Just In
- 8 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 9 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 9 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 11 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News ಹಳೇ ಹುಲಿ ಪಿಸಿ ಮೋಹನ್ ಎದುರು ಮನ್ಸೂರ್ ಅಲಿ ಖಾನ್ ಕಣಕ್ಕೆ; ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಬಿಜೆಪಿ ಕಲಿ?
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇವರಿಂದ ನೆಡಲ್ಪಟ್ಟ ನಿಗೂಢ ಮರದ ಕಥೆ
ಹಿಂದೂ ಧರ್ಮ ವಿಶಾಲವಾದ ಹಾಗೂ ಪವಿತ್ರವಾದ ಸಂಗತಿಗಳಿಂದ ಒಳಗೊಂಡಿದೆ. ಹಿಂದೂ ಧರ್ಮ ಸರಳ ಹಾಗೂ ಅತ್ಯಂತ ಪವಿತ್ರವಾದ ಧರ್ಮ. ಇದರಲ್ಲಿ ಅನೇಕ ರೀತಿ ನೀತಿಗಳಿವೆ. ಎಲ್ಲವೂ ವ್ಯಕ್ತಿ ಸುಂದರ ಜೀವನ ನಡೆಸಲು ಬೇಕಾದ ಸುಂದರ ಮಾರ್ಗಗಳು. ಪ್ರತಿಯೊಂದು ಸಂಗತಿಯೂ ಜೀವನದ ಸತ್ಯ ಹಾಗೂ ಅಸತ್ಯತೆಗಳನ್ನು ತೆರೆದಿಡುತ್ತವೆ. ಒಂದು ಜೀವ ಸುಂದರವಾದ ಬದುಕನ್ನು ಕಾಣಬೇಕು ಎಂದಾದರೆ ಸುತ್ತಲಿನ ಪರಿಸರ ಹಾಗೂ ಜೀವ ಸಮುದಾಯವು ಅತ್ಯಂತ ಅಮೂಲ್ಯವಾದದ್ದು. ಜೀವಿಗಳ ಸರಪಳಿಯ ಕೊಂಡಿ ಒಂದು ಕಳಚಿದರೂ ಮನುಷ್ಯನ ಜೀವನ ಅಸ್ತವ್ಯಸ್ತವಾಗುವುದು.
ಹಾಗಾಗಿಯೇ ಹಿಂದೂ ಧರ್ಮದಲ್ಲಿ ಪ್ರಕೃತಿಗೆ ಅತ್ಯಂತ ಮಹತ್ತರವಾದ ಸ್ಥಾನವನ್ನು ನೀಡಲಾಗುವುದು. ನಿಸರ್ಗದಲ್ಲಿ ಇರುವ ಮರಗಿಡಗಳು, ಮಣ್ಣು, ನೀರು, ಗಾಳಿ, ಬೆಳಕು, ಬೆಂಕಿ ಹಾಗೂ ತಂಪು ಎಲ್ಲವೂ ಜೀವನಕ್ಕೆ ಅತ್ಯಂತ ಅಗತ್ಯವಾದ ಸಂಗತಿಗಳು. ಅದಕ್ಕಾಗಿಯೇ ಪ್ರಕೃತಿಯನ್ನು ಹಾಗೂ ಪಂಚ ಭೂತಗಳನ್ನು ದೈವ ಎಂದು ಪರಿಗಣಿಸಲಾಗುವುದು. ಅವರ ಆರಾಧನೆ ಅಥವಾ ಪೂಜೆ ಗೈಯುವುದರ ಮೂಲಕ ಜೀವನವನ್ನು ಸಂತುಷ್ಟಗೊಳಿಸಿಕೊಳ್ಳಲಾಗುವುದು.
