗ ಲಕ್ಷ್ಮಿ ಸಹಸ್ರನಾಮ ಸ್ತೋತ್ರ ಪಠಿಸಿ.

ಮುತ್ತೈದೆಯರಿಗೆ ತಾಂಬೂಲ ನೀಡಿ
9. ಸಂಜೆ ಸಿಹಿ ಸೇರಿ 9 ಬಗೆಯ ಸ್ವಾತಿಕ ಆಹಾರ ತಯಾರಿಸಿ ಲಕ್ಷ್ಮಿಗೆ ನೈವೇದ್ಯ ಇಡಿ.
10. ನಂತರ 5 ಮುತ್ತೈದೆಯರನ್ನು ಕರೆದು ಅವರಿಗೆ ಅರಿಶಿಣ ಕುಂಕುಮ, ತಾಂಬೂಲ ನೀಡಿ ಅವರ ಆಶೀರ್ವಾದ ಪಡೆಯಿರಿ.



Click it and Unblock the Notifications