Latest Updates
-
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್!
ಧನದ ಅಧಿಪತಿ ಹಿಂದಿನ ಜನ್ಮದಲ್ಲಿ ಕಳ್ಳನಾಗಿದ್ದನಂತೆ!!
ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿಯಾಗಿದ್ದಾನೆ. ಆದರೆ ಕುಬೇರ ತನ್ನ ಹಿಂದಿನ ಜನ್ಮದಲ್ಲಿ ಓರ್ವ ಕಳ್ಳನಾಗಿದ್ದನೆಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.
ಅದೂ ಸಾಮಾನ್ಯ ಕಳ್ಳನಲ್ಲ, ದೇವಾಲಯಗಳನ್ನೂ ಬಿಡದೇ ದೋಚುತ್ತಿದ್ದ ಖದೀಮನಾಗಿದ್ದ. ಚಿಂದಿಯಿಂದ ಪ್ರಾರಂಭಿಸಿ ಕೋಟ್ಯಾಧಿಪತಿಯಾದ ಈತನ ಜೀವನ ಕುತೂಹಲಕರವೂ ಆಗಿದೆ.... ಮುಂದೆ ಓದಿ...

ಶಿವಪುರಾಣದ ಪ್ರಕಾರ....
ಶಿವಪುರಾಣದ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಈ ಜಗತ್ತಿನಲ್ಲಿ ಗುನ್ನಿಧಿ ಎಂಬ ಬಡ ವ್ಯಕ್ತಿಯೊಬ್ಬನಿದ್ದ. ಈತನಿಗೆ ನಿತ್ಯದ ಊಟಕ್ಕೂ ಹಣವಿಲ್ಲವಾಗಿದ್ದು ಹೊಟ್ಟೆ ತುಂಬಿಸಲು ಅನಿವಾರ್ಯವಾಗಿ ಪುಡಿಗಳ್ಳತನ ಮಾಡತೊಡಗಿದ. ಒಂದು ರಾತ್ರಿ ಕಳ್ಳತನ ಮಾಡಲೆಂದು ಶಿವಮಂದಿರಕ್ಕೆ ನುಗ್ಗಿದ್ದ. ಶಿವಮಂದಿರದ ಒಳಗೆ ಅಮೂಲ್ಯ ಸಂಪತ್ತಿನ ಭಂಡಾರವೇ ಇತ್ತು. ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳೂ ಇದ್ದವು.

ಜ್ಯೋತಿಯನ್ನು ಬೆಳಗಿಸಲು ಮಾಡಿದ ಕಸರತ್ತು...
ಮಂದಿರದ ಒಳಗಿನ ಪುಟ್ಟ ದೀವಟಿಗೆಯೂ ಇತ್ತು. ಆದರೆ ಜ್ಯೋತಿ ನಂದಿಹೋಗಿತ್ತು. ಈ ಜ್ಯೋತಿಯನ್ನು ಬೆಳಗಿಸಲು ಗುನ್ನಿಧಿ ತನ್ನೆಲ್ಲಾ ಪ್ರಯತ್ನಪಟ್ಟ. ಆದರೆ ಪ್ರತಿಬಾರಿ ಈತ ಜ್ಯೋತಿ ಬೆಳಗಿಸಿದಾಗಲೂ ಎಲ್ಲಿಂದಲೋ ಗಾಳಿ ಬೀಸಿ ಈ ಜ್ಯೋತಿಯನ್ನು ನಂದಿಸಿಬಿಡುತ್ತಿತ್ತು. ಕೊಂಚಕಾಲ ತನ್ನ ಪ್ರಯತ್ನವನ್ನು ಮುಂದುವರೆಸಿದ. ಕಡೆಗೆ ತಾಳ್ಮೆ ಕಳೆದುಕೊಂಡು ತಾನು ಉಟ್ಟಿದ್ದ ಬಟ್ಟೆಯನ್ನೇ ಹೊತ್ತಿಸಿ ಮಂದಿರದಲ್ಲಿ ಬೆಳಕು ಮೂಡಿಸಿದ.

ಶಿವನ ವರ...
ಇವನ್ನೆಲ್ಲಾ ಗಮನಿಸುತ್ತಿದ್ದ ಶಿವ ಈತನ ಎಡೆಬಿಡದ ಪ್ರಯತ್ನಗಳನ್ನು ಹಾಗೂ ಉದ್ದೇಶಪೂರ್ವಕವಲ್ಲದಿದ್ದರೂ ಮಂದಿರದೊಳಗೆ ಬೆಳಕನ್ನು ತಂದ ಪ್ರಯತ್ನವನ್ನು ಮೆಚ್ಚಿದ. ಬಳಿಕ ಶಿವ ಈತನಿಗೆ ಮುಂದಿನ ಜನ್ಮದಲ್ಲಿ ಹಣದ ಅಧಿಪತಿಯಾಗಿ ಜನಿಸುವಂತೆ ವರವನ್ನಿತ್ತ. ತನ್ನ ಭಕ್ತರ ಅಲ್ಪ ಸೇವೆಗೂ ಶಿವ ಸಂಪ್ರೀತನಾಗುತ್ತಾನೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಶಿವಲಿಂಗ
ಇದೇ ಕಾರಣಕ್ಕೆ ಪ್ರತಿ ಶಿವಲಿಂಗದ ಎದುರು ಪ್ರತಿದಿನ ಸಂಜೆಯಾಗುತ್ತಿದ್ದಂತೆಯೇ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಇದರಿಂದ ಧನದ ಕುರಿತಾದ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.

ಓಂ ನಮಃ ಶಿವಾಯಃ....
ಈ ಜ್ಯೋತಿಯನ್ನು ಬೆಳಗಿಸುವಾಗ ನೀವು "ಓಂ ನಮಃ ಶಿವಾಯಃ" ಎಂಬ ಮಂತ್ರವನ್ನು ಉಚ್ಛರಿಸಬೇಕು. ಕುಬೇರ ಹಣಕ್ಕೆ ಅಧಿಪತಿಯೇ ಹೊರತು ಮಾಲಿಕನಲ್ಲ. ಇದೇ ಕಾರಣಕ್ಕೆ ಕುಬೇರನ ವಿಗ್ರಹವನ್ನು ಯಾವುದೇ ಮಂದಿರದ ಒಳಗೆ ಇರಿಸುವುದಿಲ್ಲ, ಬದಲಿಗೆ ಹೊರಗೆ ಇರಿಸಲಾಗುತ್ತದೆ.

ಹಿಂದೂ ಪುರಾಣದ ಪ್ರಕಾರ...
ಹಿಂದೂ ಪುರಾಣದ ಪ್ರಕಾರ ಈತ ವಿರೂಪಗೊಂಡ ದೇಹವನ್ನು ಹೊಂದಿದ್ದು ಶಿವನ ಗಣಗಳಲ್ಲಿ ಒಬ್ಬನಾಗಿದ್ದ ಎಂದು ಹೇಳಲಾಗುತ್ತದೆ.



Click it and Unblock the Notifications