ದಿನ ನಿತ್ಯದ ಅಗತ್ಯತೆಗಳನ್ನು ಪೂರೈಸುವ ದೇವತೆಗಳು ಅಥವಾ ದೈವ ಶಕ್ತಿ ಎಂದರೆ ಮರಗಿಡಗಳು ಎಂದು ಹೇಳಬಹುದು. ಜೀವ ಸಂಕುಲಕ್ಕೆ ಅಗತ್ಯವಾದ ಹೂವು-ಹಣ್ಣು, ಬೇಳೆ-ಕಾಳುಗಳು ಹಾಗೂ ಮಳೆಯನ್ನು ನೀಡುವುದು ಗಿಡ-ಮರಗಳು. ಜೀವಿಯ ಆರೋಗ್ಯವು ಉತ್ತಮವಾಗಿರುವಂತೆ ಹಾಗೂ ಪ್ರಕೃತಿಯಲ್ಲಿ ಉತ್ತಮ ವಾತಾವರಣವನ್ನು ಒದಗಿಸುವುದು ಸೂರ್ಯನ ಬೆಳಕು. ಹಾಗಾಗಿಯೇ ಪ್ರಕೃತಿಯೇ ಹಿಂದೂಗಳಿಗೆ ಪ್ರಮುಖ ಸಂಸ್ಕಾರಗಳಾಗಿವೆ. ಮರ-ಗಿಡಗಳೇ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಂಡು, ಆಮ್ಲಜನಕವನ್ನು ಗಾಳಿಯಲ್ಲಿ ಬಿಡುಗಡೆ ಮಾಡುತ್ತವೆ. ಅವು ಮನುಷ್ಯನಿಗೆ ಉಸಿರಾಡಲು ಹಾಗೂ ಜೀವನಾಧಾರವಾದ ಗಾಳಿಯಾಗಿರುವುದು. ಅವು ಮಾಲಿನ್ಯಕರ ಗಾಳಿಯನ್ನು ಸಹ ತೆಗೆದುಹಾಕುವುದರ ಮೂಲಕ ಜೀವ ಸಮುದಾಯಕ್ಕೆ ಆಸರೆಯಾಗಿ ನಿಲ್ಲುವುದು.
ಹಿಂದೂ ಧರ್ಮದಲ್ಲಿ ಮರವನ್ನು ದೇವತೆಗಳು ಎಂದು ಪರಿಗಣಿಸಲಾಗುವುದು. ಕೆಲವು ಪ್ರಮುಖ ಗಿಡಮರಗಳಲ್ಲಿ ದೈವಿಕ ಶಕ್ತಿ ಹಾಗೂ ಧನಾತ್ಮಕವಾದ ಶಕ್ತಿಯು ಇರುತ್ತವೆ. ಅವು ಮನುಕುಲದ ರಕ್ಷಣೆಗೆ ಸಹಾಯವಾಗುತ್ತವೆ. ಅಲ್ಲದೆ ಅನೇಕ ಮಹಾನ್ ಪುರುಷರು ಮರಗಳ ಕೆಳಗೆ ಕುಳಿತಾಗಲೇ ಜ್ಞಾನೋದಯ ಹಾಗೂ ಧನಾತ್ಮಕ ಶಕ್ತಿಯನ್ನು ಪಡೆದುಕೊಂಡರು ಎಂದು ಹೇಳಲಾಗುವುದು. ಔಷಧೀಯ ಗುಣವನ್ನು ಹೊಂದಿರುವುದರಿಂದ ಜೀವ ಸಮುದಾಯಕ್ಕೆ ಅಗತ್ಯವಾದ ಔಷಧಗಳ ತಯಾರಿಕೆಗೂ ಸಹಾಯ ಮಾಡುವುದು. ಜೊತೆಗೆ ಆ ಗಿಡ-ಮರಗಳ ಬಳಿ ಹೆಚ್ಚು ಸಮಯ ಕಳೆಯುವುದರಿಂದಲೂ ಸಾಕಷ್ಟು ಆರೋಗ್ಯ ಸಮಸ್ಯೆಗಳು ನಿರ್ಮೂಲವಾಗುವುದು.
