Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಇಂದು ಮೌನಿ ಅಮಾವಾಸ್ಯೆ -ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ!
ಹಿಂದೂ ಪಂಚಾಂಗದ ಪ್ರಕಾರ ಪ್ರತೀ ತಿಂಗಳು ಅಮಾವಾಸ್ಯೆಯು ಬರುವುದು. ಪ್ರತಿಯೊಂದು ಅಮಾವಾಸ್ಯೆಯನ್ನು ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಅದೇ ರೀತಿಯಲ್ಲಿ ಫೆ.4, 2019ರಂದು ಕಾಣಿಸಿಕೊಳ್ಳುವ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ತುಂಬಾ ಪವಿತ್ರವಾಗಿರುವ ಅಮವಾಸ್ಯೆ ಎಂದು ಪರಿಗಣಿಸಲಾಗಿದೆ. ಈ ದಿನ ಉಪವಾಸ ಮಾಡಿದರೆ ಅದರಿಂದ ಹೆಚ್ಚಿನ ಲಾಭವಾಗುವುದು.
ದಾನಧರ್ಮದಿಂದಲೂ ಈ ದಿನ ಲಾಭ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಒಳ್ಳೆಯ ಕೆಲಸ ಮಾಡುವಂತೆ, ಇನ್ನು ಕೆಲವು ಕೆಲಸಗಳನ್ನು ಮೌನಿ ಅಮಾವಾಸ್ಯೆ ದಿನ ಮಾಡಬಾರದು.

ಮೌನಿ ಅಮಾವಾಸ್ಯೆಯ ದಿನ ಮಾಡಲೇಬಾರದ ಕೆಲವೊಂದು ಕಾರ್ಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದನ್ನು ನೀವು ತಿಳಿದುಕೊಂಡು ಅದನ್ನು ಪಾಲಿಸಿಕೊಂಡು ಹೋಗಿ.

ತಡವಾಗಿ ಎದ್ದೇಳುವುದು
ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರು ಮುಂಜಾನೆ 4 ಗಂಟೆಯಿಂದ 6 ಗಂಟೆ ಮಧ್ಯೆ ಎದ್ದೇಳಬೇಕು ಎಂದು ಹೇಳಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಇದನ್ನು ಪಾಲಿಸುವವರು ತುಂಬಾ ಕಡಿಮೆ. ಆದರೆ ಮೌನಿ ಅಮಾವಾಸ್ಯೆಯ ದಿನದಂದು ತಡವಾಗಿ ಏಳಬಾರದು. ಯಾಕೆಂದರೆ ತಡವಾಗಿ ಏಳುವುದರಿಂದ ದುಷ್ಟಶಕ್ತಿಗಳು ಬರುವುದು. ಇಂತಹ ಅಭ್ಯಾಸಗಳು ವ್ಯಕ್ತಿಯಲ್ಲಿ ನಾಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದು. ಇಂತಹ ನಕಾರಾತ್ಮಕ ಶಕ್ತಿಗಳು ಅಮಾವಾಸ್ಯೆಯ ದಿನದಂದು ಹೆಚ್ಚು ಶಕ್ತಿಯುತವಾಗಿರುವುದು. ಇದರಿಂದಾಗಿ ಮೌನಿ ಅಮಾವಾಸ್ಯೆಯಂದು ತಡವಾಗಿ ಎದ್ದೇಳಬೇಡಿ. ಬೆಳಗ್ಗೆ ಬೇಗ ಎದ್ದ ಬಳಿಕ ನೀವು ಏನೂ ಮಾತನಾಡದೆ ಹೋಗಿ ಸ್ನಾನ ಮಾಡಿಕೊಂಡು ಬಂದು ದೇವರಿಗೆ ಪ್ರಾರ್ಥನೆ ಮಾಡಬೇಕು. ಸ್ನಾನ ಮಾಡುವ ನೀರಿಗೆ ಕಪ್ಪು ಎಳ್ಳನ್ನು ಹಾಕಿಕೊಂಡರೆ ಅದು ತುಂಬಾ ಒಳ್ಳೆಯದು.

ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು
ಅಮಾವಾಸ್ಯೆಯಂದು ನಕಾರಾತ್ಮಕ ಶಕ್ತಿಗಳು ಹೆಚ್ಚು ಶಕ್ತಿಯುತವಾಗಿರುವ ಕಾರಣದಿಂದಾಗಿ ಈ ದಿನದಂದು ದಂಪತಿಯು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಈ ದಿನ ಲೈಂಗಿಕ ಕ್ರಿಯೆಯಿಂದಾಗಿ ಮಗು ಜನಿಸಿದರೆ ಅದಕ್ಕೆ ಅಂಗವೈಕಲ್ಯವು ಇರುವುದು ಎಂದು ಹೇಳಲಾಗುತ್ತದೆ.

