Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ರೋಗ ಗುಣ ಪಡಿಸಿ ಅಪಮೃತ್ಯು ತಡೆಯುವ ಶಕ್ತಿ ಮೃತ್ಯುಂಜಯ ಹೋಮದಲ್ಲಿದೆ
ನೆರಳಿನಂತೆ ಹಿಂಬಾಲಿಸುವ ಸಾವಿನ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಭಯ ಇದ್ದೇ ಇರುತ್ತದೆ. ಹುಟ್ಟಿದ ಮೇಲೆ ವ್ಯಕ್ತಿ ಸಾಯಲೇಬೇಕು. ಆದರೆ ಅಕಾಲಿಕ ಮರಣ ಯಾರೂ ಬಯಸುವುದಿಲ್ಲ.

ಯಾರು, ಯಾವಾಗ ಸಾಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಸಾವನ್ನು ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಈ ವ್ಯಕ್ತಿ ಬದುಕುವುದು ಕಷ್ಟ ಎಂದು ವೈದ್ಯರು ಕೂಡ ಕೈಚೆಲ್ಲಿದ ವ್ಯಕ್ತಿಗಳು ಪವಾಡವಂಬಂತೆ ಬದುಕಿರುವ ಎಷ್ಟೋ ಉದಾಹರಣೆಗಳಿವೆ. ಆ ವ್ಯಕ್ತಿ ಹೇಗೆ ಬದುಕಿದ ಎಂದು ಕೇಳಿದರೆ ಮನೆಯವರ ಪ್ರಾರ್ಥನೆಯ ಫಲ, ದೇವರ ಕೃಪೆ ಎನ್ನುತ್ತಾರೆ.
ದೇವರುಗಳಲ್ಲಿ ಸೃಷ್ಠಿಗೆ ಕಾರಣ ಬ್ರಹ್ಮನಾದರೆ, ಜೀವಿತ ಕಾಲದ ರಕ್ಷಕನು ವಿಷ್ಣು ಹಾಗೂ ಅಂತ್ಯ ಕಾಲಕ್ಕೆ ಮೋಕ್ಷ ನೀಡುವುದು ಶಿವನೂ ಎಂಬ ನಂಬಿಕೆ ನಮ್ಮಲ್ಲಿದೆ. ಮಾನವ ಹುಟ್ಟುತ್ತಲೇ ಅವನ ಸಾವು ಕೂಡ ಬರುತ್ತಿರುತ್ತದೆ. ಕರ್ಮಾನುಸಾರ ಅನುಭವಿಸಬೇಕಾದ ಫಲಗಳನ್ನು ಜೀವಿತಾವಧಿಯಲ್ಲಿಯೇ ಅನುಭವಿಸುತ್ತಾನೆ ಎಂದು ಹೇಳಲಾಗುವುದು.

ಮೃತ್ಯು ಭಯ ದೂರ ಮಾಡುವ ಮೃತ್ಯುಂಜಯ ಹೋಮ
ಸ್ವರ್ಗ-ನರಕಗಳೆರಡರ ಫಲಗಳ ಬಹುಪಾಲನ್ನು ಮನುಷ್ಯನು ಮನುಷ್ಯ ತಮ್ಮ ಕರ್ಮದ ಫಲ ಹಾಗೂ ಪೂರ್ವಜನ್ಮದ ಕರ್ಮನುಸಾರ ಜನ್ಮದಲ್ಲಿಯೇ ಪಡೆಯುತ್ತಾನೆ ಶೇಷಭಾಗದಲ್ಲಿ ಒಂದು ಭಾಗ ಮರಣಕಾಲದಲ್ಲೂ ಉಳಿದಂತೆ ಮರಣಾನಂತರ ಜೀವಾತ್ಮನು ತನ್ನ ಊರ್ಧ್ವ ಪ್ರಯಾಣ ಕಾಲದಲ್ಲೂ ಪಡೆಯುತ್ತಾನೆಂದು ಗರುಡ ಪುರಾಣ ವಿವರಿಸಿದೆ.
ಹೀಗಿರುವಾಗ "ಶ್ರೀ ಮೃತ್ಯುಂಜಯ ಹೋಮ"ವನ್ನು ವಿಶೇಷವಾಗಿ ಯಾವುದೇ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರದಲ್ಲಿ ಮಾಡಿಸಿ ಪ್ರಸಾದ ಸ್ವೀಕರಿಸಿದಲ್ಲಿ ಆತನಿಗೆ ದೈವಾನುಗ್ರಹವು ಒದಗಿ ಮೃತ್ಯು ಭಯಗಳು ದೂರವಾಗುತ್ತವೆ. ಮನೋಸ್ಥೈರ್ಯ ವೃದ್ಧಿಗೊಂಡು ಸನ್ಮಾರ್ಗದಲ್ಲಿ ನಡೆಯುವಂತಾಗುತ್ತದೆ ಹಾಗೂ ಪೂರ್ಣ ಜೀವನ ನಡೆಸುವಂತಾಗಿ ಮೋಕ್ಷ ಪ್ರಾಪ್ತಿ ಹೊಂದುವರೆಂದು ವೇದ ಪುರಾಣಗಳು ಹೇಳುತ್ತವೆ.