ಪುರಾಣದ ಇತಿಹಾಸ ಹಾಗೂ ಕೆಲವು ಕಥೆ ಪುರಾಣಗಳು ಹೇಳುವ ಮಾಹಿತಿಯ ಪ್ರಕಾರ ಕೆಲವು ಗಿಡ ಮರಗಳನ್ನು ದೇವರು ಭೂಮಿಯಲ್ಲಿ ತಂದು ಇರಿಸಿದ್ದಾರೆ. ಈ ಕಾರಣದಿಂದಲೇ ಮನುಷ್ಯನ ಸಂರಕ್ಷಣೆಯಾಗುವುದು. ಕೆಲವು ಪವಿತ್ರ ಗಿಡ-ಮರಗಳ ಕೆಳಗೆ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅಂತಹ ಗಿಡಮರಗಳನ್ನು ನಿತ್ಯವೂ ಪೂಜೆ ಮಾಡುವುದರ ಮೂಲ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುವರು ಎನ್ನಲಾಗುತ್ತದೆ. ಅಂತೆಯೇ ಕೆಲವು ಮರಗಳು ನಿಷಿದ್ಧವನ್ನು ಪಡೆದುಕೊಂಡಿವೆ. ಅಂತಹ ಮರಗಳಲ್ಲಿನ ಹೂವು-ಹಣ್ಣುಗಳನ್ನು ತಿನ್ನಬಾರದು ಎಂದು ಹೇಳಲಾಗುವುದು. ಕೆಲವು ಕಡೆ ಅಂತಹ ಮರಗಳ ಹಣ್ಣುಗಳನ್ನು ಅಥವಾ ಹೂವುಗಳನ್ನು ಸ್ವೀಕರಿಸುವುದು ಕಾನೂನು ಬಾಹಿರ. ಅಂತೆಯೇ ಧರ್ಮದಲ್ಲೂ ಬಾಹಿರವಾಗಿರುತ್ತದೆ ಎನ್ನಲಾಗುವುದು. ಈ ರೀತಿಯ ಮರಗಿಡಗಳನ್ನು ಸಹ ದೇವರೇ ನಿಗೂಢವಾಗಿ ಸೃಷ್ಟಿಸಿದ್ದ ಎನ್ನಲಾಗುವುದು. ಹಾಗಾದರೆ ಆ ನೀಗೂಢತೆಯನ್ನು ಪಡೆದ ಹಾಗೂ ನಿಷೇಧವನ್ನು ಹೊಂದಿರುವ ಮರಗಳು ಯಾವವು? ಧನಾತ್ಮಕ ಶಕ್ತಿಯ ಮರಗಳು ಯಾವವು? ವಿವಿಧ ಧರ್ಮಗಳಲ್ಲಿ ಮರಗಳ ಬಳಕೆಯನ್ನು ಹೇಗೆ ಮಾಡಿದ್ದಾರೆ? ಅದರಿಂದ ಯಾವ ಅರ್ಥವನ್ನು ಪಡೆದುಕೊಂಡರು? ಎನ್ನುವುದನ್ನು ತಿಳಿಯುವ ಕುತೂಹಲಕ್ಕೆ ಲೇಖನದ ಮುಂದಿನ ವಿವರಣೆ ಉತ್ತರ ನೀಡುವುದು.
ಬುದ್ಧನ ಬೋಧಿ ವೃಕ್ಷ:
ನೇಪಾಳ ಮತ್ತು ಭೂತಾನ್ಗಳಲ್ಲಿ ಬೋ ಎಂಬ ಹೆಸರಿನಿಂದ ಕರೆಯಲ್ಪಡುವ ಬೋಧಿ ಮರ (ಸಿಂಹಳೀಸ್ ಬೋ) ಮತ್ತು "ಪೆಪ್ಪಲ್ ಮರ' ಎಂಬ ದೊಡ್ಡ ಮತ್ತು ಹಳೆಯ ಪವಿತ್ರ ಅಂಜೂರ ಮರ (ಫಿಕಸ್ ರಿಲಿಜಿಯೋಸ) ಎಂದು ಕರೆಯಲಾಗುವುದು. ಗೌತಮ ಬುದ್ಧ ಎಂದು ಕರೆಯಲ್ಪಡುವ ಆಧ್ಯಾತ್ಮಿಕ ಗುರು ಸಿದ್ಧಾರ್ಥ ಗೌತಮನು ಈ ವೃಕ್ಷದ ಕೆಳಗೆ ಜ್ಞಾನವನ್ನು ಪಡೆದನು ಎಂದು ಹೇಳಲಾಗುವುದು. ಧಾರ್ಮಿಕ ಪ್ರತಿಮಾಶಾಸ್ತ್ರದಲ್ಲಿ ಬೋಧಿ ಮರವು ಹೃದಯದ ಆಕಾರದ ಎಲೆಗಳಿಂದ ಗುರುತಿಸಲ್ಪಡುತ್ತದೆ. ಅವು ಸಾಮಾನ್ಯವಾಗಿ ಪ್ರಧಾನ ಎಲೆಗಳಾಗಿ ಪ್ರದರ್ಶಿಸಲ್ಪಡುತ್ತವೆ. ಬೋಧಿ ಮರಗಳು ಪ್ರತಿ ಬೌದ್ಧ ಮಠಕ್ಕೆ ಸಮೀಪದಲ್ಲಿ ನೆಡಲಾಗುತ್ತದೆ.
