Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ಇಂದು ಮೌನಿ ಅಮಾವಾಸ್ಯೆ -ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ!
ಹಿಂದೂ ಪಂಚಾಂಗದ ಪ್ರಕಾರ ಪ್ರತೀ ತಿಂಗಳು ಅಮಾವಾಸ್ಯೆಯು ಬರುವುದು. ಪ್ರತಿಯೊಂದು ಅಮಾವಾಸ್ಯೆಯನ್ನು ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಅದೇ ರೀತಿಯಲ್ಲಿ ಫೆ.4, 2019ರಂದು ಕಾಣಿಸಿಕೊಳ್ಳುವ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ತುಂಬಾ ಪವಿತ್ರವಾಗಿರುವ ಅಮವಾಸ್ಯೆ ಎಂದು ಪರಿಗಣಿಸಲಾಗಿದೆ. ಈ ದಿನ ಉಪವಾಸ ಮಾಡಿದರೆ ಅದರಿಂದ ಹೆಚ್ಚಿನ ಲಾಭವಾಗುವುದು.
ದಾನಧರ್ಮದಿಂದಲೂ ಈ ದಿನ ಲಾಭ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಒಳ್ಳೆಯ ಕೆಲಸ ಮಾಡುವಂತೆ, ಇನ್ನು ಕೆಲವು ಕೆಲಸಗಳನ್ನು ಮೌನಿ ಅಮಾವಾಸ್ಯೆ ದಿನ ಮಾಡಬಾರದು.

ಮೌನಿ ಅಮಾವಾಸ್ಯೆಯ ದಿನ ಮಾಡಲೇಬಾರದ ಕೆಲವೊಂದು ಕಾರ್ಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದನ್ನು ನೀವು ತಿಳಿದುಕೊಂಡು ಅದನ್ನು ಪಾಲಿಸಿಕೊಂಡು ಹೋಗಿ.

ತಡವಾಗಿ ಎದ್ದೇಳುವುದು
ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರು ಮುಂಜಾನೆ 4 ಗಂಟೆಯಿಂದ 6 ಗಂಟೆ ಮಧ್ಯೆ ಎದ್ದೇಳಬೇಕು ಎಂದು ಹೇಳಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಇದನ್ನು ಪಾಲಿಸುವವರು ತುಂಬಾ ಕಡಿಮೆ. ಆದರೆ ಮೌನಿ ಅಮಾವಾಸ್ಯೆಯ ದಿನದಂದು ತಡವಾಗಿ ಏಳಬಾರದು. ಯಾಕೆಂದರೆ ತಡವಾಗಿ ಏಳುವುದರಿಂದ ದುಷ್ಟಶಕ್ತಿಗಳು ಬರುವುದು. ಇಂತಹ ಅಭ್ಯಾಸಗಳು ವ್ಯಕ್ತಿಯಲ್ಲಿ ನಾಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದು. ಇಂತಹ ನಕಾರಾತ್ಮಕ ಶಕ್ತಿಗಳು ಅಮಾವಾಸ್ಯೆಯ ದಿನದಂದು ಹೆಚ್ಚು ಶಕ್ತಿಯುತವಾಗಿರುವುದು. ಇದರಿಂದಾಗಿ ಮೌನಿ ಅಮಾವಾಸ್ಯೆಯಂದು ತಡವಾಗಿ ಎದ್ದೇಳಬೇಡಿ. ಬೆಳಗ್ಗೆ ಬೇಗ ಎದ್ದ ಬಳಿಕ ನೀವು ಏನೂ ಮಾತನಾಡದೆ ಹೋಗಿ ಸ್ನಾನ ಮಾಡಿಕೊಂಡು ಬಂದು ದೇವರಿಗೆ ಪ್ರಾರ್ಥನೆ ಮಾಡಬೇಕು. ಸ್ನಾನ ಮಾಡುವ ನೀರಿಗೆ ಕಪ್ಪು ಎಳ್ಳನ್ನು ಹಾಕಿಕೊಂಡರೆ ಅದು ತುಂಬಾ ಒಳ್ಳೆಯದು.

ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು
ಅಮಾವಾಸ್ಯೆಯಂದು ನಕಾರಾತ್ಮಕ ಶಕ್ತಿಗಳು ಹೆಚ್ಚು ಶಕ್ತಿಯುತವಾಗಿರುವ ಕಾರಣದಿಂದಾಗಿ ಈ ದಿನದಂದು ದಂಪತಿಯು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಈ ದಿನ ಲೈಂಗಿಕ ಕ್ರಿಯೆಯಿಂದಾಗಿ ಮಗು ಜನಿಸಿದರೆ ಅದಕ್ಕೆ ಅಂಗವೈಕಲ್ಯವು ಇರುವುದು ಎಂದು ಹೇಳಲಾಗುತ್ತದೆ.

