Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಭಕ್ತರ ಪ್ರೀತಿಯ ದೇವ-ಶ್ರೀಕೃಷ್ಣನ ಕುರಿತಾಗಿ ನೀವು ಅರಿಯದ ಸತ್ಯಗಳು
ಹಿಂದೂ ಧರ್ಮದಲ್ಲಿ ಶ್ರೀಕೃಷ್ಣ ಪರಮಾತ್ಮನಿಗೆ ವಿಶೇಷವಾದ ಸ್ಥಾನವಿದೆ. ಶ್ರೀಕೃಷ್ಣನ ಮಂದಸ್ಮಿತ ನಗು ಮತ್ತು ಮಧುರ ವಾಣಿಯು ಹಿರಿಯರು ಕಿರಿಯರೆನ್ನದೆ, ಪಶು ಪಕ್ಷಿಗಳನ್ನು ಕೂಡ ಆಕರ್ಷಿಸಿತ್ತು. ಭಕ್ತ ವತ್ಸಲನೆಂಬ ಬಿರುದೂ ಆತನಿಗಿತ್ತು, ಏಕೆಂದರೆ ಶ್ರೀಕೃಷ್ಣನು ಭಕ್ತರ ಕಂಬನಿಗೆ ಕೂಡಲೇ ಮಿಡಿಯುತ್ತಾನೆ ಮತ್ತು ಅವರ ಕಷ್ಟಗಳನ್ನೆಲ್ಲಾ ದೂರ ಮಾಡುತ್ತಾನೆ ಎಂಬ ನಂಬಿಕೆ ಭಕ್ತ ಜನರಲ್ಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯು ಕೃಷ್ಣನ ಹುಟ್ಟಿದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಬಾರಿಯ ಜನ್ಮಾಷ್ಟಮಿಯು ಆಗಸ್ಟ್ 14 ರಿಂದ ಬಂದಿದೆ. ಕೆಲವು ಹಿಂದೂ ಕ್ಯಾಲೆಂಡರ್ಗಳಲ್ಲಿ ಅಷ್ಟಮಿಯು 15 ನೇ ಆಗಸ್ಟ್ರಂದು ಆಚರಿಸಲಾಗುತ್ತದೆ.
ಕೃಷ್ಣ ಭಕ್ತರು ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನದಂದು ಹೆಚ್ಚಿನವರು ವೃತಗಳನ್ನು ಮಾಡಿ ದೇವರಿಗೆ ಪೂಜೆಯನ್ನು ಮಾಡುತ್ತಾರೆ. ಅಂತೆಯೆ ಮೊಸರು ಕುಡಿಕೆ ಮೊದಲಾದ ಆಟೋಟ ಸ್ಪರ್ಧೆಗಳನ್ನು ನಡೆಸುತ್ತಾರೆ. ಇದರೊಂದಿಗೆ ಹಾಡು, ನೃತ್ಯ, ಮಕ್ಕಳಿಗೆ ಕೃಷ್ಣನ ವೇಷ ತೊಡಿಸುವುದು ಮೊದಲಾದ ಚಟುವಟಿಕೆಗಳನ್ನು ಅಷ್ಟಮಿಯ ಪ್ರಯುಕ್ತ ಭಕ್ತರು ಹಮ್ಮಿಕೊಳ್ಳುತ್ತಾರೆ. ಹಾಗಿದ್ದರೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಲುವಾಗಿ ಇಂದಿನ ಲೇಖನದಲ್ಲಿ ಕೃಷ್ಣನ ಕುರಿತಾದ ಕೆಲವೊಂದು ಮಾಹಿತಿಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ....

ನವಿಲು ಗರಿ
ಶ್ರೀಕೃಷ್ಣನ ಕಿರೀಟದಲ್ಲಿ ನವಿಲು ಗರಿ ಇದ್ದೇ ಇರುತ್ತದೆ. ಈ ನವಿಲುಗರಿಯ ಕೃಷ್ಣನ ಕಿರೀಟವನ್ನು ಅಲಂಕರಿಸಿರುವುದರ ಹಿಂದೆ ಒಂದು ಕಥೆ ಇದೆ. ಕೃಷ್ಣನ ಕೊಳಲಿನ ನಿನಾದಕ್ಕೆ ಮಾರು ಹೋಗಿ ನವಿಲುಗಳ ರಾಜನು ಉಡುಗೊರೆಯಾಗಿ ಕೃಷ್ಣನಿಗೆ ನವಿಲಿನ ಗರಿಯನ್ನು ನೀಡುತ್ತದೆ. ಅಂತೆಯೇ ಇನ್ನೊಂದು ಕಥೆಯ ಪ್ರಕಾರ ಕೃಷ್ಣನ ದತ್ತು ತಂದೆ ನಂದ ಗೋಪಾಲನು ಪುಟ್ಟ ಬಾಲ ಕೃಷ್ಣನ ತಲೆಯನ್ನು ಅಲಂಕರಿಸಲು ನವಿಲಿನ ಗರಿಯನ್ನು ಸಿಂಗರಿಸಿದ್ದರು ಎಂದು ಹೇಳಲಾಗಿದೆ. ಕಥೆ ಯಾವುದೇ ಇದ್ದರೂ ನವಿಲಿನ ಗರಿ ಎಂದರೆ ಕೃಷ್ಣ ಪರಮಾತ್ಮನಿಗೆ ಪಂಚಪ್ರಾಣವಾಗಿದೆ.