ಜ್ಞಾನದ ಮರದ
ಹಳೆಯ ಒಡಂಬಡಿಕೆಯಲ್ಲಿ ಅಥವಾ ಯಹೂದಿ ಗ್ರಂಥಗಳು ನಮಗೆ ಒಳ್ಳೆಯ ಮತ್ತು ಕೆಟ್ಟ ಜ್ಞಾನದ ಮರದ ಬಗ್ಗೆ ತಿಳಿಸುತ್ತವೆ. ಗಾರ್ಡನ್ ಕಥೆಯಲ್ಲಿ ಈ ಮರದ ಉಲ್ಲೇಖವನ್ನು ನಾವು ಗಮನಿಸಬಹುದು. ಈ ಗಾರ್ಡನ್ ಕಥೆಯಲ್ಲಿ ಒಳ್ಳೆಯ ಮತ್ತು ಕೆಟ್ಟ ಹಣ್ಣುಗಳನ್ನು ನೀಡುವ ಮರ ಎಂದು ಹೇಳಲಾಗುವುದು. ಇದನ್ನು ಕೆಲವು ಆಧಾರಗಳ ಪ್ರಕಾರ ಕಾನೂನು ಬಾಹಿರ ಎಂದು ಸಹ ಹೇಳಲಾಗುವುದು. ಈ ಹಣ್ಣುಗಳು ಜೀವನದ ಆನಂದ ಹಾಗೂ ಕಷ್ಟಗಳನ್ನು ಸೂಚಿಸುತ್ತವೆ ಎಂದು ಸಹ ಹೇಳುವುದುಂಟು.
ಖುರಾನ್ ಅಲ್ಲಿರುವ ಫರ್ಬಿಡನ್ ಮರ:
ಖುರಾನ್ ಪ್ರಕಾರ, ಸುರಾಹ್ ಅಲ್-ಅರಾಫ್ 7:19 ಅವರು ಆಡಮ್ ಮತ್ತು ಅವರ ಹೆಂಡತಿಯನ್ನು ಪ್ಯಾರಡೈಸ್ನಲ್ಲಿ ವಿವರಿಸುತ್ತಾರೆ. ಇದರಲ್ಲಿ ಅವರು ವಿವರಿಸಲಾದ ಒಂದು ಪ್ರಮುಖ ಮರ ಝಲಿಮನ್. ಈ ಮರದ ಹಣ್ಣುಗಳನ್ನು ತಿನ್ನಬಾರದು. ಸುರಾನ್ ಇಬ್ರಾಹಿಂ ವರ್ಣಿಸಿರುವ ಪ್ರಕಾರ ಫಾರ್ಬಿಡನ್ ಮರವು ನಿಷೇಧಿಸಲ್ಪಟ್ಟ ಕೆಟ್ಟ ಮರ.
