Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ರೋಗ ಗುಣ ಪಡಿಸಿ ಅಪಮೃತ್ಯು ತಡೆಯುವ ಶಕ್ತಿ ಮೃತ್ಯುಂಜಯ ಹೋಮದಲ್ಲಿದೆ
ನೆರಳಿನಂತೆ ಹಿಂಬಾಲಿಸುವ ಸಾವಿನ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಭಯ ಇದ್ದೇ ಇರುತ್ತದೆ. ಹುಟ್ಟಿದ ಮೇಲೆ ವ್ಯಕ್ತಿ ಸಾಯಲೇಬೇಕು. ಆದರೆ ಅಕಾಲಿಕ ಮರಣ ಯಾರೂ ಬಯಸುವುದಿಲ್ಲ.

ಯಾರು, ಯಾವಾಗ ಸಾಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಸಾವನ್ನು ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಈ ವ್ಯಕ್ತಿ ಬದುಕುವುದು ಕಷ್ಟ ಎಂದು ವೈದ್ಯರು ಕೂಡ ಕೈಚೆಲ್ಲಿದ ವ್ಯಕ್ತಿಗಳು ಪವಾಡವಂಬಂತೆ ಬದುಕಿರುವ ಎಷ್ಟೋ ಉದಾಹರಣೆಗಳಿವೆ. ಆ ವ್ಯಕ್ತಿ ಹೇಗೆ ಬದುಕಿದ ಎಂದು ಕೇಳಿದರೆ ಮನೆಯವರ ಪ್ರಾರ್ಥನೆಯ ಫಲ, ದೇವರ ಕೃಪೆ ಎನ್ನುತ್ತಾರೆ.
ದೇವರುಗಳಲ್ಲಿ ಸೃಷ್ಠಿಗೆ ಕಾರಣ ಬ್ರಹ್ಮನಾದರೆ, ಜೀವಿತ ಕಾಲದ ರಕ್ಷಕನು ವಿಷ್ಣು ಹಾಗೂ ಅಂತ್ಯ ಕಾಲಕ್ಕೆ ಮೋಕ್ಷ ನೀಡುವುದು ಶಿವನೂ ಎಂಬ ನಂಬಿಕೆ ನಮ್ಮಲ್ಲಿದೆ. ಮಾನವ ಹುಟ್ಟುತ್ತಲೇ ಅವನ ಸಾವು ಕೂಡ ಬರುತ್ತಿರುತ್ತದೆ. ಕರ್ಮಾನುಸಾರ ಅನುಭವಿಸಬೇಕಾದ ಫಲಗಳನ್ನು ಜೀವಿತಾವಧಿಯಲ್ಲಿಯೇ ಅನುಭವಿಸುತ್ತಾನೆ ಎಂದು ಹೇಳಲಾಗುವುದು.

ಮೃತ್ಯು ಭಯ ದೂರ ಮಾಡುವ ಮೃತ್ಯುಂಜಯ ಹೋಮ
ಸ್ವರ್ಗ-ನರಕಗಳೆರಡರ ಫಲಗಳ ಬಹುಪಾಲನ್ನು ಮನುಷ್ಯನು ಮನುಷ್ಯ ತಮ್ಮ ಕರ್ಮದ ಫಲ ಹಾಗೂ ಪೂರ್ವಜನ್ಮದ ಕರ್ಮನುಸಾರ ಜನ್ಮದಲ್ಲಿಯೇ ಪಡೆಯುತ್ತಾನೆ ಶೇಷಭಾಗದಲ್ಲಿ ಒಂದು ಭಾಗ ಮರಣಕಾಲದಲ್ಲೂ ಉಳಿದಂತೆ ಮರಣಾನಂತರ ಜೀವಾತ್ಮನು ತನ್ನ ಊರ್ಧ್ವ ಪ್ರಯಾಣ ಕಾಲದಲ್ಲೂ ಪಡೆಯುತ್ತಾನೆಂದು ಗರುಡ ಪುರಾಣ ವಿವರಿಸಿದೆ.
ಹೀಗಿರುವಾಗ "ಶ್ರೀ ಮೃತ್ಯುಂಜಯ ಹೋಮ"ವನ್ನು ವಿಶೇಷವಾಗಿ ಯಾವುದೇ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರದಲ್ಲಿ ಮಾಡಿಸಿ ಪ್ರಸಾದ ಸ್ವೀಕರಿಸಿದಲ್ಲಿ ಆತನಿಗೆ ದೈವಾನುಗ್ರಹವು ಒದಗಿ ಮೃತ್ಯು ಭಯಗಳು ದೂರವಾಗುತ್ತವೆ. ಮನೋಸ್ಥೈರ್ಯ ವೃದ್ಧಿಗೊಂಡು ಸನ್ಮಾರ್ಗದಲ್ಲಿ ನಡೆಯುವಂತಾಗುತ್ತದೆ ಹಾಗೂ ಪೂರ್ಣ ಜೀವನ ನಡೆಸುವಂತಾಗಿ ಮೋಕ್ಷ ಪ್ರಾಪ್ತಿ ಹೊಂದುವರೆಂದು ವೇದ ಪುರಾಣಗಳು ಹೇಳುತ್ತವೆ.