ಪೂರ್ವಜರನ್ನು ನೋಯಿಸಬೇಡಿ
ಮೌನಿ ಅಮಾವಾಸ್ಯೆಯ ದಿನದಂದು ಪೂರ್ವಜರನ್ನು ಸಂತುಷ್ಟಿಗೊಳಿಸುವ ದಿನವಾಗಿರುವುದು. ಪೂರ್ವಜರನ್ನು ಸಂತುಷ್ಟಿಗೊಳಿಸಲು ಜನರು ಹಲವಾರು ವಿಧಾನಗಳನ್ನು ಅನುಸರಿಸಿಕೊಂಡು ಹೋಗುವರು. ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆ ಮಾಡಿರುವಂತಹ ತಪ್ಪುಗಳಿಂದ ಪರಿಹಾರ ಪಡೆಯಲು ಹಲವಾರು ಪರಿಹಾರವನ್ನು ಈ ದಿನದಂದು ಮಾಡಲಾಗುವುದು. ಕೋಪವು ನಮ್ಮ ಪೂರ್ವಜರನ್ನು ನೋಯಿಸುವುದು ಎಂದು ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ಇದರಿಂದಾಗಿ ಮೌನಿ ಅಮಾವಾಸ್ಯೆಯ ದಿನದಂದು ನೀವು ಕೋಪವನ್ನು ತ್ಯಜಿಸಿ. ನೀವು ಈ ದಿನ ಯಾವುದೇ ರೀತಿಯ ಹಿಂಸಾಕೃತ್ಯದಲ್ಲೂ ತೊಡಗಿಕೊಳ್ಳಬಾರದು.

ನಿರ್ಗತಿಕರನ್ನು ಅಗೌರವಿಸುವುದು
ಮೌನಿ ಅಮಾವಾಸ್ಯೆಯಂದು ದುಷ್ಟಶಕ್ತಿಗಳು ತುಂಬಾ ಪ್ರಭಾವಶಾಲಿಯಾಗಿ ಇರುವುದು. ಇದರಿಂದಾಗಿ ನೀವು ಯಾವುದೇ ರೀತಿಯಿಂದ ನಿರ್ಗತಿಕರಿಗೆ ನೋವು, ಅಗೌರವ ಅಥವಾ ಮಾನಹಾನಿ ಮಾಡಿದರೆ ಅದು ದೇವರ ಮುನಿಸಿಗೆ ಕಾರಣವಾಗುವುದು. ಇದರಿಂದಾಗಿ ಪ್ರತಿಯೊಬ್ಬರು ನಿರ್ಗತಿಕರಿಗೆ ತಮ್ಮಿಂದ ಆಗುವ ನೆರವು ನೀಡಬೇಕು. ಕೇವಲ ಮೌನಿ ಅಮಾವಾಸ್ಯೆಯಂದು ಮಾತ್ರವಲ್ಲ. ಎಲ್ಲಾ ಸಮಯದಲ್ಲೂ ಈ ಕೆಲಸ ಮಾಡಬಹುದು.

ಕೆಲವು ಮರಗಳ ಅಡಿಯಲ್ಲಿ ನಿಲ್ಲುವುದು
ಮೌನಿ ಅಮಾವಾಸ್ಯೆಯಂದು ಕೆಲವೊಂದು ಮರಗಳ ಅಡಿಯಲ್ಲಿ ನಿಲ್ಲುವುದರಿಂದ ನಕಾರಾತ್ಮಕ ಶಕ್ತಿಗಳು ಬರುವುದು ಎಂದು ನಂಬಲಾಗಿದೆ. ಇದರಲ್ಲಿ ಮುಖ್ಯವಾಗಿ ಆಲದ ಮರ, ಮದರಂಗಿ ಗಿಡ ಮತ್ತು ಅಶ್ವತ್ಥ ಮರ(ದೇವಾಲಯದಲ್ಲಿ ಇರುವಂತಹ ಮರವಲ್ಲ). ಇಲ್ಲಿ ಶಕ್ತಿಗಳು ಅಮಾವಾಸ್ಯೆಯಂದು ಶಕ್ತಿಯುತವಾಗಿರುವುದು. ಈ ದಿನದಂದು ನಕಾರಾತ್ಮಕ ಶಕ್ತಿ ಹೆಚ್ಚಾಗಿರುವ ಕಾರಣದಿಂದಾಗಿ ದೇವರ ನಾಮಜಪ ಹೆಚ್ಚು ಮಾಡಬೇಕು.



Click it and Unblock the Notifications