ಜೆರುಸಲೆಮ್ ಅಲ್ಲಿ ನೆಡಲಾದ ಒಂದು ಮರ :
ಜೆರುಸಲೆಮ್ ಅಲ್ಲಿ ಒಂದು ನಿರ್ದಿಷ್ಟ ಮರವಿದೆ. ರೋಮನ್ ಅಧಿಕಾರಿಗಳು ಯೇಸುವನ್ನು ಆ ಮರದ ಮೇಲೆಯೇ ಶಿಲುಬೆಗೆ ಏರಿಸಿದರು ಎನ್ನಲಾಗುತ್ತದೆ. ಆದರೆ ಬೈಬಲ್ ಅಲ್ಲಿ ಯೇಸುವನ್ನು ಶಿಲುಬೆಗೆ ಎರಿಸಿದ ನಿರ್ದಿಷ್ಟ ಮರದ ಉಲ್ಲೇಖವಿಲ್ಲ ಎನ್ನಲಾಗುವುದು. ಶಿಲುಬೆಗಳನ್ನು ಹೇಗೆ ತಯಾರಿಸಲಾಗಿದೆಯೆಂದು ಅಥವಾ ಯಾವ ವಿಧದ ಮರವನ್ನು ಬಳಸಲಾಯಿತು ಎಂಬುದರ ಕುರಿತು ರೋಮನ್ ಇತಿಹಾಸದ ಕುರಿತು ಯಾವುದೇ ಮಾಹಿತಿಯನ್ನು ಅಥವಾ ಪುರಾವೆಯನ್ನು ಹೊಂದಿಲ್ಲ. ಆದರೆ ಶಿಲುಬೆಯನ್ನು ಒಂದು ನಾಯಿಮರದಿಂದ ಮಾಡಲಾಗಿದೆ ಎನ್ನುವ ದಂತಕಥೆಯಿದೆ. ಅಲ್ಲಿಯೂ ನಾಯಿ ಮರದ ವಿಶಿಷ್ಟತೆಯ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಅದು ಒಂದು ಜಾಣ್ಮೆಯ ಮರವಾಗಿತ್ತು ಎನ್ನಲಾಗುತ್ತದೆ ಅಷ್ಟೆ. ಬುದ್ಧಿವಂತರು ತಾವು ಎಂದು ಹೇಳಿಕೊಳ್ಳುವವರಿಗೆ ನಾಚಿಕೆಯುಂಟಾಗಬೇಕು ಎನ್ನುವುದನ್ನು ತಿಳಿಸಲು ದೇವರು ಈ ಮರವನ್ನು ಆರಿಸಿಕೊಂಡ ಎಂದು ಬೈಬಲ್ ವಿವರಿಸುತ್ತದೆ.
ಕ್ರಾಸ್ ನ ಅರ್ಥ
ಗ್ರೀಕ್ ಪದ "ಕ್ರಾಸ್" ಇಸ್ಸ್ಟೋರೋಸ್ ಎಂಬ ಅರ್ಥವನ್ನು ನೀಡುತ್ತದೆ. "ಮರಣದಂಡನೆಯ ಸಲಕರಣೆಯಾಗಿ ಬಳಸುವ ಕಂಬ ಅಥವಾ ಶಿಲುಬೆ". "ಶಿಲುಬೆ" ಎಂದು ಅನುವಾದಿಸಲ್ಪಡುವ ಗ್ರೀಕ್ ಶಬ್ದ ಸ್ಟೌರೊವೊ ಎಂಬುದು ಧ್ರುವ ಅಥವಾ ಅಡ್ಡಕ್ಕೆ ಲಗತ್ತಿಸುವುದು ಎಂದರ್ಥ. ಜೀಸಸ್ ಎನ್ನುವ ದೈವ ಶಕ್ತಿಯನ್ನು ಶಿಲುಬೆಗೆ ಏರಿಸುವಾಗ ಮರದಿಂದಲೇ ತಯಾರಿಸಿದ ಅಡ್ಡಪಟ್ಟಿಗಳ ಮೇಲೆ ಏರಿಸಲಾಯಿತು. ಅದನ್ನು ಸಹ ನೆಮದ ಮೇಲೆಯೇ ಹುಗಿಯಲಾಯಿತು. ಅಲ್ಲಿಯೇ ತಿಳಿಸುತ್ತದೆ. ಎಲ್ಲವೂ ಈ ಪ್ರಕೃತಿಯಲ್ಲಿ ಸಿಗುವುದನ್ನು ಬಳಸಬೇಕು. ವಿನಃ ಮನುಷ್ಯ ಎನ್ನುವ ಗರ್ವದಿಂದ ಏನ್ನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು. ಮಾನವ ಕುಲಕ್ಕೆ ಶಾಶ್ವತ ಜೀವನ ನೀಡುವ ಜೀವವು ಮರದ ಮೇಲೆಯೇ ಇದೆ. ಜೀಸಸ್ ನ ದೇಹದಿಂದ ಬಿದ್ದಂತಹ ಒಂದೊಂದು ರಕ್ತದ ಹನಿಯು ನಮ್ಮ ಪಾಪವನ್ನು ಕ್ಷಮಿಸುವ ಹಾಗೂ ಮೋಕ್ಷವನ್ನು ನೀಡುವ ಜೀವವಾಯಿತು.