ಮೃತ್ಯುಂಜಯ ಹೋಮ ಹೇಗೆ ಮಾಡಬೇಕು?
ಮೃತ್ಯುಂಜಯ ಹೋಮ ಹಾಗೂ ಮೃತ್ಯುಂಜಯ ಜಪವನ್ನು ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಏಕಾಗ್ರತೆಯಿಂದ ಮಾಡಬೇಕು. ಇದನ್ನು ನದಿ ತೀರ ಅಥವಾ ಅರನ್ಯ ಪ್ರದೇಶದಲ್ಲು ಏಕಾಂತ ಸ್ಥಳದಲ್ಲಿ ಪಂಚಯಾಮ ದೊರೆಯುವ ಸ್ಥಳದಲ್ಲಿ ಆ ದಿನದ ಪ್ರಾತಃ ಕಾಲದಿಂದ ಹಿಡಿದು ನಾಳೆ ಪ್ರಾತಃ ಕಾಲದವರೆಗೆ ಮಾಡಬೇಕು. ಈ ಹೋಮಕ್ಕೆ ಮೃತ್ಯು ದೋಷ ನಿವಾರಣೆ ಮಾಡುವ ಶಕ್ತಿ ಇದೆ.

ಮೃತ್ಯುಂಜಯ ಮಂತ್ರ ಪಠಿಸಬೇಕು
ಅಕಾಲಿಕ ಸಾವಿನ ಕುರಿತು ಭಯವಿರುವಾಗ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ಸಾವಿರದ ಒಂದು ಮಂತ್ರವನ್ನು ಪಠಣೆ ಮಾಡಬೇಕು. ಹೀಗೆ ಮಾಡಿದರೆ ಉತ್ತಮ ಫಲ ಸಿಗುವುದು. ಕಾಯಿಲೆಯಿಂದ ಬಳಲುತ್ತಿರುವವರು ಈ ಮಂತ್ರ ಪಠಿಸಿದರೆ ಶೀಘ್ರವೇ ಗುಣಮುಖರಾಗಬಹುದು.
ಇನ್ನು ಪ್ರತಿದಿನ 108 ಬಾರಿ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಬೇಗನೆ ಗುಣಮುಖರಾಗುತ್ತಾರೆ. 108 ತುಂಬಾ ಪ್ರಮುಖವಾದುದ್ದು ಏಕೆಂದರೆ ಇದು ಗಣಿತದ ಲೆಕ್ಕಾಚಾರವನ್ನು ಹೊಂದಿದೆ. 12 ಹಾಗೂ ಒಂಭತ್ತರ ಗುಣಾಕಾರವಾಗಿದೆ 108. ಇಲ್ಲಿ 12 ರಾಶಿ ಚಕ್ರವನ್ನು ಸುಚಿಸುತ್ತದೆ ಮತ್ತು 9 ನವಗ್ರಹಗಳನ್ನು. ಒಬ್ಬ ವ್ಯಕ್ತಿ ಈ ಮಂತ್ರವನ್ನು 108 ಬಾರಿ ಪಠಿಸಿದಾಗ ಆತನ ಎಲ್ಲಾ ನವಗ್ರಹಗಳು ಮತ್ತು ರಾಶಿ ಚಕ್ರಗಳು ಆತನ ಜೀವನದಲ್ಲಿ ಮಾಡುವ ಏರು ಪೇರುಗಳನ್ನು ಹೊರತುಪಡಿಸಿ ಸರಿಯಾದ ದಾರಿಗೆ ಬರುತ್ತವೆ

ಮೃತ್ಯುಂಜಯ ಮಂತ್ರ
ಓಂ ತ್ರ್ಯಯಂಬಕಂ ಯಜಮಾಹೆ, ಸುಗಂಧಿಂ ಪುಷ್ಟಿ ವರ್ಧನಂ.
ಉರವರುಕಿಮೀವ್ ಬಂಧನಾತ್, ಮೃತ್ಯುರ್ ಮೋಕ್ಷಾಯ ಮಮೃತಾತ್.



Click it and Unblock the Notifications