ಬೆಣ್ಣೆ
ಬೆಣ್ಣೆ ಕಳ್ಳ ಎಂಬ ಹೆಸರಿನಿಂದಲೇ ಗೋಪಿಕಾ ಸ್ತ್ರೀಯರು ಕೃಷ್ಣನನ್ನು ಕರೆಯುತ್ತಿದ್ದರು. ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದುರಿಂದ ಈ ಹೆಸರು ಭಗವಂತನಿಗೆ ಬಂದಿದೆ. ಬೆಣ್ಣೆಯನ್ನು ಅರ್ಪಿಸದೆಯೇ ಕೃಷ್ಣನ ಪೂಜೆಯನ್ನು ಭಕ್ತರು ಸಂಪೂರ್ಣಗೊಳಿಸುವುದಿಲ್ಲ.

ಹಳದಿ ಬಟ್ಟೆ (ಪೀತಾಂಬರ)
ಕೃಷ್ಣನಿಗೆ ಹಳದಿ ಬಟ್ಟೆಗಳೆಂದರೆ ಬಲು ಪ್ರೀತಿ. ಕೃಷ್ಣನ ಪ್ರತಿಯೊಂದು ಭಾವಚಿತ್ರದಲ್ಲಿ ಕೂಡ ಹಳದಿ ಬಟ್ಟೆಯನ್ನು ಕಾಣಬಹುದಾಗಿದೆ. ಕೃಷ್ಣನಿಗೆ ಹಳದಿ ಮೆಚ್ಚಿನ ಬಣ್ಣವಾಗಿದ್ದರಿಂದ ಯಾವಾಗಲೂ ಹಳದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಇದಕ್ಕಾಗಿಯೇ ಹಳದಿ ಬಣ್ಣದ ಹೂವು ಮತ್ತು ಹಣ್ಣುಗಳನ್ನೇ ಭಕ್ತರು ಪರಮಾತ್ಮನಿಗೆ ಅರ್ಪಿಸುತ್ತಾರೆ.

ಕೊಳಲು
ಕೃಷ್ಣನಿಗೆ ಕೊಳಲಿಲ್ಲದೆ ಅವರ ವ್ಯಕ್ತಿತ್ವ ಸಂಪೂರ್ಣವಾಗುವುದಿಲ್ಲ. ಮಾನವರು ಮತ್ತು ಪಶು ಪಕ್ಷಿಗಳೆನ್ನದೆ ಪ್ರತಿಯೊಬ್ಬರೂ ದೇವರ ಕೊಳಲು ನಾದಕ್ಕೆ ಮಾರು ಹೋಗುತ್ತಾರೆ.ಕೃಷ್ಣನು ಕೊಳಲನ್ನು ನುಡಿಸುತ್ತಿದ್ದಂತೆ ಪಶು ಪಕ್ಷಿಗಳು ನಾಟ್ಯವಾಡುತ್ತವೆ ಮತ್ತು ಚರಾಚರ ಜೀವಿಗಳು ತಮ್ಮನ್ನು ತಾವೇ ಮರೆತುಬಿಡುತ್ತಾರೆ.

ಕೊಳಲು
ಕೊಳಲನ್ನು ಮಾರುವ ವ್ಯಕ್ತಿಯಿಂದ ಕೃಷ್ಣನು ಕೊಳಲನ್ನು ಖರೀದಿಸಿಕೊಂಡು ಅವರಿಂದಲೇ ಕೊಳಲು ನುಡಿಸುವುದನ್ನು ಕಲಿಯುತ್ತಾರೆ. ಕೊಳಲು ತುಂಬಾ ಪವಿತ್ರವಾಗಿದ್ದು ಕೊಳಲಿನ ನಿನಾದಕ್ಕೆ ತಕ್ಕಂತೆ ಹಲವಾರು ಹಾಡುಗಳನ್ನು ಕೂಡ ಬರೆಯಲಾಗಿದೆ. ದೇವರ ತುಟಿಯನ್ನು ಅಲಂಕರಿಸಿದ ಕೊಳಲು ನಿಜಕ್ಕೂ ಅದೃಷ್ಟದ್ದಾಗಿದೆ.

ದನಕರು
ಕೃಷ್ಣನಿಗೆ ಪ್ರಾಣಿಗಳು ಅಂದರೂ ಬಲು ಪ್ರೀತಿ. ಅದರಲ್ಲೂ ದನವೆಂದರೆ ದೇವರಿಗೆ ವಿಪರೀತ ಒಲವು. ತಮ್ಮ ಬಾಲ್ಯದಲ್ಲಿ ಗೋಪಾಲಕನಾಗಿ ದೇವರು ದನಕರುಗಳನ್ನು ನೋಡಿಕೊಳ್ಳುತ್ತಿದ್ದರು ಮತ್ತು ಗುಡ್ಡಕ್ಕೆ ಕರೆದೊಯ್ದು ಅದನ್ನು ಮೇಯಿಸುತ್ತಿದ್ದನು. ಹೀಗೆ ದೇವರ ಬಾಲ್ಯದ ದಿನಗಳಲ್ಲಿ ದನಕರುಗಳ ಪಾತ್ರ ಅತ್ಯಂತ ಹಿರಿದಾದುದಾಗಿದೆ.



Click it and Unblock the Notifications