ಗೊಲ್ಗೊಥಾ ಮತ್ತು ಕ್ರಿಶ್ಚಿಯನ್ ಧಾರ್ಮಿಕ ಚಿಹ್ನೆ
ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ಶಿಲುಬೆಗೆ ಪಾಲಿಶ್ ಇಲ್ಲ. ಇದು ನಮ್ಮ ಚರ್ಚುಗಳು , ನಮ್ಮ ಆಭರಣಗಳು, ನಮ್ಮ ಪುಸ್ತಕಗಳು ಮತ್ತು ಸಂಗೀತವನ್ನು ಅಲಂಕರಿಸುವ ಕ್ರಾಸ್ನಿಂದ ಭಿನ್ನವಾಗಿದೆ. ಹಲವಾರು ಮಾರ್ಕೆಟಿಂಗ್ ಲೋಗೊಗಳಲ್ಲಿ ಬಳಸಲ್ಪಡುತ್ತದೆ.
ಧರ್ಮದಲ್ಲಿ ತಪ್ಪಾಗಿ ಗ್ರಹಿಸಿದ್ದಾರೆ
ದೇವಾಲಯದ ಸೇವೆಯಲ್ಲಿನ ಯಹೂದಿಗಳ ಉನ್ನತ ಪುರೋಹಿತರು ತಮ್ಮ ಧರ್ಮಗ್ರಂಥಗಳನ್ನು ತಪ್ಪಾಗಿ ಅರ್ಥಮಾಡಿಕೊಂಡರು. ಕಾನೂನು ನೆರವೇರಿಸುವಲ್ಲಿ ಜೀಸಸ್ ಕ್ರೈಸ್ತನನ್ನು ಶಿಕ್ಷೆಗೆ ತರುವ ಜೀವಿತ ಮರದಿಂದ ಈ ಕ್ರಾಸ್ ಅನ್ನು ಮಾಡಬೇಕೆಂದು ಬಯಸಿದ್ದರು. ಆಧುನಿಕ ಕ್ರಿಶ್ಚಿಯನ್ ಧರ್ಮ ತಮ್ಮ ಬೈಬಲ್ ಅನ್ನು ತಪ್ಪಾಗಿ ಅರ್ಥಮಾಡಿಕೊಂಡು ಈ ಕ್ರಾಸ್ ಅನ್ನು ಧಾರ್ಮಿಕ ಚಿಹ್ನೆಯಾಗಿ ಬಳಸಿತು. ತಮ್ಮ ವೇದಗಳನ್ನು ಅಧ್ಯಯನ ಮಾಡಿದ ವೈದಿಕ ವಿದ್ವಾಂಸರು ತಮ್ಮ ಪವಿತ್ರ ಗ್ರಂಥಗಳಲ್ಲಿ ಏಕರೂಪವಾಗಿ ಉಲ್ಲೇಖಿಸಲ್ಪಟ್ಟಿರುವ ಈ ಕ್ರಾಸ್ ಅನ್ನು ಹುಡುಕಲಾಗಲಿಲ್ಲ. ಇದು ಅವರಿಗೆ ಇನ್ನೂ ರಹಸ್ಯವಾಗಿದೆ.