ಮೃತ್ಯುಂಜಯ ಹೋಮ ಹೇಗೆ ಮಾಡಬೇಕು?
ಮೃತ್ಯುಂಜಯ ಹೋಮ ಹಾಗೂ ಮೃತ್ಯುಂಜಯ ಜಪವನ್ನು ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಏಕಾಗ್ರತೆಯಿಂದ ಮಾಡಬೇಕು. ಇದನ್ನು ನದಿ ತೀರ ಅಥವಾ ಅರನ್ಯ ಪ್ರದೇಶದಲ್ಲು ಏಕಾಂತ ಸ್ಥಳದಲ್ಲಿ ಪಂಚಯಾಮ ದೊರೆಯುವ ಸ್ಥಳದಲ್ಲಿ ಆ ದಿನದ ಪ್ರಾತಃ ಕಾಲದಿಂದ ಹಿಡಿದು ನಾಳೆ ಪ್ರಾತಃ ಕಾಲದವರೆಗೆ ಮಾಡಬೇಕು. ಈ ಹೋಮಕ್ಕೆ ಮೃತ್ಯು ದೋಷ ನಿವಾರಣೆ ಮಾಡುವ ಶಕ್ತಿ ಇದೆ.

ಮೃತ್ಯುಂಜಯ ಮಂತ್ರ ಪಠಿಸಬೇಕು
ಅಕಾಲಿಕ ಸಾವಿನ ಕುರಿತು ಭಯವಿರುವಾಗ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ಸಾವಿರದ ಒಂದು ಮಂತ್ರವನ್ನು ಪಠಣೆ ಮಾಡಬೇಕು. ಹೀಗೆ ಮಾಡಿದರೆ ಉತ್ತಮ ಫಲ ಸಿಗುವುದು. ಕಾಯಿಲೆಯಿಂದ ಬಳಲುತ್ತಿರುವವರು ಈ ಮಂತ್ರ ಪಠಿಸಿದರೆ ಶೀಘ್ರವೇ ಗುಣಮುಖರಾಗಬಹುದು.
ಇನ್ನು ಪ್ರತಿದಿನ 108 ಬಾರಿ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಬೇಗನೆ ಗುಣಮುಖರಾಗುತ್ತಾರೆ. 108 ತುಂಬಾ ಪ್ರಮುಖವಾದುದ್ದು ಏಕೆಂದರೆ ಇದು ಗಣಿತದ ಲೆಕ್ಕಾಚಾರವನ್ನು ಹೊಂದಿದೆ. 12 ಹಾಗೂ ಒಂಭತ್ತರ ಗುಣಾಕಾರವಾಗಿದೆ 108. ಇಲ್ಲಿ 12 ರಾಶಿ ಚಕ್ರವನ್ನು ಸುಚಿಸುತ್ತದೆ ಮತ್ತು 9 ನವಗ್ರಹಗಳನ್ನು. ಒಬ್ಬ ವ್ಯಕ್ತಿ ಈ ಮಂತ್ರವನ್ನು 108 ಬಾರಿ ಪಠಿಸಿದಾಗ ಆತನ ಎಲ್ಲಾ ನವಗ್ರಹಗಳು ಮತ್ತು ರಾಶಿ ಚಕ್ರಗಳು ಆತನ ಜೀವನದಲ್ಲಿ ಮಾಡುವ ಏರು ಪೇರುಗಳನ್ನು ಹೊರತುಪಡಿಸಿ ಸರಿಯಾದ ದಾರಿಗೆ ಬರುತ್ತವೆ

ಮೃತ್ಯುಂಜಯ ಮಂತ್ರ
ಓಂ ತ್ರ್ಯಯಂಬಕಂ ಯಜಮಾಹೆ, ಸುಗಂಧಿಂ ಪುಷ್ಟಿ ವರ್ಧನಂ.
ಉರವರುಕಿಮೀವ್ ಬಂಧನಾತ್, ಮೃತ್ಯುರ್ ಮೋಕ್ಷಾಯ ಮಮೃತಾತ್.



Click it and Unblock the Notifications