ಪೂರ್ವಜರನ್ನು ನೋಯಿಸಬೇಡಿ
ಮೌನಿ ಅಮಾವಾಸ್ಯೆಯ ದಿನದಂದು ಪೂರ್ವಜರನ್ನು ಸಂತುಷ್ಟಿಗೊಳಿಸುವ ದಿನವಾಗಿರುವುದು. ಪೂರ್ವಜರನ್ನು ಸಂತುಷ್ಟಿಗೊಳಿಸಲು ಜನರು ಹಲವಾರು ವಿಧಾನಗಳನ್ನು ಅನುಸರಿಸಿಕೊಂಡು ಹೋಗುವರು. ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆ ಮಾಡಿರುವಂತಹ ತಪ್ಪುಗಳಿಂದ ಪರಿಹಾರ ಪಡೆಯಲು ಹಲವಾರು ಪರಿಹಾರವನ್ನು ಈ ದಿನದಂದು ಮಾಡಲಾಗುವುದು. ಕೋಪವು ನಮ್ಮ ಪೂರ್ವಜರನ್ನು ನೋಯಿಸುವುದು ಎಂದು ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ಇದರಿಂದಾಗಿ ಮೌನಿ ಅಮಾವಾಸ್ಯೆಯ ದಿನದಂದು ನೀವು ಕೋಪವನ್ನು ತ್ಯಜಿಸಿ. ನೀವು ಈ ದಿನ ಯಾವುದೇ ರೀತಿಯ ಹಿಂಸಾಕೃತ್ಯದಲ್ಲೂ ತೊಡಗಿಕೊಳ್ಳಬಾರದು.

ನಿರ್ಗತಿಕರನ್ನು ಅಗೌರವಿಸುವುದು
ಮೌನಿ ಅಮಾವಾಸ್ಯೆಯಂದು ದುಷ್ಟಶಕ್ತಿಗಳು ತುಂಬಾ ಪ್ರಭಾವಶಾಲಿಯಾಗಿ ಇರುವುದು. ಇದರಿಂದಾಗಿ ನೀವು ಯಾವುದೇ ರೀತಿಯಿಂದ ನಿರ್ಗತಿಕರಿಗೆ ನೋವು, ಅಗೌರವ ಅಥವಾ ಮಾನಹಾನಿ ಮಾಡಿದರೆ ಅದು ದೇವರ ಮುನಿಸಿಗೆ ಕಾರಣವಾಗುವುದು. ಇದರಿಂದಾಗಿ ಪ್ರತಿಯೊಬ್ಬರು ನಿರ್ಗತಿಕರಿಗೆ ತಮ್ಮಿಂದ ಆಗುವ ನೆರವು ನೀಡಬೇಕು. ಕೇವಲ ಮೌನಿ ಅಮಾವಾಸ್ಯೆಯಂದು ಮಾತ್ರವಲ್ಲ. ಎಲ್ಲಾ ಸಮಯದಲ್ಲೂ ಈ ಕೆಲಸ ಮಾಡಬಹುದು.

ಕೆಲವು ಮರಗಳ ಅಡಿಯಲ್ಲಿ ನಿಲ್ಲುವುದು
ಮೌನಿ ಅಮಾವಾಸ್ಯೆಯಂದು ಕೆಲವೊಂದು ಮರಗಳ ಅಡಿಯಲ್ಲಿ ನಿಲ್ಲುವುದರಿಂದ ನಕಾರಾತ್ಮಕ ಶಕ್ತಿಗಳು ಬರುವುದು ಎಂದು ನಂಬಲಾಗಿದೆ. ಇದರಲ್ಲಿ ಮುಖ್ಯವಾಗಿ ಆಲದ ಮರ, ಮದರಂಗಿ ಗಿಡ ಮತ್ತು ಅಶ್ವತ್ಥ ಮರ(ದೇವಾಲಯದಲ್ಲಿ ಇರುವಂತಹ ಮರವಲ್ಲ). ಇಲ್ಲಿ ಶಕ್ತಿಗಳು ಅಮಾವಾಸ್ಯೆಯಂದು ಶಕ್ತಿಯುತವಾಗಿರುವುದು. ಈ ದಿನದಂದು ನಕಾರಾತ್ಮಕ ಶಕ್ತಿ ಹೆಚ್ಚಾಗಿರುವ ಕಾರಣದಿಂದಾಗಿ ದೇವರ ನಾಮಜಪ ಹೆಚ್ಚು ಮಾಡಬೇಕು.



Click it and Unblock the Notifications
